ಸಾಮಾನ್ಯವಾಗಿ ರಾಜಕಾರಣಿಗಳಿಗೆ ಪೂಜೆ, ಪುನಸ್ಕಾರ, ಹೋಮ-ಹವನ, ಮಠ ಮಾನ್ಯಗಳಿಗೆ ನಡೆದುಕೊಳ್ಳುವುದು ಸಾಮಾನ್ಯ. ಇದಕ್ಕೆ ನಮ್ಮ ರಾಜ್ಯದ ರಾಜಕಾರಣಿಗಳೂ ಸಹ ಹೊರತಲ್ಲ ಎಂಬುದು ಈಗಾಗಲೇ ಗೊತ್ತಿರುವ ವಿಚಾರವಾಗಿದ್ದು, ಎಲ್ಲ ಪಕ್ಷಗಳಲ್ಲಿಯೂ ಇಂತಹ ಮುಖಂಡರಿದ್ದಾರೆ.
ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಹ ತಮ್ಮ ಅವಧಿಯಲ್ಲಿ ಮಠ ಮಾನ್ಯಗಳಿಗೆ ಇನ್ನಿಲ್ಲದಂತೆ ಅನುದಾನ ನೀಡಿ, ಪೂಜೆ, ಪುನಸ್ಕಾರ, ಹೋಮ-ಹವನಗಳನ್ನು ನಡೆಸಿದ್ದಾರೆ. ಈ ನಿಟ್ಟಿನಲ್ಲೇ ಈಗ ರಹಸ್ಯವಾಗಿ ಸ್ವಯಂವರ ಪಾರ್ವತಿ ಪೂಜೆ-ಹೋಮವನ್ನು ಯಡಿಯೂರಪ್ಪ ಕೇರಳದಲ್ಲಿ ಮಾಡಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಇಂತಹ ಒಂದು ಧಾರ್ಮಿಕ ಕಾರ್ಯವನ್ನು ಕೇರಳದ ಕಣ್ಣೂರು ಜಿಲ್ಲೆಯ ತಲಿಪರಂಬಾ ಎಂಬಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಯಡಿಯೂರಪ್ಪ ಇತ್ತೀಚೆಗೆ ನಡೆಸಿದ್ದಾರೆ ಎಂಬ ತಿಳಿದುಬಂದಿದ್ದರೂ, ಪೂರ್ಣ ಖಚಿತಗೊಂಡಿಲ್ಲ.
ಏನಿದು ಸ್ವಯಂವರ ಪಾರ್ವತಿ ಪೂಜೆ ಎಂಬ ವಿಚಾರವನ್ನು ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರಲ್ಲಿ ಕೇಳಿದಾಗ ಅವರು ತಿಳಿಸಿದ ಈ ಪೂಜೆಯ ಮಹತ್ವ ಹೀಗಿದೆ:
ಸ್ವಯಂವರ ಪಾರ್ವತಿ ಪೂಜೆ- ಸಪ್ತಮ ಸ್ಥಾನದ ದೋಷ, ಶೀಘ್ರ ವಿವಾಹ, partnership ದೋಷಗಳು, ಮಾನಸಿಕ ಅನಾರೋಗ್ಯ ನಿವಾರಣೆ ಇತ್ಯಾದಿಗಳಿಗೆ ಇರುವಂತದ್ದು.
ಇನ್ನು ಪೂರ್ಜರಿಂದ, ಪೂರ್ವ ಜನ್ಮದಲ್ಲಿ ಪತಿಪತ್ನಿಯರನ್ನು ಬೇರೆ ಮಾಡಿದ ದೋಷ, ಸರ್ಪಾದಿ ಜಂತುಗಳ ಸಮಾಗಮವನ್ನು ಹಿಂಸಿಸಿದ ದೋಷ, ವಾಮ ಕಾರ್ಯ ಮೂಲಕ ವಶೀಕರಣ ಇತ್ಯಾದಿ ಕಾರ್ಯಗಳಲ್ಲಿ ಇದನ್ನು ಮಾಡುತ್ತಾರೆ. ಆದರೆ ವಾಮ ಕಾರ್ಯಕ್ಕೆ ಮಾಡುವುದು ಮಹಾ ಪಾಪಕರವಾಗುತ್ತದೆ.
Discussion about this post