ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿಶ್ವಬಾಧಿತ ಕೊರೋನಾ ವೈರಸ್ ಜನ ಸಂಕುಲವನ್ನು ಕಾಡುತ್ತಿದೆ, ಈ ನಿಟ್ಟಿನಲ್ಲಿ ವಿಶ್ವದಲ್ಲಿ ರಕ್ತದಾನದ ಬಗ್ಗೆ ಅರಿವು. ರಕ್ತದಾನ, ಹಾಗೂ ಅರಿತು ಹೆಚ್ಚು ರಕ್ತದಾನ ಮಾಡಿ ನಾಗರಿಕ ಬದುಕುಗಳ ಜೀವ ಸಂರಕ್ಷಣೆಗೆ ಮುಂದಾಗಿರುವವರನ್ನು ಗುರುತಿಸಿ ಅವರನ್ನು ಜೆಸಿಐ-ಭಾರತದಿಂದ ಗೌರವ ಸನ್ಮಾನವನ್ನು ಸಲ್ಲಿಸಬೇಕು ಎನ್ನುವ ಕರೆಗೆ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಬುಧವಾರದಂದು ನೂರು ಭಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ಅವರನ್ನು ಸನ್ಮಾಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಕ್ತದಾನಿ ಧರಣೇಂದ್ರ ದಿನಕರ್, ರಕ್ತಕ್ಕೆ ರಕ್ತವೇ ಬದಲಿಯಾಗಬಲ್ಲುದೇ ಹೊರತು ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯವೇ ಇಲ್ಲ. ಹೀಗಾಗಿ ರಕ್ತದಾನ ಈ ಕೊರೋನಾದಂತಹ ಭೀಕರತೆಯಲ್ಲಿ ಬಹಳ ಅಗತ್ಯವಾಗಿದೆ ಎಂದರು.
ಮನುಷ್ಯ ಜೀವ ವೈರಸ್’ನಿಂದಾಗಿ ಆತಂಕದಲ್ಲಿದೆ, ತುರ್ತು ರಕ್ತದಾನಕ್ಕೆ ಜನರು ಇನ್ನೂ ಮುಕ್ತವಾಗಿ ಬರಬೇಕಾಗಿದೆ. ರಕ್ತದಾನ ಮಾಡಿದ ಪ್ರತಿ ದೇಹವು ಹೊಸ ರಕ್ತ ಹೊಂದುತ್ತದೆ ಮತ್ತು ರಕ್ತದ ಕ್ಯಾನ್ಸರ್’ನಂತಹ ರೋಗಕ್ಕೆ ತುತ್ತಾಗುವ ಅವಕಾಶ ಕಡಿಮೆಯಾಗುತ್ತದೆ, ಹೃದಯಘಾತದಿಂದಲೂ ಬಹುತೇಕ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.
ಘಟಕದ ಅಧ್ಯಕ್ಷರಾದ ಜೆಸಿ ಗಾರಾ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಜೆಸಿ ಸ್ಮಿತಾ ಮೋಹನ್, ಉಪಾಧ್ಯಕ್ಷರಾದ ಜೆಸಿ ಮೋಹನ್ ಕಲ್ಪತರು, ಜೆಸಿ ಶೋಭಾ ಸತೀಶ್ ಹಾಗೂ ಸಹ ಕಾರ್ಯದರ್ಶಿಯಾದ ಜೆಸಿ ಪರಮೇಶ್ವರ್ ನಿರ್ದೇಶಕರಾದ ಜೆಸಿ, ಸುಧಾ ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post