ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ರಾಜ್ಯದಲ್ಲಿರುವ ಮದರಸಾಗಳನ್ನು Madarasa ಶಿಕ್ಷಣ ಪದ್ದತಿ ವ್ಯಾಪ್ತಿಗೆ ತರುವ ಕುರಿತಾಗಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಈ ಕುರಿತಂತೆ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, Minister B C Nagesh ಅಲ್ಪಸಂಖ್ಯಾತ ಮಕ್ಕಳೂ ಸಾಮಾನ್ಯ ಶಿಕ್ಷಣ ಪದ್ದತಿ ಅಥವಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡಬೇಕು. ರಾಜ್ಯದಲ್ಲಿ ಬಹಳಷ್ಟು ಮದರಸಾಗಳು ಮುಚ್ಚಿವೆ. ಅಲ್ಲಿನ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ, ಮದರಸಾಗಳನ್ನು ತರುವ ಕುರಿತಾಗಿ ಚಿಂತನೆಯಿದೆ ಎಂದಿದ್ದಾರೆ.
Also read: ಮಾ.27ರಂದು ಬೆಂಗಳೂರಿನಲ್ಲಿ ನಡೆಯಲಿರುವ ಉದ್ಯೋಗಮೇಳದ ಮಾಹಿತಿ ಹೀಗಿದೆ…
ಇಂದಿನ ಕಾಲಘಟದಲ್ಲಿ ಜೀವನ ರೂಪಿಸಿಕೊಳ್ಳಲು ಸಾಮಾನ್ಯ ಶಿಕ್ಷಣ ಅತ್ಯಗತ್ಯ. ಹೀಗಾಗಿ, ಮದರಸಾದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಔಪಚಾರಿಕ ಶಿಕ್ಷಣ ನೀಡುವ ಉದ್ದೇಶವಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post