ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಸ್ವಚ್ಛ ಸುಂದರ ಪರಿಸರದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಸ್ವಚ್ಛತಾ ಚಟುವಟಿಕೆಯನ್ನು ಕೈಗೊಳ್ಳುವ ಗುರಿಯನ್ನು ಹೊಂದಿದೆ ಎಂದು ಕಿರ್ಲೋಸ್ಕರ್ ಕಾರ್ಖಾನೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪಿ ನಾರಾಯಣ ತಿಳಿಸಿದರು.
ಕಿರ್ಲೋಸ್ಕರ್ ಉದ್ಯೋಗಿ ಸ್ವಯಂಸೇವಕರು ಮತ್ತು ಆಫೀಸರ್ ಲೇಡೀಸ್ ಕ್ಲಬ್ ಸದಸ್ಯರು ಹೊಸಪೇಟೆ ರಾಜೀವ್ ನಗರ ಉದ್ಯಾನವನವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಸಾರ್ವಜನಿಕರ ಸಹಕಾರದಿಂದ ಕಾರ್ಯಕ್ರಮ ಆಯೋಜಿಸಿ ಸಿ ಎಸ್ ಆರ್ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛ ಭಾರತ ಅಭಿಯಾನದ ರಾಷ್ಟ್ರದ ಧ್ಯೇಯಕ್ಕೆ ಕೊಡುಗೆ ನೀಡುವ ಸಕ್ರಿಯ ಅನುಷ್ಠಾನವನ್ನು ಹೆಚ್ಚಿಸುವ ದೃಷ್ಟಿಯಿಂದ, ಕಿರ್ಲೋಸ್ಕರ್ ಸಂಘಟಿತ ಪ್ರಯತ್ನಗಳು ಸುತ್ತಮುತ್ತಲಿನ ಸಮುದಾಯದಲ್ಲಿ ಸ್ವಚ್ಛತೆಯ ಮನೋಭಾವವನ್ನು ಹೆಚ್ಚಿಸುತ್ತದೆ ಮತ್ತು ಅಂತಹ ಉಪಕ್ರಮಗಳಿಂದ ಅತ್ಯುತ್ತಮವಾದ ಅಭಿವೃದ್ಧಿ ಪ್ರಯೋಜನಗಳನ್ನು ಒದಗಿಸುತ್ತದೆ ಎಂದರು.
ಸ್ವಚ್ಛತೆಯನ್ನು ಮನಃಪೂರ್ವಕವಾಗಿ ನೆಡೆಸಿ ಕೆಲಸ ಮಾಡಲು ನಾವು ಬಯಸುತ್ತೇವೆ. ಸ್ವಚ್ಛವಾದ ಸಾರ್ವಜನಿಕ ಸ್ಥಳಗಳು ಮತ್ತು ಸುಂದರವಾದ ನಗರವು ಎಲ್ಲರಿಗೂ ಅಪೇಕ್ಷಣೀಯವಾಗಿದೆ ಮತ್ತು ನಾವು ಅದನ್ನು ನಮ್ಮದೇ ಆದ ರೀತಿಯಲ್ಲಿ ಸಾಧಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಸುತ್ತಲಿನ ಸಮುದಾಯದ ಮೇಲೆ ಕೇಂದ್ರೀಕರಿಸುತ್ತೇವೆ. ಉದ್ಯಾನವನದ ಸೌಂದರ್ಯವನ್ನು ಅದರ ನಿಜವಾದ ಅರ್ಥದಲ್ಲಿ ಇನ್ನಷ್ಟು ಹೆಚ್ಚಿಸಲು ಬಯಸುತ್ತೇವೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಆರ್. ವಿ. ಗುಮಾಸ್ತೆಯವರ ಅದೇಶದಂತೆ ಉತ್ತಮ ಪರಿಸರವನ್ನು ಸೃಷ್ಟಿಸುವ ಪ್ರಯತ್ನದಲ್ಲಿ, ಕಿರ್ಲೋಸ್ಕರ್ ತನ್ನ ಚಟುವಟಿಕೆಯನ್ನು ಸಿ ಎಸ್ ಆರ್ ಅಡಿಯಲ್ಲಿ ನಡೆಸಲು ಮುಂದಾಗಿದೆ, ಪರಿಸರ ಪ್ರೇಮಿಗಳಿಗೆ ಸಂತಸದಿಂದ ದಿನಂಪ್ರತಿ ಸುಂದರ ಪರಿಸರದಲ್ಲಿ ಜೀವನ ಸಾಗಿಸಲು ಅನುಕೂಲ ಕಲ್ಪಿಸಲು ಮುಂದಾಗಿ ಹೆಸರಾಂತ ರಾಜೀವ್ ನಗರ ಉದ್ಯಾನವನವನ್ನು ಅಲಂಕರಿಸಲು ನೌಕರರು ಸ್ವಯಂಪ್ರೇರಿತರಾಗಿ ಮುಂದಾದರು.
ಕೆಎಫ್ಐಎಲ್ ಆಫೀಸರ್ ಮತ್ತು ಆಫೀಸರ್ಸ್ ಲೇಡೀಸ್ ಕ್ಲಬ್ ಸದಸ್ಯರು ಉದ್ಯೋಗಿಗಳು ವಿಜಯನಗರ ಹೊಸಪೇಟೆಯ ರಾಜೀವ್ ನಗರ ಉದ್ಯಾನವನವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ನಾಗರೀಕರು ಜಂಟಿಯಾಗಿ ಭಾಗವಹಿಸಿದರು. ಸಿಎಸ್ಅರ್ ಕ್ರಮವು ಒಂದು ಸಾಮಾನ್ಯ ಸಾಮಾಜಿಕ ಕಾರಣಕ್ಕಾಗಿ ಉದ್ಯೋಗಿಗಳು ಮತ್ತು ರಾಜೀವ್ ನಗರ ಸ್ವಯಂಸೇವಕರು ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ಸ್ವಯಂಸೇವಕರ ಸಹಭಾಗಿತ್ವದಲ್ಲಿ ಆಯ್ದ ಸ್ಥಳಗಳಲ್ಲಿ ಸ್ವಚ್ಛ ಪರಿಸರವಾಗಿ ಪರಿವರ್ತಿಸಲು ಮುಂದಾಗಿದೆ ಎಂದರು.
ಕಾರ್ಯಕ್ರಮ ಚಟುವಟಿಕೆಯನ್ನು ಎರಡು ಹಂತಗಳಾಗಿ ವಿಂಗಡಿಸಿ ಮೊದಲನೆಯದಾಗಿ, ಪೂರ್ಣ ಸ್ವಚ್ಚತಾ ಕಾರ್ಯಗಳು ,ಸಸಿ ನೆಡುವ ಕಾರ್ಯ ಒಳಾಂಗಣ ಅಭಿವೃದ್ಧಿ ಮಾಡಿ ಸುಂದರಗೊಳಿಸುವುದು ಮತ್ತು ಎರಡನೆಯದಾಗಿ ಮುಖ್ಯವಾಗಿ ಹೋರಭಾಗದಲ್ಲಿ ಪಾರ್ಕಿಂಗ್, ಬಳಂಗಣದಲ್ಲಿ ಸಾರ್ವಜನಿಕಕರು ಕುಳಿತುಕೊಂಡು ಯೋಗ ಅಥವಾ ವಿಶ್ರಾಂತಿ ಗಾಗಿ ಆಸನ ವ್ಯವಸ್ಥೆ , ಉದ್ಯಾನವನದ ಒಳಭಾಗ ಜಾಗವನ್ನು ದುರಸ್ತಿ ಮಾಡುವುದು ಮುಖ್ಯವಾಗಿದೆ.
ಹೊಸಪೇಟೆ 29ನೇ ವಾರ್ಡ್ ನಗರಸಭೆಯ ಸದಸ್ಯ ರಮೇಶ್ ಗುಪ್ತ, ರಾಜೀವ್ ನಗರ ನಿವಾಸಿ ಸದಸ್ಯ ಶ್ರೀನಿವಾಸ್ ರಾವ್, ರಮೇಶ್, ಗೋಪಾಲ್, ಎಸ್. ಎಸ್. ರೆಡ್ಡಿ ಮತ್ತು ಅನೇಕ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಿರ್ಲೋಸ್ಕರ್ ಕಾರ್ಖಾನೆಯ ಬೀಡು ಕಬ್ಬಿಣ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಎಂ.ಜಿ. ನಾಗರಾಜ್ ಮತ್ತು ಕಾರ್ಖಾನೆಯ ಹಿರಿಯ ಅಧಿಕಾರಿಗಳು, ಲೇಡೀಸ್ ಕ್ಲಬ್ ಸದಸ್ಯರು, ಕಾರ್ಮಿಕ ಸಂಘದ ಪದಾಧಿಕಾರಿಗಳು ಸಹ ಸ್ವಚ್ಚತಾ ಕಾರ್ಯದಲ್ಲಿ ಕೈಜೋಡಿಸಿ ಸಹಕರಿಸಿದರು. ಸುತ್ತಲಿನ ಸಾಮಾಜಿಕ ಸಮಸ್ಯೆಗಳ ತಿಳುವಳಿಕೆ. ಆರೋಗ್ಯ, ಪರಿಸರ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅನೇಕ ಸಿಎಸ್ಆರ್ ಮಧ್ಯಸ್ಥಿಕೆಗಳನ್ನು ನಡೆಸಲು ನಮ್ಮ ಉದ್ಯೋಗಿಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಿಎಸ್ಆರ್ ಆದ್ಯತೆಗಳಲ್ಲಿ ಒಂದಾದ ಪರಿಸರವನ್ನು ರಕ್ಷಿಸುವುದು ಮತ್ತು ಮಕ್ಕಳು ಮತ್ತು ಸಮುದಾಯದಲ್ಲಿ ಪರಿಸರ-ಮನಸ್ಸುಗಳನ್ನು ತುಂಬುವ ಮೂಲಕ ಅದಕ್ಕೆ ಆಗುವ ಹಾನಿಯ ಪ್ರಮಾಣವನ್ನು ಕಡಿಮೆ ಮಾಡುವುದು. ತನ್ನ ಪರಿಸರದ ಉಪಕ್ರಮಗಳ ಅಡಿಯಲ್ಲಿ, ಕಿರ್ಲೋಸ್ಕರ್ ಒಂದು ಜೀವವೈವಿಧ್ಯ ವಲಯವನ್ನು ರಚಿಸಲು ಪರಿಸರ ವಲಯವನ್ನು ಅಭಿವೃದ್ಧಿಪಡಿಸಿ ಶ್ರಮವಹಿಸಿಲು ಮುಂದಾಗಿದೆ ಮತ್ತು ಸಮುದಾಯಗಳು ಪರಿಸರ ಸಂರಕ್ಷಣೆಯನ್ನು ವೈಯಕ್ತಿಕವಾಗಿ ಸಾಬೀತುಪಡಿಸುತ್ತಿದೆ. ಪರಿಸರ ವಲಯದೊಂದಿಗೆ, ಕಿರ್ಲೋಸ್ಕರ್ ವಿವಿಧ ಪರಿಸರ ಚಟುವಟಿಕೆಗಳ ಮೂಲಕ ಮಾನವರು ಮತ್ತು ಪ್ರಕೃತಿಯ ಸಾಮರಸ್ಯದ ಸಹಬಾಳ್ವೆಯನ್ನು ಉತ್ತೇಜಿಸುತ್ತಿದೆ.
ಬಹಳ ದಿನದ ಬಯಕೆಯಂತೆ ಉದ್ಯಾನವನವನ್ನು ಅಭಿವೃದ್ಧಿ ಜೊತೆಗೆ ತಕ್ಷಣವೇ ಹತ್ತಿರದ ನಾಗಪ್ಪ ಕಟ್ಟೆಯ ಹತ್ತಿರ ನಗರಸಭೆ ಸಹಾಯದಿಂದ 15 x 15 ಜಾಗದಲ್ಲಿ ಕಿರ್ಲೋಸ್ಕರ್ ವಾಹನ ನಿಲ್ದಾಣ ಮಾಡಲು ಸಹ ಮುಂದಾಗಿದೆ. ನಗರಸಭೆಯ ಸದಸ್ಯ ರಮೇಶ್ ಗುಪ್ತ ರವರು ಉತ್ತಮ ಮುಂದಾಳತ್ವ ಮತ್ತು ಪ್ರತಿಕ್ರಿಯೆ ಸಹಕಾರ ನೀಡುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಸುಸಜ್ಜಿತ ವಾಹನ ನಿಲ್ದಾಣ ಸಹ ಕೆಲವೇ ದಿನದಲ್ಲಿ ಮಾಡಲಾಗುವುದು ಎಂದು ನಾರಾಯಣ ಅವರು ತಿಳಿಸಿದರು.
ಯುವ ಮನಸ್ಸುಗಳನ್ನು ಒಂದುಗೂಡಿಸಿ ಶಿಕ್ಷಣ, ನೈರ್ಮಲ್ಯ, ಆರೋಗ್ಯ, ಸುರಕ್ಷತೆ, ರಸ್ತೆ ಸುರಕ್ಷತೆ ಮತ್ತು ಪರಿಸರದ ವಿವಿಧ ಕೇಂದ್ರೀಕೃತ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಮುದಾಯಕ್ಕೆ ಜಾಗೃತಿಯನ್ನು ಹರಡುವುದು ನಮ್ಮ ಕಾರ್ಖಾನೆಯ ಮತ್ತು ನಮ್ಮ ವ್ಯವಸ್ಥಾಪಕ ನಿರ್ದೇಶಕರ ಉದ್ದೇಶ ಎಂದು ತಿಳಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಕಿರ್ಲೋಸ್ಕರ್ ಉದ್ಯೋಗಿಗಳು ಉದ್ಯಾನವನ ಮತ್ತು ಸುತ್ತ ಮುತ್ತಲಿನ ಸ್ಥಳವನ್ನು ಸುಂದರಗೊಳಿಸಲು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮದ ಅಡಿಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಸ್ವಯಂಪ್ರೇರಿತರಾಗಿ ಭಾಗಿಯಾದರು.
ವರದಿ: ಮುರಳಿದರ ನಾಡಿಗೇರ್, ಹೊಸಪೇಟೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post