ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇಲ್ಲಿನ ಗೆಜ್ಜೇನಹಳ್ಳಿಯ ಕ್ರಷರ್’ವೊಂದರಲ್ಲಿ ಅವಘಡ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗೆಜ್ಜೇನಹಳ್ಳಿಯ ಹಟ್ಟಿ ಲಕ್ಷ್ಮಮ್ಮ ಕ್ರಶರ್ ಇದು ಎಸ್ಎಸ್ಎಸ್ ಎಂದೇ ಕರೆಸಿಕೊಳ್ಳುವ ಕ್ರಶರ್ನಲ್ಲಿ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
ಬೆಡ್ ಮೇಲೆ ಸಂಗ್ರಹವಾಗಿದ್ದ ಕಲ್ಲು ಹಾಗೂ ಪಕ್ಕದಲ್ಲೇ ಲೋಡಿನಲ್ಲಿದ್ದ ಟ್ರಾಲಿಯ ಕಲ್ಲು ಸಹ ಇವರ ಮೇಲೆ ಬಿದ್ದ ಘಟನೆ ನಿನ್ನೆ ಮಧ್ಯಾಹ್ನ 3ರ ಹೊತ್ತಿಗೆ ನಡೆದಿದ್ದು, ಇಂದು ಘಟನೆ ಬೆಳಕಿಗೆ ಬಂದಿದೆ.
ಈ ಕ್ರಶರ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಿಹಾರ ಮೂಲದ ಜಿಕೋಲಾಂಗ್ (25) ಹಾಗೂ ಟ್ರೈನಿಕ್ಟೋಜ್ (25) ಅವರು ಈ ದುರಂತದಲ್ಲಿ ಸಾವು ಕಂಡ ದುರ್ದೈವಿಗಳು. ಜಿಕೋಲಾಂಗ್ ಸ್ಥಳದಲ್ಲೇ ಸಾವು ಕಂಡಿದ್ದರೆ, ಟೋಜ್ ಇಂದು ಬೆಳಗ್ಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ.
ದೂರದ ಊರಿನಿಂದ ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದು ದುಡಿಯುವ ಜನರಿಗೆ ಇಲ್ಲಿ ಯಾವುದೆ ಭದ್ರತೆಗಳಿಲ್ಲ. ಸಾವು ಕಂಡ ಘಟನೆ ಇದಾಗಿದ್ದರೆ ಸಾಕಷ್ಟು ಗಾಯ, ನೋವು ಮರೆಯಲಾಗದ ದುರಂತದ ಅವಘಡಗಳು ಕ್ರಶರ್ಗಲ್ಲಿ ಹಾಗೂ ಕ್ವಾರೆಗಳಲ್ಲಿ ನಡೆಯುತ್ತಲೇ ಇವೆ ಎಂದು ಮೂಲಗಳು ಹೇಳಿವೆ. ಇಂತಹ ಅವಘಡಗಳು ಅದೇಷ್ಟೋ ಭಾರಿ ದೂರು ದಾಖಲಾಗದೇ ಒಳಗೊಳಗೆ ಮುಚ್ಚಿಹೋದ ನಿದರ್ಶನಗಳಿವೆ.
ಕಳೆದ ನಾಲ್ಕು ತಿಂಗಳ ಹಿಂದೆ ಅಬ್ಬಲಗೆರೆಯ ಕ್ವಾರೆಯೊಂದಕ್ಕೆ ಬೆಲೆ ಬಾಳುವ ಹೊಸ ಇಟಾಚಿಯೊಂದು ಬಿದ್ದಿತ್ತು. ಅದರೊಂದಿಗೆ ಅನ್ಯ ರಾಜ್ಯದ ಚಾಲಕ ಸಹ ಬಿದ್ದಿದ್ದ ಆತನ ದೇಹವೂ ಸಿಗಲಿಲ್ಲ. ಆತನೂ ಪತ್ತೆಯಾಗಲಿಲ್ಲ ಎಂದು ಹೇಳಲಾಗುತ್ತಿದೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ ವಿನೋಬನಗರ ಸಬ್ಇನ್ಸ್ಪೆಕ್ಟರ್ ಉಮೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕನನ್ನು ಉಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಮೃತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಶವ ಪರೀಕ್ಷೆಗೆ ವ್ಯವಸ್ಥೆ ಪಡಿಸಿದ್ದಾರೆ. ಅಂತೆಯೇ ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Get In Touch With Us info@kalpa.news Whatsapp: 9481252093
Discussion about this post