Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ವಿಶ್ವಮಟ್ಟದಲ್ಲಿ ಹರಿದಾಸ ಸಂಸ್ಕೃತಿ ಪ್ರಚಾರವನ್ನೇ ತಪಸ್ಸಾಗಿಸಿಕೊಂಡ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

June 29, 2019
in Special Articles
0 0
0
Share on facebookShare on TwitterWhatsapp
Read - 3 minutes

ಹೈಂದವ ಸಂಸ್ಕೃತಿಯ ಅವಿಚ್ಛಿನ್ನ ಪರಂಪರೆಯ ಹರಿಕಾರ, ಸಮಗ್ರ ಹರಿದಾಸ ಸಾಹಿತ್ಯ ಸಂಚಯ ಸಾಧಕ, ಕನ್ನಡ ನಾಡು ಕಂಡ ಅದ್ಭುತ ಪ್ರವಚನಕಾರ, ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಮದಲ್ಲಿ ಹರಿದಾಸ ಹಿನ್ನೆಲೆಯ ಶ್ರೀ ದೇಶಪಾಂಡೆ ಕೃಷ್ಣಮೂರ್ತಿ ಮತ್ತು ಶ್ರೀಮತಿ ರಂಗಮ್ಮ ಪುಣ್ಯದಂಪತಿಗಳ ಗರ್ಭಸುಧಾಂಬುಧಿಯಲ್ಲಿ ಮಲ್ಲಿಗೆಯಾಗಿ ಅರಳಿದವರು.

ಸುಮಾರು ಎರಡೂವರೆ ಶತಮಾನಗಳ ಹಿಂದೆ ಅರಳುಮಲ್ಲಿಗೆ ಗ್ರಾಮದಲ್ಲಿ ನೆಲೆಸಿದ್ದ ಇವರ ಪೂರ್ವಜರಾದ ದೇಶಪಾಂಡೆ ಕೃಷ್ಣಮೂರ್ತಿರಾಯರು ಹರಿದಾಸ ಶ್ರೇಷ್ಟರಾದ ಜಗನ್ನಾಥ ದಾಸರ ಶಿಷ್ಯೋತ್ತಮರಾಗಿದ್ದವರು. ಕೃಷ್ಣ ಕರ್ಣಾಮೃತ, ಸುತ್ತಿಸಾರ, ಯಕ್ಷಗಾನ ಶೈಲಿಯಲ್ಲಿ ಭಾಗವತ ದಶಮಸ್ಕಂದ ಹಾಗೂ ಹರಿಸರ್ವೋತ್ತಮ ಸಾರ ಕೃತಿಗಳನ್ನು ರಚಿಸಿದವರು. ಇವರ ಪುತ್ರ ಯಾದವರಾಯರು ಕಲಾವತಿ ಪರಿಣಯ ವೆಂಬ ಅಪೂರ್ವ ಗ್ರಂಥವನ್ನು ವಿರಚಿಸಿ ಖ್ಯಾತರಾದವರು. ಯಾದವರಾಯರ ಪುತ್ರರಾದ ವೆಂಕಟರಾಯರು ತತ್ವರಂಜಿನಿ ಎಂಬ ತಾತ್ವಿಕ ಗ್ರಂಥದ ಕರ್ತೃಗಳು. ವೆಂಕಟರಾಯರ ಪುತ್ರ ರಾಘಪ್ಪನವರು ಸಾರಸ್ವತ ಪರಿಣಯವೆಂಬ ಮಹಾಕಾವ್ಯವನ್ನು ರಚಿಸಿದವರು. ಈ ಪರಂಪರೆಯ ಮುಂದಿನ ಕೊಂಡಿಯೇ ತೀರ್ಥರೂಪರಾದ ದೇಶಪಾಂಡೆ ಕೃಷ್ಣಮೂರ್ತಿರಾಯರು. ಮಾತೃಶ್ರೀಯವರೂ ನಾಡಿನ ಹರಿಕಥಾ ಕ್ಷೇತ್ರವನ್ನು ಸಮೃದ್ಧಗೊಳಿಸಿದ ವೆಂಕಣ್ಣದಾಸರ ಪರಂಪರೆಗೆ ಸೇರಿದವರು. ಇಂತಹ ಕೌಟುಂಬಿಕ ಹಿನ್ನೆಲೆಯ ಇವರಿಗೆ ಸಾಹಿತ್ಯ ಕೃಷಿ ರಕ್ತಗತವಾಗಿ ಬಂದಿರುವ ಬಳುವಳಿಯೇ ಹೌದು.

ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಮುಂದೆ ಎಂ.ಬಿ.ಎ, ಎಂ.ಫಿಲ್, ಪಿ.ಎಚ್‌ಡಿ ಪದವಿಗಳು. ನಂತರ ಒಲಿದು ಆಯ್ದುಕೊಂಡದ್ದು ಅಧ್ಯಾಪಕ ವೃತ್ತಿ. ಇಪ್ಪತ್ತೆಂಟು ವರ್ಷಗಳ ಸುದೀರ್ಘ ಉಪನ್ಯಾಸಕ ವೃತ್ತಿಯಲ್ಲಿ ಅಪಾರ ಶಿಷ್ಯವೃಂದದ ನೆಚ್ಚಿನ ಗುರುಗಳಾಗಿ ಗಳಿಸಿದ ಪ್ರೀತಿ, ಗೌರವ, ಮನ್ನಣೆ ಅನೂಹ್ಯ. ಇವರು ರಚಿಸಿರುವ ವಾಣಿಜ್ಯ ಶಾಸ್ತ್ರದ ಮಹತ್ಕೃತಿಗಳು ವಿದ್ಯಾರ್ಥಿಗಳಿಗೆ ಎಲ್ಲ ಕಾಲಕ್ಕೂ ದಾರಿದೀವಿಗೆಗಳು.

ಇವರ ಕುಟುಂಬದ ಮೂಲವೇ ಹರಿದಾಸ ಪರಂಪರೆ. ಹರಿಕಥನ-ಸಂಕೀರ್ತನ ತಲೆಮಾರುಗಳಿಂದರಿವರಜೀವದುಸಿರು. ವಣಿಜಶಾಸ್ತ್ರದ ಸಂಖ್ಯಾಸಂಭ್ರಮದಲ್ಲಿ ಕಳೆದು ಹೋಗಬಹುದಿದ್ದರಿವರ ಚಿತ್ತ ಹರಿದಾಸ ಸಾಹಿತ್ಯದತ್ತ ಮಗ್ಗುಲಾಗಿದ್ದು ಈ ವಂಶವಾಹಿನಿಯ ಪ್ರಭಾವದಿಂದ. ಈ ಹೊರಳು ದಿಟವಾಗಿ ಈ ನೆಲದ ಭಾಗ್ಯ. ಅಧ್ಯಾಪಕ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ಸಂಪೂರ್ಣವಾಗಿ ಆವರಿಸಿಕೊಂಡದ್ದು ಜಗತ್ತಿನ ಸಾಹಿತ್ಯ ಪ್ರಪಂಚಕ್ಕೆ ಕನ್ನಡಿಗರ ವಿಶಿಷ್ಠ ಕೊಡುಗೆಯಾದ ಹರಿದಾಸ ಸಾಹಿತ್ಯ. ಮುಂದೆ ದಾಸಸಾಹಿತ್ಯನಿಕ್ಷೇಪದ ಉತ್ಖನನ ಇವರ ವಚೋವಿಲಾಸದಿಂದ ವಿಶ್ವದೆಲ್ಲೆಡೆ ಮನೆಮನೆಯ ಮಾತಾದವು. ಕಾಲಚಕ್ರದ ನಿರಂತರ ಪರಿಭ್ರಮಣೆಯಲ್ಲಿ ವಿಸ್ಮತಿಗೆ ಒಳಗಾಗಿ, ಕಣ್ಮರೆಯಾಗಿ ಬಿಡಬಹುದಾಗಿದ್ದ ಸಾವಿರಾರು ಹಾಡುಗಳುರಿವರ ಅನ್ವೇಷಣಾ ಪ್ರವೃತ್ತಿಯ ಫಲವಾಗಿ ಬೆಳಕು ಕಂಡು, ನಾಡಿನ ಸಾಹಿತ್ಯ ಭಂಡಾರ ಶ್ರೀಮಂತಗೊಂಡಿದೆ.

ದಾಸ ಸಾಹಿತ್ಯ ಪ್ರಚಾರ ದೀಕ್ಷಾಬದ್ಧರಾಗಿ ಭೂಗೋಳದಾದ್ಯಂತ ಪರ್ಯಟಿಸಿ, ಸಾವಿರಾರು ಉಪನ್ಯಾಸಗಳ ದ್ವಾರಾ ನೂರಾರು ದೇಶಗಳಲ್ಲಿ ಪುರಂದರ, ಕನಕ, ವಿಜಯಾದಿ ದಾಸವರೇಣ್ಯರು ಗೆಜ್ಜೆಕಟ್ಟಿ, ತಂಬೂರಿ ಮೀಟಿ, ತಳತಟ್ಟಿ ಕುಣಿಸಿ ಅಲ್ಲಿನ ಮಣ್ಣನ್ನು ಪುನೀತಗೊಳಿಸಿ, ಭಕ್ತ ಸಾಗರವನ್ನು ಜ್ಞಾನರಸವಾರಿಧಿಯಲ್ಲಿ ಮೀಯಿಸಿದುದರೊಂದಿಗೆ, ವಿದೇಶಿಯರಿಗೆ, ವಿದೇಶದಲ್ಲಿನ ದೇಶಿಯರಿಗೆ ಭಾರತದ ಸಂತ-ಮಹಂತರ ವಿಚಾರಧಾರೆಯ ಮೂಲಕ ಮೌಲ್ಯಗಳ ಪೀಯೂಷವನ್ನುಣಿಸಿ ಲೋಕಾ ಸಮಸ್ತಾಃ ಸುಖಿನೋಭವಂತು ಎಂಬುದೇ ಮೂಲಮಂತ್ರವಾದ ಸನಾತನ ಧರ್ಮದ ಸಾರ್ವಕಾಲಿಕ ಸತ್ಯತೆಯನ್ನು, ನಿತ್ಯತೆಯನ್ನು, ವಿಶ್ವದ ಮೂಲೆ ಮೂಲೆಗೂ ಸಾರಿದ ಮಹಾಪ್ರವಾದಿ ಇವರಾಗಿದ್ದಾರೆ.

ಆಸ್ಟ್ರೇಲಿಯಾ, ಅಮೆರಿಕಾ, ಸಿಂಗಾಪುರ, ಆಫ್ರಿಕಾ, ನ್ಯೂಜಿಲ್ಯಾಂಡ್ ಬಹರಿನ್, ಷಾರ್ಜಾ, ಕೆನಡಾ, ದುಬೈ, ಚೀನಾ, ಮಸ್ಕಾಟ್, ವೆಸ್ಟ್‌ ಇಂಡೀಸ್, ಶ್ರೀಲಂಕಾ ಮುಂತಾದ ದೇಶಗಳಲ್ಲಿನ ನೂರಾರು ವೇದಿಕೆಗಳಲ್ಲಿ, ದೈವಸನ್ನಿಧಿಗಳಲ್ಲಿ ಹರಿದಾಸ ಸಂದೇಶ, ವೈದಿಕ, ಅಧ್ಯಾತ್ಮ ಮೌಲ್ಯಗಳು, ದಾಸಸಾಹಿತ್ಯ ಸಪ್ತಾಹ, ಭಾಗವತ ಸಪ್ತಾಹ, ದಾಸೋತ್ಸವ, ವಿಷ್ಣುಸಹಸ್ರನಾಮ ಸಂಕೀರ್ತನೆಗಳ ಕುರಿತಾದ ಸಾವಿರಾರು ಸಂಭ್ರಮಗಳನ್ನು, ಉಪನ್ಯಾಸ ಮಾಲಿಕೆಗಳನ್ನು ಇಳೆಯ ಜಾಣರು ಮೆಚ್ಚುವಂದದಲಿ ಪ್ರಸ್ತುತಪಡಿಸಿದವರು ನೀವು ನಿಮ್ಮ ವಿಷಯ ಪ್ರತಿಪಾದನಾ ಕುಶಲತೆಗೆ, ನುಡಿಗಾರುಡಿಗೆ, ತಲೆದೂಗಿ, ತಲೆಬಾಗಿ ಮತ್ತೆ ಮತ್ತೆ ಅದನ್ನು ಕೇಳಬಯಸಿ ಇವರ ಬರವಿಗೆ ಕಾತರಿಸಿದವರು ಅಸಂಖ್ಯರು. ಈ ಹಿರಿಮೆ ಗರಿಮೆ ನಿಮಗೆ ದೈವವಿತ್ತವರ. ಇದರ ಫಲವೇ ಇವರನ್ನು ಅರಸಿ ಬಂದ ಪ್ರಶಸ್ತಿ, ಉಪಾಧಿ, ಪುರಸ್ಕಾರ, ಬಿರುದು ಬಾವಲಿಗಳ ಸಾಲು ಸಾಲು. ವಿದೇಶಗಳಲ್ಲಂತೂ ಇವರಿಗೆ ದೊರೆತ ಗೌರವಾದರಗಳು. ಸನ್ಮಾನಗಳು ಜನಮಾನಸದಲ್ಲಿ ನೆಲೆಗೊಂಡ ಇವರ ಬಗೆಗಿನ ಅಭಿಮಾನ, ಪ್ರೀತಿಗೆ ದ್ಯೋತಕ.ಇವರನ್ನು ಅಲಂಕರಿಸುವ ಮೂಲಕ ಪ್ರಶಸ್ತಿ ಪುರಸ್ಕಾರಗಳೇ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿವೆಯೆಂದರೆ ಅದು ಅತ್ಯುಕ್ತಿಯಲ್ಲ. ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನದ ಹಾಗೂ ದಕ್ಷಿಣ ಭಾರತ ಭಕ್ತಿ ಸಾಹಿತ್ಯ ಮಹಾಸಮ್ಮೇಳನದ ಅಧ್ಯಕ್ಷಪೀಠ ನಿಮ್ಮನ್ನು ವರಿಸಿದ್ದುರಿವರ ವೈದುಷ್ಯಕ್ಕೆ ಸಂದ ಅರ್ಹ ಗೌರವ.

ಇವರು ರಚಿಸಿರುವ, ಸಂಪಾದಿಸಿರುವ, ಪ್ರಕಟಿಸಿರುವ ಐವತ್ತಕ್ಕೂ ಹೆಚ್ಚಿನ ಕೃತಿರತ್ನಗಳಲ್ಲಿ ಹರಿದಾಸರ ಹತ್ತುಸಾವಿರ ಹಾಡುಗಳು, ದಾಸಸಾಹಿತ್ಯ ಸಾಗರ, ಪುರಂದರದಾಸ, ಕನಕದಾಸ, ಜಗನ್ನಾಥದಾಸ, ಶ್ರೀಪಾದರಾಜ, ಶ್ರೀ ವ್ಯಾಸರಾಜ, ಶ್ರೀ ವಾದಿರಾಜ, ಶ್ರೀ ರಾಘವೇಂದ್ರ ಸಂಪುಟಗಳು, ಭಜನ ಸಂಪುಟ, ಉಗಾಭೋಗ ಸಂಪುಟ, ಸುಳಾದಿ ಸಂಪುಟಗಳು, ವಿಜಯದಾಸ ನಮನ ಮುಂತಾದ ಕೃತಿಗಳು ಕನ್ನಡ ಭಕ್ತಿಸಾಹಿತ್ಯ ಭಂಡಾರಕ್ಕೆ ಇವರಿತ್ತ ಅಮೂಲ್ಯ ಕೊಡುಗೆಗಳಾಗಿವೆ. ಇವರ ಅನೇಕ ಕೃತಿಗಳು ಇಂಗ್ಲೀಷ್ ಅಲ್ಲದೆ, ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡು, ಜ್ಞಾನಪ್ರಸರಣದ ಹರಹು ಪಾರವಿಲ್ಲದ ಸಿಂಧುವಾಗಿರುವುದು ಮನುಕುಲದ ಸುಕೃತ.

ಮುಳಬಾಗಿಲಿನ ಶ್ರೀಪಾದರಾಜರ ಮಠದ ಹಿರಿಯ ಸ್ವಾಮಿಗಳಾದ ಶ್ರೀ ವಿಜ್ಞಾನನಿಧಿ ತೀರ್ಥರಿಂದ ಹರಿದಾಸ ದೀಕ್ಷೆ ಪಡೆದು ಪಾರ್ಥಸಾರಥಿ ವಿಠಲದಾಸ ಎಂಬ ಅಂಕಿತದ ಅನುಗ್ರಹೀತರಾಗಿ ಸಾವಿರಾರು ಕೀರ್ತನೆ, ಉಗಾಭೋಗ, ಸುಳಾದಿಗಳನ್ನು ರಚಿಸಿ, ದಾಸಪರಂಪರೆಯ ತೇರನ್ನು ಮುನ್ನಡೆಸುವ ಮಹಾಕ್ರತುವಿನ ಅಧ್ವರ್ಯುವಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿದ್ದೀರಿ. ವಾಗ್ದೇವಿ ಮನದುಂಬಿ ಒಲಿದು ಹರಸಿರುವ ಅಪರೂಪದ ವ್ಯಕ್ತಿ.

ವಿಶ್ವಮಟ್ಟದಲ್ಲಿ ಭಾರತೀಯ ಪರಂಪರೆ, ಕರ್ನಾಟಕ ಸಂಸ್ಕೃತಿ, ಹರಿದಾಸ ಸಾಹಿತ್ಯ, ಭಾಗವತ, ಭಗವದ್ಗೀತೆ, ರಾಮಾಯಣ, ಭಾರತ ಪುರಾಣ, ವಿಷ್ಣು ಸಹಸ್ರನಾಮಗಳನ್ನು ಇಷ್ಟೊಂದು ವ್ಯಾಪಕವಾಗಿ, ಪರಿಣಾಮಕಾರಿಯಾಗಿ ಪ್ರಭಾವಶಾಲಿಯಾಗಿ ಪ್ರಚುರಗೊಳಿಸಿ ತಮ್ಮ ಭೀಮಸಾಹಸ ಸಾಟಿಯಿಲ್ಲದ್ದು. ಇದು ಭಾರತೀಯ ಆಧ್ಯಾತ್ಮಿಕ ಇತಿಹಾಸದಲ್ಲಿನ ಸುವರ್ಣಾಧ್ಯಯ. ಹಾಗಾಗಿಯೇ ತಾವು ಭಾರತದ ಸಾರ್ಥಕ ಸಮರ್ಥ ಸಾಂಸ್ಕೃತಿಕ ಆಧ್ಯಾತ್ಮಿಕ ರಾಯಭಾರಿಗಳೆಂದು ಸಿದ್ದ-ಪ್ರಸಿದ್ದರಾಗಿದ್ದೀರಿ.

ಜಾಗತಿಕ ಮಟ್ಟದಲ್ಲಿ ದಾಸಸಾಹಿತ್ಯದ ಪರಿಣಾಮಕಾರೀ ಪ್ರಚಾರ ಮಾಡಿದ ತಮ್ಮ ಸಾಧನೆಗಾಗಿ ಶ್ರೀಲಂಕಾ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಅಮೆರಿಕಾದ ಓಕ್ಲೋಹೋಮ ವಿಶ್ವವಿದ್ಯಾಲಯದ ನೂರಾರು ಪ್ರಾಧ್ಯಾಪಕರಿಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ನೀವು ನೀಡಿದ ನಾಲ್ಕು ಉಪನ್ಯಾಸಗಳು ಇಡೀ ವಿಶ್ವವಿದ್ಯಾಲಯ ಭಾರತದತ್ತ ಮುಖಹಾಕುವಂತೆ ಮಾಡಿದ್ದು ಇಡೀ ಭಾರತಕ್ಕೆ ಸಂದ ಹೆಮ್ಮೆ. ಹದಿಮೂರು ದೇಶಗಳಲ್ಲಿ ಬಿಡುಗಡೆಯಾಗಿರುವ ತಮ್ಮ ವಿಷ್ಣುಸಹಸ್ರನಾಮ ಇಂಗ್ಲೀಷ್ ಗ್ರಂಥವನ್ನು ಹಾಂಕಾಂಗ್ ವಿಶ್ವವಿದ್ಯಾಲಯವು 2008 ರಲ್ಲಿ ತನ್ನ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಸೇರ್ಪಡೆಯಾದ ಗ್ರಂಥಗಳಲ್ಲಿ ಮಹತ್ವದ್ದು ಎಂದು ಘೋಷಿಸಿದ್ದು ಅಭಿನಂದನಾರ್ಹ. ನ್ಯೂಜಿಲ್ಯಾಂಡ್‌ನ ರಾಮ್ಸ್‌ ಫೌಂಡೇಷನ್ ಸಂಸ್ಥೆ ತಾವು ಪ್ರಪಂಚದಾದ್ಯಂತ ನಡೆಸಿಕೊಟ್ಟ ನೂರಾರು ಭಾಗವತ ಸಪ್ತಾಹಗಳನ್ನು ಗುರುತಿಸಿ ಭಾಗವತ ಸುರಭಿ ಎಂಬ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ.

ಆಫ್ರಿಕಾದ ಜಾಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕವರ್ಗವು ತಮ್ಮ ಉಪನ್ಯಾಸಗಳನ್ನು ಆಫ್ರಿಕಾದ ಗಾಳಿಯಲ್ಲಿ ಸೇರಿದ ಭಾರತದ ಆಧ್ಯಾತ್ಮಿಕ ಗಂಧ ಎಂದು ಬಣ್ಣಿಸಿದೆ. ಅಮೆರಿಕಾದ ಹಿಂದೂ ವಿಶ್ವವಿದ್ಯಾಲಯವು ತಮ್ಮ ಉಪನ್ಯಾಸಗಳನ್ನು ಅಮೆರಿಕಾ ನೆಲದ ಮೇಲೆ ನಡೆದ ಭಾರತೀಯ ಆಧ್ಯಾತ್ಮಿಕ ಮೌಲ್ಯಗಳ ಪುನರುತ್ಥಾನದ ಆಂದೋಲನ ಎಂದು ಸಾರಿದೆ. ಟೆಕ್ಸಾಸ್‌ನ ಆಸ್ಟಿನ್ ಹಿಂದೂ ದೇವಾಲಯ ಹಾಗೂ ಅಮೆರಿಕಾದ ಗ್ಲೋಬಲ್ ಅಕಾಡೆಮಿ ಆಫ್ ಪೀಸ್ ಸಂಸ್ಥೆಗಳು ಇವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಅಮೆರಿಕಾದ ವಿಶ್ವ ಮಾಧ್ವ ಸಂಘವು ಇವರಿಗೆ ‘Living Legend’ ಪ್ರಶಸ್ತಿಯನ್ನಿತ್ತು ವಿಶಿಷ್ಟ ಗೌರವ ಸಲ್ಲಿಸಿದ್ದನ್ನು ನಾವು ಮರೆಯುವಂತಿಲ್ಲ. ಎಲ್ಲಕ್ಕೂ ಮಿಗಿಲಾಗಿ ಅಮೇರಿಕದಿಂದ ಪ್ರಕಟವಾದ ಭಾರತೀಯ ಸಂಸ್ಕೃತಿ ಕುರಿತ ‘Hindu Religious Figures, Indian Academics, Indian non fiction Writers, Indian Historians, Vaishnavism, Dwaitha ಎಂಬ ಆರು ಇಂಗ್ಲೀಷ್ ಗ್ರಂಥಗಳಲ್ಲಿ ತಮ್ಮ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಆಂದೋಲನ ಹಾಗೂ ಸಾಧನೆಗಳನ್ನು ಕುರಿತು ಒಂದು ಇಡೀ ಅಧ್ಯಾಯದಲ್ಲಿ ದಾಖಲಿಸಿರುವುದು ದಿಟವಾಗಿಯೂ ಭಾರತಕ್ಕೆ ಸಂದ ವಿಶ್ವಗೌರವವಾಗಿದೆ.

ವಿದ್ಯೆ, ವಿನಯ, ಸಾಹಿತ್ಯ ಸಂಗೀತ, ಹೀಗೆ ಸಮಾಜಸೇವೆ ತಮಗೆ ಅನುರೂಪ ಸತಿಯಾಗಿ ತಮ್ಮ ಬದುಕಿಗೆ ಸುಸಂಪನ್ನತೆಯನ್ನು ತಂದಿತ್ತ ಜೀವಿತಭಾಗಸ್ವಾಮಿನಿ ಶ್ರೀಮತಿ ರಾಜಲಕ್ಷ್ಮಿ ಅವರು. ಇಬ್ಬರು ಪುತ್ರರು, ಒಬ್ಬ ಪುತ್ರಿ ತಮ್ಮ ಅನುರಾಗ ಸಹಜೀವನದ ಫಲಶೃತಿ.

Tags: BhagavatamDr Aralumallige ParthasarathyHaridasa SahityaKannada ArticleSpecial Articleಜಗನ್ನಾಥ ದಾಸರುಡಾ. ಅರಳುಮಲ್ಲಿಗೆ ಪಾರ್ಥಸಾರಥಿಭಾಗವತ ಸಪ್ತಾಹಯಕ್ಷಗಾನಶ್ರೀ ವಿಜ್ಞಾನನಿಧಿ ತೀರ್ಥರುಹರಿದಾಸ ಸಂಸ್ಕೃತಿಹರಿದಾಸ ಸಾಹಿತ್ಯಹೈಂದವ ಸಂಸ್ಕೃತಿ
Previous Post

ನರ್ಸ್‌ಗಳ ಬಗ್ಗೆ ತಾತ್ಸಾರ ಮಾಡುವ ಮುನ್ನ ಈ ಲೇಖನ ಓದಿ, ಅವರ ತ್ಯಾಗ ತಿಳಿಯಿರಿ

Next Post

ಕಾರುಣ್ಯ ಸಿಂಧು ರಾಯರ ಪರಮಗುರು ಶ್ರೀ ವಿಜಯೀಂದ್ರ ತೀರ್ಥರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕಾರುಣ್ಯ ಸಿಂಧು ರಾಯರ ಪರಮಗುರು ಶ್ರೀ ವಿಜಯೀಂದ್ರ ತೀರ್ಥರು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!