Friday, September 26, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಐತಿಹಾಸಿಕ ಮೈಲಿಗಲ್ಲು: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯಲ್ಲಿ ಮಹತ್ವದ ಹೆಜ್ಜೆ | ಏನದು?

ದೇಶದ ಪ್ರಥಮ ಬುಲೆಟ್ ಟ್ರೈನ್ ಯಾವಾಗ ಆರಂಭವಾಗುವ ನಿರೀಕ್ಷೆಯಿದೆ?

September 22, 2025
in Special Articles
0 0
0
Share on facebookShare on TwitterWhatsapp
Read - 4 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದ ಮಹತ್ವದ ಯೋಜನೆಗಳು ಒಂದೊಂದೇ ದೇಶದಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿರುವಂತೆಯೇ, ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಯೋಜನೆಯಲ್ಲಿ ಐತಿಹಾಸಿಕ ಇಂಜಿನಿಯರಿಂಗ್ ಮೈಲಿಗಲ್ಲನ್ನು ಸಾಧಿಸಿದೆ.

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಮಾರ್ಗದಲ್ಲಿ ಪ್ರಮುಖವಾಗಿ 4.8 ಕಿಮೀ ಸುರಂಗ ವಿಭಾಗದ ನಿರ್ಮಾಣದಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸಲಾಗಿದೆ.

ಘನ್ಸೋಲಿ ಮತ್ತು ಶಿಲ್ಫಾಟಾ ಬದಿಗಳಿಂದ ಏಕಕಾಲದಲ್ಲಿ ಉತ್ಖನನವನ್ನು ನಡೆಸಲಾಯಿತು. ಕಾರ್ಯಾಚರಣೆಯಲ್ಲಿದ್ದ ತಂಡಗಳು ಸವಾಲಿನ ನೀರೊಳಗಿನ ಭೂಪ್ರದೇಶದ ಮೂಲಕ ಪರಸ್ಪರ ಮುನ್ನಡೆದಿದ್ದು, ಮಹತ್ವದ ಮೈಲುಗಲ್ಲಾಗಿದೆ.

ಕಾರ್ಯಾಚರಣೆಯಲ್ಲಿದ್ದ ಎರಡು ತಂಡಗಳು ಯಶಸ್ವಿಯಾಗಿ ಸಂಪರ್ಕ ಸಾಧಿಸಿದಾಗ ಈ ಮಹತ್ವದ ಕ್ಷಣ ದಾಖಲಾಗಿದ್ದು, ಇದು ಗಮನಾರ್ಹ ಇಂಜಿನಿಯರಿಂಗ್ ಸಾಧನೆಯಾಗಿದೆ. ಈ ಐತಿಹಾಸಿಕ ಸಾಧನೆ ಮಾಡಿರುವ ಯೋಜನಾ ತಂಡವನ್ನು ರೈಲ್ವೆ ಸಚಿವರು ಅಭಿನಂದಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಈ ಸವಾಲಿನ ತೊರೆಯ ಮೂಲಕ ಮುಂಬೈ ಮತ್ತು ಥಾಣೆಯನ್ನು ಸಂಪರ್ಕಿಸುವ ಭಾರತದ ಮೊದಲ ಸಮುದ್ರದೊಳಗಿನ ಸುರಂಗವನ್ನು ನಾವು ನಿರ್ಮಿಸುತ್ತಿರುವುದರಿಂದ ಇದು ಒಂದು ಹೆಗ್ಗುರುತಿನ ಕ್ಷಣವಾಗಿದೆ ಎಂದರು.
ಆರ್ಥಿಕತೆಯ ಮೇಲೆ ಗುಣಾತ್ಮಕ ಪರಿಣಾಮ
ಬುಲೆಟ್ ರೈಲು ಯೋಜನೆಯು ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಕೇವಲ 2 ಗಂಟೆ 7 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಇದು ಪ್ರಮುಖ ವಾಣಿಜ್ಯ ಕೇಂದ್ರಗಳ ಆರ್ಥಿಕತೆಯನ್ನು ಸಂಪರ್ಕಿಸಿ, ಸಂಯೋಜಿಸುತ್ತದೆ ಎಂಬುದು ಗಮನಾರ್ಹ ಅಂಶವಾಗಿದೆ.

ಟೋಕಿಯೊ, ನಗೋಯಾ ಮತ್ತು ಒಸಾಕಾದಂತಹ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುವ ವಿಶ್ವದ ಮೊದಲ ಬುಲೆಟ್ ರೈಲು, ಜಪಾನ್’ನ ಇಡೀ ಆರ್ಥಿಕತೆಯ ಮೇಲೆ ಬಹುಮುಖ ಪರಿಣಾಮವನ್ನು ಉಂಟುಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

ಅದೇ ರೀತಿ, ಈ ಯೋಜನೆಯು ಆನಂದ್, ಅಹಮದಾಬಾದ್, ವಡೋದರಾ, ಸೂರತ್, ವಾಪಿ ಮತ್ತು ಮುಂಬೈಗಳನ್ನು ಒಂದೇ ಆರ್ಥಿಕ ಕಾರಿಡಾರ್ ಆಗಿ ಒಗ್ಗೂಡಿಸುತ್ತದೆ. ಇದು ಏಕೀಕೃತ ಮಾರುಕಟ್ಟೆಗಳನ್ನು ಸೃಷ್ಟಿಸುವ ಜೊತೆಯಲ್ಲಿ ಈ ಕಾರಿಡಾರ್’ನಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.
ಯೋಜನಾ ಜ್ಞಾನ ಹಾಗೂ ಆರ್ಥಿಕ ಏಕೀಕರಣವನ್ನು ಸುಗಮಗೊಳಿಸಲಿರುವ ಈ ಯೋಜನೆ, ಹೆಚ್ಚಿನ ಉತ್ಪಾದಕತೆ ಮತ್ತು ವ್ಯವಹಾರ ವಿಸ್ತರಣೆಯ ಮೂಲಕ ಆರ್ಥಿಕ ಲಾಭಗಳು ಆರಂಭಿಕ ಹೂಡಿಕೆಯನ್ನು ಹೆಚ್ಚಿಸುತ್ತದೆ ಎಂದು ಅಂದಾಜಿಸಲಾಗಿದೆ.

ಪ್ರಮುಖವಾಗಿ ಈ ಯೋಜನೆಯು ಮಧ್ಯಮ ವರ್ಗದವರ ಆಕಾಂಕ್ಷೆಗಳನ್ನು ಪೂರೈಸುವ ಗುರಿ ಹೊಂದಿದ್ದು, ಮಧ್ಯಮ ವರ್ಗಕ್ಕಾಗಿ ರಚಿಸಲಾದ ದರಗಳೊಂದಿಗೆ ಆರಾಮದಾಯಕ ಪ್ರಯಾಣದ ನಿರೀಕ್ಷೆಯಿದೆ.

ಯೋಜನೆಯ ಪ್ರಗತಿ ಮತ್ತು ತಂತ್ರಜ್ಞಾನ
ಮುಂಬೈ-ಅಹಮದಾಬಾದ್ ಎಚ್’ಎಸ್’ಆರ್ ಯೋಜನೆಯು ಬಹುರಂಗಗಳಲ್ಲಿ ಗಮನಾರ್ಹ ಪ್ರಗತಿಯನ್ನು ಪ್ರದರ್ಶಿಸುತ್ತಲೇ ಇದೆ:

  • 320 ಕಿಮೀ ವಯಾಡಕ್ಟ್ (ಸೇತುವೆ) ಭಾಗ ಪೂರ್ಣಗೊಂಡಿದೆ
  • ಎಲ್ಲಾ ಸ್ಥಳಗಳಲ್ಲಿ ನಿಲ್ದಾಣ ನಿರ್ಮಾಣ ಕಾರ್ಯವು ಉತ್ತಮ ವೇಗದಲ್ಲಿ ಪ್ರಗತಿಯಲ್ಲಿದೆ
  • ನದಿ ಸೇತುವೆಗಳನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದೆ
  • ಸಬರಮತಿ ಸುರಂಗವು ಪೂರ್ಣಗೊಳ್ಳುವ ಹಂತದಲ್ಲಿದೆ

ತಾಂತ್ರಿಕ ನಾವೀನ್ಯತೆಯ ಅಂಶಗಳು
ಈ ಯೋಜನೆಯು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಅತ್ಯಾಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಎರಡು ಬುಲೆಟ್ ರೈಲುಗಳನ್ನು ಅಳವಡಿಸಲು ಒಂದೇ ಸುರಂಗ ತಂತ್ರಜ್ಞಾನದ ಬಳಕೆ ಮತ್ತು ವಯಾಡಕ್ಟ್ ನಿರ್ಮಾಣದಲ್ಲಿ 40-ಮೀಟರ್ ಗಿಡರ್’ಗಳ ನಿಯೋಜನೆಯು ಗಮನಾರ್ಹ ತಾಂತ್ರಿಕ ಸಾಧನೆಗಳನ್ನು ಸಾಕ್ಷೀಕರಿಸುತ್ತದೆ.

ಈ ಯೋಜನೆಯಲ್ಲಿನ ನಾವೀನ್ಯತೆಯ ತಂತ್ರಜ್ಞಾನವನ್ನು ಅದರ ದಕ್ಷತೆ ಮತ್ತು ವಿನ್ಯಾಸ ಶ್ರೇಷ್ಠತೆಗಾಗಿ ಗಮನಾರ್ಹವಾಗಿ ಜಪಾನಿನ ಪಾಲುದಾರರು ಶ್ಲಾಘಿಸಿದ್ದಾರೆ.

ಈ ಯೋಜನೆಯ ಮೂಲಕ ಭಾರತ ಗಣನೀಯ ತಾಂತ್ರಿಕ ಜ್ಞಾನವನ್ನು ಗಳಿಸಿದೆ. ಇದು ನಿರಂತರವಾಗಿ ಜಪಾನಿನ ತಜ್ಞರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ನೂತನ ರೈಲು ತಂತ್ರಜ್ಞಾನಗಳು ಹಾಗೂ ಹಾಲಿ ಯೋಜನೆಗಳು:
ಇತ್ತೀಚೆಗೆ ಕೇಂದ್ರ ಸಚಿವರು ಹೈ-ಸ್ಪೀಡ್ ರೈಲು ಯೋಜನೆಯನ್ನು ಪರಿಶೀಲಿಸಲು ಉಪ ಸಚಿವರ ನೇತೃತ್ವದ ಜಪಾನಿನ ನಿಯೋಗವನ್ನು ಭೇಟಿಯಾದರು. ಯೋಜನೆಯ ಪ್ರಗತಿಯ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು. ಮೊದಲ ವಿಭಾಗವು 2027 ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

ಭಾರತದಲ್ಲಿ ಇತ್ತೀಚಿನ ಇ10 ಶಿಂಕನ್ಸೆನ್ (Japan Next Generation Bullet Train) ಅನ್ನು ಪರಿಚಯಿಸುವ ಬಗ್ಗೆಯೂ ಚರ್ಚೆಗಳು ನಡೆದವು. ಭಾರತಕ್ಕೆ ಈ ಸುಧಾರಿತ ರೈಲು ವ್ಯವಸ್ಥೆಯನ್ನು ಒದಗಿಸಲು ಜಪಾನ್ ಒಪ್ಪಿಕೊಂಡಿದೆ.ಕಾರ್ಯಾಚರಣೆಯ ಚೌಕಟ್ಟು
ಆರಂಭಿಕ ಸಂಚಾರ: ಪೀಕ್ ಅವರ್’ನಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ
ಹಂತ 2: ಕಾರ್ಯಾಚರಣೆಗಳು ಸ್ಥಿರವಾಗುತ್ತಿದ್ದಂತೆ ಪ್ರತಿ 20 ನಿಮಿಷಗಳಿಗೊಮ್ಮೆ
ಭವಿಷ್ಯದ ವಿಸ್ತರಣೆ: ಹೆಚ್ಚುತ್ತಿರುವ ಸಂಚಾರ ಬೇಡಿಕೆಗಳನ್ನು ಪೂರೈಸಲು ಪ್ರತಿ 10 ನಿಮಿಷಗಳಿಗೊಮ್ಮೆ
ಗುರಿ: ಸೂರತ್’ನಿಂದ ಬಿಲಿಮೋರಾ ನಡುವಿನ ಮೊದಲ ವಿಭಾಗದ ಕಾರ್ಯಾಚರಣೆಗಳು 2027 ರಲ್ಲಿ ಪ್ರಾರಂಭವಾಗಲಿವೆ.

ವಿಶ್ವ ದರ್ಜೆಯ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಮಗ್ರ ತರಬೇತಿ ಕಾರ್ಯಕ್ರಮವೂ ನಡೆಯುತ್ತಿದೆ. ಲೋಕೋ ಪೈಲಟ್’ಗಳಿಗೆ ಮತ್ತು ನಿರ್ವಹಣಾ ಸಿಬ್ಬಂದಿಗೆ ಪ್ರಸ್ತುತ ಜಪಾನ್’ನಲ್ಲಿ ಪ್ರಾಯೋಗಿಕ ತರಬೇತಿ ನಡೆಯುತ್ತಿದೆ. ಸುರಕ್ಷತೆ ಮತ್ತು ದಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಎತ್ತಿ ಹಿಡಿಯಲು ಲೋಕೋ ಪೈಲಟ್’ಗಳಿಗೆ ಸುಧಾರಿತ ಸಿಮ್ಯುಲೇಟರ್’ಗಳ ಕುರಿತು ತರಬೇತಿ ನೀಡಲಾಗುತ್ತಿದೆ.

ಸವಾಲಿನ ಪರಿಸ್ಥಿತಿಗಳಲ್ಲಿ ಇಂಜಿನಿಯರಿಂಗ್ ಶ್ರೇಷ್ಠತೆ
ಈ ಯೋಜನೆಯು ಸಮಗ್ರ ಸುರಕ್ಷತಾ ಕ್ರಮಗಳೊಂದಿಗೆ ಸುಧಾರಿತ ನ್ಯೂ ಆಸ್ಟ್ರಿಯನ್ ಸುರಂಗ ಮಾರ್ಗ ವಿಧಾನವನ್ನು ಬಳಸಿಕೊಂಡಿದೆ. ಸುರಕ್ಷಿತ ನಿರ್ಮಾಣವನ್ನು ಖಚಿತಪಡಿಸಿಕೊಳ್ಳಲು ಇದು ground settlement markers, piezometers, inclinometers & strain gauges ಒಳಗೊಂಡಿದೆ.

ಪ್ರಮುಖವಾಗಿ ಈ ಯೋಜನೆಯ ಕಾರ್ಯಾಚರಣೆಗಳು ಸಮುದ್ರ ಹಾಗೂ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ವಿಶೇಷ ಒತ್ತು ನೀಡಲಾಗಿದೆ.

ಕಾರ್ಯತಂತ್ರದ ಮಹತ್ವ
ಈ ಹೆಗ್ಗುರುತು ಯೋಜನೆಯು ಪ್ರಧಾನಿ ಮೋದಿಯವರ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ರಚಿಸುವ ದೃಷ್ಟಿಕೋನಕ್ಕೆ ಸಮನಾಗಿದೆ. ಈ ಕಾರಿಡಾರ್ ಭಾರತದಾದ್ಯಂತ ಭವಿಷ್ಯದ ಹೈ-ಸ್ಪೀಡ್ ರೈಲು ಜಾಲಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: Bullet TrainHigh speed trainIndian RailwayIRCTCKannada News WebsiteLatest News Kannadanarendra modiPM ModiRailOnerailway bridgeTunnelಅಹಮದಾಬಾದ್ಥಾಣೆಪ್ರಧಾನಿ ನರೇಂದ್ರ ಮೋದಿಬುಲೆಟ್ ಟ್ರೈನ್ಮುಂಬೈವಿಶೇಷ ಲೇಖನಹೈ-ಸ್ಪೀಡ್ ರೈಲು
Previous Post

ಜಿಎಸ್’ಟಿ ಸುಧಾರಣೆ | ಜನರಿಗೂ, ವ್ಯಾಪಾರಿಗಳಿಗೂ ಲಾಭ: ಬಿ.ವೈ. ವಿಜಯೇಂದ್ರ

Next Post

ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ ನಮ್ಮ ಪಾಲಿನ ಹಣ ಬರಲೇ ಇಲ್ಲ: ಸಚಿವ ಮಧುಬಂಗಾರಪ್ಪ ಕಿಡಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ ನಮ್ಮ ಪಾಲಿನ ಹಣ ಬರಲೇ ಇಲ್ಲ: ಸಚಿವ ಮಧುಬಂಗಾರಪ್ಪ ಕಿಡಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸೆ.28ರಂದು ಗಮಕ ದಸರಾ | ರಾಜ್ಯಮಟ್ಟದ ಗಮಕವಾಚನ ಸ್ಪರ್ಧೆ

September 26, 2025

ಹುಬ್ಬಳ್ಳಿ | ಕೆಳಸೇತುವೆಯಲ್ಲಿ ಕಲಾತ್ಮಕ ಅಲಂಕಾರ ಮಾಡಿ ಮಾದರಿಯಾದ ರೈಲ್ವೆ ಅಧಿಕಾರಿಗಳು

September 26, 2025

ಎನ್‌ಸಿಸಿ ಯುವಕರಲ್ಲಿ ಸಾಮಾಜಿಕ ಸೇವಾ ಮೌಲ್ಯ ಬೆಳಸಲು ಸಹಕಾರಿ: ಪ್ರಾಚಾರ್ಯ ರವೀಂದ್ರ

September 26, 2025
Image Courtesy: Internet

ಬೆಂಗಳೂರು – ಹೊಸಪೇಟೆ ನಡುವೆ ವಿಶೇಷ ರೈಲು | ಯಾವತ್ತು? ಎಲ್ಲೆಲ್ಲಿ ನಿಲುಗಡೆ?

September 26, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸೆ.28ರಂದು ಗಮಕ ದಸರಾ | ರಾಜ್ಯಮಟ್ಟದ ಗಮಕವಾಚನ ಸ್ಪರ್ಧೆ

September 26, 2025

ಹುಬ್ಬಳ್ಳಿ | ಕೆಳಸೇತುವೆಯಲ್ಲಿ ಕಲಾತ್ಮಕ ಅಲಂಕಾರ ಮಾಡಿ ಮಾದರಿಯಾದ ರೈಲ್ವೆ ಅಧಿಕಾರಿಗಳು

September 26, 2025

ಎನ್‌ಸಿಸಿ ಯುವಕರಲ್ಲಿ ಸಾಮಾಜಿಕ ಸೇವಾ ಮೌಲ್ಯ ಬೆಳಸಲು ಸಹಕಾರಿ: ಪ್ರಾಚಾರ್ಯ ರವೀಂದ್ರ

September 26, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!