ನವದೆಹಲಿ: ಒಡಿಶಾದ ಕರಾವಳಿಯಲ್ಲಿ ಫನಿ ಚಂಡಮಾರುತ ಇಂದು ಮುಂಜಾನೆ ಸುಮಾರು 240 ಕಿಮೀ ವೇಗದಲ್ಲಿ ಅಪ್ಪಳಿಸಿದ ಪರಿಣಾಮ, ಪುರಿ, ಭುವನೇಶ್ವರ ಸೇರಿದಂತೆ ಸುಮಾರು 18 ಜಿಲ್ಲೆಗಳಲ್ಲಿ ಅಲ್ಲೋಲಕಲ್ಲೋಲವಾಗಿದೆ.
#WATCH Rain and strong winds hit Bhubaneswar as #FANI cyclone hits Puri coast with wind speed of above 175km/per hour. pic.twitter.com/QZYkk1EALI
— ANI (@ANI) May 3, 2019
ಇಂದು ಮುಂಜಾನೆ ಸುಮಾರು 240 ರಿಂದ 245 ಕಿಮೀ ವೇಗದಲ್ಲಿ ಕರಾವಳಿ ತೀರಕ್ಕೆ ಚಂಡಮಾರುತ ಅಪ್ಪಳಿಸಿದ್ದು, ಸುಮಾರು 11 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿರುವ ರಾಜ್ಯ ಸರ್ಕಾರ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ನೀಡಿದೆ. ಈಗಾಗಲೇ ರಾಜ್ಯದ 17 ಜಿಲ್ಲೆಗಳಲ್ಲಿ ಫೋನಿ ಚಂಡಮಾರುತದ ಎಚ್ಚರಿಕೆ ನೀಡಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Odisha: Police personnel of Nayapalli police station clear roads in Bhubaneswar. Several trees have been uprooted in the heavy rain and strong winds which hit the region today. #CyclonicStormFANI pic.twitter.com/tGxBvzP36c
— ANI (@ANI) May 3, 2019
ಚಂಡಮಾರುತದಿಂದಾಗಿ ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಮುಂಜಾನೆಯಿಂದಲೇ ಭಾರಿ ಪ್ರಮಾಣದ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ. ಆಂಧ್ರದ ಕರಾವಳಿಯಲ್ಲೂ ಭಾರೀ ಮಳೆಸುರಿಯುತ್ತಿದ್ದು, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿಯೂ ಭಾರೀ ಮಳೆ ಬೀಳುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
#CycloneFani @BBSRBuzz
Visuals from Puri. Keep Praying. #JayJagannath pic.twitter.com/f8DmJyakOw— Asit Mohanty – ଅସିତ ମହାନ୍ତି (@Asit5) May 3, 2019
ಇನ್ನು, ವಿಶಾಖಪಟ್ಟಣಂನಲ್ಲಿ ಸಮುದ್ರತೀರದಲ್ಲಿ ಭಾರಿ ವೇಗವಾಗಿ ಗಾಳಿ ಬೀಸುತ್ತಿದ್ದು, ಸಮುದ್ರದ ಅಲೆಗಳ ಎತ್ತರವೂ ಸಹ ಹೆಚ್ಚಾಗುತ್ತಿದೆ.
Rough sea weather conditions in Bhadrak, Odisha under the influence of #CycloneFani. pic.twitter.com/la0z3W5aVG
— ANI (@ANI) May 3, 2019
ಫನಿ ಚಂಡಮಾರುತದ ಬೀಸುತ್ತಿರುವ ಬೆನ್ನಲ್ಲೇ ಭಾರತೀಯ ಕರಾವಳಿ ಭದ್ರತಾ ಪಡೆ ಪರಿಸ್ಥಿತಿಯನ್ನು ನಿಭಾಯಿಸಲು 34 ರಕ್ಷಣಾ ತಂಡಗಳನ್ನು ವೈಜಾಕ್, ಚೆನ್ನೈ, ಪ್ಯಾರಡಿಪ್, ಗೋಪಾಲ್ಪುರ, ಹಲ್ದಿಯಾ, ಫ್ರೇಜರ್’ಗಂಜ್ ಮತ್ತು ಕೋಲ್ಕತ್ತಾದಲ್ಲಿ ನಿಯೋಜಿಸಲಾಗಿದೆ.
1 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಫನಿ ಚಂಡ ಮಾರುತದ ಅಬ್ಬರಕ್ಕೆ ತತ್ತರಿಸಿರುವ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ತುರ್ತು ಪರಿಹಾರವಾಗಿ 1 ಸಾವಿರ ಕೋಟಿ ರೂ. ಪರಿಹಾರ ಧನ ಘೋಷಣೆ ಮಾಡಿದ್ದಾರೆ.
कल ही हम इस चक्रवात से जूझ रहे राज्यों के लिए 1000 करोड़ रूपये से ज्यादा एडवांस में राशि जारी कर चुके हैं।
NDRF , कोस्टगार्ड, भारतीय नौसेना और थल सेना पूरी मुस्तैदी के साथ प्रशासन के साथ जुटी हुई हैं: प्रधानमंत्री श्री नरेन्द्र मोदी https://t.co/QDvz0gDQqD #ModiJahanVikasWahan pic.twitter.com/zEv0jFjFCR
— BJP LIVE (@BJPLive) May 3, 2019
ಈ ಕುರಿತಂತೆ ತುರ್ತು ಸಭೆ ನಡೆಸಿ ನಿರ್ಧಾರ ಕೈಗೊಂಡಿರುವ ಅವರು, ರಕ್ಷಣಾ ಕಾರ್ಯಾಚರಣೆಗಾಗಿ ಎನ್’ಡಿಆರ್’ಎಫ್, ಭಾರತೀಯ ನೌಕಾ ದಳ, ಹಾಗು ಸೇನಾ ಯೋಧರನ್ನು ನಿಯೋಜನೆ ಮಾಡಲಾಗಿದ್ದು, ನಾಗರಿಕರ ರಕ್ಷಣೆಗಾಗಿ ಅತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.
Chaired a high level meeting to review the preparedness relating to Cyclone Fani. The Central Government is ready to provide all possible assistance that would be required.
Prayers for the safety and well-being of our citizens. pic.twitter.com/GLoCzmV1io
— Chowkidar Narendra Modi (@narendramodi) May 2, 2019
Discussion about this post