ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೋನಾ ಹಾಗೂ ಓಮಿಕ್ರಾನ್ ಸೋಂಕನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರಾದ ಆರ್. ಅಶೋಕ್ ಹಾಗೂ ಡಾ|ಸುಧಾಕರ್ ಅವರುಗಳು, ರಾಜ್ಯದಲ್ಲಿ ಹೆಚ್ಚುತ್ತಿರುವ ಸೋಂಕು ನಿಯಂತ್ರಣಕ್ಕೆ ಸಭೆ ನಡೆಸಿ, ಕಠಿಣ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದರು.
ಹೀಗಿದೆ ರಾಜ್ಯದ ನೂತನ ಕೋವಿಡ್ ನಿಯಮಗಳು:
- ರಾಜ್ಯದಲ್ಲಿ 5 ದಿನ ಮಾತ್ರ ಸರ್ಕಾರಿ ಕಚೇರಿಗಳು ಓಪನ್
- ದೇಗುಲಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ
- ಬಾರ್ ಹಾಗೂ ಪಬ್’ಗಳಲ್ಲಿ 50:50ಕ್ಕೆ ಅವಕಾಶ
- ರಾಜ್ಯದಲ್ಲಿ ಯಾವುದೇ ಪಾದಯಾತ್ರೆಗಳಿಗೆ ಅವಕಾಶವಿಲ್ಲ
- ಪಾರ್ಕ್ ವೀಕೆಂಡ್ ಪಾರ್ಟಿಗಳು ಬಂದ್
- ಈಗಾಗಲೇ ಜಾರಿಯಲ್ಲಿರುವ ನೈಟ್ ಕರ್ಫ್ಯೂ ವಿಸ್ತರಣೆ
- 1ರಿಂದ 9ನೆಯ ತರಗತಿವರೆಗಿನ ಬೆಂಗಳೂರು ಶಾಲೆಗಳು ಬಂದ್
- ರಾಜ್ಯದಲ್ಲಿ ಯಾವುದೇ ರ್ಯಾಲಿ, ಪ್ರತಿಭಟನೆ ಮಾಡುವಂತಿಲ್ಲ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post