ಕಲ್ಪ ಮೀಡಿಯಾ ಹೌಸ್ | ಭರಮಸಾಗರ |
ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ Davanagere Cotton Mills ಬಹಳ ಜನಪ್ರಿಯವಾಗಿದ್ದ ಹೆಸರು.
ಈಗ ಈ ಊರು ಶರವೇಗದಿಂದ ಬೆಳೆಯುತ್ತಿದೆ ಹಾಗೆಯೆ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಬೆಳೆದು ನಿಂತಿದೆ. ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಾವಣಗೆರೆ ಭಾಗದ 10 ಸಾಧಕಿ ಮಹಿಳಾ ಮಣಿಗಳಿಗೆ ಅನುಪಮ ಸೇವಾ ರತ್ನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ.
ಕರ್ನಾಟಕ ರಾಜ್ಯದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ದಾವಣಗೆರೆ ಜಿಲ್ಲಾ ಘಟಕದಿಂದ ಮಾರ್ಚ್ 18ರಂದು ಜಿಲ್ಲಾ ಗುರುಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ International Women’s day ಆಯೋಜಿಸಲಾಗಿತ್ತು.
ದಾವಣಗೆರೆ ಜಿಲ್ಲೆಯ ಸಾಧಕಿಯರಿಗೆ ಅನುಪಮ ಸೇವಾ ರತ್ನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ಸಮಾರಂಭದಲ್ಲಿ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಒಳಗೊಂಡಂತೆ 10 ಜನರಿಗೆ ಅನುಪಮ ಸೇವಾರತ್ನ ಪ್ರಶಸ್ತಿ, ಮೂವರಿಗೆ ಜಿಲ್ಲಾ ಮಟ್ಟದ ಅನುಪಮ ಸೇವಾ ಶಿಕ್ಷಕಿ ಪ್ರಶಸ್ತಿ, ವಿವಿಧ ಸಂಘಟನೆ ಗಳಲ್ಲಿ ಪ್ರಥಮ ಮಹಿಳಾ ಅಧ್ಯಕ್ಷೆಯರಾಗಿರುವ ಮೂವರು ಶಿಕ್ಷಕಿಯರಿಗೆ, ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಉರ್ದು ಪ್ರಾಥಮಿಕ ವಿಭಾಗ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಶಿಕ್ಷಕಿಯರಿಗೆ ಜಿಲ್ಲಾಮಟ್ಟದ ಅನುಪಮ ಸೇವಾ ಶಿಕ್ಷಕಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಮಾರಂಭದಲ್ಲಿ ೪೫ ಜನರಿಗೆ ಗೌರವಿಸಲಾಯಿತು.
ಸಂಘದ ಗೌರವ ಅಧ್ಯಕ್ಷೆ ಕೆ.ಜಿ. ಸೌಭಾಗ್ಯ, ಪ್ರಧಾನ ಕಾರ್ಯದರ್ಶಿ ಎಚ್.ಎಂ. ಮಂಗಳಾ, ಖಜಾಂಚಿ ಸಿ. ಪದ್ಮ, ಜ್ಯೋತಿ, ಡಿ. ಸರೋಜಮ್ಮ ಸಂಘದ ಜಿಲ್ಲಾಧ್ಯಕ್ಷೆ ಕಲ್ಪನಾ ರವೀಂದ್ರನಾಥ್ ಅವರು ಇದ್ದರು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ. ಸಿದ್ದೇಶ್ವರ್ ಮತ್ತು ಮಾನ್ಯ ವೈ.ಎ. ನಾರಾಯಣಸ್ವಾಮಿ, ಎಂ. ಚಿದಾನಂದಗೌಡ ಹಾಗೂ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಸಂಘದ ರಾಜ್ಯಾಧ್ಯಕ್ಷೆ ಡಾ. ಲತಾ ಮುಳ್ಳೂರ ಆಶಯ ನುಡಿಗಳನ್ನಾಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ಮಹಿಳಾ ಸಬಲೀಕರಣ ಮತ್ತು ಕಾನೂನು ಅರಿವು ವಿಷಯ ಕುರಿತು ಉಪನ್ಯಾಸ ನೀಡಿದರು. ಕಲ್ಪನಾ ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಉಷಾದೇವಿ ಜಿಸಿ, ಜಿಎಲ್’ಪಿಎಸ್ ಕೆಂಚಮ್ಮನಹಳ್ಳಿ, ಪುಷ್ಪಲತಾ ಕೆ, ಗುರುಬಸಮ್ಮ ವಿ. ಚಿಗಟೇರಿ ಪ್ರಾಥಮಿಕ ಶಾಲೆಯ ಮಹಬೂಬ ಖಾನುಮ್ ಜಾಲಿ ನಗರ, ಜಿ.ಬಿ. ರತ್ನ ಸ.ಶಿ.ಸ ಪ್ರೌಢಶಾಲೆ, ಕೆ.ಆರ್. ಮಾರ್ಕೆಟ್, ಸುಜಾತ ಬಿ. ಸ.ಶಿ. ಶ್ರೀಪಂಪಾರೂಢ ಗ್ರಾಮಾಂತರ ಪ್ರೌಢಶಾಲೆ ಹೊನ್ನೂರು ಅವರುಗಳಿಗೆ ಅನುಪಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾಯಕಯೋಗಿಗಳಾಗಿ ಚೈತನ್ಯ ಚಿಲುಮೆಗಳಾಗಿ ಸದಾ ಕ್ರಿಯಾಶೀಲತೆಯಿಂದ ಆದರ್ಶ ಸಮಾಜಕ್ಕೆ ಉತ್ತಮ ನಾಗರಿಕರ ಕೊಡುಗೆಯಾಗಿ ನೀಡುವ ಕೆಲಸದಲ್ಲಿ ತೊಡಗಿರುವ ಶಿಕ್ಷಕಿಯರುಗಳಿಗೆ ಅಭಿನಂದಿಸಿದರು.
ಅನುಪಮ ಸೇವಾ ರತ್ನ ಪ್ರಶಸ್ತಿ ವಿಜೇತ ಬಿ. ಸುಜಾತ ಸುರೇಶ್:
ಇವರು ಚಿತ್ರದುರ್ಗ ಜಿಲ್ಲೆಯ ಬಿಚ್ಚುಗತ್ತಿ ಭರಮಣ್ಣ ನಾಯಕರು ಕಟ್ಟಿದ ಭರಮಸಾಗರ ಗ್ರಾಮದವರು ದಿವಂಗತ ಅನುಸೂಯಮ್ಮ ಮತ್ತು ಭೀಮರಾವ್ ಅವರ ಮಗಳು. ಬಡತನದ ಜೊತೆ ಜೀವನ ಮಾಡಿ ವಿದ್ಯಾಭ್ಯಾಸ ಪೂರೈಸಿ, ಖಾಸಗಿ ಅನುದಾನಿತ ಶಾಲೆಯ ಶಿಕ್ಷಕಿಯಾಗಿ ವೈವಾಹಿಕ ಜೀವನವನ್ನು ಇವರು ದಾವಣಗೆರೆಯಲ್ಲಿ ವಾಸವಾಗಿದ್ದುಕೊಂಡು, ದಾವಣಗೆರೆ ಜಿಲ್ಲೆಯ ಹೂನ್ನೂರು ಗ್ರಾಮದ ಶ್ರೀ ಪಂಪಾರೂಢ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಿರಿಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Also read: ಪ್ರಧಾನಿ ಮೋದಿ ಪ್ರಯತ್ನದಿಂದ ಉಕ್ರೇನ್’ನಿಂದ ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಾಸ್: ಕೆ.ಈ. ಕಾಂತೇಶ್
ಚಿತ್ರದುರ್ಗ ಜಿಲ್ಲೆಯ ಭರಮಸಾಗರ, ಇಸಾಮುದ್ರ ದಾವಣಗೆರೆ ಮತ್ತು ಹೊನ್ನೂರು ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ, ಇವರು ಶಾಲಾ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಜೊತೆ ಅವರನ್ನು ಬೇರೆ ಬೇರೆ ಕ್ಷೇತ್ರದಲ್ಲಿ ಮೇಲೆ ತರುವಂತಹ ಕೆಲಸಗಳನ್ನು ಮಾಡಿರುತ್ತಾರೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಇವರ ಅಮೂಲ್ಯ ಸೇವೆಯನ್ನು ಗುರುತಿಸಿ ಇವರನ್ನು ಸನ್ಮಾನಿಸಿದೆ. ಇವರು ಉತ್ತಮ ಗಾಯಕಿಯಾಗಿ ಮಕ್ಕಳಿಗೆ ಸಂಗೀತ, ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿ ಬೆಳೆಯುವುದನ್ನು ತಮ್ಮ ಶಿಕ್ಷಣದ ಉಪನ್ಯಾಸದ ಜೊತೆಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಇವರ ಕೈಯಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಉತ್ತಮ ಜೀವನವನ್ನು ನಡೆಸುತ್ತಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.
ಇವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಕಷ್ಟು ಸಾಧನೆಯನ್ನು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕ ಗುರುತಿಸಿ, ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸ ತಂದಿದೆ ಎಂದು ಭರಮಸಾಗರದ ಬ್ರಾಹ್ಮಣ ಸಮಾಜದ ಮುಖಂಡರಾದ ಗಣೇಶರಾವ್, ಶೇಷಗಿರಿರಾವ್, ಗುರುರಾಜರಾಜ್, ಗುರುನಾಥ್ ರಾವ್, ಮಲ್ಲಾರಿರಾವ್, ನಾಗಭೂಷಣ್ ರಾವ್ ಮತ್ತು ಶ್ರೀಪಾದರಾವ್ ಅವರು ಕಲ್ಪ ಮೀಡಿಯಾ ಹೌಸ್ ಮೂಲಕ ಅಭಿನಂದಿಸಿದರು.
ವರದಿ: ಮರಳೀಧರ್ ನಾಡಿಗೇರ್, ಹೊಸಪೇಟೆ/ವಿಜಯನಗರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post