ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿವಿಧ ಅಪರಾಧಗಳಿಂದ ಜೈಲಿನಲ್ಲಿರುವ ಕೈದಿಗಳಲ್ಲೂ ಸಹ ಕಲಿಯುವ ಆಸಕ್ತಿಯಿರುವುದು ಸಂತಸದ ವಿಚಾರ ಎಂದು ಜಿಪಂ ಸಿಇಒ ವೈಶಾಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಕಾರಾಗೃಹದಲ್ಲಿ 54 ನೇಯ ಅಂತಾರಾಷ್ಟ್ರೀಯ ಸಾಕ್ಷಾರತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕಾರಾಗೃಹದಲ್ಲಿ ಸಾಕ್ಷಾರತಾ ದಿನಾಚರಣೆ ನಡೆಸುತ್ತಿರುವುದು ಸಂತೋಷದ ವಿಚಾರವಾಗಿದೆ. ಇಂದು ಸಾಕ್ಷರತೆಗಾಗಿ ಇಂದು 112 ಕ್ಕೂ ಹೆಚ್ಚು ಕೈದಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿದರೆ, ನಮ್ಮಲ್ಲಿ ಇನ್ನೂ ಅನಕ್ಷರಸ್ಥರು ಎಷ್ಟು ಜನ ಇದ್ದಾರೆ ಎಂಬುದು ತಿಳಿಯುತ್ತಿದೆ. ಸಾಕ್ಷರತೆಗೆ ಸೇರಿದವರಿಗೆ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಕಳೆದ ಭಾರಿ 160 ಜನ ಸಾಕ್ಷಾರತಾ ಆಂದೋಲನದಲ್ಲಿ ಸಾಕ್ಷರತರಾಗಿದ್ದಾರೆ ಎಂದು ತಿಳಿದು ಸಂತೋಷವಾಯಿತು ಎಂದರು.
ವಾರ ಭವಿಷ್ಯ ನಿಖರ, ವೈಜ್ಞಾನಿಕ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 13.09.2020 ರಿಂದ 19.09.2020
ಕಳೆದ ವರ್ಷ ಸಾಕ್ಷರರಾದವರಿಗೆ ಕಲಿಕಾ ಪತ್ರವನ್ನು ವಿತರಿಸಲಾಯಿತು.
ಸಾಕ್ಷರತೆಗೆ ಸೇರಿಕೊಂಡವರಿಗೆ ಜೈಲಿನಲ್ಲಿ ಕಲಿಕೆಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮಹಿಳಾ ಕೇಂದ್ರ ಕಾರಾಗೃಹದ ಅಧಿಕ್ಷಕಿ ಅನಿತಾ ಹಿರೇಮನಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಅನ್ಸರ್ ಆಲಿ ಬೇಗ್ ಹಾಜರಿದ್ದರು.
Get In Touch With Us info@kalpa.news Whatsapp: 9481252093
Discussion about this post