ತಿರುವನಂತಪುರಂ: ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಶಬರಿಮಲೆ ದೇವಾಲಯದ ಬಾಗಿಲುಗಳು ಇಂದು ಸಂಜೆ 5 ಗಂಟೆಗೆ ತೆರೆಯಲಾಗಿದ್ದು, ಯಾವುದೇ ಮಹಿಳೆಯರು ದೇವಾಲಯದಲ್ಲಿ ಪ್ರವೇಶ ಪಡೆಯಲಿಲ್ಲ.
ಎಲ್ಲ ವಯೋಮಾನದವರಿಗೆ ಶಬರಿಮಲೆಯಲ್ಲಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದರೂ ಸಹ, ಸಂಪ್ರದಾಯವನ್ನು ಮುರಿದು ಪ್ರವೇಶಕ್ಕೆ ಅವಕಾಶವನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಬೃಹತ್ ಸಂಖ್ಯೆಯಲ್ಲಿ ದೇವಾಲಯದ ಬಳಿ ನೆರೆದಿದ್ದಾರೆ.
#WATCH: Prayers being offered at #SabarimalaTemple after its portals opened at 5 pm; devotees can offer prayers till 10.30 pm today. #Kerala pic.twitter.com/rBuneRDatN
— ANI (@ANI) October 17, 2018
ದೇವಾಲಯಕ್ಕೆ ಪ್ರವೇಶವಾಗುವ ಎಲ್ಲ ಗೇಟ್ಗಳಲ್ಲಿಯೂ ಪ್ರತಿಭಟನಾ ನಿರತ ಭಕ್ತರು ನೆರೆದಿದ್ದು, ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಪ್ರವೇಶ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ, ಸದ್ಯದವರೆಗೂ ಯಾವುದೇ ಮಹಿಳೆಯರು ದೇವಾಲಯಕ್ಕೆ ಪ್ರವೇಶ ಮಾಡಿಲ್ಲ ಎಂದು ವರದಿಯಾಗಿದೆ.
ದೇವಾಲಯದ ಬಾಗಿಲನ್ನು ಇಂದು ಸಂಜೆ 5 ಗಂಟೆಗೆ ತೆರೆಯಲಾಗಿದ್ದು, ಇಂದು ರಾತ್ರಿ 10.30ಕ್ಕೆ ಮುಚ್ಚಲಾಗುತ್ತದೆ. ದೇವಾಲಯದ ಹೆಬ್ಬಾಗಿಲು ಭಕ್ತಾದಿಗಳಿಗಾಗಿ ಅಕ್ಟೋಬರ್ 2ರವರೆಗೂ ತೆರೆಯಲಿದ್ದು, ಮಲೆಯಾಳಂ ಸಂಪ್ರದಾಯದ ತುಲಾಂ ಮಾಸದ ಐದು ದಿನಗಳ ವಿಶೇಷ ಪೂಜೆ ನಡೆಯಲಿದೆ.
ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿ ತೀರ್ಪು ನೀಡಿದ್ದು, ತೀರ್ಪು ಪ್ರಕಟವಾದ ನಂತರ ಇಂದು ಮೊದಲ ಬಾರಿಗೆ ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ತೆರೆಯಲಾಗಿದೆ. ಇದೇ ಕಾರಣಕ್ಕೆ ಮಹಿಳೆಯರ ಪ್ರವೇಶಕ್ಕೆ ಅಯ್ಯಪ್ಪ ಸ್ವಾಮಿ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
Discussion about this post