No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
  • Advertise With Us
  • Grievances
  • About Us
  • Contact Us
Friday, July 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ನಮ್ಮ ಜೀವನವಿಡೀ ಉಪಕಾರ ಮಾಡುವ ಬೆಳಕಿಗೆ ಕೃತಜ್ಞತೆ ಹೇಳದಿದ್ದರೆ ಹೇಗೆ? ಆದರೆ ಹೇಳುವುದು ಹೇಗೆ?

ಬೆಳಕಿನ ಸಾಕ್ಷಾತ್ಕಾರದಲ್ಲಿ...

kalpa News by kalpa News
October 26, 2019
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
Share on FacebookShare on TwitterShare on WhatsApp

ಬೆಳಕು ಅರಳುವುದೇ ಮೌನದಲ್ಲಿ, ಬೆಳಕು ನಿಶ್ಯಬ್ಧ, ಬೆಳಕು ಮಾತನಾಡುವುದಿಲ್ಲ ತಾನು ಮೌನವಾಗಿದ್ದುಕೊಂಡೇ ತನ್ನ ವ್ಯಾಪ್ತಿಯೊಳಗೆ ಬರುವ ಎಲ್ಲರನ್ನೂ ಮಾತಾಡುವಂತೆ ಪ್ರೇರೆಪಿಸುವುದೇ ಬೆಳಕಿನ ಆದಿಶಕ್ತಿ!

ಅದಕ್ಕೆ ಅಲ್ಲವೆ ಅಬ್ಬರದಲ್ಲಿ ಗೌಜಿನಲ್ಲಿ ಸದ್ದಿನಲ್ಲಿ, ಗರ್ಜನೆಯಲ್ಲಿ ಬೆಳಕು ಮಿಂಚಿ ಮಾಯವಾಗುತ್ತದೆ. ಅತಿಯೆನ್ನುವ ಸದ್ದುಗದ್ದಲದಲ್ಲಿ ಬೆಳಕು ಹೆಚ್ಚು ಹೊತ್ತು ನಿಲ್ಲುವುದಿಲ್ಲ.

ಇನ್ನೊಂದು ಹಣತೆಗೆ ಬೆಳಕು ನೀಡುವ ಹಣತೆ ಎನ್ನನ್ನು ಕಳೆದುಕೊಳ್ಳುವುದಿಲ್ಲ ತನ್ನ ಬೆಳಕನ್ನು ಕೂಡಾ! ಅದು ಏನಿದ್ದರೂ ಪಡೆಯುತ್ತದೆಯೇ ಹೊರತು ಇನ್ನೇನೂ ಅಲ್ಲ! ಬೆಳಕಿನ ಹಸ್ತಾಂತರದಲ್ಲಿ ಪಡೆಯುವ, ಸಮೃದ್ಧಿಯಾಗುವ ಸಂವೇದನೆಯಿದೆ. ನಾವೂ ಹೀಗೆಯೇ ಅಲ್ಲವೆ! ಬೆಳಕು ಕೊಟ್ಟವ ಬಡವನಾಗುವುದಿಲ್ಲ. ಬಡವನೆಂದುಕೊಂಡರೂ ಬೆಳಕು ಕೊಟ್ಟವ ಶ್ರೀಮಂತನಾಗುತ್ತಾನೆ.

ಓ ಬೆಳಕೇ, ನೀನೊಂದು ಮೋಡಿ, ಸೊಗಸುಗಾರ. ಸದಾ ಮಿನುಗುವ ಸುಂದರಾಂಗ ಚಲನಶೀಲತೆಯೇ ಜೀವಾಳ. ಆಂತರ್ಯದ ಸಂಪತ್ತನ್ನು ಹಂಚುತ್ತ ಸಂಭ್ರಮಿಸುವ ಲಕಲಕನೆ ಹೊಳೆಯುವ ನಿಸ್ವಾರ್ಥಯಾನೀ, ನಿನ್ನಂದಕ್ಕೆ ನೀ ಉಂಟು ಮಾಡುವ ಸಂಭ್ರಮಕ್ಕೆ ನಿನ್ನ ಸೆಳೆತಕ್ಕೆ ನೀನೇ ಸಾಟಿ. ಹಬ್ಬದ ನಿಮಿತ್ತ ಮತ್ತೊಮ್ಮೆ ಎಲ್ಲ ಪೊರೆಗಳನ್ನು ಕಳಚಿ ಬರುತ್ತಿರುವ ನಿನಗೆ ಸ್ವಾಗತ.

ಬೆಳಕೆ ನೀ ಎಲ್ಲೋ ಅಲ್ಲೋ ಇಲ್ಲೋ ಮಾತ್ರ ಅಲ್ಲ ಎಲ್ಲಡೆ ವ್ಯಾಪಿಸಿದ್ದು ಬೆಳಕೆ ಜೀವನ ಅದುವೇ ಸತ್ಯದರ್ಶನ ಇದರಿಂದಲೇ ಮೌಲ್ಯಗಳ ಸಾಕ್ಷಾತ್ಕಾರ ಬೆಳಕಿಗೆ ಗಡಿ-ಸೀಮೆಗಳಲ್ಲಿ. ಬೇಧ-ಭಾವಗಳಿಲ್ಲ ಬೆಳಕನ್ನೋದು ಯಾವುದೋ ಭೌತಿಕ ಸಾಧನವಲ್ಲ ಅಥವಾ ತೀರಾ ಎಟುಕುಲಾರದ ಅಭೌತಿಕ ಸಂಗತಿಯೂ ಅಲ್ಲ. ಅದು ನಮ್ಮ ಆತ್ಮ ಸಂಗಾತಿ. ಜೀವದ ಗೆಳೆಯ. ಬದುಕಿಗೆ ಪಥದರ್ಶಕ. ನಮ್ಮದೆ ಒಳಗಣ್ಣು ಇದು ಬೆಳಕು ನಮ್ಮನ್ನು ಬೆಳಗದೇ ನಾವು ಬಾಳಲುಂಟೆ?

ಮಗುವಿನ ಮುಗ್ಧತೆಯಲ್ಲಿ, ತಾಯಿಯ ಮಮತೆಯಲ್ಲಿ, ತಂದೆಯ ಅಕ್ಕರೆಯಲ್ಲಿ ಅಣ್ಣನ ಪೋಷಣೆಯಲ್ಲಿ, ಗೆಳೆಯನ ಕಾಳಜಿಯಲ್ಲಿ, ನಲ್ಲ-ನಲ್ಲೆಯರ ಸಂಭಾಷಣೆಯಲ್ಲಿ ಗುರು-ಶಿಷ್ಯರ ಸಂವಾದದಲ್ಲಿ… ಹೀಗೆ ಎಲ್ಲಲ್ಲೂ, ದೃಷ್ಠಿ ಹಾಯಿಸಿದತ್ತಲೂ ಬೆಳಕಿನ ಸಾಕ್ಷಾತ್ಕಾರವೇ ಗೋಚರಿಸುತ್ತದೆ. ಅದರ ದೇದೀಪ್ಯಮಾನ ಪ್ರಕಾಶ ಹಿತ ನೀಡುತ್ತದೆ ಬೆಳಕಿನ ಹಬ್ಬವನ್ನು ನಮ್ಮ ಪೂರ್ವಜರು ಸುಖಸುಮ್ಮನೆ ಆರಂಭಿಸಿದ್ದೇನಲ್ಲ ಬೆಳಕು ನಮ್ಮನ್ನು ಬೆಳಗುತ್ತಾ, ಜೀವನದ ಪ್ರತಿ ಕ್ಷಣವನ್ನು ಉತ್ಸವವನ್ನಾಗಿಸುತ್ತದೆ. ಆಶಾವಾದ ಎಂಬ ಬೃಹತ್ ಎನರ್ಜಿಯನ್ನು ಸದಾ ಕಾಪಾಡುತ್ತದೆ ಇಷ್ಟೆಲ್ಲ ಉಪಕಾರ ಮಾಡುವ ಬೆಳಕಿಗೆ ಒಂದು ಸಣ್ಣ ಕೃತಜ್ಞತೆಯನ್ನು ಸಲ್ಲಿಸದಿದ್ದರೆ ಹೇಗೆ? ಹೀಗೆ ಬೆಳಕಿಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ ನಮ್ಮ ಆಶಾವಾದವನ್ನು ಇನ್ನಷ್ಟು ಗಟ್ಟಿಗೊಳಿಸದಿದ್ದರೆ ಹೇಗೆ?

ಇದಕ್ಕಾಗಿಯೇ ಉಪಕಾರ ಸ್ಮರಣೆಯ ದ್ಯೋತಕ ದೀಪಾವಳಿ. ಈ ಪರ್ವ ನೀಡುವ ಸಂದೇಶವೂ ಅಷ್ಟೇ ಸುಸ್ಪಷ್ಟ. ರಾಮ ರಾವಣನ ವಧೆ ಮಾಡಿ ತಾಯ್ನಾಡಿಗೆ ಮರಳಿದ್ದು, ನರಕಾಸುರನ ವಧೆಯಾಗಿದ್ದು, ತನ್ಮೂಲಕ ಶಿಷ್ಟತನ ಗೆಲವು ಸಾಧಿಸಿದ್ದು ಈ ಬೆಳಕಿನ ಪರ್ವದಂದೇ. ಎಲ್ಲರ ಕರೆಗೆ ಓ ಎನ್ನಲು ದೇವರಿಗೆ ಕಷ್ಟ. ಹಾಗಾಗಿ ಆತ ಬೆಳಕನ್ನು ಸೃಷ್ಟಿಸಿದ್ದಾನೆ. ಬೆಳಕಲ್ಲೇ ದೇವರಿದ್ದಾನೆ.

ಯಾವುದೇ ಆರಂಭಕ್ಕೆ ಬೆಳಕೊಂಡು ಶುಭ ಮುನ್ನುಡಿ. ನಾವು ಬೆಳಕನ್ನು ನೇರವಾಗಿ ನೋಡಲಾರೆವು. ಆದರೆ ಬೆಳಕಿನಿಂದ ಎಲ್ಲಾ ವಸ್ತುಗಳನ್ನು ನೋಡಬಲ್ಲೆವು. ಸೂರ್ಯನ ಉಜ್ವಲ ಬೆಳಕು, ಚಂದ್ರನ ತಂಪು ಬೆಳಕು. ಮಿಂಚಿನ ಝಳಕಿನ ಬೆಳಕು, ತಾರೆಗಳ ಮಿಣುಕು ಬೆಳಕು ಹಣತೆಯ ಮಿಣಿ ಮಿಣಿ ಬೆಳಕು ಹೀಗೆ ಬೆಳಕಿನ ರೂಪ ನೂರು ತರಹ.

ಮುಂಬಡ್ತಿ ತಾನು ಕರಗುತ್ತ ಇತರರಿಗೆ ಬೆಳಕು ನೀಡುತ್ತದೆ. ತನ್ನ ಬುಡ ಕತ್ತಲಿನಿಂದ ಕವಿದಿದ್ದರೂ ದೀಪ ಇತರರಿಗೆ ಬೆಳಕು ನೀಡುತ್ತದೆ ಇದು ತ್ಯಾಗದ ಸಂಕೇತ. ದೀಪವನ್ನು ಎಲ್ಲೇ ಇಡಿ, ಅದರ ಜ್ವಾಲೆ ಮೇಲ್ಮುಖವಾಗಿರುತ್ತದೆ. ಅದು ಅಭಿವೃದ್ಧಿಯ ಸಂಕೇತ. ಬೆಳಕಿಗೆ ಸ್ವಾರ್ಥವಿಲ್ಲ. ಒಂದು ದೀಪದಿಂದ ಸಾವಿರ ದೀಪ ಬೆಳಗಬಹುದು. ಅದು ಜ್ಞಾನವನ್ನು ಹರಡುವ ಪ್ರತೀಕ.

ಜಗತ್ತಿನಲ್ಲಿ ಮಾನವ ಕುಲ ಇರುವಷ್ಟು ದಿನ ದೀಪ ಬೆಳಗುತ್ತಲೆ ಇರುತ್ತದೆ. ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು.

Tags: DiwaliDiwali Article in KannadaDr. Gururaja PoshettihalliKannada NewsKnowledgeSpecial Articleಜ್ಞಾನಡಾ.ಗುರುರಾಜ ಪೋಶೆಟ್ಟಿಹಳ್ಳಿದೀಪದೀಪಾವಳಿದೀಪಾವಳಿ ಲೇಖನ
Share199Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೊಂಕಣಿ ಸಿನಿ ಪ್ರಿಯರಿಗೆ ಕಾದಿರುವ ಸಿಹಿ ಸುದ್ಧಿ ಏನು ಗೊತ್ತಾ?

Next Post

ಚಳ್ಳಕೆರೆ: ಕೃಷ್ಣ ಮೃಗ ಬೇಟೆಯಾಡಿದ್ದ ಇಬ್ಬರ ಬಂಧನ

kalpa News

kalpa News

Next Post

ಚಳ್ಳಕೆರೆ: ಕೃಷ್ಣ ಮೃಗ ಬೇಟೆಯಾಡಿದ್ದ ಇಬ್ಬರ ಬಂಧನ

Leave a Reply Cancel reply

Your email address will not be published. Required fields are marked *

No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL