No Result
View All Result
Marriott Bonvoy Expands ICC Partnership to Include Women’s T20 World Cup 2026
English Articles

Marriott Bonvoy Expands ICC Partnership to Include Women’s T20 World Cup 2026

by ಕಲ್ಪ ನ್ಯೂಸ್
May 19, 2026
0

Kalpa Media House  |  Special Article | Marriott Bonvoy, the global travel platform by Marriott International, has announced the expansion...

Read moreDetails
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
Ashwini Vaishnaw Flags Off Bengaluru–Mumbai Express; Announces Vande Bharat Sleeper Soon

Ashwini Vaishnaw Flags Off Bengaluru–Mumbai Express; Announces Vande Bharat Sleeper Soon

May 18, 2026
Amazon India to deploy 1,000 Eicher electric trucks for Amazon Now operations

Amazon India to deploy 1,000 Eicher electric trucks for Amazon Now operations

May 18, 2026
South Western Railway, Mysuru Division Hosts Inter Department Drama Competition

South Western Railway, Mysuru Division Hosts Inter Department Drama Competition

May 16, 2026
  • Advertise With Us
  • Grievances
  • About Us
  • Contact Us
Tuesday, May 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಜಾತಕ ವಿಮರ್ಷೆ: ಎಡವಟ್ಟ ಇಮ್ರಾನನಿಂದ ಪಾಕಿಸ್ಥಾನವನ್ನೇ ಪಣಕ್ಕೆ ಇಡಬೇಕಾದೀತು

ಪ್ರಪಂಚವನ್ನು ಹತ್ತಿರ ಇಟ್ಟುಕೊಳ್ಳಬೇಕಾದರೆ ಮತಾಂಧ ಭಯೋತ್ಪಾದಕರನ್ನು ನಾಶ ಮಾಡುವ ಸಂಕಲ್ಪಕ್ಕೆ ಜಾಗತಿಕವಾಗಿ ಕೈ ಜೋಡಿಸಬೇಕು. ಆಗ ಮತಾಂಧರ ಆಕ್ರೋಶಕ್ಕೆ ಇಮ್ರಾನನು ಬಲಿಯಾಗಬೇಕಾದೀತು.

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 25, 2019
in Army
0
ಜಾತಕ ವಿಮರ್ಷೆ: ಎಡವಟ್ಟ ಇಮ್ರಾನನಿಂದ ಪಾಕಿಸ್ಥಾನವನ್ನೇ ಪಣಕ್ಕೆ ಇಡಬೇಕಾದೀತು
Share on FacebookShare on TwitterShare on WhatsApp

ಬಹಳ ಆಸೆಯಲ್ಲಿದ್ದ ಇಮ್ರಾನ್, ನಾನೊಮ್ಮೆ ಪಾಕಿನ ಪ್ರಧಾನಿ ಆಗಲೇಬೇಕು ಎಂದು. ಅಂತೂ ಯಾರ ಕೈಗಾದರೂ ತನ್ನ ಜುಟ್ಟನ್ನು ಕೊಟ್ಟಾದರೂ ಪ್ರಧಾನಿ ಆಗಬೇಕೆನ್ನುವ ಆಸೆ ಈಡೇರಿತು. ಅಲ್ಪ ಮತದಲ್ಲಿ, ಎರವಲು ಪಡೆದು ಪ್ರಧಾನಿಯೂ ಆಗಿಬಿಟ್ಟ. ಈಗ? ಅವನಿಗೆ ಅಲ್ಲಿನ ಎಡವಟ್ಟು ಅರ್ಥವಾಗಿದೆ.

ನನಗೆ ಲಭಿಸಿದ ಜಾತಕ ಪ್ರಕಾರ, ಈತ ಒಬ್ಬ ಬಹಳ ಬುದ್ಧಿವಂತ ಮನುಷ್ಯ. ಎಲ್ಲಿಯವರೆಗೆ ಬುದ್ಧಿವಂತ ಎಂದರೆ ಮೋದಿಯವರಿಗೆ ಸರಿಸಮಾನ ಎನ್ನಬಹುದು. ಅದು ಹೇಗೆಂದರೆ ಇವನ ಜಾತಕದಲ್ಲಿ ಕನ್ಯಾರಾಶಿಯಲ್ಲಿ 29. 5° ಶನಿ ಇರುವುದು.


ಒಂದು ಗಾದೆ ಮಾತು ಹೇಳುತ್ತಾರಲ್ವೇ? ಚಾಪೆಯ ಅಡಿಯಲ್ಲಿ ನುಗ್ಗಿದರೆ ರಂಗೋಲಿಯಡಿಯಲ್ಲಿ ನುಸುಳುವವನು ಎಂದು. ಆದರೆ ಈತನ ಬುದ್ಧಿವಂತಿಕೆಗೆ ಸರಿಯಾದ ವೇದಿಕೆ ಪಾಕಿಸ್ಥಾನ ಅಲ್ಲವಾಗಿದೆ. ಒಂದು ವೇಳೆ ಆರ್ಥಿಕ ಬಲಿಷ್ಠತೆ ಇರುತ್ತಿದ್ದರೆ ಇವನನ್ನು ಮಣಿಸಲು ಕಷ್ಟ ಇತ್ತು. ಒಬ್ಬ ಬಲಾಡ್ಯನೇ ಆಗಿದ್ದರೂ ನಾಲ್ಕು ದಿನ ಊಟ ಇಲ್ಲದಿದ್ದರೆ ಹೇಗೆ ಹೋರಾಡಿಯಾನು?

ಕುಂಭ ರಾಶಿ, ವೃಶ್ಚಿಕ ಲಗ್ನ ಇವನದ್ದು. ಲಗ್ನದಲ್ಲೇ ನಿಪುಣ ಯೋಗ. ಮೇಷದಲ್ಲಿ ಗುರು. ಭಕ್ತಿ, ಜ್ಞಾನ ಶೂನ್ಯನು. ವಿಪರೀತ ಆತಂಕದ ಸ್ವಭಾವ Exciting Nature. ಅಂದರೆ ತಕ್ಷಣ BP ಏರುವಂತಹ ಸ್ವಭಾವ. ತನ್ನ ಸೊತ್ತನ್ನು ಒಂದಿಂಚೂ ಕಳೆದುಕೊಳ್ಳಲು ಇಷ್ಟವಿಲ್ಲದ ಮನಸ್ಸಿನವನು. ಈಗ ಅವನಿಗೆ ಶುಕ್ರದಶೆಯೂ, ಗೋಚರದಲ್ಲಿ ಶನಿಯು ಲಾಭ ಗತನೂ, ಗುರು ಈಗ ಕರ್ಮ ಸ್ಥಾನ, ಮುಂದಿನ ತಿಂಗಳ ನಂತರ ಲಾಭ ಸ್ಥಾನದಲ್ಲಿ ಸಂಚರಿಸುವವನು. ಇದೆಲ್ಲಾ ಉತ್ತಮ ಫಲಗಳೇ ಆಗಿವೆ. ಆದರೆ ಕನ್ಯಾ ರಾಶಿಯ ಶನಿಗೆ, ಈಗ ಧನುರಾಶಿಯ ಶನಿಸಂಚಾರವು ದೊಡ್ಡ ಬಿಕ್ಕಟ್ಟನ್ನು ತರುವಂತಹ ಗೋಚರ ಸ್ಥಿತಿ.

ರಾವಣನಂತೆಯೇ ಇಮ್ರಾನನ ಕತೆಯೂ!
ಡಬ್ಬ ಬಡಿದೇ ಶತ್ರುಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವಂತನಾದರೂ ಈಗ ಡಬ್ಬ ಬಡಿದು ದೇಶ ಸುತ್ತುವ ಹಾಗಾಗಿದೆ. ಯಾವಾಗಲೂ ಎಷ್ಟೇ ಉತ್ತಮ ಜಾತಕವಿರಲಿ, ಅವರಿಗೆ ದೇಶ- ಕಾಲ- ಪಾತ್ರ ಎಂಬ ನಿಯಮವೂ ಇದೆ. ಒಬ್ಬ ಪೋಲಿ ಬ್ರಾಹ್ಮಣ ಚತುರ್ವೇದ ಪಂಡಿತನಾದರೇನು ಫಲವೋ ಹಾಗೆಯೇ ಇವನು. ರಾವಣನಿಗೆ ಏಕಾದಶದಲ್ಲಿ ಬಲಿಷ್ಟ ಶನಿ. ಆದರೆ ಶನಿಯ ಮೂರನೆಯ ಕೆಟ್ಟ ಪೂರ್ಣ ದೃಷ್ಟಿಯು ಲಗ್ನಕ್ಕಿದೆ. ಇದು ದುರ್ಬುದ್ಧಿಯನ್ನು ಪ್ರೇರೇಪಿಸಿ ಜೀವ ಕಳೆದುಕೊಳ್ಳುವಂತೆ ಮಾಡಿ ಬಿಟ್ಟಿತು. ಅದೇ ರೀತಿ ಇಮ್ರಾನನ ಕಥೆಯೂ ಆಗಿದೆ.

ಈಗ ನಡೆಯುವ ಶುಕ್ರದಶೆಯು ಖರದ್ರೇಕ್ಕಾಣಾಧಿಪತ್ಯ (ಮರಣ, ನಾಶ)ದ ದಶೆ. ವ್ಯಯಾಧಿಪತ್ಯವೂ ಇರುವುದರಿಂದ ಇವನಿಂದ ಎಲ್ಲವೂ ಕೃಷ್ಣಾರ್ಪಣವಾಗಿ ಬಿಡುವುದು ಖಚಿತ. ಇವನ ಜಾತಕದ ಪ್ರಕಾರ ಇವನಿಗೆ ಅವಸರ ಜಾಸ್ತಿ. ಈ ಅವಸರದ ನಿರ್ಧಾರ ಅವಸಾನಕ್ಕೆ ಕಾರಣವಾಗುತ್ತದೆ. ತನ್ನ ಶಿಸ್ತನ್ನು ಅವಸರದಲ್ಲಿ ಪ್ರಕಟಿಸಲು ಹೊರಟಾಗಲೇ ಅಪಾಯ ಆಗುತ್ತದೆ. ಇದು ಸಾಲದ್ದೆಂಬುದಕ್ಕೆ ಈ ಸಲದ ಅತಿಚಾರ ಗುರು, ಮಾರ್ಚ್ ನಂತರ ಧನುರಾಶಿಯಲ್ಲಿ ಶನಿಯೊಡನೆ ಕೇತು ಯುತಿಯೂ ವಾತಾವರಣದ ಅನಾಹುತ ಸೂಚಕರಾಗುತ್ತಾರೆ.

ಪಾಕಿಸ್ಥಾನವನ್ನೇ ಪಣಕ್ಕೆ ಇಡಬೇಕಾಗುತ್ತದೆ
ಮೊದಲೇ ನಿಯಂತ್ರಣವಿಲ್ಲದ ಸರಕಾರದ ಅಧಿಪತ್ಯ, ಮತಾಂಧರ ಕೈಯೊಳಗಿರುವ ಸರಕಾರ. ಹೀಗೆಲ್ಲ ಇದ್ದಾಗ ಇದರ ದೊಡ್ಡ ದುರಂತಕ್ಕೆ ಇಮ್ರಾನ್ ಖಾನ್ ನಾಯಕತ್ವ ವಹಿಸಿಕೊಳ್ಳಲು ಬಂದದ್ದಾಗಿದೆ. ಪ್ರಪಂಚವನ್ನು ಹತ್ತಿರ ಇಟ್ಟುಕೊಳ್ಳಬೇಕಾದರೆ ಮತಾಂಧ ಭಯೋತ್ಪಾದಕರನ್ನು ನಾಶ ಮಾಡುವ ಸಂಕಲ್ಪಕ್ಕೆ ಜಾಗತಿಕವಾಗಿ ಕೈ ಜೋಡಿಸಬೇಕು. ಆಗ ಮತಾಂಧರ ಆಕ್ರೋಶಕ್ಕೆ ಇಮ್ರಾನನು ಬಲಿಯಾಗಬೇಕಾದೀತು. ಬುದ್ಧಿವಂತ ಇಮ್ರಾನನು ಇದರಿಂದ ತಪ್ಪಿಸಿಕೊಳ್ಳಲು ಮೇಲ್ನೊಟಕ್ಕೆ ಶಾಂತಿ ಮಂತ್ರ ಜಪಿಸಿ ಒಮ್ಮೆ ಸಮರದ ವಾತಾವರಣ ತಿಳಿ ಮಾಡಬಹುದು. ಆದರೆ ಮತ್ತೆ ಭಯೋತ್ಪಾದಕರ ನೆರಳಿನಲ್ಲಿ ಅಶಾಂತಿ ವಾತಾವರಣ ಸೃಷ್ಟಿ ಮಾಡಲೇಬೇಕಾದೀತು. ಇದಕ್ಕೆ ಇಡೀ ಪಾಕಿಸ್ಥಾನವನ್ನೇ ಪಣ ಇಡಬೇಕಾದೀತು. ಇದು ಪಟಾಕಿ ಅಂಗಡಿಯಲ್ಲಿ ಗಲಾಟೆ ಮಾಡಿದಂತಾದೀತು. ಅಂತೂ ಪಾಕಿಸ್ಥಾನದಲ್ಲಿ ಬಹುದೊಡ್ಡ ದುರಂತವಾಗುವುದು ಖಚಿತ. ಹಿರೋಶಿಮಾ ನಾಗಸಾಕಿ ದುರಂತದ ಇನ್ನೊಂದು ಮುಖ ಪಾಕಿಸ್ಥಾನವಾಗಲಿದೆ ಎಂದರೂ ತಪ್ಪಾಗದು.


ಮರುಕಳಿಸಲಿದೆ ಚರಿತ್ರೆ
ಎಪ್ರಿಲ್ ಮೊದಲ ವಾರದಲ್ಲಿ ಕುಜ ವೃಷಭ ರಾಶಿಯಲ್ಲಿ ರೋಹಿಣಿ ನಕ್ಷತ್ರದಲ್ಲಿದ್ದು, ತನ್ನ ಅಷ್ಟಮ ಪೂರ್ಣ ದೃಷ್ಟಿಯನ್ನು ಶನಿ ಕೇತುಗಳ ಮೇಲೆ ಬೀರಿದಾಗ ಈ ದುರಂತ ನಡೆಯುವ ಸಾಧ್ಯತೆಗಳಿವೆ. ಅದಕ್ಕೂ ಮುನ್ನ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವ ಹಾಗಿಲ್ಲ. ಇದಕ್ಕೆ ನಾಶ ಒಂದೇ ಪರಿಹಾರವಲ್ಲದೆ, ಬೇರೆ ಪರಿಹಾರವಿಲ್ಲ. ಧನುರಾಶಿಯಲ್ಲಿ ಶನಿ ಕೇತು ಯುತಿ 1871 ರಲ್ಲಿ ಬಂದಿದ್ದಾಗ ಜಗತ್ತಿನಲ್ಲಿ ಆಘಾತಕಾರಿ(Traumatic in term of psychologically painful) ವಾಯಾವರಣ ಬಂದಿತ್ತೆಂದು ಕೆಲ ಚರಿತ್ರೆಗಳು ಹೇಳುತ್ತದೆ. ಅಂದರೆ ಯಾವುದೋ ಒಂದು ವಾತಾವರಣದ ವೈಪರೀತ್ಯದಿಂದ Body Disable ಕಾಯಿಲೆ ಬಂದಿತ್ತೆಂದು ಹೇಳಿದೆ. ಈ ಅಣು ಸ್ಫೋಟದಿಂದಲೂ ಹೀಗಾಗಬಹುದು.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Astrologyhiroshima and nagasaki bombingImran KhanImran Khan HoroscopeIndiaKannada ArticleNuclear explosionPakistanPrakash AmmannayaRavanaಅಣು ಸ್ಫೋಟಜ್ಯೋರ್ತಿವಿಜ್ಞಾನಂಪಾಕಿಸ್ಥಾನಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ಪ್ರಕಾಶ್ ಅಮ್ಮಣ್ಣಾಯರಾವಣ
Share197Tweet123Send
Previous Post

ಭಾರತದ ಪ್ರತೀಕಾರದ ಸಿದ್ಧತೆಗೇ ಅಕ್ಷರಶಃ ನಡುಗಿ ಹೋಗಿದ್ದಾರೆ ಪಾಕ್ ಸೇನಾ ಮುಖ್ಯಸ್ಥ!

Next Post

ಸಂಸ್ಕೃತಿ ಉಳಿಸಿ ಬೆಳೆಸುವ ಸಮೃದ್ಧ ಶಕ್ತ ಕಲೆ ಯಕ್ಷಗಾನ: ಕೆ.ಎಸ್. ಈಶ್ವರಪ್ಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸಂಸ್ಕೃತಿ ಉಳಿಸಿ ಬೆಳೆಸುವ ಸಮೃದ್ಧ ಶಕ್ತ ಕಲೆ ಯಕ್ಷಗಾನ: ಕೆ.ಎಸ್. ಈಶ್ವರಪ್ಪ

ಸಂಸ್ಕೃತಿ ಉಳಿಸಿ ಬೆಳೆಸುವ ಸಮೃದ್ಧ ಶಕ್ತ ಕಲೆ ಯಕ್ಷಗಾನ: ಕೆ.ಎಸ್. ಈಶ್ವರಪ್ಪ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಅರಸೀಕೆರೆಯಲ್ಲಿ RPF ಆಪರೇಷನ್ ಸತರ್ಕ ಕಾರ್ಯಾಚರಣೆ | ಮದ್ಯದ ಬಾಟಲಿಗಳ ವಶ

ಅರಸೀಕೆರೆಯಲ್ಲಿ RPF ಆಪರೇಷನ್ ಸತರ್ಕ ಕಾರ್ಯಾಚರಣೆ | ಮದ್ಯದ ಬಾಟಲಿಗಳ ವಶ

May 19, 2026
ಮೈಸೂರು | ಅಧಿಕ ಮಾಸೋತ್ಸವ | ಮೇ 20ರಂದು ಕೌಸಲ್ಯಾ – ಅಪ್ರಮೇಯ ಗಾಯನ

ಮೈಸೂರು | ಅಧಿಕ ಮಾಸೋತ್ಸವ | ಮೇ 20ರಂದು ಕೌಸಲ್ಯಾ – ಅಪ್ರಮೇಯ ಗಾಯನ

May 19, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
ಭಾರತದ ಮೊಟ್ಟ ಮೊದಲ ಬುಲೆಟ್ ಟ್ರೈನ್ ಫಸ್ಟ್ ಲುಕ್ ಹೇಗಿದೆ ನೋಡಿ | ಎಲ್ಲಿಂದ ಎಲ್ಲಿಗೆ?

ಬೆಂಗಳೂರಿಗೆ ಬರಲಿದೆ ಬುಲೆಟ್ ಟ್ರೈನ್ | ಎಲ್ಲೆಲ್ಲಿಗೆ? ಬಿಡುಗಡೆಯಾಯ್ತು ನಕ್ಷೆ

May 19, 2026
33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ!, ಏನಿದು ಕೇಸ್?

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ರಸಾಯನಶಾಸ್ತ್ರ ತರಗತಿ ಸಂಸ್ಥಾಪಕ ಶಿವರಾಜ್ ಸಿಬಿಐನಿಂದ ಬಂಧನ

May 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL