ಕಲ್ಪ ಮೀಡಿಯಾ ಹೌಸ್
ಹೊಸಪೇಟೆ: ನಗರದ ಹೊಲವಲಯದಲ್ಲಿರುವ ಸಂಕ್ಲಾಪುರದ ವಿನಾಯಕ ನಗರಕ್ಕೆ ಅಂಚೆ ಪೆಟ್ಟಿಗೆ ಅಳವಡಿಸುವಂತೆ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಅಂಚೆ ಅಧಿಕಾರಿ ರಶೀದ್ ಸಾಬ್ ಅವರಿಗೆ ಮನವಿ ಮಾಡಿದ್ದಾರೆ.
ಸ್ಥಳೀಯ ನಿವಾಸಿಗಳು ಅಂಚೆ ಪತ್ರ ಸಲ್ಲಿಸಲು ವಿನಾಯಕ ನಗರದಿಂದ ೨ ಕಿ.ಮೀ ದೂರದ ಜೆಪಿ ನಗರಕ್ಕೆ ಹೋಗಬೇಕಿದೆ. ವಿನಾಯಕ ನಗರದಲ್ಲಿ ಅಂಚೆ ಇಲಾಖೆಯಿಂದ ಅಂಚೆ ಪೆಟ್ಟಿಗೆ ಅಳವಡಿಸಿದರೆ ಸ್ಥಳೀಯರಿಗೆ ಅನುಕೂಲವಾಗುತ್ತದೆ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಅಂಚೆ ಅಧಿಕಾರಿ ರಶೀದ್ ಸಾಬ್, ಅಂಚೆ ಪೆಟ್ಟಿಗೆ ಬೇಡವೆನ್ನುತ್ತಿರುವ ಕಾಲದಲ್ಲಿ ಅಂಚೆ ಪೆಟ್ಟಿಗೆಗಾಗಿ ಮನವಿ ಸಲ್ಲಿಸಿರುವುದು ಸಂತೋಷದ ವಿಷಯವಾಗಿದೆ. ಕೇವಲ ಪೆಟ್ಟಿಗೆ ಪಡೆದು ಸುಮ್ಮನಾಗದೇ ಸ್ಥಳೀಯ ನಿವಾಸಿಗಳು ಪತ್ರ ವ್ಯವಹಾರ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರು ಮುಳುಗಡೆಯಾಗುತ್ತಿರುವ ಅಂಚೆ ಇಲಾಖೆಯನ್ನು ಮೇಲೆತ್ತಲು ನಮ್ಮ ಸಂಘ ಹೋರಾಟ ಮಾಡುತ್ತೇವೆ ತಮ್ಮ ಬಡಾವಣೆಗೆ ಅಂಚೆ ಇಲಾಖೆಯನ್ನು ಮುಂದಿನ ದಿನದಲ್ಲಿ ತೆರೆಯಲು ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿನಾಯಕ ನಗರದ ನಿವಾಸಿಗಳಾದ ತಿಪ್ಪೇಸ್ವಾಮಿ, ಗೋಪಾಲ ಜೋಷಿ, ಜಂಬಣ್ಣ, ಈರೇಶ, ವೈ.ಯ ಮುನೇಶ್ ಇನ್ನಿತರರಿದ್ದರು.
ವರದಿ: ಮುರುಳಿಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post