ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ಪುರಂದರದಾಸರ #SriPuranadaradasaru ಮತ್ತು ಶ್ರೀ ತ್ಯಾಗರಾಜ ಸ್ವಾಮಿಗಳ ಆರಾಧನೆಯ ಪ್ರಯುಕ್ತ ನಗರದ ಪ್ರತಿಷ್ಠಿತ ಸಂಸ್ಥೆ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯವು 24ನೇ ವರ್ಷದ ದೇವರನಾಮ #DevotionalSong ಉಚಿತ ಕಲಿಕಾ ಶಿಬಿರ ಆಯೋಜಿಸಿದೆ.
ಯಾರೆಲ್ಲಾ ಭಾಗವಹಿಸಬಹುದು?
ಶಿಬಿರದಲ್ಲಿ ಎಲ್ಲಾ ವಯೋಮಾನದ ಮಹಿಳೆ ಮತ್ತು ಪುರುಷರು ಶಿಬಿರದಲ್ಲಿ ಭಾಗವಹಿಸಬಹುದು. ಜನವರಿ 6ರಿಂದ 25ರವರೆಗೆ ಪ್ರತಿದಿನ ಸಂಜೆ 5.30ರಿಂದ 6.30ರವರೆಗೆ ನಡೆಯಲಿದೆ.
ಎಲ್ಲಿ ನಡೆಯಲಿದೆ ಶಿಬಿರ?
ಬನಶಂಕರಿ 1 ನೇ ಹಂತದ (ಪಿಇಎಸ್ ಡಿಗ್ರಿ ಕಾಲೇಜು ಹಿಂಭಾಗದ) ಸ್ವಾಮಿ ವಿವೇಕಾನಂದ ವಿದ್ಯಾಶಾಲೆ ಆವರಣದಲ್ಲಿ ಶಿಬಿರ ನಡೆಯಲಿದೆ ಎಂದು ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೆಸರು ನೋಂದಣಿಗೆ ಮೊ: 9448533347 ಅಥವಾ ಮೊ: 8861213567 ಗೆ ಸಂಪರ್ಕಿಸಬಹುದು.
ವಿದ್ವಾನ್ ಶ್ರೀಕಂಠ ಭಟ್ ಕುರಿತು
ಶಿವಮೊಗ್ಗ ಮೂಲದ ವಿದ್ವಾನ್ ಶ್ರೀ ಕಂಠ ಭಟ್ ಅವರು, ನಾಡಿನ ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕರೂ ಆಗಿದ್ದಾರೆ. ಈವರೆಗೆ ಸಾವಿರಾರು ಜನರಿಗೆ ಸಂಗೀತ ಪಾಠ ಮಾಡಿದ ಖ್ಯಾತಿಗೆ ಪಾತ್ರರಾಗಿರುವ ಇವರನ್ನು ನೂರಾರು ಪ್ರಶಸ್ತಿ, ಪುರಸ್ಕಾರ ಅವರನ್ನು ಅಲಂಕರಿಸಿವೆ.
ಮಂತ್ರಾಲಯ, ತಿರುಮಲ ಸೇರಿದಂತೆ ಹಲವು ಪ್ರಖ್ಯಾತ ಸನ್ನಿಧಿ, ಕ್ಷೇತ್ರದಲ್ಲಿ ಇವರ ಸಂಗೀತ ಕಛೇರಿ ಸಂಪನ್ನಗೊಂಡಿರುವುದು ಬಹು ವಿಶೇಷ.
ಇವರು ಪ್ರತಿ ವರುಷವೂ ಉಚಿತ ದೇವರನಾಮ ಶಿಬಿರ ನಡೆಸುತ್ತಿರುವುದು ಇನ್ನೊಂದು ವಿಶೇಷ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post