No Result
View All Result
ಭದ್ರಾವತಿ | ಹೃದಯಾಘಾತದಿಂದ 23 ವರ್ಷದ ಯುವತಿ ಸಾವು! ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು
English Articles

Young Woman Dies of Cardiac Arrest; Parents Give New Life Through Organ Donation

by ಕಲ್ಪ ನ್ಯೂಸ್
June 3, 2026
0

Kalpa Media House  |  Bhadravathi | In a remarkable act of humanity amid grief, the parents of a young woman...

Read moreDetails
ಗುಜರಾತ್’ನಲ್ಲಿ ಭೀಕರ ದುರಂತ | ಮಹಾರಾಷ್ಟ್ರ ಸಾರಿಗೆಯ 2 ಬಸ್’ಗಳ ಮುಖಾಮುಖಿ ಡಿಕ್ಕಿ | 7 ಮಂದಿ ಸಜೀವ ದಹನ

Tragic Accident in Gujarat | Head-on Collision Between Two MSRTC Buses | 7 Burnt Alive

June 3, 2026
ಸಿಂಗಾಪುರ ವಿರುದ್ಧ 25-0 ಅಂತರದ ಜಯದೊಂದಿಗೆ ಭಾರತದ U18 ಮಹಿಳಾ ತಂಡ ಸೆಮಿಫೈನಲ್‌ಗೆ ಲಗ್ಗೆ

India U18 Women Storm into Semifinals with 25–0 Win Over Singapore

June 3, 2026
SWR to run special trains for Good Friday, Easter rush

Regulation, Diversion and Rescheduling of Trains in the Solapur–Wadi Section

June 1, 2026
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ

Hennur Sparsh Hospital Completes One Year | A Reflection of Multispecialty Care

May 25, 2026
  • Advertise With Us
  • Grievances
  • About Us
  • Contact Us
Friday, June 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಚಾಮುಂಡಿ ಬೆಟ್ಟದಲ್ಲಿ ವಿಶಿಷ್ಠ ಅನುಭವ ನೀಡಿದ ಆಶಾಢ ಮೊದಲ ಭಾನುವಾರ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 25, 2019
in Special Articles
0
ಚಾಮುಂಡಿ ಬೆಟ್ಟದಲ್ಲಿ ವಿಶಿಷ್ಠ ಅನುಭವ ನೀಡಿದ ಆಶಾಢ ಮೊದಲ ಭಾನುವಾರ
Share on FacebookShare on TwitterShare on WhatsApp

ಅಂದು ಆಷಾಢ ಮೊದಲ ಭಾನುವಾರ. ಶ್ರೀ ಚಾಮುಂಡೇಶ್ವರಿ ದೇವಾಲಯ ದೇಗುಲದಲ್ಲಿ ವಿಶೇಷ ಪೂಜೆ. ಬೆಟ್ಟದ ತುತ್ತ ತುದಿಯವರೆಗೂ ಭಕ್ತರ ಸಾಗರ. ನಾಡದೇವತೆಗೆ ವಿಶೇಷ ಪೂಜೆ ನೆರವೇರಿತು.

ಕ್ಷೇತ್ರ ದೇವತೆ ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ದರುಶನಕ್ಕಾಗಿ ದೇವಸ್ಥಾನಕ್ಕೆ ಪುಣ್ಯ ದಿನವಾದ ಆಷಾಢ ಮೊದಲ ಭಾನುವಾರ ಭಕ್ತ ಸಾಗರವೇ ಹರಿದುಬಂದಿತ್ತು.

ಈ ಪುಣ್ಯ ದಿನದಂದು ತಾಯಿಯ ದರ್ಶನ ಪಡೆಯಲು ಮಯಾನಗರಿ ಬೆಂಗಳೂರಿನಿಂದ ಮೈಸೂರಿಗೆ ನನ್ನ ಸವಾರಿ ಮುಂಜಾನೆ 5 ಗಂಟೆಗೇ ಹೊರಟಿತ್ತು.

ಆಶಾಢದ ತುಂತುರು ಮಳೆ ಬರುತ್ತಿದ್ದರೆ, ಇನ್ನೊಂದೆಡೆ ಮಂಜು ಕವಿದ ವಾತಾವರಣದಲ್ಲಿ ಇಬ್ಬನಿ ಬೀಳುವ ಹಾಗೆ ತುಂತುರು ಮಳೆ ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿನ ಅನುಭವ ಪಡೆಯುವ ಭಾಗ್ಯ ನನ್ನದಾಗಿತ್ತು.

ತಾಯಿ ಚಾಮುಂಡೇಶ್ವರಿ ದರ್ಶನ ಮಾಡಲು ಬೆಟ್ಟದ ತಪ್ಪಲಿನಿಂದ ಬೆಟ್ಟದ ತುದಿಗೆ ಕಡೆಗೆ ಹೆಜ್ಜೆ ಹಾಕಿ ಹೊರಟಾಗ…

ಬೆಟ್ಟದ ತಪ್ಪಲಿನಲ್ಲಿ ಹನುಮವ್ವ:
ಹನುಮಕ್ಕ: ಕಾಯಿ, ಹಣ್ಣು, ಅರಿಶಿನ-ಕುಂಕಮ ಇವೆಲ್ಲವನ್ನೂ ಇಟ್ಟು ಕೊಂಡು 70 ರ ಅಜ್ಜಿ ವ್ಯಾಪಾರ ವಹಿವಾಟು ನಡೆಸುತ್ತಾ ಆ ಇಳಿ ವಯಸ್ಸಿನಲ್ಲಿ ಮಂದಹಾಸ ಬೀರುತ್ತಾ, ಬರುವ ಭಕ್ತಾದಿಗಳನ್ನು ತನ್ನ ಅಂಗಡಿ ಬಳಿ ಸೆಳೆಯುತ್ತಾ ಇಂದಿನ ಆಧುನಿಕ ಯುಗದಲ್ಲಿ ಯುವಕರು ಶ್ರಮವಹಿಸಿ ದುಡಿಯಲು ಪ್ರೇರಣೆ ನೀಡುವಂತಹ ಕಾಯಕದಲ್ಲಿ ತೊಡಗಿದ್ದು ಆದರ್ಶಪ್ರಾಯವಾಗಿತ್ತು.

ಅಲ್ಲಿಂದ ಮುಂದಕ್ಕೆ ಬೆಟ್ಟದ ತಪ್ಪಲಿನಲ್ಲಿ ಚಾಮುಂಡೇಶ್ವರಿಯ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿ ಬರುವ ಭಕ್ತರಿಗೆ ಬೆಟ್ಟದ ತಪ್ಪಲಿನಲ್ಲಿರುವ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಶಿಲಾಮೂರ್ತಿಗೆ ನಮಸ್ಕರಿಸಿ ಅಲ್ಲಿಯೇ ಪೂಜೆ ಸಲ್ಲಿಸುತ್ತಿದ್ದ ಅರ್ಚಕ ಬಾಲಸುಂದರ್, ತಾಯಿಯ ದರ್ಶನ ಪಡೆಯಲು ಬರುತ್ತಿದ್ದ ಭಕ್ತ ಸಮೂಹಕ್ಕೆ ಕೈಗೆ ದಾರ ಕಟ್ಟಿ ಒಳಿತಾಗಲಿ ಎಂದು ಹಾರೈಸುತ್ತಾ ನಿಂತಿದ್ದು ಸಂತಸ ಮೂಡಿಸಿತು.

ಈ ಪದ್ದತಿಯ ಬಗ್ಗೆ ಅವರ ಬಳಿ ಕೇಳಿದಾಗ, ನಂಬಿ ಕೈಗೆ ದಾರ ಕಟ್ಟಿಸಿಕೊಂಡ ಭಕ್ತರಿಗೆ ಒಳಿತಾಗಿದೆ ಎಂದು ಮಂದಹಾಸ ಬೀರಿದರು.

ಬಾಲಸುಂದರ:
ಭಕ್ತರ ಹಣೆಗೆ ಗಂಧ ಹಚ್ಚಿ, ಪೂಜೆ ಮಾಡಿ ಇಟ್ಟುಕೊಂಡಿದ್ದ ದಾರಗಳನ್ನು ಅವರ ಕೈಗಳಿಗೆ ಕಟ್ಟಿ ಒಳಿತಾಗಲಿ ಎಂದು ಹಾರೈಸುತ್ತಾ ನಿಂತಿದ್ದ ಹಿರಿಯ ಜೀವಿ ಬಾಲಸುಂದರ್ ಅವರ ಜೊತೆ ಜೊತೆಗೆ ಗೊರವರ ಕುಣಿತ ತಂಡದವರು ಶುಭ ಹಾರೈಸಿ ಕಳಿಹಿಸುತ್ತಿದ್ದರು ಬರುವ ಭಕ್ತರಿಗೆ!!

ಬೆಟ್ಟದ ತಪ್ಪಲಿನಲ್ಲಿದ್ದ ಗೊರವರ ಕುಣಿತ ತಂಡದ ಮಹೇಶ್ ಅವರ ಜೊತೆ ನನ್ನ ಮಾತು ಆರಂಭವಾಗಿತ್ತು.
ಚಾಮರಾಜನಗರ ಜಿಲ್ಲೆಯ ದಿ. ಕುಡುಮಲ್ಲು ಗೌಡರ ಕಡೆಯವರು ನಾವು ಜನಪದ ಕಲೆಯ ಕಲಾವಿದರು. ಆಷಾಢ ಶುಕ್ರವಾರದಿಂದ ಚಾಮುಂಡೇಶ್ವರಿ ದೇವಾಲಯ ದೇಗುಲಗದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆ ದಿನದಿಂದ ನಾವು ತಾಯಿಯ ಸನ್ನಿಧಾನಕ್ಕೆ ಬಂದಿರುವುದಾಗಿ ಬರುವ ಭಕ್ತರಿಗೆ ಶುಭಕೋರಲು ಬಂದಿರುವುದಾಗಿ ತಿಳಿಸಿದರು.

ಗೊರವರ ಕುಣಿತ:
ಗೊರವರ ಕುಣಿತ ಕರ್ನಾಟಕದ ವಿಶಿಷ್ಟ ಜನಪದ ಕಲೆ. ಗೊರವರು ತಮ್ಮನ್ನು ಮೈಲಾರಲಿಂಗನ ಶಿಷ್ಯರೆಂದೂ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿಯ ಒಕ್ಕಲಿನವರೆಂದು ಗುರ್ತಿಸಿಕೊಳ್ಳುತ್ತೇವೆ ಎನ್ನುತ್ತಾರೆ ಮಹೇಶ್.

ಪ್ರತಿ ಗೊರವನು ತನ್ನ ಮೊದಲ ಮಗನಿಗೆ ಮೈಲಾರಲಿಂಗನ ದೀಕ್ಷೆ ಕೊಡಿಸುವ ಮೂಲಕ ಸತ್ಸಂಪ್ರದಾಯ ಮುಂದುವರೆಸುತ್ತಾನೆ ಎಂದು ಮಾಹಿತಿ ನೀಡಿದರು.

ಕುಣಿತ ವೇಷದ ವಿಶೇಷತೆಯೇನು ಗೊತ್ತಾ?
ಗೊರವರು ಧರಿಸುವ ವೇಷಭೂಷಣಗಳು ಆಕರ್ಷಕವೂ, ಅರ್ಥಪೂರ್ಣ!! ಸೊಂಟಕ್ಕೊಂದು ನಡುಪಟ್ಟಿ, ಕವಡೆಗಳಿಂದ ಅಲಂಕೃತಗೊಂಡ ಕೆಂಪು ಬಣ್ಣದ ಬನಾತು, ಕೊರಳಲ್ಲಿ ರುದ್ರಾಕ್ಷಿ ಮಾಲೆ, ರುಮಾಲು, ರುಮಾಲಿನ ಮೇಲೆ 15 ಇಂಚು ಅಗಲದ ಕರಡಿಚರ್ಮದ ಕುಲಾವಿ, ನೊಸಲಲ್ಲಿ ಮೂರು ಪಟ್ಟೆಯ ವಿಭೂತಿ, ಎಡ ಬಗಲಲ್ಲಿ ಜೋಳಿಗೆ, ಎಡಗೈಯಲ್ಲಿ ಬಿದಿರಿನ ಪಿಳ್ಳಂಗೋವಿ, ಬಲಗೈಯಲ್ಲಿ ಮೇಕೆ ಚರ್ಮದಿಂದ ತಯಾರಿಸಿದ ಡಮರುಗ ಮತ್ತು ಮೇಲಂಗಿಯ ಮೇಲೆ ಕರಿಕಂಬಳಿಯನ್ನು ಕತ್ತು ಬಳಸಿ ಇಳಿ ಬಿಡಲಾಗಿರುತ್ತದೆ. ಮಲ್ಲಿಕಾರ್ಜುನ ಸ್ವಾಮಿ ನಾಗರಾಜು ಗೊರವರ ಕುಣಿತ ಹಾಗೂ ಬದುಕಿನ ಬಗ್ಗೆ ಮಾಹಿತಿ ನೀಡಿದರು.

ಮೆಟ್ಟಿಲು ಸೇವೆ:
ಮೈಸೂರಿನ ಮಹದೇವಪುರದ ಶ್ರೀಮತಿ ಗಿರಿಜಾ ಹಾಗೂ ಶ್ರೀಮತಿ ಪೂರ್ಣಿಮಾ ಅ ವರ ಸಕಲ ಇಷ್ಟಾರ್ಥ ನೆರವೇರಿದ ಕಾರಣ ಅವರು ಬೆಟ್ಟದ ತಪ್ಪಲಿನಿಂದ ಹಿಡಿದು ಬೆಟ್ಟದ ಮೇಲಿರುವ ತಾಯಿಯ ಸನ್ನಿಧಾನದವರಗೆ 1200 ಮೆಟ್ಟಿಲುಗಳಿಗೆ ಅರಿಶಿನ ಕುಂಕುಮ ಹಚ್ಚಿ ನಮಸ್ಕರಿಸುತ್ತಾ ಸಾಗಿತ್ತು ಅವರ ಪಯಣ!

ಮಲೈ ಮಹದೇಶ್ವರ ಬೆಟ್ಟ:
ಏಳು ಮಲೈ ಮಹದೇಶ್ವರ ಬೆಟ್ಟದ ಮಹದೇಶ್ವರ ಗುಡ್ಡದಪ್ಪನ ಭಕ್ತರು ನಾವು ಎನ್ನುತ್ತಾರೆ ಇವರು.
ಆಷಾಢ ಶುಕ್ರವಾರದಿಂದ ಚಾಮುಂಡೇಶ್ವರಿ ದೇವಾಲಯ ದೇಗುಲಗದಲ್ಲಿ ವಿಶೇಷ ಪೂಜೆ ನಾವು ಇಲ್ಲಿ ಬಂದು ಮಹದೇಶ್ವರನ ಬಗ್ಗೆ ಭಕ್ತಿ ಭಾವದಿಂದ ಅವರ ಕೀರ್ತನೆಗಳನ್ನು ಜನರಿಗೆ, ಭಕ್ತರಿಗೆ ತಲುಪಿಸುವ ಕಾಯಕದಲ್ಲಿ ತೊಡುಗಿಕೊಂಡಿದ್ದೇವೆ ಎಂದು ಮಹೇಶ್, ಸಿದ್ದಪ್ಪ, ಸಿದ್ದಪ್ಪ, ಮಹೇಶ್’ರವರು ಹೇಳುತ್ತಾ ನಾವು 15 ವರುಷಗಳಿಂದ ಭಕ್ತಿಭಾವದಿಂದ ಕೀರ್ತನೆಗಳನ್ನು ಹಾಡುತ್ತಾ ಇದ್ದು ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಅವರ ಮುಂಭಾಗದಲ್ಲಿದ್ದ ಬಿದಿರಿನ ಕಟ್ಟು ನೋಡಿ ನಾನು ಅವರ ಬಳಿ ಕೇಳಿದಾಗ ಅವರು ನೂತನವಾಗಿ ಮನೆ ಕಟ್ಟುವ ಜನರು ಇದನ್ನು ಮನೆಗೆ ಕಟ್ಟಿದ್ದರೆ ಒಳಿತಾಗುವುದು ಎಂದು ನುಡಿದರು.

ಇನ್ನು, ಬೆಟ್ಟದಲ್ಲಿ ಬನಗಿರಿಯ ಅಜ್ಜಿಯರು ಭಜನೆಯಲ್ಲಿ ತೊಡಿಗಿದ್ದರು. ಬೆಟ್ಟದಲ್ಲಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಚೀಲ ಹಾಗೂ ತ್ಯಾಜ್ಯ ನಿರ್ವಹಣೆ ಮಾಡಲು ದೊಡ್ಡ ದೊಡ್ಡ ಪ್ರಮಾಣದಲ್ಲಿ ಡ್ರಮ್ ಇಟ್ಟು ಪರಿಸರದ ರಕ್ಷಣೆಯ ಹೊಣೆಯನ್ನು ದೇವಾಲಯದ ಆಡಳಿತ ಮಂಡಳಿ ನಿರ್ವಹಿಸಿದ್ದು ನಿಜಕ್ಕೊ ಶ್ಲಾಘನೀಯ.

ಇಷ್ಟೆಲ್ಲಾ ವಿಶೇಷತೆಗಳ ನಡುವೆ ಬೆಟ್ಟದಲ್ಲಿರುವ ನಂದಿಗೆ ವಿಶೇಷ ಪೂಜೆ ಹಾಗು ಅಲಂಕಾರ ಮಾಡಲಾಗಿತ್ತು. ಈ ಸಂಭ್ರಮಗಳ ನಡುವೆ ಆಷಾಢ ಮೊದಲ ಭಾನುವಾರ ಚಾಮುಂಡೇಶ್ವರಿ ದೇವಾಲಯ ದೇಗುಲಗದಲ್ಲಿ ವಿಶೇಷ ಪೂಜೆ ನಡೆದು ಬೆಟ್ಟದ ತಪ್ಪಲಿನಿಂದ ಹಿಡಿದು ಬೆಟ್ಟದ ತುತ್ತ ತುದಿಯವರೆಗೂ ಭಕ್ತರ ಸಾಗರ ತಾಯಿಯ ದರ್ಶನ ಪಡೆದು ಬಂದಿದ್ದ ಭಕ್ತರು ಪಾವನರಾದರು. ಇದೆಲ್ಲವನ್ನೂ ಕಾಣುವ ಭಾಗ್ಯವೂ ಸಹ ನನ್ನದಾಗಿತ್ತು.

ಚಿತ್ರ, ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ

Tags: Chamundi hillmysoreSpecial Articleಆಷಾಢ ಮೊದಲ ಭಾನುವಾರಚಾಮುಂಡಿ ಬೆಟ್ಟತುಂತುರು ಮಳೆಮೈಸೂರುಶ್ರೀ ಚಾಮುಂಡೇಶ್ವರಿ ದೇವಾಲಯ
Share196Tweet123Send
Previous Post

ಬಿಎಸ್’ವೈ ವಿಶ್ವಾಸಮತಕ್ಕೆ ಕಾನೂನು ತೊಡಕು ಒಡ್ಡುತ್ತಾರೆಯೇ ಕೈ ನಾಯಕರು?

Next Post

ಮುಸ್ಲಿಂ ಮಹಿಳೆಯರ ರಕ್ಷಣೆಗೆ ನಿಂತ ಮೋದಿ ಸರ್ಕಾರ: ತ್ರಿವಳಿ ತಲಾಖ್ ಮಸೂದಗೆ ಲೋಕಸಭೆ ಅಸ್ತು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮುಸ್ಲಿಂ ಮಹಿಳೆಯರ ರಕ್ಷಣೆಗೆ ನಿಂತ ಮೋದಿ ಸರ್ಕಾರ: ತ್ರಿವಳಿ ತಲಾಖ್ ಮಸೂದಗೆ ಲೋಕಸಭೆ ಅಸ್ತು

ಮುಸ್ಲಿಂ ಮಹಿಳೆಯರ ರಕ್ಷಣೆಗೆ ನಿಂತ ಮೋದಿ ಸರ್ಕಾರ: ತ್ರಿವಳಿ ತಲಾಖ್ ಮಸೂದಗೆ ಲೋಕಸಭೆ ಅಸ್ತು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ನೈಋತ್ಯ ರೈಲ್ವೆ | 49 ಮಕ್ಕಳ ರಕ್ಷಣೆ, 33 ಲಕ್ಷದ ಗಾಂಜಾ, 30 ಲಕ್ಷದ ಕೊರಿಯನ್ ಸಿಗರೇಟ್ ವಶ

ನೈಋತ್ಯ ರೈಲ್ವೆ | 49 ಮಕ್ಕಳ ರಕ್ಷಣೆ, 33 ಲಕ್ಷದ ಗಾಂಜಾ, 30 ಲಕ್ಷದ ಕೊರಿಯನ್ ಸಿಗರೇಟ್ ವಶ

June 4, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ಕೃಷ್ಣರಾಜಪುರಂ – ವೈಟ್‌ಫೀಲ್ಡ್ ನಡುವೆ ಕಾಮಗಾರಿ: ಕೆಲವು ರೈಲುಗಳ ರದ್ದತಿ, ಭಾಗಶಃ ರದ್ದತಿ

June 4, 2026
ವಿನೋಬನಗರ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು | ಆರೋಪಿ ಬಂಧನ, ಬಂಗಾರದ ಆಭರಣ ವಶ

ವಿನೋಬನಗರ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು | ಆರೋಪಿ ಬಂಧನ, ಬಂಗಾರದ ಆಭರಣ ವಶ

June 4, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಮಂಗಳೂರು-ಹೈದರಾಬಾದ್ ವಿಶೇಷ ರೈಲು | ಮಂತ್ರಾಲಯಕ್ಕೆ ತೆರಳುವವರಿಗೆ ಅನುಕೂಲ

June 4, 2026
ಮೇ ತಿಂಗಳಲ್ಲಿ ನೈಋತ್ಯ ರೈಲ್ವೆ ದಾಖಲೆ ಸಾಧನೆ | ಸರಕು ಸಾಗಣೆ, ಆದಾಯದಲ್ಲಿ ಗಣನೀಯ ಏರಿಕೆ

ಮೇ ತಿಂಗಳಲ್ಲಿ ನೈಋತ್ಯ ರೈಲ್ವೆ ದಾಖಲೆ ಸಾಧನೆ | ಸರಕು ಸಾಗಣೆ, ಆದಾಯದಲ್ಲಿ ಗಣನೀಯ ಏರಿಕೆ

June 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL