ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಮಾಂತರ ಭಾಗದ ಕುಂಚೇನಹಳ್ಳಿ ಬಳಿ ಸವಳಂಗ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಮಾರು 24 ವರ್ಷದ ಯುವಕನೋರ್ವ ಈಗಷ್ಟೇ ರಸ್ತೆ ಅಪಘಾತದಲ್ಲಿ ಸಾವು ಕಂಡಿದ್ದಾನೆ.
ಮೃತ ಯುವಕನನ್ನು ರಟ್ಟೆಹಳ್ಳಿ ರಾಜಣ್ಣ ಎಂಬುವರ ಮಗ ರಾಘವೇಂದ್ರ ಎಂದು ಹೇಳಲಾಗುತ್ತಿದೆ.
ಗಾರೇ ಕೆಲಸ ಮಾಡುತ್ತಿದ್ದ ರಾಘವೇಂದ್ರ ಶಿವಮೊಗ್ಗದಿಂದ ಸವಳಂಗ ಬಳಿಯ ರಟ್ಟೆಹಳ್ಳಿಗೆ ತನ್ನ ಬೈಕ್’ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಟ್ರಾಕ್ಟರ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೈಕ್ ಸವಾರಿಯ ಯುವಕ ಸ್ಥಳದಲ್ಲಿ ಸಾವು ಕಂಡಿದ್ದಾನೆ.
ಇತ್ತೀಚೆಗಷ್ಟೇ ಇದೇ ಜಾಗದ ಸಮೀಪ ದಾವಣಗೆರೆ ಮೂಲದ ಮೂವರು ವಿದ್ಯಾಾರ್ಥಿಗಳು ಕಾರಿನ ಅಪಘಾತದಲ್ಲಿ ಸಾವು ಕಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















