No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
  • Advertise With Us
  • Grievances
  • About Us
  • Contact Us
Wednesday, July 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಐತಿಹಾಸಿಕ ಮೈಲಿಗಲ್ಲು: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯಲ್ಲಿ ಮಹತ್ವದ ಹೆಜ್ಜೆ | ಏನದು?

ದೇಶದ ಪ್ರಥಮ ಬುಲೆಟ್ ಟ್ರೈನ್ ಯಾವಾಗ ಆರಂಭವಾಗುವ ನಿರೀಕ್ಷೆಯಿದೆ?

kalpa News by kalpa News
September 22, 2025
in Special Articles
0
Historic Milestone: Major Tunnel breakthrough achieved in Mumbai-Ahmedabad Bullet Train Project
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದ ಮಹತ್ವದ ಯೋಜನೆಗಳು ಒಂದೊಂದೇ ದೇಶದಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿರುವಂತೆಯೇ, ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಯೋಜನೆಯಲ್ಲಿ ಐತಿಹಾಸಿಕ ಇಂಜಿನಿಯರಿಂಗ್ ಮೈಲಿಗಲ್ಲನ್ನು ಸಾಧಿಸಿದೆ.

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಮಾರ್ಗದಲ್ಲಿ ಪ್ರಮುಖವಾಗಿ 4.8 ಕಿಮೀ ಸುರಂಗ ವಿಭಾಗದ ನಿರ್ಮಾಣದಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸಲಾಗಿದೆ.

ಘನ್ಸೋಲಿ ಮತ್ತು ಶಿಲ್ಫಾಟಾ ಬದಿಗಳಿಂದ ಏಕಕಾಲದಲ್ಲಿ ಉತ್ಖನನವನ್ನು ನಡೆಸಲಾಯಿತು. ಕಾರ್ಯಾಚರಣೆಯಲ್ಲಿದ್ದ ತಂಡಗಳು ಸವಾಲಿನ ನೀರೊಳಗಿನ ಭೂಪ್ರದೇಶದ ಮೂಲಕ ಪರಸ್ಪರ ಮುನ್ನಡೆದಿದ್ದು, ಮಹತ್ವದ ಮೈಲುಗಲ್ಲಾಗಿದೆ.

ಕಾರ್ಯಾಚರಣೆಯಲ್ಲಿದ್ದ ಎರಡು ತಂಡಗಳು ಯಶಸ್ವಿಯಾಗಿ ಸಂಪರ್ಕ ಸಾಧಿಸಿದಾಗ ಈ ಮಹತ್ವದ ಕ್ಷಣ ದಾಖಲಾಗಿದ್ದು, ಇದು ಗಮನಾರ್ಹ ಇಂಜಿನಿಯರಿಂಗ್ ಸಾಧನೆಯಾಗಿದೆ. ಈ ಐತಿಹಾಸಿಕ ಸಾಧನೆ ಮಾಡಿರುವ ಯೋಜನಾ ತಂಡವನ್ನು ರೈಲ್ವೆ ಸಚಿವರು ಅಭಿನಂದಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಈ ಸವಾಲಿನ ತೊರೆಯ ಮೂಲಕ ಮುಂಬೈ ಮತ್ತು ಥಾಣೆಯನ್ನು ಸಂಪರ್ಕಿಸುವ ಭಾರತದ ಮೊದಲ ಸಮುದ್ರದೊಳಗಿನ ಸುರಂಗವನ್ನು ನಾವು ನಿರ್ಮಿಸುತ್ತಿರುವುದರಿಂದ ಇದು ಒಂದು ಹೆಗ್ಗುರುತಿನ ಕ್ಷಣವಾಗಿದೆ ಎಂದರು.
ಆರ್ಥಿಕತೆಯ ಮೇಲೆ ಗುಣಾತ್ಮಕ ಪರಿಣಾಮ
ಬುಲೆಟ್ ರೈಲು ಯೋಜನೆಯು ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಕೇವಲ 2 ಗಂಟೆ 7 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಇದು ಪ್ರಮುಖ ವಾಣಿಜ್ಯ ಕೇಂದ್ರಗಳ ಆರ್ಥಿಕತೆಯನ್ನು ಸಂಪರ್ಕಿಸಿ, ಸಂಯೋಜಿಸುತ್ತದೆ ಎಂಬುದು ಗಮನಾರ್ಹ ಅಂಶವಾಗಿದೆ.

ಟೋಕಿಯೊ, ನಗೋಯಾ ಮತ್ತು ಒಸಾಕಾದಂತಹ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುವ ವಿಶ್ವದ ಮೊದಲ ಬುಲೆಟ್ ರೈಲು, ಜಪಾನ್’ನ ಇಡೀ ಆರ್ಥಿಕತೆಯ ಮೇಲೆ ಬಹುಮುಖ ಪರಿಣಾಮವನ್ನು ಉಂಟುಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

ಅದೇ ರೀತಿ, ಈ ಯೋಜನೆಯು ಆನಂದ್, ಅಹಮದಾಬಾದ್, ವಡೋದರಾ, ಸೂರತ್, ವಾಪಿ ಮತ್ತು ಮುಂಬೈಗಳನ್ನು ಒಂದೇ ಆರ್ಥಿಕ ಕಾರಿಡಾರ್ ಆಗಿ ಒಗ್ಗೂಡಿಸುತ್ತದೆ. ಇದು ಏಕೀಕೃತ ಮಾರುಕಟ್ಟೆಗಳನ್ನು ಸೃಷ್ಟಿಸುವ ಜೊತೆಯಲ್ಲಿ ಈ ಕಾರಿಡಾರ್’ನಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.
ಯೋಜನಾ ಜ್ಞಾನ ಹಾಗೂ ಆರ್ಥಿಕ ಏಕೀಕರಣವನ್ನು ಸುಗಮಗೊಳಿಸಲಿರುವ ಈ ಯೋಜನೆ, ಹೆಚ್ಚಿನ ಉತ್ಪಾದಕತೆ ಮತ್ತು ವ್ಯವಹಾರ ವಿಸ್ತರಣೆಯ ಮೂಲಕ ಆರ್ಥಿಕ ಲಾಭಗಳು ಆರಂಭಿಕ ಹೂಡಿಕೆಯನ್ನು ಹೆಚ್ಚಿಸುತ್ತದೆ ಎಂದು ಅಂದಾಜಿಸಲಾಗಿದೆ.

ಪ್ರಮುಖವಾಗಿ ಈ ಯೋಜನೆಯು ಮಧ್ಯಮ ವರ್ಗದವರ ಆಕಾಂಕ್ಷೆಗಳನ್ನು ಪೂರೈಸುವ ಗುರಿ ಹೊಂದಿದ್ದು, ಮಧ್ಯಮ ವರ್ಗಕ್ಕಾಗಿ ರಚಿಸಲಾದ ದರಗಳೊಂದಿಗೆ ಆರಾಮದಾಯಕ ಪ್ರಯಾಣದ ನಿರೀಕ್ಷೆಯಿದೆ.

ಯೋಜನೆಯ ಪ್ರಗತಿ ಮತ್ತು ತಂತ್ರಜ್ಞಾನ
ಮುಂಬೈ-ಅಹಮದಾಬಾದ್ ಎಚ್’ಎಸ್’ಆರ್ ಯೋಜನೆಯು ಬಹುರಂಗಗಳಲ್ಲಿ ಗಮನಾರ್ಹ ಪ್ರಗತಿಯನ್ನು ಪ್ರದರ್ಶಿಸುತ್ತಲೇ ಇದೆ:

  • 320 ಕಿಮೀ ವಯಾಡಕ್ಟ್ (ಸೇತುವೆ) ಭಾಗ ಪೂರ್ಣಗೊಂಡಿದೆ
  • ಎಲ್ಲಾ ಸ್ಥಳಗಳಲ್ಲಿ ನಿಲ್ದಾಣ ನಿರ್ಮಾಣ ಕಾರ್ಯವು ಉತ್ತಮ ವೇಗದಲ್ಲಿ ಪ್ರಗತಿಯಲ್ಲಿದೆ
  • ನದಿ ಸೇತುವೆಗಳನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದೆ
  • ಸಬರಮತಿ ಸುರಂಗವು ಪೂರ್ಣಗೊಳ್ಳುವ ಹಂತದಲ್ಲಿದೆ

ತಾಂತ್ರಿಕ ನಾವೀನ್ಯತೆಯ ಅಂಶಗಳು
ಈ ಯೋಜನೆಯು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಅತ್ಯಾಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಎರಡು ಬುಲೆಟ್ ರೈಲುಗಳನ್ನು ಅಳವಡಿಸಲು ಒಂದೇ ಸುರಂಗ ತಂತ್ರಜ್ಞಾನದ ಬಳಕೆ ಮತ್ತು ವಯಾಡಕ್ಟ್ ನಿರ್ಮಾಣದಲ್ಲಿ 40-ಮೀಟರ್ ಗಿಡರ್’ಗಳ ನಿಯೋಜನೆಯು ಗಮನಾರ್ಹ ತಾಂತ್ರಿಕ ಸಾಧನೆಗಳನ್ನು ಸಾಕ್ಷೀಕರಿಸುತ್ತದೆ.

ಈ ಯೋಜನೆಯಲ್ಲಿನ ನಾವೀನ್ಯತೆಯ ತಂತ್ರಜ್ಞಾನವನ್ನು ಅದರ ದಕ್ಷತೆ ಮತ್ತು ವಿನ್ಯಾಸ ಶ್ರೇಷ್ಠತೆಗಾಗಿ ಗಮನಾರ್ಹವಾಗಿ ಜಪಾನಿನ ಪಾಲುದಾರರು ಶ್ಲಾಘಿಸಿದ್ದಾರೆ.

ಈ ಯೋಜನೆಯ ಮೂಲಕ ಭಾರತ ಗಣನೀಯ ತಾಂತ್ರಿಕ ಜ್ಞಾನವನ್ನು ಗಳಿಸಿದೆ. ಇದು ನಿರಂತರವಾಗಿ ಜಪಾನಿನ ತಜ್ಞರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ನೂತನ ರೈಲು ತಂತ್ರಜ್ಞಾನಗಳು ಹಾಗೂ ಹಾಲಿ ಯೋಜನೆಗಳು:
ಇತ್ತೀಚೆಗೆ ಕೇಂದ್ರ ಸಚಿವರು ಹೈ-ಸ್ಪೀಡ್ ರೈಲು ಯೋಜನೆಯನ್ನು ಪರಿಶೀಲಿಸಲು ಉಪ ಸಚಿವರ ನೇತೃತ್ವದ ಜಪಾನಿನ ನಿಯೋಗವನ್ನು ಭೇಟಿಯಾದರು. ಯೋಜನೆಯ ಪ್ರಗತಿಯ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು. ಮೊದಲ ವಿಭಾಗವು 2027 ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

ಭಾರತದಲ್ಲಿ ಇತ್ತೀಚಿನ ಇ10 ಶಿಂಕನ್ಸೆನ್ (Japan Next Generation Bullet Train) ಅನ್ನು ಪರಿಚಯಿಸುವ ಬಗ್ಗೆಯೂ ಚರ್ಚೆಗಳು ನಡೆದವು. ಭಾರತಕ್ಕೆ ಈ ಸುಧಾರಿತ ರೈಲು ವ್ಯವಸ್ಥೆಯನ್ನು ಒದಗಿಸಲು ಜಪಾನ್ ಒಪ್ಪಿಕೊಂಡಿದೆ.ಕಾರ್ಯಾಚರಣೆಯ ಚೌಕಟ್ಟು
ಆರಂಭಿಕ ಸಂಚಾರ: ಪೀಕ್ ಅವರ್’ನಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ
ಹಂತ 2: ಕಾರ್ಯಾಚರಣೆಗಳು ಸ್ಥಿರವಾಗುತ್ತಿದ್ದಂತೆ ಪ್ರತಿ 20 ನಿಮಿಷಗಳಿಗೊಮ್ಮೆ
ಭವಿಷ್ಯದ ವಿಸ್ತರಣೆ: ಹೆಚ್ಚುತ್ತಿರುವ ಸಂಚಾರ ಬೇಡಿಕೆಗಳನ್ನು ಪೂರೈಸಲು ಪ್ರತಿ 10 ನಿಮಿಷಗಳಿಗೊಮ್ಮೆ
ಗುರಿ: ಸೂರತ್’ನಿಂದ ಬಿಲಿಮೋರಾ ನಡುವಿನ ಮೊದಲ ವಿಭಾಗದ ಕಾರ್ಯಾಚರಣೆಗಳು 2027 ರಲ್ಲಿ ಪ್ರಾರಂಭವಾಗಲಿವೆ.

ವಿಶ್ವ ದರ್ಜೆಯ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಮಗ್ರ ತರಬೇತಿ ಕಾರ್ಯಕ್ರಮವೂ ನಡೆಯುತ್ತಿದೆ. ಲೋಕೋ ಪೈಲಟ್’ಗಳಿಗೆ ಮತ್ತು ನಿರ್ವಹಣಾ ಸಿಬ್ಬಂದಿಗೆ ಪ್ರಸ್ತುತ ಜಪಾನ್’ನಲ್ಲಿ ಪ್ರಾಯೋಗಿಕ ತರಬೇತಿ ನಡೆಯುತ್ತಿದೆ. ಸುರಕ್ಷತೆ ಮತ್ತು ದಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಎತ್ತಿ ಹಿಡಿಯಲು ಲೋಕೋ ಪೈಲಟ್’ಗಳಿಗೆ ಸುಧಾರಿತ ಸಿಮ್ಯುಲೇಟರ್’ಗಳ ಕುರಿತು ತರಬೇತಿ ನೀಡಲಾಗುತ್ತಿದೆ.

ಸವಾಲಿನ ಪರಿಸ್ಥಿತಿಗಳಲ್ಲಿ ಇಂಜಿನಿಯರಿಂಗ್ ಶ್ರೇಷ್ಠತೆ
ಈ ಯೋಜನೆಯು ಸಮಗ್ರ ಸುರಕ್ಷತಾ ಕ್ರಮಗಳೊಂದಿಗೆ ಸುಧಾರಿತ ನ್ಯೂ ಆಸ್ಟ್ರಿಯನ್ ಸುರಂಗ ಮಾರ್ಗ ವಿಧಾನವನ್ನು ಬಳಸಿಕೊಂಡಿದೆ. ಸುರಕ್ಷಿತ ನಿರ್ಮಾಣವನ್ನು ಖಚಿತಪಡಿಸಿಕೊಳ್ಳಲು ಇದು ground settlement markers, piezometers, inclinometers & strain gauges ಒಳಗೊಂಡಿದೆ.

ಪ್ರಮುಖವಾಗಿ ಈ ಯೋಜನೆಯ ಕಾರ್ಯಾಚರಣೆಗಳು ಸಮುದ್ರ ಹಾಗೂ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ವಿಶೇಷ ಒತ್ತು ನೀಡಲಾಗಿದೆ.

ಕಾರ್ಯತಂತ್ರದ ಮಹತ್ವ
ಈ ಹೆಗ್ಗುರುತು ಯೋಜನೆಯು ಪ್ರಧಾನಿ ಮೋದಿಯವರ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ರಚಿಸುವ ದೃಷ್ಟಿಕೋನಕ್ಕೆ ಸಮನಾಗಿದೆ. ಈ ಕಾರಿಡಾರ್ ಭಾರತದಾದ್ಯಂತ ಭವಿಷ್ಯದ ಹೈ-ಸ್ಪೀಡ್ ರೈಲು ಜಾಲಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: Bullet TrainHigh speed trainIndian RailwayIRCTCKannada News WebsiteLatest News Kannadanarendra modiPM ModiRailOnerailway bridgeTunnelಅಹಮದಾಬಾದ್ಥಾಣೆಪ್ರಧಾನಿ ನರೇಂದ್ರ ಮೋದಿಬುಲೆಟ್ ಟ್ರೈನ್ಮುಂಬೈವಿಶೇಷ ಲೇಖನಹೈ-ಸ್ಪೀಡ್ ರೈಲು
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಜಿಎಸ್’ಟಿ ಸುಧಾರಣೆ | ಜನರಿಗೂ, ವ್ಯಾಪಾರಿಗಳಿಗೂ ಲಾಭ: ಬಿ.ವೈ. ವಿಜಯೇಂದ್ರ

Next Post

ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ ನಮ್ಮ ಪಾಲಿನ ಹಣ ಬರಲೇ ಇಲ್ಲ: ಸಚಿವ ಮಧುಬಂಗಾರಪ್ಪ ಕಿಡಿ

kalpa News

kalpa News

Next Post
ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ ನಮ್ಮ ಪಾಲಿನ ಹಣ ಬರಲೇ ಇಲ್ಲ: ಸಚಿವ ಮಧುಬಂಗಾರಪ್ಪ ಕಿಡಿ

ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ ನಮ್ಮ ಪಾಲಿನ ಹಣ ಬರಲೇ ಇಲ್ಲ: ಸಚಿವ ಮಧುಬಂಗಾರಪ್ಪ ಕಿಡಿ

Leave a Reply Cancel reply

Your email address will not be published. Required fields are marked *

No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL