ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಎರಡೇ ದಿನದಲ್ಲಿ ರಮಣಗುಪ್ತಾ ವರ್ಗಾವಣೆ!
ಹಿರಿಯ ಐಪಿಎಸ್ ಅಧಿಕಾರಿ ರಮಣಗುಪ್ತಾ ಅವರನ್ನು ಎರಡು ದಿನಗಳ ಹಿಂದೆಯಷ್ಟೇ ಬೆಳಗಾವಿ ಐಜಿಪಿ ಆಗಿ ವರ್ಗಾವಣೆ ಮಾಡಲಾಗಿತ್ತು. ಆದರೆ, ಈಗ ಏಕಾಏಕಿ ಅವರನ್ನು ಹುಬ್ಬಳ್ಳಿ-ದಾರವಾಢ ಆಯುಕ್ತರನ್ನಾಗಿ ವರ್ಗ ಮಾಡಲಾಗಿದೆ. ರಾಜ್ಯ ಸರ್ಕಾರದ ಈ ನಡೆ ಈಗ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.
ಯಾರು ಎಲ್ಲಿಗೆ ವರ್ಗಾವಣೆ?
- ಲಾಬೂರಾಮ್: ಗುಪ್ತಚರ ಇಲಾಖೆ ಐಜಿಪಿ
- ರಮಣಗುಪ್ತಾ: ಹುಬ್ಬಳ್ಳಿ ಧಾರವಾಡ ಆಯುಕ್ತರು
- ಅನುಪಮ್ ಅಗರವಾಲ್: ಕಲಬುರಗಿ ವಲಯ ಡಿಐಜಿ
- ಎನ್. ಸತೀಶ್ ಕುಮಾರ್: ಬೆಳಗಾವಿ ಉತ್ತರ ಪೂರ್ವ ವಲಯ ಐಜಿಪಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post