ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉಕ್ರೇನ್ Ukraine ಹಾಗೂ ರಷ್ಯಾ Russia ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪ್ರದೇಶದಲ್ಲಿ ಸಿಲುಕಿದ್ದ ಭಾರತದ ಸುಮಾರು 20 ಸಾವಿರಷ್ಟು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಪ್ರಧಾನಿ ನರೇಂದ್ರ ಮೋದಿಯವರ PM Narendra Modi ಪ್ರಯತ್ನ ಸಫಲವಾಗಿದೆ ಎಂದು ಯುವ ಮುಖಂಡ, ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್ K E Kantesh ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಉಕ್ರೇನ್’ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು ಆಪರೇಷನ್ ಗಂಗಾ ಯೋಜನೆಯನ್ನು ಪ್ರಧಾನಿಯವರು ನಡೆಸಿರುವುದು ಯಶಸ್ವಿಯಾಗಿದೆ. ವಿಶ್ವದ ದೊಡ್ಡ ರಾಷ್ಟ್ರಗಳು ಎಂದು ಹೇಳಿಕೊಳ್ಳುವ ನಾಯಕರುಗಳಿಂದಲೇ ತಮ್ಮ ನಾಗರಿಕರನ್ನು ಕರೆದುಕೊಂಡು ಹೋಗುವುದು ಸಾಧ್ಯವಾಗಿಲ್ಲ. ಅಂತಹ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ತಮ್ಮ ವರ್ಚಸ್ಸು ಹಾಗೂ ಆಡಳಿತಾತ್ಮಕ ಸಾಮರ್ಥ್ಯದಿಂದ ನಮ್ಮ ದೇಶದ 20 ಸಾವಿರ ಜನರನ್ನು ಸುರಕ್ಷಿತವಾಗಿ ಕರೆತಂದಿರುವುದು ಸಂತೋಷದ ವಿಚಾರ ಎಂದರು.
Also read: ನಾನು ಶರಣಾಗುತ್ತಿದ್ದೇನೆ, ದಯಮಾಡಿ ಶೂಟ್ ಮಾಡಬೇಡಿ: ಕುತ್ತಿಗೆಗೆ ಪ್ಲಕಾರ್ಡ್ ಹಾಕಿಕೊಂಡು ಶರಣಾದ ರೌಡಿಗಳು
ಉಕ್ರೇನ್’ನಿಂದ ಹಿಂತಿರುಗಿರುವವರಲ್ಲಿ ನಮ್ಮ ಜಿಲ್ಲೆಯ ಅನುಮಿಷ ಹಾಗೂ ಜಯಶೀಲ ಅವರೂಗಳ ಸಹ ಸೇರಿದ್ದಾರೆ. ಇವರೊಂದಿಗೆ ನಾವು ಈಗಾಗಲೇ ಮಾತುಕತೆ ನಡೆಸಿದ್ದು, ಇವರ ಮುಂದಿನ ಭವಿಷ್ಯಕ್ಕೆ ನಾವೆಲ್ಲಾ ಬೆಂಬಲ ನೀಡುತ್ತೇವೆ ಎಂದರು.
ಇಷ್ಟು ಜನರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಸಫಲರಾದ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ರಾಷ್ಟ್ರ ಭಕ್ತರ ಬಳಗದ ವತಿಯಿಂದ ಪಿಎಂ ಕೇರ್ಸ್ ಫಂಡ್’ಗೆ ದೇಣಿಗೆ ನೀಡುತ್ತಿದ್ದೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post