No Result
View All Result
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ
English Articles

Hennur Sparsh Hospital Completes One Year | A Reflection of Multispecialty Care

by ಕಲ್ಪ ನ್ಯೂಸ್
May 25, 2026
0

Kalpa Media House  |  Bengaluru  | SPARSH Hospital, Hennur Road has completed one year of operations, with its first-year clinical...

Read moreDetails
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ

Duniya Vijay, Rachita Ram & Raj B. Shetty’s Landlord Premieres This Saturday on Zee Kannada

May 22, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
  • Advertise With Us
  • Grievances
  • About Us
  • Contact Us
Thursday, May 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕುಕ್ಕೆ ದೇಗುಲವನ್ನೂ ಮೂಲ ಮಠಕ್ಕೆ ಹಸ್ತಾಂತರಿಸುವ ಹೋರಾಟವಾಗಬೇಕಿದೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 17, 2018
in Special Articles
0
ಕುಕ್ಕೆ ದೇಗುಲವನ್ನೂ ಮೂಲ ಮಠಕ್ಕೆ ಹಸ್ತಾಂತರಿಸುವ ಹೋರಾಟವಾಗಬೇಕಿದೆ
Share on FacebookShare on TwitterShare on WhatsApp
ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪವಾಸ ನಿರಶನ ಅಂತ್ಯ

– ಇದು ಖುಷಿಯ ವಿಚಾರವೋ ಅಥವಾ ನೋವಿನ ವಿಚಾರವೋ. ನಿರಶನದ ಅಂತ್ಯ ಖುಷಿಯ ವಿಚಾರವೇ. ಆದರೆ ಸ್ವಾಮೀಜಿಯವರನ್ನು ಬೇರೆ ದಾರಿಯಿಲ್ಲದೆ ಉಪವಾಸ ಕೈಗೊಳ್ಳುವಂತೆ ಪರಿಸ್ಥಿತಿ ನಿರ್ಮಾಣ ಮಾಡಿದ ವ್ಯವಸ್ಥೆ, ಆಗುತ್ತಿರುವ ಅನ್ಯಾಯಗಳಿಗೆ ಮೂಕ ಪ್ರೇಕ್ಷಕರಾಗಿ ತಿಳಿದೋ ತಿಳಿಯದೆಯೋ ಯಾವ ಬದಲಾವಣೆಯನ್ನೂ ತರಲು ಪ್ರಯತ್ನಿಸದೇ/ಸಾಧ್ಯವಾಗದೇ ನಾವೆಲ್ಲ ಅದೇ ವ್ಯವಸ್ಥೆಯ ಭಾಗವಾಗಿರುವುದು ನೋವಿನ ಸಂಗತಿ.

ಕುಕ್ಕೆಶ್ರೀ ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಯತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಉಪವಾಸ ನಿರಶನವನ್ನು ಸೋಮವಾರ ಅಂತಿಮಗೊಳಿಸಿದ್ದಾರೆ.

ನಿರಶನ ನಿಲ್ಲಿಸುವಂತೆ ಪೇಜಾವರ ಶ್ರೀ, ಸುತ್ತೂರು ಶ್ರೀಗಳು, ಮುಖ್ಯಮಂತ್ರಿಗಳು, ರಾಜ್ಯ ಸರಕಾರದ ವಿವಿಧ ಮಂತ್ರಿಗಳು, ಅಷ್ಠಮಠ ಹಾಗೂ ನಾಡಿನ ವಿವಿಧ ಯತಿಗಳು ಮನವಿ ಮಾಡಿಕೊಂಡ ಮೇರೆಗೆ ಶ್ರೀ ಗಳು ಈ ತೀರ್ಮಾನ ಕೈಗೊಂಡಿದ್ದಾರೆ.

ಮಠದ ವಿರುದ್ದ ಕೆಲವರು ಆಪಾದನೆಗಳನ್ನು ಹೊರಿಸಿದ್ದರಿಂದ ಮನನೊಂದ ಶ್ರೀ ಗಳು ಕಳೆ ಮೂರು ದಿನಗಳಿಂದ ಉಪವಾಸ ಕೈಗೊಂಡಿದ್ದರು.
ಸಮಸ್ಯೆ ತಿಳಿಗೊಳಿಸುವ ಕುರಿತು ಪೇಜಾವರ ಶ್ರೀ , ಮುಖ್ಯಮಂತ್ರಿ ಗಳು ಭರವಸೆ ನೀಡಿದ ಮೇರೆಗೆ ಶ್ರೀ ಗಳು 60 ಘಂಟೆಗಳ ಉಪವಾಸದ ಬಳಿಕ ನಿರಶನ ನಿಲ್ಲಿಸಲು ನಿರ್ಧರಿಸಿದರು.

ಕುಕ್ಕೆ ಶ್ರೀ ಮಠಕ್ಕೆ ಆಗುತ್ತಿರುವ ವಿವಿಧ ಬಗೆಯ ಅನ್ಯಾಯ, ಅಪಚಾರ ಹಾಗೂ ಅಪಪ್ರಚಾರದ ವಿರುದ್ಧ ನಾಡಿನ ಭಗವದ್ ಭಕ್ತರು, ಧರ್ಮವಂತರು ತಮ್ಮ ವ್ಯಾಪ್ತಿಯಲ್ಲಿ ಇದರ ಬಗೆಗೆ ವಿವಿಧ ಸ್ತರಗಳಲ್ಲಿ ಬಹುವಿಧವಾಗಿ ಧ್ವನಿಯೆತ್ತಬೇಕಿದೆ. ನಾವೆಲ್ಲ ಶ್ರೀ ಮಠಕ್ಕೆ ಹಾಗೂ ಸ್ವಾಮೀಜಿಗಳಿಗೆ ಆಗಿರುವ ಮತ್ತು ಆಗುತ್ತಿರುವ ಅನ್ಯಾಯಕ್ಕೆ ಧರ್ಮನಿಷ್ಠ ನ್ಯಾಯ ಒದಗಿಸಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಇಂತಹ ದುಷ್ಕೃತ್ಯಗಳು ನಡೆಯದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.

ಎಲ್ಲೆಲ್ಲಿ ಮಠ -ಮಂದಿರ, ಸಾಧು – ಸಂತರ ಅಸ್ಮಿತೆ, ಗೌರವಗಳಿಗೆ ಧಕ್ಕೆ ಉಂಟಾಗುತ್ತದೆಯೋ ಆಗೆಲ್ಲ ಅದು ದೇಶ, ಸಮಾಜ, ಜನರ ಅವನತಿಗೆ ಕಾರಣವಾಗಿದೆ. ಅದು ಈಗಲೂ ಮುಂದುವರೆಯುವುದು ಬೇಡ. ಜಾಗೃತ ಮನಸ್ಸುಗಳ ಸಮಾಜ ಇವುಗಳಿಂದ ಮುಂಬರುವ ಆಪತ್ತನ್ನು ಗ್ರಹಿಸಿ ಅವುಗಳ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳುವುದು ಅಗತ್ಯ. ಅದರಿಂದ ತಪ್ಪು ಮರುಕಳಿಸದಂತೆ ಎಚ್ಚರಿಕೆ ಹಾಗೂ ಉತ್ತಮ ಭವಿಷ್ಯಕ್ಕೆ ಮುನ್ನುಡಿ ಎರಡನ್ನೂ ಬರೆದಂತಾಗುತ್ತದೆ.
ಸರ್ಪ ಸಂಸ್ಕಾರವನ್ನು ದೇವಸ್ಥಾನದ ಜೊತೆಗೇ ಮಠದಲ್ಲಿಯೂ ನಡೆಸಿದರೆ ದೇವರಿಗೆ ಆಗುವ ಲೋಪ ದೋಷಗಳೇನು? ಮೂಲ ಮಠ ಸರ್ಪಸಂಸ್ಕಾರ ನಡೆಸಿದರೆ ಸರಕಾರಕ್ಕೆ, ಸ್ಥಳೀಯ ಧಾರ್ಮಿಕ ದತ್ತಿ ಸಮಿತಿಗೆ ಆಗುವ ಸಮಸ್ಯೆ ಏನು?

ಸಮಿತಿಯಿಂದ ಮಠಕ್ಕೆ ಅಪಪ್ರಚಾರ, ಅನ್ಯಾಯ ಒಂದೆಡೆಯಾದರೆ, ಗೋಶಾಲೆಗೆ ನೀರನ್ನೂ ಕೊಡದಷ್ಟೂ ಕ್ರೌರ್ಯ ಮೆರೆದದ್ದು ಅಕ್ಷಮ್ಯ. ಇದರ ಗಂಭೀರತೆ, ತೀವ್ರತೆಯ ಅರಿವು ಸಮಾಜಕ್ಕೂ, ಸರಕಾರಕ್ಕೂ ಆಗಿದೆಯೋ ಇಲ್ಲವೋ? ಇನ್ನು ಮುಂದೆ ಹೀಗೆ ಆಗದ ಹಾಗೆ ನೋಡಿಕೊಳ್ಳುವುದು ತುರ್ತು ಅನಿವಾರ್ಯ.
ಅಂದ ಹಾಗೆ ದೇವಸ್ಥಾನದ ಸಮಿತಿಯಲ್ಲಿ ಮಠದ ಪ್ರತಿನಿಧಿಯೊಬ್ಬರು ಏಕಿಲ್ಲ? ಇದ್ದರೆ ಸ್ಥಳೀಯ ಮಟ್ಟದಲ್ಲೇ ಆಡಳಿತ ಮಠದ ಪರವಾಗಿ ನ್ಯಾಯಸಮ್ಮತವಾಗಿ ನಿಲ್ಲಲು, ಧ್ವನಿ ಎತ್ತಲು ಸಹಕಾರಿ. ಒಂದು ವೇಳೆ ಮಠದ ಪ್ರತಿನಿಧಿ ಸಮಿತಿಯಲ್ಲಿ ಇಲ್ಲದಿದ್ದರೆ ಅದಕ್ಕೆ ಅವಕಾಶ ಏಕಿಲ್ಲ? ಸರಕಾರ – ಮುಖ್ಯಮಂತ್ರಿಯವರು ಇದಕ್ಕೆ ಅನುಗುಣವಾದ ಕಾನೂನು ಏಕೆ ರೂಪಿಸಬಾರದು ಅಥವಾ ಇರುವ ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರಬಾರದೇಕೆ?

ಈ ಪ್ರಸ್ತಾವವನ್ನು ವಿದ್ಯಾಪ್ರಸನ್ನ ಶ್ರೀಗಳು, ಪೂಜ್ಯ ಪೇಜಾವರ ಯತಿಗಳೂ ಸೇರಿದಂತೆ ರಾಜ್ಯದ ಇತರ ಯತಿಗಳು, ಶಾಸಕರು ಪ್ರಯತ್ನಿಸಿದರೆ ಇದು ಸಾಧ್ಯ. ಮಠಕ್ಕೆ ಅಪಚಾರ ಆಗದಿರುವಂತೆ ಮಾಡಲು ಇದೊಂದು ಮೊದಲ ಹೆಜ್ಜೆ ಎಂದು ನನಗೆ ತೋರುತ್ತದೆ.

ಮುಂದಿನ ದಿನಗಳಲ್ಲಿ ಸರಕಾರದ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಮುಕ್ತಗೊಳಿಸಿ ಶ್ರೀಮಠದ ಆಡಳಿತಕ್ಕೆ ಹಸ್ತಾಂತರಿಸುವ ವ್ಯವಸ್ಥೆಯನ್ನು ರೂಪಿಸುವತ್ತ ಹೊಸ ಹೋರಾಟ ರೂಪುಗೊಳ್ಳಬೇಕಿದೆ. ಇದಕ್ಕಾಗಿ ನಾವೆಲ್ಲ ಒಗ್ಗೂಡಬೇಕಿದೆ. ಸ್ವಾಮೀಜಿ ಹಾಗೂ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಇದಕ್ಕೆ ಶೀಘ್ರವೇ ಸಂಕಲ್ಪ ಸಿದ್ಧಿಸಬೇಕು.

ಎರಡು ಪ್ರತ್ಯೇಕ ಪ್ರಕರಣಗಳ ಆಧಾರದಲ್ಲಿ ಸಿಕ್ಕ ಅವಕಾಶದಿಂದ ಶಬರಿಮಲೆ ಹಾಗೂ ತಿರುಪತಿ ಎರಡೂ ದೇವಾಲಯಗಳನ್ನು ಸರಕಾರಿ ಸ್ವಾಮ್ಯದಿಂದ ದೂರವಿಡಲು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಲಾಗಿದೆ. ಇನ್ನು ಕೆಲವೇ ಸಮಯದಲ್ಲಿ ಬರಬಹುದಾದ ತೀರ್ಪಿನ ಆಧಾರದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ದೇಗುಲವನ್ನೂ ಸರಕಾರದ ಸುಪರ್ದಿಯಿಂದ ಮೂಲ ಮಠಕ್ಕೆ ಹಸ್ತಾಂತರಿಸುವ ಯೋಚನೆ, ಯೋಜನೆ, ಕಾನೂನಾತ್ಮಕ ಪ್ರಕ್ರಿಯೆ ಮತ್ತು ಸಾಮೂಹಿಕ ಹೋರಾಟಕ್ಕೆ ಅಣಿಯಾಗಬೇಕಾದ ಅನಿವಾರ್ಯತೆಯಿದೆ. ಯೋಚಿಸಿ..

Wake up call: ಚರೈವತಿ ಚರೈವತಿ..
“Means “Keep Moving Keep Moving..”“Being a part of the universe our true nature is to Keep Moving to serve the universe. If we cannot do much, we can at least follow those who are moving selflessly to serve the universe. Our universe could be the planet earth, our country or our neighbourhood or our seers, Mutts, temples, religious sanctums.

ಜೈ ಹಿಂದ್

ಲೇಖನ: ಶ್ರೇಯಾಂಕ ಎಸ್ ರಾನಡೆ

Tags: Kukke Shri Subrahmanya templeShreyanka S Ranadeಪೇಜಾವರ ಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಶ್ರೇಯಾಂಕ ಎಸ್ ರಾನಡೆಸಂಪುಟ ಶ್ರೀ ನರಸಿಂಹ ಸ್ವಾಮಿ ಮಠ
Share197Tweet123Send
Previous Post

ಟಿಪ್ಪು ಜಯಂತಿ ಆಚರಿಸಿದರೆ ಸಮ್ಮಿಶ್ರ ಸರ್ಕಾರ ಪತನ: ಈಶ್ವರಪ್ಪ ಭವಿಷ್ಯ

Next Post

ತೆರೆಯಿತು ಶಬರಿಮಲೆ ಬಾಗಿಲು, ಮಹಿಳೆಯರಿಗೆ ದೊರೆಯದ ಪ್ರವೇಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ತೆರೆಯಿತು ಶಬರಿಮಲೆ ಬಾಗಿಲು, ಮಹಿಳೆಯರಿಗೆ ದೊರೆಯದ ಪ್ರವೇಶ

ತೆರೆಯಿತು ಶಬರಿಮಲೆ ಬಾಗಿಲು, ಮಹಿಳೆಯರಿಗೆ ದೊರೆಯದ ಪ್ರವೇಶ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
“ನೂತನ ಗಣಿತದ ಸಂಪನ್ಮೂಲ ಪುಸ್ತಕ” ಲೋಕಾರ್ಪಣೆ | ವಿದ್ಯಾರ್ಥಿ ಸ್ನೇಹಿ ಗಣಿತ ಕಲಿಕೆಗೆ ನೂತನ ಪ್ರಯತ್ನ

“ನೂತನ ಗಣಿತದ ಸಂಪನ್ಮೂಲ ಪುಸ್ತಕ” ಲೋಕಾರ್ಪಣೆ | ವಿದ್ಯಾರ್ಥಿ ಸ್ನೇಹಿ ಗಣಿತ ಕಲಿಕೆಗೆ ನೂತನ ಪ್ರಯತ್ನ

May 27, 2026
ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆದರೂ ಅದು ತಾತ್ಕಾಲಿಕ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭವಿಷ್ಯ

ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆದರೂ ಅದು ತಾತ್ಕಾಲಿಕ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭವಿಷ್ಯ

May 27, 2026
ಸಂಸ್ಕೃತಿ ಚಿಂತಕ ಸುರೇಶ್ ಋಗ್ವೇದಿ ಅವರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸಂಸ್ಕೃತಿ ಚಿಂತಕ ಸುರೇಶ್ ಋಗ್ವೇದಿ ಅವರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

May 27, 2026
ಹಿಂದೂ ವಿವಾಹ ಪದ್ಧತಿ ಪಾಲಿಸದ ಮದುವೆಯು ಅಮಾನ್ಯ: ಸುಪ್ರೀಂ ಕೋರ್ಟ್

SIR ಪ್ರಕ್ರಿಯೆ ವಿರುದ್ಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ನ್ಯಾಯಪೀಠದ ಸ್ಪಷ್ಟನೆಯೇನು?

May 27, 2026
ಯಶಸ್ಸಿನ ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ: ನೂತನ ನ್ಯಾಯಾಧೀಶೆ ಅನನ್ಯ ಶಾಸ್ತ್ರೀ

ಯಶಸ್ಸಿನ ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ: ನೂತನ ನ್ಯಾಯಾಧೀಶೆ ಅನನ್ಯ ಶಾಸ್ತ್ರೀ

May 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL