ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಾವೇರಿ: ದೇವಸ್ಥಾನದಲ್ಲಿ ಭಕ್ತಿ ಎಷ್ಟು ಮುಖ್ಯವೋ ಅದೇ ರೀತಿ ಪಕ್ಷದ ಕಚೇರಿ ಬಗ್ಗೆ ಕಾರ್ಯಕರ್ತರು ಸೇರಿದಂತೆ ಎಲ್ಲರಿಗೂ ಭಕ್ತಿಯೂ ಅಷ್ಟೇ ಮುಖ್ಯ. ದೇವಸ್ಥಾನದ ಪ್ರತಿಯೊಂದು ಕಲ್ಲು ಭಕ್ತಿಯ ಕಥೆ ಹೇಳಿದರೆ ಪಕ್ಷದ ಕಚೇರಿಯ ಕಟ್ಟಡದ ಕಲ್ಲುಗಳು ಕಾರ್ಯಕರ್ತರ ಸೇವೆಯನ್ನು ಹೇಳುತ್ತವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಹಾವೇರಿಯ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನದ ಕಾಮಗಾರಿ ಪ್ರಾರಂಭೋತ್ಸವ ಹಾಗೂ ಶಿಲಾಪಲಕ ಅನಾವರಣ ಕಾರ್ಯಕ್ರಮ ಜರುಗಿತು. ನೂತನ ಕಾರ್ಯಾಲಯ ಭವನದ ಕಾಮಗಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆಗೂಡಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವರು, ಪಕ್ಷದ ಕಚೇರಿಯ ನಿರ್ಮಾಣದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಭಾಗಿದಾರನೇ. ದೇವಸ್ಥಾನಕ್ಕೆ ಕಲ್ಲುಗಳು ಹೇಗೆ ಮುಖ್ಯವೋ ಅದೇ ರೀತಿ ಪಕ್ಷದ ನಿರ್ಮಾಣದಲ್ಲಿ ಕಾರ್ಯಕರ್ತರ ಸೇವೆ ಶ್ರಮವೂ ಅಷ್ಟೇ ಮುಖ್ಯ ಪಕ್ಷಕ್ಕೆ ವಂತಿಕೆ ಎನ್ನುವುದು ದೇವಸ್ಥಾನಕ್ಕೆ ದಕ್ಷಿಣೆ ನೀಡಿದಂತೆ. ದೇವಸ್ಥಾನದ ಕಟ್ಟಡದ ಬಗ್ಗೆ ಭಕ್ತಿಯಿರುವಂತೆ ಪಕ್ಷದ ಕಚೇರಿಯ ಬಗ್ಗೆಯೂ ಕಾರ್ಯಕರ್ತರು ಸೇರಿದಂತೆ ಎಲ್ಲರಿಗೂ ಗೌರವ ಭಕ್ತಿಯಿರಬೇಕು ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಕಚೇರಿಯ ಶಿಲಾನ್ಯಾಸ ನಡೆದಿರುವುದು ಸಂತೋಷದ ವಿಚಾರ. ಬಿಜೆಪಿಗೆ ಬಂದು ನಾನು ಬಂದು ವರ್ಷವಾಯಿತು. ಕಚೇರಿಯ ಶಿಲಾನ್ಯಾಸದಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಚಾರ. ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಜವಾಬ್ದಾರಿ ಹಂಚಿಕೆಗೆ ಕಚೇರಿ ನಿರ್ಮಾಣವಾಗಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯದ ಮೂಲೆಮೂಲೆ ಸಂಚರಿಸಿ ಪಕ್ಷಕ್ಕೆ ಬಲ ತಂದುಕೊಡುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ್ ಉದಾಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post