No Result
View All Result
Blood Donation Camp Successfully Organised at Mysuru Division
English Articles

Blood Donation Camp Successfully Organised at Mysuru Division

by ಕಲ್ಪ ನ್ಯೂಸ್
June 16, 2026
0

Kalpa Media House  | Mysuru | South Western Railway, Mysuru Division, organised a Blood Donation Camp in collaboration with Railway...

Read moreDetails
yoga | Participate online

India Launches Worldwide Campaign for International Day of Yoga 2026

June 13, 2026
Elderly Woman Found Dead

Elderly Woman Found Dead in Decomposed State in Shivamogga

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
  • Advertise With Us
  • Grievances
  • About Us
  • Contact Us
Wednesday, June 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಲ್ಪನಾ ನರ್ತನಕ್ಕೆ ಮನೆ ಪರಿಸರವೇ ಅದಮ್ಯ ಚೇತನ | ಜು.31 ಬೆಂಗಳೂರಿನಲ್ಲಿ ಭರತನಾಟ್ಯ ರಂಗ ಪ್ರವೇಶ

ಬದರಿನಾಥ್ ಮತ್ತು ಮೈಸೂರು ಸ್ಮಿತಾ ಅವರ ಪುತ್ರಿ | ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 30, 2025
in Special Articles
0
ಅಲ್ಪನಾ ನರ್ತನಕ್ಕೆ ಮನೆ ಪರಿಸರವೇ ಅದಮ್ಯ ಚೇತನ | ಜು.31 ಬೆಂಗಳೂರಿನಲ್ಲಿ ಭರತನಾಟ್ಯ ರಂಗ ಪ್ರವೇಶ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ – ಶಿವಮೊಗ್ಗ ರಾಮ್  |

ಮಕ್ಕಳು ಹೇಗೆ ಇರುತ್ತಾರೆ ಎಂದು ಅವರನ್ನೇ ಅವಲೋಕನ ಮಾಡಬೇಕಾಗಿಲ್ಲ. ಅವರ ಮನೆ ಪರಿಸರವನ್ನು ಒಮ್ಮೆ ನೋಡಿದರೆ ಸಾಕು. ಅವರ ವ್ಯಕ್ತಿತ್ವವೇ ಅಲ್ಲಿ ದರ್ಶನ ನೀಡುತ್ತದೆ. ಹೌದು. ಈ ಮಾತಿಗೆ ಅನ್ವರ್ಥವಾಗಿದ್ದಾಳೆ ಯುವ ನರ್ತಕಿ ಅಲ್ಪನಾ ಬದರಿನಾಥ್.

ಕರ್ನಾಟಕ ಶಾಸ್ತ್ರೀಯ ಸಂಗೀತ, ಈಜು, ಬ್ಯಾಡಿಂಟನ್, ಚಿತ್ರಕಲೆ ಮತ್ತು ಜ್ಯುವೆಲರಿ ಮೇಕಿಂಗ್ ಕಲೆಹೀಗೆ ಹತ್ತು ಹಲವು ಕ್ರಿಯಾಶೀಲತೆಗಳ ಸಂಗಮವಾಗಿರುವ ಅಲ್ಪನಾ -ಕ್ರಿಯಾಶೀಲ ಪ್ರತಿಭೆ. ಅಲ್ಪನಾ ಎಂದರೆ ಸುಂದರವಾಗಿರುವುದು ಎಂದರ್ಥ. ಅಲಂಕಾರಿಕ ವಿನ್ಯಾಸ, ಚಂದದ ರಂಗವಲ್ಲಿ ಎಂಬ ವ್ಯಾಖ್ಯೆಗಳೂ ಇವೆ. ಈಕೆಗೆ ಈ ನಾಮಧೇಯ ಸಂಪೂರ್ಣವಾಗಿ ಹೋಲಿಕೆ ಆಗಿರುವುದು ಒಂದು ವಿಶೇಷ. ಹೌದಲ್ಲವೇ. ಹೆಸರಿಗೂ ವ್ಯಕ್ತಿತ್ವಕ್ಕೂ ಅಜ- ಗಜಾಂತರ ವ್ಯತ್ಯಾಸ ಇರುವವರೇ ಲೋಕದಲ್ಲಿ ಹೆಚ್ಚು. ಅಂಥದ್ದರಲ್ಲಿ ಪಾಲಕರು ನಾಮಕರಣ ಮಾಡಿದ್ದಕ್ಕೆ ತಕ್ಕಂತೆ ತನ್ನ ಪಥವನ್ನು ರೂಪಿಸಿಕೊಂಡಿರುವ ಈ ಬಾಲೆ, ವಿಜ್ಞಾನ ಮತ್ತು ಕಲಾಸಕ್ತಿಗಳ ಮಿಲನವೇ ಆಗಿದ್ದಾಳೆ.

ರಂಗಾರೋಹಣಕ್ಕೆ ಅಣಿ
ಯುವ, ನವ ಪ್ರತಿಭೆಯನ್ನು ಪರಿಚಯಿಸಲಿಕ್ಕೆ ಒಂದು ಘನ ಕಾರಣ ಇದೆ. ಮೈಸೂರು ಜಿಲ್ಲೆ  ಕೆ.ಆರ್. ನಗರ ತಾಲೂಕು ಹಂಪಾಪುರದ ವಿತ್ತೀಯ ತಜ್ಞ ಎಚ್.ಆರ್. ಬದರಿನಾಥ್ ಬದರಿನಾಥ್ ಮತ್ತು ಸ್ಮಿತಾ ಮೈಸೂರು ಅವರ ಪುತ್ರಿ ಅಲ್ಪನಾ ಇದೀಗ ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾಗಿದ್ದಾಳೆ. ಕಾರ್ಯಕ್ರಮ ಜು. 31 ರ ಸಂಜೆ 5.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಪನ್ನಗೊಳ್ಳಲಿದೆ. ಈ ಶುಭ ಸಂದರ್ಭಕ್ಕೆ ಗುರು, ರಾಜಧಾನಿಯ ವೆಂಕಟೇಶ ನೃತ್ಯ ಮಂದಿರದ ಹಿರಿಯ ನೃತ್ಯವಿದುಷಿ ರಾಧಾ ಶ್ರೀಧರ್, ವಿದುಷಿ  ಕುಸುಮಾ ರಾವ್ ಪ್ರಖ್ಯಾತ ಕೂಚಿಪುಡಿ ವಿದುಷಿ ವೈಜಯಂತಿ ಕಾಶಿ, ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ ಪ್ರದೀಪ ಕುಮಾರ್, ಡಾ. ಸೂರ್ಯಪ್ರಸಾದ ಇತರರು ಸಾಕ್ಷಿಯಾಗಲಿದ್ದಾರೆ.
ಮನೆಯೇ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರು-ಮನೆಯೇ ಮೊದಲ ಪಾಠಶಾಲೆ ಎಂಬುದು ಗಾದೆ. ಬೆಂಗಳೂರಿನಲ್ಲಿ ವಾಸವಿರುವ ಎಚ್.ಆರ್. ಬದರಿನಾಥ್-ಮೈಸೂರಿನ ಸ್ಮಿತಾಗೆ ಸಂಗೀತ-ಸಾಹಿತ್ಯ ಸೇರಿದಂತೆ ಭಾರತೀಯ ಪರಂಪರೆ ಎಂದರೆ ಜೀವ. ಸಂಗೀತದ ಭಾವ ಅವರಲ್ಲಿ ಮಿಳಿತವಾಗಿರುವ ಕಾರಣಕ್ಕಾಗಿ ಮನೆಯೇ ಸಂಸ್ಕೃತಿಯ  ಮಂದಿರದಂತಾಗಿದೆ. ಪುತ್ರಿ ಅಲ್ಪನಾ 6 ವರ್ಷದ ಬಾಲಕಿಯಾಗಿದ್ದಾಗಲೇ ಸಂಗೀತ ಮತ್ತು ನೃತ್ಯಗಳ ಬಗ್ಗೆ ವಿಶೇಷವಾದ ಆಸಕ್ತಿಯನ್ನು ತೊರಲಾರಂಭಿಸಿದ್ದು ಗಮನೀಯ. ಸಂಸ್ಕಾರವಂತ ಸಂಗೀತ ಮತ್ತು ಸಾಹಿತ್ಯ ಆಸಕ್ತ ಕುಟುಂಬದಿಂದ ಬಂದಂತಹ ದಂಪತಿ, ಮಗಳ ಆಸಕ್ತಿಯನ್ನು ಗಮನಿಸಿ ಅದಕ್ಕೆ ಸೂಕ್ತವಾದ ಪ್ರೋತ್ಸಾಹ ಕೊಡಲು ಆರಂಭಿಸಿದರು. ಪೂರ್ವ ಪ್ರಾಥಮಿಕ ಶಾಲಾ ಹಂತದಿಂದಲೇ ಶಿಕ್ಷಕಿಯರು ಈ ಬಾಲಕಿಯನ್ನು ಗುರುತಿಸಿ ನೃತ್ಯದ ಬಗ್ಗೆ ಅದಮ್ಯ ಆಸಕ್ತಿ ಇದೆ ಎಂಬುದನ್ನು ತಿಳಿಸಿಕೊಟ್ಟರು.

ಅರಿವಿನಿಂದ.. ಗುರುವಿನ ಕಡೆಗೆ…
ಇವೆಲ್ಲದರ ಫಲವಾಗಿ ಗುರು ರಾಧಿಕಾ ಅಯ್ಯಂಗಾರ್ ಬಳಿ ಕಲಿಕೆ ಆರಂಭಿಸಲು ಪಾಲಕರು ಅನುವು ಮಾಡಿಕೊಟ್ಟರು. ವಿಶೇಷ ಆಸಕ್ತಿಯ ಫಲವಾಗಿ ಜೂನಿಯರ್ ಪರೀಕ್ಷೆಯೂ ಪೂರ್ಣಗೊಂಡಿತು. ನಂತರ ಪ್ರಾಪ್ತವಾದ ಗುರು ಸ್ಥಾನವೇ ಹಿರಿಯ ವಿದುಷಿ ರಾಧಾ ಶ್ರೀಧರ್. ಬೆಂಗಳೂರಿನ ಶ್ರೀ ವೆಂಕಟೇಶ ನಾಟ್ಯ ಮಂದಿರಕ್ಕೆ ಅಲ್ಪನಾ ಸೇರ್ಪಡೆ. ತಾಲೀಮು ಮುಂದುವರಿದು ಸೀನಿಯರ್ ಪರೀಕ್ಷೆಯೂ ಸಾರ್ಥಕವಾಗಿ ಪೂರ್ಣಗೊಂಡಿತು.

ಬಾಲಕಿಯ ವಿಶೇಷ ಆಸಕ್ತಿ ಶ್ರದ್ಧೆಗಳನ್ನು ಗಮನಿಸಿ ಕೇಂದ್ರ ಸರ್ಕಾರದ ಸಿಸಿಆರ್‌ಟಿ ವಿದ್ಯಾರ್ಥಿ ವೇತನವೂ ಮಂಜೂರಾಯಿತು. ಈ ದಿಸೆಯಲ್ಲಿ ನೃತ್ಯ ಕಲಾವಿದೆ ಐಶ್ವರ್ಯಾ ನಿತ್ಯಾನಂದ ಮಾಡಿದ ಉಪಕಾರವನ್ನು ಎಂದಿಗೂ ಮರೆಯಲಾಗದು ಎನ್ನುತ್ತಾರೆ ತಾಯಿ ಸ್ಮಿತಾ. ರಾಧಾ ಶ್ರೀಧರ್ ಗರಡಿಯಲ್ಲಿ ತರಬೇತುಗೊಳ್ಳುತ್ತಿರುವ ಅಲ್ಪನಾ ಎಂದಿಗೂ ಹಿಂದಿರುಗಿ ನೋಡಲೇ ಇಲ್ಲ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಗುರು ವಸಂತ ಮಾಧವಿ ಅವರ ಬಳಿ ಅಭ್ಯಾಸ ಮಾಡಿ ಇದೀಗ ಸೀನಿಯರ್ ಹಂತದ ಕಲಿಕೆಗೆ ಬಂದು ನಿಂತಿದ್ದಾಳೆ.

ಹಾರೈಕೆ: ಗುರು ರಾಧಾ ಶ್ರೀಧರ್ ಅವರೂ ಈಕೆಯನ್ನು ಕ್ರಿಯಾಶೀಲ ನರ್ತಕಿ ಎಂದು ಪ್ರಶಂಸೆ ಮಾಡಿದ್ದು, ಕಲಾ ಜೀವನ ಯಶವಾಗಲಿ ಎಂದು ಹಾರೈಕೆ ಮಾಡಿದ್ದಾರೆ.

ಕುಟುಂಬದ ಬಳುವಳಿ
ಸದ್ಗುಣ, ಗಣ ಭವತೀಂ ಶಾಶ್ವತೀ ಮಾಷು ದೇವಾಃ … ಎನ್ನುತ್ತದೆ ವಾಯು ಸ್ತುತಿ. ಸದ್ಗಣಗಳ ಸಂಗಮವಿದ್ದಲ್ಲಿ ಗುಣಗಳು ಮನೆ ಮಾಡಲು ಬಹುಕಾಲ ಗಂಧ ತೀಡಬೇಕು. ಇದು ಯಾವುದೇ ಮಾರುಕಟ್ಟೆ ಸರಕಲ್ಲ. ಗುರುವಿನ ಅನುಗ್ರಹ ಮತ್ತು ಹಿರಿಯರ ಬಹುಕಾಲದ ತಪಸ್ಸಿನ ಬಳುವಳಿಯಾಗಿ ಬರುವಂಥವು. ಅಷ್ಟೇ ಜತನವಾಗಿ ಕಾಪಿಟ್ಟುಕೊಳ್ಳುವ ಪೀಳಿಗೆಗಳಲ್ಲಿ ಅಂತರ್ಗತವಾಗಿ ನೆಲೆಸುವಂಥವು. ಅಲ್ಪನಾ ಅವರ ಅಜ್ಜಿ ಕಮಲಾ ರಾವ್ ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರೌಢ ಕೇಳುಗರು.

ಇವರ ಪತಿ ವಿಜಯೇಂದ್ರ ರಾವ್ ಕೂಡ ಕೊಳಲು ವಾದನದಲ್ಲಿ ಆತ್ಮಾನಂದ ಕಾಣುವವರು. ಅತ್ತ ಬದರಿನಾಥ ಪಾಲಕರೂ, ಸಂಬಂಧಿಕರು ಭಾರತೀಯ ಪರಂಪರೆಯ ವೇದ, ಸಂಗೀತಗಳ ಬಗ್ಗೆ ಅಪಾರ ಗೌರವ ಹೊಂದಿದವರು. ಆಗಾಗ್ಗೆ ವಿದ್ವಾಂಸರ ಕಛೇರಿಗಳಿಗೆ ಹೋಗುವುದು ಒಂದು ಸಾಂಪ್ರದಾಯಿಕ ಆಸಕ್ತಿ ಯಾದ ಕಾರಣ ಇದೇ ಪರಿಸರದಲ್ಲಿ ಬೆಳೆದ ಅಲ್ಪನಾಗೆ ಕಲಾಸಕ್ತಿ, ಪಠ್ಯ ಅಧ್ಯಯನ ಕ್ರಮದ  ಶ್ರದ್ಧೆ ತಾನಾಗಿಯೇ ಮೂಡಿತು.

ಇದು ಎಲ್ಲ ಮನೆ- ಮನಗಳಲ್ಲಿ ಆದರೆ ನಮ್ಮ ಸಮಾಜ ಸಂಪೂರ್ಣ ಸುಸಂಸ್ಕೃತವಾದೀತು. ಎಚ್.ಆರ್. ಬದರಿನಾಥ್ ಅವರು ಬೆಂಗಳೂರಿನ ಐಐಎಂ ನಲ್ಲಿ ಅಧ್ಯಯನ ಮಾಡಿದ್ದು,  ಹಿರಿಯ ಆರ್ಥಿಕ ತಜ್ಞರೂ ಆಗಿದ್ದಾರೆ.  ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿವಿ ಸೇರಿದಂತೆ ದೇಶದ ಅನೇಕ ಅಗ್ತಪಂಕ್ತಿ ವಿವಿಗಳಲ್ಲಿ ಅವರು ಸಂದರ್ಶಕ ಪ್ರಾಧ್ಯಾಪಕರು. ಶಾಸ್ತ್ರೀಯ ಸಂಗೀತ ಕೇಳ್ಮೆಗೂ ಅವರ ಅಂತರಂಗ ಆಗಾಗ್ಗೆ ಅಣಿಯಾಗುತ್ತದೆ. ಹಾಗಾಗಿ ಅವರು ಮಗಳ ಆಸಕ್ತಿಗಳಿಗೆ ಬೆನ್ನೆಲುಬಾದರು.  ತಾಯಿ ಸ್ಮಿತಾ ಅವರೂ ತವರಿನ ಪರಂಪರೆಯಿಂದಲೇ ಸಂಗೀತಕ್ಕೆ ತಲೆದೂಗುವವರು. ಕಲೆಗಳಿಗೆ ತಲೆಬಾಗುವವರು. ಬಯೋಮೆಡಿಕಲ್ ಸೈನ್ಸ್ ತಜ್ಞರು. ಇವರಿಬ್ಬರ ಆಸಕ್ತಿ ಮತ್ತು ಶ್ರದ್ಧೆಗಳ ಫಲವೇ ಅಲ್ಪಾ ಎನ್ನಬಹುದು.
ತಾಯಿಯಾಗಿ ನಾನು ಏನು ಮಾಡಬಹುದೋ ಅದನ್ನೆಲ್ಲಾ ಮಾಡಿರುವೆ. ಅಷ್ಟೇ. ಉಳಿದ ಎಲ್ಲ ಯಶಸ್ಸು, ಕೀರ್ತಿ ಮತ್ತು ಹಿರಿಮೆಗಳು, ವೇದಿಕೆಗಳು, ಮನ್ನಣೆಗಳು- ಎಲ್ಲವೂ ದೇವರ ಆಶೀರ್ವಾದ. ಮೂಲ ವಿಜ್ಞಾನದಲ್ಲಿ ಆಸಕ್ತಿ ಇರುವ ಮಗಳಿಗೆ ಉನ್ನತ ಶಿಕ್ಷಣ ಕೊಡಿಸಲು, ಅದಕ್ಕೆ ನೆರವಾಗುವುದು ನನ್ನ ಉದ್ದೇಶ. ಇದರೊಂದಿಗೆ ನಮ್ಮ ಕಲೆಗಳನ್ನೂ ಆಕೆ ಆರಾಧಿಸಬೇಕು ಎಂಬುದು ಉತ್ಕಟ ಬಯಕೆ.  ಬದುಕಿನ ಮೈಲಿಗಲ್ಲುಗಳನ್ನು ಸ್ಥಾಪಿಸುವುದು ಬಹಳ ಮುಖ್ಯ. ಇದಕ್ಕೆ ನಮ್ಮ ಕುಟುಂಬದ ಎಲ್ಲಾ ಹಿರಿಯರ ಅನುಗ್ರಹವೂ  ನಮಗೆ ಇದೆ ಎಂಬುದೇ ಧನ್ಯತೆ.
-ಸ್ಮಿತಾ ಬದರೀನಾಥ್
ಕಲಾಸಕ್ತಿಯನ್ನು ಎಂದಿಗೂ ಬಿಡಬಾರದು
ಬಿಡುವಿನ ವೇಳೆಯಲ್ಲಿ ಈಜು, ಚಿತ್ರಕಲೆ ಬ್ಯಾಡ್ಮಿಂಟನ್ ಆಡುವುದು ಮತ್ತು ಶಾಸ್ತ್ರೀಯ ಸಂಗೀತ  ಹಾಡುವುದು ಅಲ್ಪನಾಳ ವಿಶೇಷ ಹವ್ಯಾಸಗಳು. ಇದರೊಂದಿಗೆ ಜ್ಯುವೆಲ್ಲರಿ ಮೇಕಿಂಗ್ ಕೂಡಾ ಆಸಕ್ತಿಗಳಿಗೆ ಭೂಷಣವಾಗಿದೆ. ಪಠ್ಯ ಅಧ್ಯಯನ ಒತ್ತಡವಾದ ಸಂದರ್ಭದಲ್ಲಿ ಸಂಗೀತ, ನೃತ್ಯ ನಮಗೆ ಹೊಸ ಚೈತನ್ಯ ನೀಡುತ್ತವೆ. ದೈಹಿಕ- ಮಾನಸಿಕ ಉಲ್ಲಾಸ ನೀಡುತ್ತವೆ. ಮೂಲ ವಿಜ್ಞಾನವನ್ನು ಓದುವ ಹೆಬ್ಬಯಕೆ ಇದ್ದರೂ  ಎಂದಿಗೂ  ಕಲಾಸಕ್ತಿ ಬಿಡಲಾರೆ ಎನ್ನುತ್ತಾಳೆ ಈಕೆ. ಇದು ನಮ್ಮ ವ್ಯಕ್ತಿತ್ವಕ್ಕೆ ಅತ್ಯಂತ ಪೂರಕ ಮತ್ತು ಬದುಕಿಗೆ ಗಟ್ಟಿ ನೆಲೆಯನ್ನು ತಂದು ಕೊಡುತ್ತದೆ ಎನ್ನುತ್ತಾಳೆ ಅಲ್ಪನಾ. ಐಐಟಿಯಲ್ಲಿ ಸಾಧನೆ ಮಾಡುವುದರೊಂದಿಗೆ ನೃತ್ಯದಲ್ಲಿ ವಿದ್ವತ್ ಮಾಡಿಕೊಳ್ಳುತ್ತೇನೆ.ಒಬ್ಬ  ಅತ್ಯುತ್ತಮ ವೇದಿಕೆ ಕಲಾವಿದೆಯಾಗಬೇಕು. ನರ್ತನ ರಂಗದಲ್ಲೂ ಖ್ಯಾತಿ ಗಳಿಸಬೇಕು ಎಂಬುದು ಈಕೆಯ ಮಹದಾಸೆ.
ಯಾವತ್ತೂ ಬೆಂಬಲಿಸೋಣ
ಮಗಳ ಸಾಧನೆಗಳ ಬಗ್ಗೆ ಮೌನವಾಗಿಯೇ ಅವಲೋಕನ ಮಾಡಿಕೊಳ್ಳುವ ಬದರಿನಾಥ್, ಆಸಕ್ತಿ ಮತ್ತು ಶ್ರದ್ಧೆ ಇರುವವರಿಗೆ ಆದಷ್ಟು ಬೆಂಬಲವನ್ನು ಕೊಡೋಣ ವಿದ್ಯೆ ಮತ್ತು ಜ್ಞಾನಕ್ಕೆ ಸರಿಸಮನಾದದ್ದು ಜಗತ್ತಿನಲ್ಲಿ ಯಾವುದೂ ಇಲ್ಲ. ಜ್ಞಾನಾರ್ಜನೆಯೊಂದೇ ಬದುಕಿನ ಧ್ಯೇಯವಾಗಬೇಕು ಆಗ ಮಾತ್ರ ಎಲ್ಲಾ ಕೀರ್ತಿಗಳು ನಮ್ಮನ್ನು ಅರಸಿ- ಹರಸಿ ಬರುತ್ತವೆ ಎಂದು ಖುಷಿ ಹಂಚಿಕೊಳ್ಳುತ್ತಾರೆ.

ಹಿಮ್ಮೇಳದ ಸಹಕಾರ
ಅಲ್ಪನಾ ಬದರಿನಾಥ್ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ  ಜು. 31 ರ ಸಂಜೆ 5.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆಗೊಂಡಿದೆ. ಗಾಯನದಲ್ಲಿ ವಿದುಷಿ ಐಶ್ವರ್ಯಾ ನಿತ್ಯಾನಂದ, ನಟವಾಂಗದಲ್ಲಿ ವಿದ್ವಾನ್. ಡಿ.ವಿ. ಪ್ರಸನ್ನ ಕುಮಾರ, ಮೃದಂಗದಲ್ಲಿ ವಿದ್ವಾನ್ ಸಾಯಿ ವಂಶಿ, ಕೊಳಲಿನಲ್ಲಿ ವಿದ್ವಾನ್ ಮಹೇಶ್ ಸ್ವಾಮಿ, ಪಿಟೀಲಿನಲ್ಲಿ ವಿದ್ವಾನ್ ಮೈಸೂರು ಆರ್. ದಯಾಕರ್ ಮತ್ತು ರಿದಂ ಪ್ಯಾಡ್ ನಲ್ಲಿ ಮಿಥುನ್  ಶಕ್ತಿ ಹಿಮ್ಮೇಳ ಸಹಕಾರ ನೀಡಲಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/04/VID-20240426-WA0008.mp4

Tags: BharatanatyamKannada News WebsiteRangapraveshaSpecial Articleಅಲ್ಪನಾ ಬದರಿನಾಥ್ಕರ್ನಾಟಕ ಶಾಸ್ತ್ರೀಯ ಸಂಗೀತಕೆ.ಆರ್. ನಗರಭರತನಾಟ್ಯಯುವ ನರ್ತಕಿರಂಗ ಪ್ರವೇಶರಂಗಾರೋಹಣರವೀಂದ್ರ ಕಲಾಕ್ಷೇತ್ರವಿಶೇಷ ಲೇಖನ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕವಿಗೋಷ್ಠಿಯಿಂದ ಕಾವ್ಯ ರಚನೆ ಮಾಡಲು ಆಸಕ್ತಿ ಬೆಳೆಯುತ್ತದೆ: ಸುಧಾಮಣಿ

Next Post

ಪ್ರೇಕ್ಷಕರ ಮನಸೂರೆಗೊಂಡ ‘ಸಂಗ್ಯಾ ಬಾಳ್ಯ’ ನಾಟಕ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪ್ರೇಕ್ಷಕರ ಮನಸೂರೆಗೊಂಡ ‘ಸಂಗ್ಯಾ ಬಾಳ್ಯ’ ನಾಟಕ

ಪ್ರೇಕ್ಷಕರ ಮನಸೂರೆಗೊಂಡ 'ಸಂಗ್ಯಾ ಬಾಳ್ಯ' ನಾಟಕ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
NES renovated building Inauguration

ಮಕ್ಕಳಿಗೆ ಶಿಕ್ಚಣದ ಜೊತೆಗೆ ಸಂಸ್ಕಾರ ಅತ್ಯಗತ್ಯ: ನಾರಾಯಣ ರಾವ್

June 17, 2026
ಜುಲೈ 17ಕ್ಕೆ ‘ದಿ ಒಡಿಸ್ಸಿ’ ಅಬ್ಬರ: ಮುಂಬೈಗೆ ಬರ್ತಿದ್ದಾರೆ ಕ್ರಿಸ್ಟೋಫರ್ ನೋಲನ್!

ಜುಲೈ 17ಕ್ಕೆ ‘ದಿ ಒಡಿಸ್ಸಿ’ ಅಬ್ಬರ: ಮುಂಬೈಗೆ ಬರ್ತಿದ್ದಾರೆ ಕ್ರಿಸ್ಟೋಫರ್ ನೋಲನ್!

June 17, 2026
ಕಿಡ್ನಿ ಕ್ಯಾನ್ಸರ್ | ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ ಕಾಯಿಲೆ

ಕಿಡ್ನಿ ಕ್ಯಾನ್ಸರ್ | ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ ಕಾಯಿಲೆ

June 17, 2026
Maharajas Trophy T20 cricket tournament - Shivamogga Yodhas Jersey

ಶಿವಮೊಗ್ಗ ಯೋಧಾಸ್ ಜರ್ಸಿ ಅನಾವರಣ | ಜೂನ್ 20ರಿಂದ ಮಹಾರಾಜ ಟ್ರೋಫಿ ಟಿ20 ಆರಂಭ

June 17, 2026
ಕೊಡಗು: ಆಮ್ಲಜನಕ ದಾಸ್ತಾನು ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಚಿವ ಸೋಮಣ್ಣ ಸೂಚನೆ

ಮೋದಿ ಸರ್ಕಾರದ 12 ವರ್ಷದ ಸಾಧನೆಗಳೇನು? ಸಚಿವ ವಿ. ಸೋಮಣ್ಣ ವಿವರಿಸಿದ್ದು ಹೀಗೆ

June 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL