No Result
View All Result
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ
English Articles

Duniya Vijay, Rachita Ram & Raj B. Shetty’s Landlord Premieres This Saturday on Zee Kannada

by ಕಲ್ಪ ನ್ಯೂಸ್
May 22, 2026
0

Kalpa Media House  |  Bengaluru | Zee Kannada has always captivated its audience with unique content, offering engaging fiction stories,...

Read moreDetails
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
  • Advertise With Us
  • Grievances
  • About Us
  • Contact Us
Monday, May 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಗುಮೊಗದ ನರಸಿಂಹ ದೇವರಿಗಿಂದು ಜಯಂತಿ: ಶ್ರೀ ವಿದ್ಯಾ ಪ್ರಸನ್ನ ತೀರ್ಥರ ಅನುಗ್ರಹ ಸಂದೇಶ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 6, 2020
in Special Articles, Small Bytes
0
ನಗುಮೊಗದ ನರಸಿಂಹ ದೇವರಿಗಿಂದು ಜಯಂತಿ: ಶ್ರೀ ವಿದ್ಯಾ ಪ್ರಸನ್ನ ತೀರ್ಥರ ಅನುಗ್ರಹ ಸಂದೇಶ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ನರಸಿಂಹ ಜಯಂತಿಯು ವೈಶಾಖ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಮಹಾವಿಷ್ಣುವಿನ ಹತ್ತು ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದು, 4 ಅರ್ಧ ಮನುಷ್ಯ ಅರ್ಧ ಸಿಂಹ ಇರುವ ರೂಪ.

ಪುರಾಣಗಳ ಪ್ರಕಾರ ನರಸಿಂಹ ಅವತಾರವನ್ನು ಬಲು ಮುಖ್ಯ ಮತ್ತು ವೈಶಿಷ್ಟ್ಯವಾಗಿ ಪರಿಗಣಿಸಲಾಗುತ್ತದೆ. ಭಕ್ತ ಪ್ರಹ್ಲಾದನ ಮೊರೆಯನ್ನು ಕೇಳಿ ಕಂಬ ಒಡೆದು ಪ್ರತ್ಯಕ್ಷನಾಗಿ ಭಗವಾನ್ ವಿಷ್ಣುವು ನರಸಿಂಹ ಅವತಾರವನ್ನು ತಳೆದು ಹಿರಣ್ಯಕಶ್ಯಪುವನ್ನು ಕೊಂದ ದಿನ.

ಯಾರು ದೇವರಲ್ಲಿ ಅನನ್ಯ ಭಕ್ತಿಯಿಂದ ನಂಬಿಕೆ ಇಟ್ಟು ನಡೆದು ಕೊಳ್ಳುತ್ತಾರೋ ಅಂತಹವರನ್ನು ದೇವರು ಕೈ ಬಿಡದೆ ಕಾಪಾಡುತ್ತಾನೆ.

ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ
ಪರಶುರಾಮ ಕ್ಷೇತ್ರ, ಪುರಾಣ ಪ್ರಸಿದ್ಧವಾದ ಕ್ಷೇತ್ರ, ಇಲ್ಲಿನ ಸಪ್ತ ಕ್ಷೇತ್ರಗಳು ಮೋಕ್ಷದಾಯಕಗಳೆಂದು ಜನಜನಿತವಾಗಿವೆ. ಈ ಏಳು ಕ್ಷೇತ್ರಗಳಲ್ಲಿ ಆರು ಅವಿಭಕ್ತ ಕ್ಷೇತ್ರಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇವೆ. ಅವುಗಳಲ್ಲೊಂದು, ಕುಮಾರಾದ್ರಿಯೆಂದು ಉಲ್ಲೇಖಿತವಾದ, ಸಹ್ಯಾದ್ರಿ ಶ್ರೇಣಿಯ ಉತ್ತುಂಗ ಶಿಖರಗಳಾದ ಶೇಷಪರ್ವತ, ಸಿದ್ದಪರ್ವತ, ಕುಮಾರ ಪರ್ವತಗಳ ತಪ್ಪಲಿನ ತಂಪಿನ ತಾಣದಲ್ಲಿ, ಧಾರಾ ನದಿಯ ತೆಕ್ಕೆಯಲ್ಲಿರುವ ಹಾಗೂ ಸಹಸ್ರಾರು ವರ್ಷಗಳಿಂದ ಸಿದ್ದಪುರುಷರ, ಅವತಾರ ಪುರುಷರ, ತಪೋಧನರ, ಯತಿಮುನಿಗಳ, ತಪೋಭೂಮಿ ಈ ಸುಬ್ರಹ್ಮಣ್ಯ ಕ್ಷೇತ್ರ.

ಕಾದಿಟ್ಟ ಕಾಡುಗಳ ದಟ್ಟ ಹಸುರಿನ, ದೈವಸಾನ್ನಿಧ್ಯವಾದ ಕ್ಷೇತ್ರ ಸುಬ್ರಹ್ಮಣ್ಯ. ಔಷಧೀಯ ಸತ್ವಗಳಿಂದ ಕೂಡಿದ ರೋಗನಿವಾರಕವಾದ ಕುಮಾರಧಾರಾ ನದಿ ಇಲ್ಲಿ ಹರಿಯುತ್ತದೆ.

ಆಚಾರ್ಯ ಮಧ್ವರು ಕರಾರ್ಚಿತ-ನಗುಮೊಗದ ಶ್ರೀ ನರಸಿಂಹನ ಸನ್ನಿಧಿಯಲ್ಲಿ ಇಂದು ನರಸಿಂಹ ಜಯಂತಿ ಆಚರಣೆ ಸುಸಂದರ್ಭದಲ್ಲಿ ಶ್ರೀ ಸ್ವಾಮಿಯಲ್ಲಿ ದೇಶಕ್ಕೆ ಹಾಗೂ ರಾಜ್ಯಕ್ಕೆ ಬಂದೆರೆಗಿರುವ ಕೊರೋನಾ ಎಂಬ ವೈರಸ್ ಅನ್ನು ನಾಶ ಮಾಡಿ ರಕ್ಷಣೆ ನೀಡು ಭಗವಂತ ಎಂದು ಪ್ರಾರ್ಥನೆ ಮಾಡೋಣ! ಸುಬ್ರಹ್ಮಣ್ಯ ಸ್ವಾಮಿಯ, ಲೋಕಹಿತಕ್ಕಾಗಿ ದೇವಸೈನ್ಯಕ್ಕೆ ಮುಖಂಡನಾಗಿ ಶೂರಪದ್ಮ, ತಾರಕಾದಿ ರಾಕ್ಷಸರನ್ನು ಸಂಹರಿಸಿದನು. ಧಾರಾ ನದಿಯಲ್ಲಿ ತನ್ನ ಆಯುಧವನ್ನು ತೊಳೆದಂದಿನಿಂದ ಆ ನದಿಯು ಕುಮಾರಧಾರಾ ಎಂದು ಪ್ರಸಿದ್ದವಾಯಿತೆಂಬ ಪ್ರತೀತಿಯಿದೆ.

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ, ಕುಮಾರಪರ್ವತದಲ್ಲಿ ನೆಲೆಸಿದ್ದ ವಾಸುಕಿ ಹಾಗೂ ಮಹಾ ಶೇಷರೊಡನೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೆಲಸಿ, ಸರ್ಪಗಳೊಡೆಯನಾಗಿ ಪೂಜಿಸಲ್ಪಟ್ಟು, ಚತುರ್ಯುಗಗಳಲ್ಲಿ ಬರುವ ಭಕ್ತಾದಿಗಳಿಗೆ ಸರ್ವಾಭೀಷ್ಟಗಳನ್ನು ಕರುಣಿಸುತ್ತಾನೆ. ದ್ವೈತ ಮತ ಸ್ಥಾಪನಾಚಾರ್ಯರಾದ ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀ ಸುಬ್ರಹ್ಮಣ್ಯ ಮಠ ಇಲ್ಲಿದೆ.

ಯತಿಪರಂಪರೆ
750 ವರ್ಷಗಳ ಯತಿಪರಂಪರೆಯ ಭವ್ಯ ಇತಿಹಾಸವುಳ್ಳ ಈ ಮಠದಲ್ಲಿ, ಆಚಾರ್ಯ ಮಧ್ವರಿಂದ ಸ್ಥಾಪಿಸಲ್ಪಟ್ಟ ಪ್ರತೀಕಗಳು ಇಂದಿಗೂ ಶ್ರೀಮಠದ ಯತಿಗಳಿಂದ ಅರ್ಚಿಸಲ್ಪಡುತ್ತಿವೆ. ಜಗತ್ತಿನ ಪರಮಾಶ್ಚರ್ಯಗಳಲ್ಲೊಂದು ‘ಶ್ರೀ ಸಂಪುಟ’ ಅತ್ಯಂತ ಕುತುಹಲಕಾರಿ ಕರಂಡಕ. ತ್ರಿಕಾಲಜ್ಞಾನಿಗಳಾದ ವಾದಿರಾಜರು ತಮ್ಮ ತೀರ್ಥಪ್ರಬಂಧದಲ್ಲಿ ಈ ಸಂಪುಟವನ್ನು ವಿಶೇಷವಾಗಿ ವರ್ಣಿಸುತ್ತಾರೆ.
ಯತ್ರ ಸಂಪುಟಮಸ್ಫೋಟಂ ಕೃಷ್ಣಸ್ಯ ಸ್ಫೋರಯತ್ಯಹೋ
ಅಗ್ರಾಹ್ಯತ್ವಮದೃಶ್ಯತ್ವಂ ಕಿಂಪುನಸ್ತತ್ರ ಪಂಡಿತಾಃ
ಅಭೇದ್ಯಮತಿಯತ್ನೇನಾಪ್ಯಸ್ಖಲತ್ಕೃಷ್ಣ ವಿಗ್ರಹಂ
ತತ್ಪೂಜಾಭಾಜನಂ ಭಾತಿ ಮಾಧ್ವಂ ಹೃದಿವ ಸಂಪುಟಂ॥
ಶ್ರೀ ಸಂಪುಟವು ತೆರೆಯಲಸಾಧ್ಯವಾದುದು, ನಿರಂತರ ಭಗವಂತನ ಸಾನ್ನಿಧ್ಯವಿರುವಂತಹುದು. ಪ್ರಯತ್ನ ಪಟ್ಟರೂ ಭೇದಿಸಲು ಅಸಾಧ್ಯವಾದುದು. ಅದ್ದರಿಂದ ಆಚಾರ್ಯ ಮಧ್ವರ ಹೃದಯ ಸಂಪುಟದಂತಿದೆ. ನಿತ್ಯ ಪೂಜಿಸಲ್ಪಟ್ಟಿದೆ. ಈ ಸಂಪುಟದ ಮೂಲದ್ರವ್ಯ ಯಾವುದೆಂದೇ ಹೇಳಲಾಗುವುದಿಲ್ಲ. ‘ಎಣ್ಣೆ ಕಂಚಿನ’ ’ಬೊಗಸೆ ಗಾತ್ರದ’ ತುಂಬಾ ಹೊಳಪಿರುವಂತಹುದು. ನೆತ್ತಿಯಲ್ಲೊಂದು ಚೂಚುಕ. ಆದರೆ ತೆರೆಯಲಾಗುವುದಿಲ್ಲ.

ಶಿಷ್ಯ ಪರಂಪರೆಯ ತಿಳುವಳಿಕೆಯಂತೆ ಆಚಾರ್ಯ ಮಧ್ವರು ಈ ಸಂಪುಟದಲ್ಲಿ ಐದು ವ್ಯಾಸಮುಷ್ಟಿಕೆಗಳು (ಬದರಿಕಾಶ್ರಮದಲ್ಲಿ, ಶ್ರೀ ಮಧ್ವಾಚಾರ್ಯರಿಗೆ ಸ್ವತಃ ಶ್ರೀ ವ್ಯಾಸರು 8 ವ್ಯಾಸಮುಷ್ಟಿಗಳನ್ನು ಕೊಟ್ಟಿದ್ದರು).

ಹನ್ನೆರಡು ಕ್ಷೇತ್ರ (144) ಲಕ್ಷ್ಮೀನಾರಾಯಣ ಶಾಲಗ್ರಾಮಗಳು ಮತ್ತು ಒಂದು ಲಕ್ಷ್ಮೀನರಸಿಂಹ ಶಾಲಗ್ರಾಮ ಇವುಗಳನ್ನು ಇಟ್ಟು ಅಭೇದ್ಯವಾಗಿಸಿದರು. ಆಚಾರ್ಯ ಮಧ್ವರು ಕರಾರ್ಚಿತವಾದ ವಿಷ್ಣುಪ್ರತೀಕವಾದ ಸುಂದರವಾದ ನಗುಮೊಗದ ಶ್ರೀ ನರಸಿಂಹನ ವಿಗ್ರಹವನ್ನು ಸ್ವೀಕರಿಸಿದ ಆಚಾರ್ಯರು, ಶ್ರೀ ವೇದವ್ಯಾಸ, ಸಂಪುಟ, ನರಸಿಂಹ, ರುಕ್ಮಿಣೀ ಸತ್ಯಭಾಮಾ ಸಮೇತ ಶ್ರೀ ಪಾಂಡುರಂಗವಿಠಲ ದೇವರ ಪ್ರತೀಕಗಳನ್ನು ಹಾಗೂ ಒಂದು ವ್ಯಾಸಮುಷ್ಟಿಕೆಯನ್ನು, ಶ್ರೀ ಮಠದ ಅರ್ಚಾಮೂರ್ತಿಗಳನ್ನಾಗಿ ಮಾಡಿದರು.

750 ವರ್ಷದ ಭವ್ಯ ಪರಂಪರೆಯ ಶ್ರೀ ಮಠದ ಅರ್ಚಾಮೂರ್ತಿಗಳಾದ ಶ್ರೀ ವ್ಯಾಸ, ವಿಠಲ, ಸಂಪುಟ, ನರಸಿಂಹ ದೇವರಾದಿಯಾಗಿ ಪರಂಪರಾಗತವಾದ ಇತರ ಅರ್ಚಾಮೂರ್ತಿಗಳೂ ಸಹ ಸಂತಾನ ಸೌಭಾಗ್ಯಾದಿ ಇಷ್ಟಾರ್ಥಪ್ರದಾಯಕಗಳಾಗಿವೆ.

ಗೊ ಶಾಲೆ ಪ್ರಾರಂಭ
ಶ್ರೀಶ್ರೀ ವಿದ್ಯಾ ಪ್ರಸನ್ನ ತೀರ್ಥರು ಹಲವಾರು ಹಸುಗಳ ಜೀವಗಳನ್ನು ರಕ್ಷಿಸಲು ಮತ್ತು ಉಳಿಸಲು ಯೋಜನೆಯನ್ನು ಪ್ರಾರಂಭಿಸಿದ್ದಾರೆ.
ಶೃಗುಲು ಕುಕ್ಕೇ ಸುಬ್ರಹ್ಮಣ್ಯ ಮತ್ತು ಕೆಂಚಮ್ಮನಾ ಹೊಸಕೋಟೆ, ಹಾಸನ ಜಿಲ್ಲೆಯಲ್ಲಿ ಗೊ ಶಾಲೆ ಪ್ರಾರಂಭಿಸಿದ್ದಾರೆ. ನೂರಾರು ಹಸುಗಳನ್ನು ಯೋಜನೆಯಲ್ಲಿ ಉಳಿಸಲಾಗಿದೆ.

ಶ್ರೀಶ್ರೀಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅನುಗ್ರಹ
ಶ್ರೀ ಸಂಪುಟ ನರಸಿಂಹ ಸ್ವಾಮಿ ಕುಕ್ಕೆ ಸುಬ್ರಮಣ್ಯ ಮಠದಲ್ಲಿ ನಡೆಯುವ ಶ್ರೀನರಸಿಂಹ ದೇವರ ಜಯಂತಿಯನ್ನು ಈ ಬಾರಿ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ ಎಂದು ಶ್ರೀಶ್ರೀಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮೂಲಕ ವಿಶೇಷ ಅನುಗ್ರಹ ಸಂದೇಶ ನೀಡಿರುವ ಶ್ರೀಗಳು, ರಾಜ್ಯ ಸರ್ಕಾರ ರಾಜ್ಯದಾದ್ಯಂತ ಲೌಕ್ ಡೌನ್’ಗೆ ಆದೇಶಿಸಿದ್ದು, ಸಾರ್ವಜನಿಕರಿಗೆ ಮನೆಯಿಂದ ಹೊರ ಬರದಂತೆ ಸೂಚಿಸಲಾಗಿದೆ. ಅದರಂತೆಯೇ ಎಲ್ಲ ಭಕ್ತ ಸಮೂಹ ಮನೆಯಲ್ಲಿಯೇ ನರಸಿಂಹ ದೇವರ ಆರಾಧನೆಗಳನ್ನು ಮಾಡಬೇಕು ಹಾಗೂ ಶ್ರೀ ಮಠದಲ್ಲಿ ಸಾಂಕೇತಿಕ ಶ್ರೀನರಸಿಂಹ ದೇವರ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಕೊರೋನಾ ಎಂಬ ಪೆಡಂಭೂತ ವಿಶ್ವದೆಲ್ಲೆಡೆ ವೇಗವಾಗಿ ಹರಡುತ್ತಿದ್ದು ಅದರ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರದ ನಿಯಮಗಳನ್ನು ಪಾಲಿಸೋಣ ಎನ್ನುತ್ತಾರೆ ಶ್ರೀಗಳು.

ಆಚಾರ್ಯ ಮಧ್ವರು ಕರಾರ್ಚಿತ-ನಗುಮೊಗದ ಶ್ರೀ ನರಸಿಂಹನ ಸನ್ನಿಧಿಯಲ್ಲಿ ಇಂದು ನರಸಿಂಹ ಜಯಂತಿ ಆಚರಣೆ ಸುಸಂದರ್ಭದಲ್ಲಿ ಶ್ರೀ ಸ್ವಾಮಿಯಲ್ಲಿ ದೇಶ ಬಂದೆರಗಿರುವ ಕೊರೋನಾ ಎಂಬ ವೈರಸ್ ಅನ್ನು ನಾಶ ಮಾಡಿ ರಕ್ಷಣೆ ನೀಡು ಭಗವಂತ ಎಂದು ಪ್ರಾರ್ಥನೆ ಮಾಡೋಣ!

ಲೇಖನಕ್ಕೆ ಪೂರಕ ಮಾಹಿತಿ ನೀಡಿ, ಫೋಟೋಗಳನ್ನು ನೀಡಿದ ಸುಹಾಸ್ ಉಪಾಧ್ಯ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು.


Get in Touch With Us info@kalpa.news Whatsapp: 9481252093

Tags: Ananth KallapuraKukke SubramanyaNarasimha JayanathiSamputa Narasimha DevaruSri Vidya Prasanna Theertha Swamijiಕ್ಷೇತ್ರ ಸುಬ್ರಹ್ಮಣ್ಯನರಸಿಂಹ ಜಯಂತಿಶ್ರೀ ವಿದ್ಯಾ ಪ್ರಸನ್ನ ತೀರ್ಥರು
Share251Tweet123Send
Previous Post

ಅಣು ಮಹತ್ತಿನಲ್ಲೆಲ್ಲ ಸರ್ವವ್ಯಾಪಿ, ಕರುಣೆಯ ದೈವ ಶ್ರೀ ಲಕ್ಷ್ಮೀನರಸಿಂಹ

Next Post

ಬೆಳಗಾವಿ ಡಿಸಿ ಮನೆಯ ಗಾರ್ಡ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಶರಣು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಬೆಳಗಾವಿ ಡಿಸಿ ಮನೆಯ ಗಾರ್ಡ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಶರಣು

ಬೆಳಗಾವಿ ಡಿಸಿ ಮನೆಯ ಗಾರ್ಡ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಶರಣು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಕ್ರಿಕೆಟ್ ಆಡುವಾಗಲೇ ಹೃದಯಾಘಾತದಿಂದ ಕೋಚ್ ಅಕ್ಷಯ್ ನಿಧನ | ಡಿ.ಎಸ್. ಅರುಣ್ ಸಂತಾಪ

ಕ್ರಿಕೆಟ್ ಆಡುವಾಗಲೇ ಹೃದಯಾಘಾತದಿಂದ ಕೋಚ್ ಅಕ್ಷಯ್ ನಿಧನ | ಡಿ.ಎಸ್. ಅರುಣ್ ಸಂತಾಪ

May 25, 2026
ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ | 3ನೇ ಬಾರಿ ತೈಲ ದರ ಏರಿಕೆ, ಶಿವಮೊಗ್ಗದಲ್ಲಿ ಎಷ್ಟಿದೆ ರೇಟ್?

ಮತ್ತೊಮ್ಮೆ ಬೆಲೆ ಏರಿಕೆಯ ಹೊರೆ | ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

May 25, 2026
ಉತ್ತರ ಕನ್ನಡ | ಕಡಲತೀರದಲ್ಲಿ ಭೀಕರ ದುರಂತ | ಮೃತರ ಸಂಖ್ಯೆ 11ಕ್ಕೆ ಏರಿಕೆ | ಹೇಗಾಯ್ತು ಘಟನೆ?

ಉತ್ತರ ಕನ್ನಡ | ಕಡಲತೀರದಲ್ಲಿ ಭೀಕರ ದುರಂತ | ಮೃತರ ಸಂಖ್ಯೆ 11ಕ್ಕೆ ಏರಿಕೆ | ಹೇಗಾಯ್ತು ಘಟನೆ?

May 25, 2026
ಬಹುತೇಕ ಜನರ ಸಮಸ್ಯೆಗೆ ಅವಿಭಕ್ತ ಕುಟುಂಬವೇ ಅಂತಿಮ ಪರಿಹಾರ | ಸತ್ಯಾತ್ಮ ತೀರ್ಥ ಸ್ವಾಮೀಜಿ

ಬಹುತೇಕ ಜನರ ಸಮಸ್ಯೆಗೆ ಅವಿಭಕ್ತ ಕುಟುಂಬವೇ ಅಂತಿಮ ಪರಿಹಾರ | ಸತ್ಯಾತ್ಮ ತೀರ್ಥ ಸ್ವಾಮೀಜಿ

May 24, 2026
A Colorful Memorable Brahmakalshotsava at Padubidri

A Colorful Memorable Brahmakalshotsava at Padubidri

May 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL