ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ಬೆಳಗಾಂ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗ ಬೀಗರಾಗಿದ್ದಾರೆ.
ನವುಲೆಯ ಸರ್ಜಿ ಕನ್ವೆಷನಲ್ ಹಾಲ್ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಮತ್ತು ಶಿವಕುಮಾರ್ ಪುತ್ರಿ ಹಿತಾ ಅವರ ನಿಶ್ಚಿತಾರ್ಥ ಇಂದು ನಡೆಯಿತು.
ಗಣಪತಿ ಮತ್ತು ಉಮಾ ಮಹೇಶ್ವರ ಕಳಶಪೂಜೆ, ಮಡಿಲಕ್ಕಿ ಶಾಸ್ತ್ರ ಮೊದಲಾದ ಶಾಸ್ತ್ರೋಕ್ತವಾಗಿ ನಡೆದು ಮಧ್ಯಾಹ್ನ 1 ಗಂಟೆಯ ವೇಳೆಗೆ ಉಂಗುರ ಬದಲಾವಣೆ ಶಾಸ್ತ್ರ ನಡೆಯಿತು.
ಇದರಿಂದ ಇಬ್ಬರು ರಾಜಕೀಯ ಕುಟುಂಬದ ನಡುವೆ ಬಾಂಧವ್ಯ ಆರಂಭಗೊಂಡಂತಾಗಿದೆ. ಈ ಸಮಾರಂಭದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಮೊದಲಾದ ಗಣ್ಯವ್ಯಕ್ತಿಗಳು ಜೋಡಿಗಳನ್ನು ಹರಿಸಿದ್ದಾರೆ.
ಇದೇ ವೇಳೆ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಹಾಜರಾದ ಗಣ್ಯರಿಗೆ ಪೇಟ, ಶಾಲು ಹೊದಿಸಿ ಸನ್ಮಾನಿಸಿದರು.
ಕೋವಿಡ್19 ನಿಯಮ ಪಾಲನೆ
ಕೋವಿಡ್19 ನಿಯಮಾವಳಿಗಳ ಅನ್ವಯ ಕಾರ್ಯಕ್ರಮವನ್ನು ನಡೆಸಲಾಯಿತು. ಭೋಜನದ ಹಾಲಿನಲ್ಲಿ ಒಂದು ಟೇಬಲ್’ನಲ್ಲಿ ಇಬ್ಬರು ಆಸನ ಮಾಡಿ ಊಟ ಮಾಡುವ ವ್ಯವಸ್ಥೆ, ಪ್ರತಿ ಟೇಬಲ್ ನಡುವೆಯೂ ಅಂತರ ಕಾಪಾಡಿಕೊಂಡು ವ್ಯವಸ್ಥೆ ಮಾಡಿರುವುದು ವಿಶೇಷವಾಗಿತ್ತು. ಎಲ್ಲೂ ಯಾವ ಗುಂಪು ಸೇರಲು ಅವಕಾಶಗಳಿಲ್ಲದಂತೆ ನೋಡಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು.
Get In Touch With Us info@kalpa.news Whatsapp: 9481252093
Discussion about this post