ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ತುಂಟತನ ಮಾಡಿದ್ದಕ್ಕಾಗಿ ತಾಯಿಯೊಬ್ಬಳು ತಾನೇ ಹೆತ್ತ ಮಗುವಿಗೆ ಕಬ್ಬಿಣದ ರಾಡ್ ನಿಂದ ಬರೆ ಹಾಕಿರುವ ಘಟನೆ ಪಟ್ಟಣದ ಟಿಪ್ಪು ನಗರದಲ್ಲಿ ನಡೆದಿದೆ.
ಮಗುವಿಗೆ ಬರೆ ಹಾಕಿದ ಆರೋಪದ ಮೇಲೆ ಅನುಷಾ ಹುಲಿಮಾರ ಎಂಬ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆರೋಪಿ ತನ್ನ ಮಗುವಿನ ವರ್ತನೆಯಿಂದ ಕೋಪಗೊಂಡು ಕೈಕಾಲುಗಳು ಮತ್ತು ಕುತ್ತಿಗೆಗೆ ಕಬ್ಬಿಣದ ಬಿಸಿ ರಾಡ್ನಿಂದ ತೀವ್ರ ಸುಟ್ಟ ಗಾಯ ಮಾಡಿದ್ದಾಳೆ ಎಂದು ವರದಿಯಾಗಿದೆ.
ಮಗುವಿನ ಕೂಗು ಕೇಳಿದ ಅಕ್ಕ ಪಕ್ಕದ ಮನೆಯವರು ಓಡಿ ಬಂದು ಬಾಲಕನನ್ನು ರಕ್ಷಿಸಿದ್ದಾರೆ. ಅಮಾನವೀಯ ಕೃತ್ಯದಿಂದ ಆಘಾತಕ್ಕೊಳಗಾದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಹಳೆ ಪಟ್ಟಣ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಹಿಳೆಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಂತ್ರಸ್ತ ಮಗುವಿಗೆ ಅಗತ್ಯ ಬೆಂಬಲ ಮತ್ತು ಆರೈಕೆ ನೀಡುವಂತೆ ಕೋರಲಾಗಿದೆ. ಮಗು ತನ್ನ ಕಾಲು, ಕೈಗಳು ಮತ್ತು ಮುಖದ ಮೇಲೆ ತೀವ್ರವಾದ ಸುಟ್ಟ ಗಾಯಗಳನ್ನು ತೋರಿಸುತ್ತಿರುವುದು ಮತ್ತು ತನ್ನ ತಾಯಿ ತನಗೆ ಬರೆ ಹಾಕಿರುವುದಾಗಿ ಹೇಳುತ್ತಿರುವ ವಿಡಿಯೋ ಕಂಡುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post