ಕಲ್ಪ ಮೀಡಿಯಾ ಹೌಸ್ | ಹೊಳೆಹೊನ್ನೂರು |
ರಾಜನಾದವನು ಸ್ವತಃ ಧರ್ಮಿಷ್ಟನಾಗಿ ಸಜ್ಜನ ಕಾರ್ಯಗಳಿಗೆ ದಾರಿ ಮಾಡಿಕೊಡಬೇಕು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಕರೆ ನೀಡಿದರು.
ತಮ್ಮ 28ನೆಯ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀ ಸತ್ಯ ಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿ ಅವರು ಮಾತನಾಡಿದರು.

Also read: ಮಣಿಪುರ ಪ್ರಕರಣ: ಮೌನ ಮುರಿದ ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ
ರಾಜನಾದವನು ಸ್ವತಃ ಧರ್ಮಿಷ್ಟ ನಾಗಿರಬೇಕು. ತಾನು ಧರ್ಮವನ್ನು ಚರಿಸಬೇಕು. ಧರ್ಮಾಚರಣೆ ಮಾಡುವವರಿಗೆ ಸಹಕಾರಿಯಾಗಿರಬೇಕು. ಅವರನ್ನು ಪೋಷಿಸಬೇಕು. ಸಜ್ಜನ ಕಾರ್ಯಗಳಿಗೆ ದಾರಿ ಮಾಡಿ ಕೊಡಬೇಕು. ಪರೀಕ್ಷಿತ ಮಹರಾಜ ತಾನೂ ಧರ್ಮ ಮಾರ್ಗದಲ್ಲಿದ್ದು ತನ್ನ ಪ್ರಜೆಗಳಿಗೂ ಧರ್ಮ ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದ ಕಾರಣ ಆತ ರಾಜ ಮತ್ತು ಋಷಿಯಾಗಿದ್ದ. ರಾಜರ್ಷಿ ಎನಿಸಿದ್ದ ಎಂದರು.

ಪೂಜಾ ಕಾಲದಲ್ಲಿ ಪಂಡಿತರಾದ ಮೋಹನಾಚಾರ್ಯ ಫಲಿಮಾರು, ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ತಿರುಮಲಾಚಾರ್ಯ ಪ್ರವಚನ ನೀಡಿದರು. ಸಭೆಯಲ್ಲಿ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಸಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post