No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Sunday, September 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಗದಗ

ಗದಗ | ಜೀರ್ಣೋದ್ಧಾರದ ಹೆಸರಿನಲ್ಲಿ ವೀರನಾರಾಯಣ ದೇಗುಲ ಶಿಲ್ಪಕಲೆಗೆ ಧಕ್ಕೆ | ಬೇಕಿದೆ ಹಿಂದೂ ಮುಖಂಡರ ಬೆಂಬಲ

ಮಾಹಿತಿ ನೀಡದೇ 150 ವರ್ಷದ ದೇಗುಲ ಗೋಡೆ ತರಾತುರಿಯಲ್ಲಿ ಧ್ವಂಸ | ವಂಶ ಪಾರಂಪರಿಕ ಅರ್ಚಕರ ಆಕ್ರೋಶ

kalpa News by kalpa News
November 12, 2024
in ಗದಗ
0
ಗದಗ | ಜೀರ್ಣೋದ್ಧಾರದ ಹೆಸರಿನಲ್ಲಿ ವೀರನಾರಾಯಣ ದೇಗುಲ ಶಿಲ್ಪಕಲೆಗೆ ಧಕ್ಕೆ | ಬೇಕಿದೆ ಹಿಂದೂ ಮುಖಂಡರ ಬೆಂಬಲ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗದಗ  |

ಸುಮಾರು 150 ವರ್ಷದ ಐತಿಹಾಸಿಕ ಪ್ರಸಿದ್ಧ ಶಿಲ್ಪಕಲೆಗಳನ್ನು ಹೊಂದಿದ್ದ ವೀರ ನಾರಾಯಣ ದೇವಾಲಯದ #VeeraNarayanaTemple ಗೋಡೆಗಳನ್ನು ಜೀರ್ಣೋದ್ದಾರದ ಹೆಸರಿನಲ್ಲಿ ಯಾವುದೇ ರೀತಿಯ ಮಾಹಿತಿ ನೀಡದೇ ಧ್ವಂಸ ಮಾಡಲಾಗಿದ್ದು, ಈ ಕುರಿತಂತೆ ದೇವಾಲಯದ ವಂಶ ಪಾರಂಪರಿಕ ಅರ್ಚಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಜರಾಯಿ ಇಲಾಖೆಗೆ ಸೇರದೇ ಇರುವ ಈ ದೇವಾಲಯವನ್ನು ವಂಶ ಪಾರಂಪರಿಕವಾಗಿಯೇ ಅರ್ಚಕರು, ಪಾರುಪತ್ತೆದಾರರು ನಡೆಸಿಕೊಂಡು ಬಂದಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಪೂರ್ವ ಮಾಹಿತಿ ನೀಡಿದೇ ಪೊಲೀಸ್ ಭದ್ರತೆಯಲ್ಲಿ #PoliceSecurity ಒಡೆದು ಹಾಕಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ.

ದೀಪಾವಳಿ ಹಬ್ಬದಂದು ಏಕಾಏಕಿ ಪೊಲೀಸ್ ಭದ್ರತೆಯಲ್ಲಿ ದೇವಾಲಯವನ್ನು ಧ್ವಂಸ ಮಾಡಲಾಗಿದ್ದು, ಅವಸರದ ಕಾಮಗಾರಿ ಹಲವು ಸಂಶಯಗಳಿಗೆ ಕಾರಣವಾಗಿದೆ.ಪ್ರಮುಖವಾಗಿ ಗಮನಿಸಬೇಕಾದ ವಿಷಯವೆಂದರೆ, ದೇವಾಲಯದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಅರ್ಚಕರು ಈವೆರಗೂ ಯಾವುದೇ ರೀತಿಯ ಅನುದಾನದ ಸಹಾಯವನ್ನು ಸರ್ಕಾರದಿಂದ ಕೇಳಿಲ್ಲ. ಆದರೂ, ಜೀರ್ಣೋದ್ಧಾರ ಮಾಡುತ್ತೇವೆ ಎಂಬ ಅಂಶದಿಂದ ಜೀರ್ಣೋದ್ಧಾರದ ನೀಲನಕ್ಷೆಯನ್ನೂ ಸಹ ಪ್ರದರ್ಶಿಸದೇ ಧ್ವಂಸ ಮಾಡಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ.

ಅಲ್ಲದೇ, ಪುರಾತನ ಐತಿಹ್ಯ ಹಾಗೂ ಶಿಲ್ಪಕಲೆಯನ್ನು ಹೊಂದಿರುವ ಈ ದೇವಾಲಯದ ಗೋಡೆಗಳನ್ನು ಯಾವುದೇ ರೀತಿಯ ಸೂಕ್ಷ್ಮತೆ ವಹಿಸದೇ ಯಂತ್ರಗಳನ್ನು ಬಳಡಿ ಬೇಕಾಬಿಟ್ಟಿಯಾಗಿ ಕೆಡವಲಾಗಿದೆ. ಈ ವೇಳೆ ದೇವಾಲಯದ ದ್ವಾರಗಳೂ ಸಹ ಹಾನಿಯಾಗಿವೆ.

ಕಾಮಗಾರಿ ಆರಂಭ ಮಾಡುವ ಮುನ್ನ ದೇವಾಲಯದ #Temple ವಂಶ ಪಾರಂಪರಿಕ ಅರ್ಚಕರನ್ನು ಯಾವುದೇ ರೀತಿಯಲ್ಲೂ ಸಹ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ದೀಪಾವಳಿ ಹಬ್ಬದ ವೇಳೆಯಲ್ಲಿ ಬೇಡ ಎಂದು ಬೇಡಿಕೊಂಡು ಕಣ್ಣೀರು ಸುರಿಸಿದರೂ ಲೆಕ್ಕಿಸದೇ ಗೋಡೆಗಳನ್ನು ಒಡೆಯಲಾಗಿತ್ತು.

1 ಕೋಟಿ ರೂ. ವೆಚ್ಚದಲ್ಲಿ ದೇವಾಲಯವನ್ನು ಜೀರ್ಣೋದ್ಧಾರ #Anastylosis ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಕಾಮಗಾರಿ ಆರಂಭಕ್ಕೂ ಮುನ್ನ ಯಾವುದೇ ರೀತಿಯಲ್ಲೂ ನೀಲ ನಕ್ಷೆ ಪ್ರದರ್ಶನ ಮಾಡಿಲ್ಲ ಎಂದು ಭಕ್ತರು ದೂರಿದ್ದಾರೆ.
ಈ ಬಗ್ಗೆ ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಜೆಡಿಎಸ್ ರಾಜ್ಯ ವಕ್ತಾರ ವೆಂಕನ ಗೌಡ ಗೋವಿಂದಗೌಡ್ರ, ವೀರ ನಾರಾಯಣ ದೇವಾಲಯದಲ್ಲಿ ತರಾತುರಿಯಿಂದ ನಡೆಸುತ್ತಿರುವ ಕಾಮಗಾರಿಯಿಂದ ಇಲ್ಲಿನ ಶಿಲ್ಪಕಲೆಗೆ ಹಾಗೂ ಪುರಾತನ ಮಹತ್ವಕ್ಕೆ ಧಕ್ಕೆ ಉಂಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರ ಅವಸರದ ಕ್ರಮ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದ್ದಾರೆ.

ಹಿಂದೂಗಳ ಅತಿ ದೊಡ್ಡ ಹಬ್ಬವಾದ ದೀಪಾವಳಿಯ ದಿನದಂದೇ ದೇವಾಲಯದ ಗೋಡೆಗಳನ್ನು ಒಡೆಯುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಗೋಡೆಗಳನ್ನು ಧ್ವಂಸ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದರು.

ಸಂಬಂಧಿಸಿದ ಅಧಿಕಾರಿಗಳು ಕೂಡಲೇ ದೇವಾಲಯಕ್ಕೆ ಸಂಬಂಧಿಸಿದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಬೇಕು. ಕೂಡಲೇ ಜೀರ್ಣೋದ್ಧಾರದ ನೀಲನಕ್ಷೆ ಪ್ರದರ್ಶನ ಮಾಡಬೇಕು ಎಂದು ಆಗ್ರಹಿಸಿದರು.

ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ವಂಶ ಪಾರಂಪರಿಕ ಅರ್ಚಕರು, ನಾವು ಯಾರ ಬಳಿಯಲ್ಲೂ ಜೀರ್ಣೋದ್ದಾರಕ್ಕೆ ಅನುದಾನ ಕೇಳಿಲ್ಲ. ನಾವೇ ಜೀರ್ಣೋದ್ಧಾರ ಮಾಡಿಕೊಳ್ಳುತ್ತೇವೆ. ಸರ್ಕಾರದ ಯಾವುದೇ ಅನುದಾನದ ಅವಶ್ಯಕತೆ ನಮಗೆ ಇಲ್ಲ. 12 ಶತಮಾನದಿಂದ ವಂಶ ಪಾರಂಪರ್ಯವಾಗಿ ನಾವು ಪೂಜೆ ಮಾಡಿಕೊಂಡು, ದೇವಾಲಯವನ್ನು ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ. ಆದರೆ, ನಮಗೆ ಯಾವುದೇ ರೀತಿಯ ಮಾಹಿತಿ ಅಥವಾ ನೋಟೀಸ್ ನೀಡದೇ ದೇವಾಲಯದ ಗೋಡೆ ಒಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಗುಲ 12ನೇ ಶತಮಾನದ್ದಾಗಿದ್ದು, ಅಂದರೆ 800 ವರ್ಷ ಹಳೆಯದ್ದಾಗಿದೆ. ಆದರೆ, ಸುಮಾರು 150 ವರ್ಷದ ಹಿಂದಿನ ಐತಿಹಾಸಿಕ ಗೋಡೆಗಳನ್ನು ಈಗ ಒಡೆದು ಹಾಕಲಾಗಿದೆ.
Kalahamsa Infotech private limitedಮುಜರಾಯಿ ಇಲಾಖೆಗಾಗಲೀ, ಪ್ರಾಚ್ಯವಸ್ತು ಇಲಾಖೆಗಾಗಲೀ ನಮ್ಮ ದೇವಾಲಯಕ್ಕಾಗಲೀ ಯಾವುದೇ ಸಂಬಂಧವಿಲ್ಲ. ಜೀರ್ಣೋದ್ಧಾರ ಮಾಡುವುದಾಗಿ 2003ರಲ್ಲಿ ನೋಟಿಫಿಕೇಶನ್ ಮಾಡಲಾಗಿದ್ದು, ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದೆವು. ಆಗ ನಮ್ಮ ಪರವಾಗಿ ತೀರ್ಪು ಬಂದಿತ್ತು. ಆದರೆ, ಈಗ ಮತ್ತೆ, ಜೀರ್ಣೋದ್ಧಾರ ಮಾಡುವ ಹೆಸರಿನಲ್ಲಿ ಸ್ಥಳೀಯ ಶಾಸಕರು ಆಸಕ್ತಿ ವಹಿಸಿ ಈಗ ಧ್ವಂಸ ಮಾಡಿಸಿದ್ದಾರೆ ಎಂದು ದೂರಿದ್ದಾರೆ.

ಇದೇ ಸಂಬಂಧಿತ ನಮಗೂ ಸರ್ಕಾರಕ್ಕೂ ನ್ಯಾಯಾಲಯದಲ್ಲಿ ಪ್ರಕರಣವಿತ್ತು. ಈ ನಡುವೆ, ಹಿಂದೆ ಧರ್ಮಶಾಲಿ ಮಂಟಪವನ್ನು ಅಧಿಕಾರಿಗಳು ಕೆಡವಿದ್ದರು. ಅದನ್ನು ಸ್ವಚ್ಚ ಮಾಡಿ ಕೊಡಿ ಎಂದು ನ್ಯಾಯಾಲಯ ಆದೇಶಿಸಿತ್ತು. ಆದೇಶದಲ್ಲಿ ಅಭಿವೃದ್ಧಿ, ಧ್ವಂಸ, ಮರು ನಿರ್ಮಾಣ ಸೇರಿದಂತೆ ಮಾಡುವಂತಿಲ್ಲ ಎಂದು ಉಲ್ಲೇಖಿಸಿದೆ. ಆದರೆ, ಅದನ್ನು ತಮಗೆ ಬೇಕಾದಂತೆ ಉಲ್ಲೇಖಿಸಿಕೊಂಡು ದೇವಾಲಯ ಒಡೆದಿದ್ದಾರೆ. ದೇವಾಲಯದ ಗೋಡೆ ಒಡೆಯಲು ಆದೇಶ ತೋರಿಸಿ ಎಂದರೂ ತೋರಿಸಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಹಿಂದೂ ಮುಖಂಡರೇ ಇತ್ತ ನೋಡಿ…
ಒಂದೆಡೆ ಹಿಂದೂಗಳ ಮಠ ಮಂದಿರಗಳು ಹಾಗೂ ಅದಕ್ಕೆ ಸಂಬಂಧಿಸಿದ ಭೂಮಿ ತನ್ನದು ಎಂದು ವಕ್ಫ್ ಬೋರ್ಡ್ ನೋಟೀಸ್ ನೀಡಿದ್ದು ರಾಜ್ಯದಲ್ಲಿ ವಿವಾದ ಎಬ್ಬಿಸಿದೆ. ಇದರ ನಡುವೆಯೇ, ಐತಿಹಾಸಿಕ ಪ್ರಸಿದ್ಧ ಗದುಗಿನ ವೀರ ನಾರಾಯಣ ದೇವಾಲಯವನ್ನು ಜೀರ್ಣೋದ್ಧಾರದ ಹೆಸರಿನಲ್ಲಿ ಯಾವುದೇ ರೀತಿಯ ಮಾಹಿತಿ ನೀಡದೇ, ನೀಲನಕ್ಷೆ ಬಹಿರಂಗ ಪಡಿಸದೇ ಧ್ವಂಸ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕೆಲಸದ ಹಿಂದೆ ಕಾಣದ ಕೈಗಳ ಬಲ ಪ್ರಯೋಗ ಆಗಿದೆ ಎಂದು ಅನುಮಾನಗಳನ್ನು ದೇವಾಲಯದ ಭಕ್ತರು ಹೊರಹಾಕಿದ್ದಾರೆ.

ಇಂತಹ ಸಂದರ್ಭದಲ್ಲಿ ದೇಶದಲ್ಲೇ ಪ್ರಸಿದ್ಧಿ ಪಡೆದಿರುವ ಗದುಗಿನ ವೀರ ನಾರಾಯಣ ದೇವಾಲಯವನ್ನು ರಕ್ಷಿಸಿ, ಕಾಣದ ಕೈಗಳ ವಶಕ್ಕೆ ಹೋಗದಂತೆ ತಡೆಯಲು ಹಿಂದೂ ಮುಖಂಡರ, ಸಂಘಟನೆಗಳ ಹಾಗೂ ಮಠಾಧೀಶರ ಬೆಂಬಲ ಬೇಕಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4
Tags: AnastylosisGadagHindu TempleKannada News WebsiteLatest News KannadaVeera Narayana Templeಗದಗಜೀರ್ಣೋದ್ಧಾರನೀಲ ನಕ್ಷೆಪಾರುಪತ್ತೆದಾರಮುಜರಾಯಿ ಇಲಾಖೆವಕ್ಫ್ ಬೋರ್ಡ್ವೀರ ನಾರಾಯಣ ದೇವಾಲಯಶಿಲ್ಪಕಲೆ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನೀರು ಜೀವಜಲ, ನದಿ ಮೂಲ ಸಂಸ್ಕೃತಿ ಉಳಿಸಬೇಕಾದ ಹೊಣೆ ಕೂಡ ನಮ್ಮದೇ: ಮುರುಘರಾಜೇಂದ್ರ ಸ್ವಾಮೀಜಿ

Next Post

ಅಭಿಷೇಕ್-ಅವಿವಾ ದಂಪತಿಗೆ ಗಂಡು ಮಗು | ಮೊಮ್ಮಗನನ್ನು ನೋಡಿ ಸಂಭ್ರಮಿಸಿದ ಸುಮಲತಾ

kalpa News

kalpa News

Next Post
ಅಭಿಷೇಕ್-ಅವಿವಾ ದಂಪತಿಗೆ ಗಂಡು ಮಗು | ಮೊಮ್ಮಗನನ್ನು ನೋಡಿ ಸಂಭ್ರಮಿಸಿದ ಸುಮಲತಾ

ಅಭಿಷೇಕ್-ಅವಿವಾ ದಂಪತಿಗೆ ಗಂಡು ಮಗು | ಮೊಮ್ಮಗನನ್ನು ನೋಡಿ ಸಂಭ್ರಮಿಸಿದ ಸುಮಲತಾ

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL