No Result
View All Result
AN-32 of IAF has met with an accident in Assam
English Articles

IAF Aircraft Crashes During Landing at Jorhat Airbase in Assam

by ಕಲ್ಪ ನ್ಯೂಸ್
June 13, 2026
0

Kalpa Media House  |  Assam  | An Indian Air Force (IAF) Antonov An-32 transport aircraft crashed while attempting to land...

Read moreDetails
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
  • Advertise With Us
  • Grievances
  • About Us
  • Contact Us
Saturday, June 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕಮಲದಾಕೃತಿಯ ವಿಮಾನ ನಿಲ್ದಾಣದಲ್ಲಿ, ವಿಮಲಾಕೃತಿಯ ಹಾರಾಟ ಶೀಘ್ರದಲ್ಲೇ ಶಿವಮೊಗ್ಗದಲ್ಲಿ

ನೋಡುಗರ ಎದೆಯಲ್ಲಿ ಸಂಚಲನ ಸೃಷ್ಠಿಸುತ್ತಿದೆ ಉದ್ದೇಶಿತ ಶಿವಮೊಗ್ಗ ವಿಮಾನ ನಿಲ್ದಾಣದ ವೀಡಿಯೋ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 14, 2021
in Special Articles, ಶಿವಮೊಗ್ಗ
0
ಕಮಲದಾಕೃತಿಯ ವಿಮಾನ ನಿಲ್ದಾಣದಲ್ಲಿ, ವಿಮಲಾಕೃತಿಯ ಹಾರಾಟ ಶೀಘ್ರದಲ್ಲೇ ಶಿವಮೊಗ್ಗದಲ್ಲಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಆಧುನಿಕತೆ ಹಾಗೂ ತಂತ್ರಜ್ಞಾನಗಳ ಉಪಯೋಗದ ಭರಾಟೆಯಲ್ಲಿ ಮಾನವ ಅದೆಷ್ಟು ದಾಪುಗಾಲಿಡುತ್ತಿದ್ದಾನೋ, ನಮ್ಮನ್ನಾಳುತ್ತಿರುವ ಆಡಳಿತ ವ್ಯವಸ್ಥೆಯೂ ಅದರ ದುಪ್ಪಟ್ಟು ವೇಗದಲ್ಲಿ ಹೆಜ್ಜೆಯನ್ನಿರಿಸುತ್ತಿದೆ. ಕೆಲವೇ ವರ್ಷಗಳ ಅಂತರದಲ್ಲಿ ಶಿವಮೊಗ್ಗ ಕಂಡುಕೇಳರಿಯದ ಅಭಿವೃದ್ಧಿಯ ದೆಸೆಯನ್ನು ಪಡೆದು ಈಗ ಮತ್ತಷ್ಟು ಸ್ಮಾರ್ಟ್ ಆಗ ಹೊರಟಿರುವುದು ಅಭಿವೃದ್ಧಿ ಹೊಂದಿದ ನಗರಗಳನ್ನೂ ನಾಚಿಸುವಂತಿದೆ. ಇಂತಹ ಸ್ಮಾರ್ಟ್ ಯೋಜನೆಯ ಬಹುಮುಖ್ಯ ಅಂಗವೇ ಶಿವಮೊಗ್ಗೆಯ ವಿಮಾನ ನಿಲ್ದಾಣ. ಇದೇ ಒಂದು ದಶಕದ ಹಿಂದೆ ಸನ್ಮಾನ್ಯ ಯಡಿಯೂರಪ್ಪನವರು ಉಪಮುಖ್ಯಮಂತ್ರಿಗಳಾಗುತ್ತಿದ್ದಂತೆಯೇ ಶಿವಮೊಗ್ಗೆಯ ಭಾಗ್ಯ ಬದಲಾಯಿತು. ಆಗಾಗ ವಿಮಾನ ಸದ್ದು ಬಂತೆಂದರೆ ಆಕಾಶದತ್ತ ತಲೆಯೆತ್ತುತ್ತಿದ್ದ ಜನ ಇನ್ನು ಮುಂದೆ ಮತ್ತೆ ಮತ್ತೆ ತಲೆಯೆತ್ತಿ ನೋಡುವ ಘಟನೆ ಕೆಲವೇ ತಿಂಗಳಿನಲ್ಲಿ ಘಟಿಸಲಿದೆ.ನಗರದಿಂದ 12 ಕಿಮೀ ದೂರದಲ್ಲಿರುವ ಸೋಗಾನೆಯಲ್ಲಿ ಈ ಹಿಂದೆ ಆರಂಭಗೊಂಡ ಶ್ರೀಯುತ ಯಡಿಯೂರಪ್ಪನವರ ಮಹತ್ವಾಕಾಂಕ್ಷಿ ಯೋಜನೆಯಾದ ವಿಮಾನ ನಿಲ್ದಾಣದ ಕಾಮಗಾರಿ ಸರ್ಕಾರದ ಬದಲಾವಣೆಯಿಂದಾಗಿ ನಿಂತಿತ್ತು. ತಮ್ಮ ಚಾಣಾಕ್ಷಮತಿ ವ್ಯಕ್ತಿತ್ವದಿಂದ ಬಿ.ವೈ. ರಾಘವೇಂದ್ರರವರು ಮತ್ತೆ ಆ ಕಾರ್ಯಗಳಿಗೆ ಪುನಶ್ಚೇತನ ನೀಡುವಲ್ಲಿ ಸಫಲರಾದರು. ಹಿಂದಿನಿಂದಲೂ ಸಂಸದರು ಎಂದರೆ ಸಾಮಾನ್ಯರಿಗೆ ನಿಲುಕದ ನಕ್ಷತ್ರ ಎಂಬುದು ಪ್ರತೀತಿ.
ಕೇಂದ್ರದಲ್ಲಿನ ಯೋಜನೆಗಳು ಜನಸಾಮಾನ್ಯರ ಮಟ್ಟದಲ್ಲಿ ತಲುಪಲಾರದ ಸಂಗತಿಯೆಂದೇ ಜನ ಪರಿಭಾವಿಸಿದ್ದರು. ಈಗ ಹಠಾತ್ತನೆ ಅಂತಹ ಎಲ್ಲಾ ಊಹಾಪೂಹಗಳಿಗೆ ತಿಲಾಂಜಲಿ ಇಟ್ಟು ನಮ್ಮ ರಾಘಣ್ಣನೆಂದೇ ಪ್ರಖ್ಯಾತಿ ಪಡೆಯುತ್ತಾ, ಶ್ರೀಸಾಮಾನ್ಯರೆಲ್ಲರನ್ನೂ ಅತ್ಯಂತ ಆತ್ಮೀಯತೆ ಹಾಗೂ ಗೌರವಾದರಗಳಿಂದ ಮಾತನಾಡಿಸುತ್ತಾ, ಎಲ್ಲಾ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು-ಅವರ ವಿಶ್ವಾಸವನ್ನು ಗಳಿಸಿಕೊಂಡು, ಸಂಘಟನೆಯ ಹಾಗೂ ಪಕ್ಷದ ಹಿರಿಯರ ಸಲಹೆಗಳನ್ನು ಸ್ವೀಕರಿಸಿ; ಅನುಷ್ಠಾನಗೊಳಿಸುತ್ತಾ ತಮ್ಮ ಕಾರ್ಯದ ಹಾದಿಯಲ್ಲಿ ಗಜನಡಿಗೆಯನ್ನಿಡುತ್ತಿದ್ದಾರೆ. ಹಿಂದಿನವರ ನಿರ್ಲಕ್ಷ್ಯ ಧೋರಣೆಯಿಂದ ಅಭಿವೃದ್ಧಿಯಲ್ಲಿ ಬಡವಾಗಿದ್ದ ಶಿವಮೊಗ್ಗ ಜಿಲ್ಲೆಗೆ ಕೇಂದ್ರದ ಹಲವಾರು ಯೋಜನೆಗಳನ್ನು ತಂದು ಅದನ್ನು ಅಸಮಾನ್ಯ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ 40 ಕೋಟಿ ಮೂಲ ವೆಚ್ಚದಲ್ಲಿ ಈ ಕಾಮಗಾರಿ ಪುನರಾರಂಭವಾಗಿ, ಮೊದಲು ಸಣ್ಣ ವಿಮಾನ ಸಂಚಾರವನ್ನು ನಡೆಸಲು 220 ಕೋಟಿಯ ಅಂದಾಜು ವೆಚ್ಚದಲ್ಲಿ ಕಡಿಮೆ ವೆಚ್ಚದ ಪ್ರಾದೇಶಿಕ ವಾಹಕಗಳಿಗೆ ನಿರ್ಮಾಣ ಮಾಡುವ ಯೋಜನೆ ಇತ್ತು. ಆದಾಗ್ಯೂ, ಯಡಿಯೂರಪ್ಪನವರು ವಿಮಾನ ನಿಲ್ದಾಣವನ್ನು ಎಲ್ಲಾ ಹವಾಮಾನ, ರಾತ್ರಿ ಸಮಯ ಮತ್ತು ಏರ್ಬಸ್ ಎ -320 ಕಾರ್ಯಾಚರಣೆಗಳಿಗೆ ಕಾರ್ಯಸಾಧ್ಯವಾಗುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿ ವೆಚ್ಚವನ್ನು ಗಮನಾರ್ಹವಾಗಿ 340 ಕೋಟಿಗೆ ಏರಿಸಿದರು. ಈ ಸುಸಜ್ಜಿತ ವ್ಯವಸ್ಥೆಗೆ ತಮ್ಮ ತಂದೆಯವರಿಗೆ ಪುಷ್ಟಿ ಕೊಟ್ಟವರೇ ನಮ್ಮ ಕ್ರಿಯಾಶೀಲ, ದೂರದೃಷ್ಟಿ ವ್ಯಕ್ತಿತ್ವದ ಸಂಸದರಾದ ಬಿ.ವೈ. ರಾಘವೇಂದ್ರರವರು.

ಯಡಿಯೂರಪ್ಪ ಹಾಗೂ ರಾಘವೇಂದ್ರರವರು ಜೊತೆ ಗೂಡಿ ಹಗಲಿರುಳೆನ್ನದೆ ತಮ್ಮ ಕನಸಿನ ಕೂಸೆಂಬಂತೆ ಕಾಮಗಾರಿಯ ಪರಿವೀಕ್ಷಣೆಗೈಯುತ್ತಾ ತ್ವರಿತವಾಗಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೈಯಲು ಕಟಿಬದ್ಧರಾಗಿ ನಿಂತಿದ್ದಾರೆ.

ಯೂಟ್ಯೂಬ್ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾದಲ್ಲಿ ಕೆಂಬಾವಿ ಆರ್ಕಿಟೆಕ್ಚರ್ ಫೌಂಡೇಷನ್ ರೂಪಿಸಿರುವ ನೀಲನಕ್ಷೆ, ನಮ್ಮ ರಾಷ್ಟ್ರ ಪುಷ್ಪವಾದ ಕಮಲದಾಕೃತಿಯ ವಿಮಾನ ನಿಲ್ದಾಣದ ವೀಡಿಯೋ ಹಾಗೂ ಚಿತ್ರಗಳು ನೋಡುಗರ ಕಣ್ಮನವನ್ನು ಸೆಳೆಯುತ್ತಿದೆ. ಕಮಲದ ದಳಗಳೇ ಎದ್ದುನಿಂತು ಸ್ವಾಗತಗೈಯುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಮುಖ್ಯದ್ವಾರದ ಮುಂಭಾಗದಲ್ಲಿ, ವಾಹನ ಸಂಚರಿಸುವ ಹಾದಿಗೆ ಹೊಂದಿಕೊಂಡು ಬೃಹತ್ ತಾವರೆಯ ಕೊಳವನ್ನೇ ನಿರ್ಮಿಸಲಾಗುತ್ತಿದೆ. ಕಣ್ಣು ಕೋರೈಸುವ ವರ್ಣರಂಜಿತ ದೀಪಾಲಂಕಾರದ ಪ್ರಭೆಯಿಂದ ಕಮಲದ ಕೊಳ ಮತ್ತಷ್ಟು ಝಗಝಗಿಸುತ್ತಿದೆ. ಈ 3ಡಿ ವಿಡಿಯೋ ಹಾಗೂ ಚಿತ್ರಗಳು ನೋಡುಗರ ಎದೆಯಲ್ಲಿ ಸಂಚಲನ ಮೂಡಿಸುತ್ತಿರುವುದಲ್ಲದೆ ವಿದೇಶಿಗರ ಗಮನವನ್ನೂ ಸೆಳೆಯುವಲ್ಲಿ ಸಫಲವಾಗಲಿದೆ.

ಮೊದಲ ಹಂತದ ಕಾರ್ಯಗಳಲ್ಲಿ ವಿಮಾನ ನಿಲ್ದಾಣದ ಓಡುದಾರಿ, ಟ್ಯಾಕ್ಸಿ ಹಾದಿ, ಏಪ್ರನ್, ಸಮೀಪಿಸುವ ರಸ್ತೆಗಳು, ಬಾಹ್ಯ ರಸ್ತೆಗಳು ಮತ್ತು ಕಾಂಪೌಂಡ್ ಗೋಡೆಗಳು ನಿರ್ಮಾಣವಾಗುತ್ತಿದ್ದು, ಮುಂದಿನ ಪ್ಯಾಕೇಜ್‌ನಲ್ಲಿ ಎಟಿಸಿ ಟವರ್, ಎಲೆಕ್ಟ್ರೋ-ಮೆಕ್ಯಾನಿಕಲ್ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ವಿಮಾನ ನಿಲ್ದಾಣವು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ ಎಂಬುದು ಸರ್ಕಾರದ ಆಶಯ.ಪೂರ್ವನಿಯೋಜನೆಯಂತೆ ಡಿಸೆಂಬರ್’ನಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಕೋವಿಡ್’ನಿಂದಾಗಿ ಮುಂದಿನ ಜೂನ್’ನಲ್ಲಿ ಸರ್ವಸನ್ನದ್ಧವಾಗಿ ವಿಮಲಮಯ ವಿಮಾನಗಳ ಹಾರಾಟ ನಮ್ಮ ಬಾನಂಗಳದಲ್ಲಿ ಹಾರಾಡುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ. ಇದಕ್ಕೆ ನಮ್ಮ ಮಾನ್ಯ ಮುಖ್ಯಮಂತ್ರಿಗಳಿಗೂ ಹಾಗೂ ಶಿವಮೊಗ್ಗೆಯ ಹೆಮ್ಮೆಯ ಪ್ರತೀಕವಾದ ಸಂಸದರಿಗೂ ನಮ್ಮ ಧನ್ಯವಾದ ಸಲ್ಲಲೇಬೇಕು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: AirportB S YediyurappaB Y RaghavendraKannada News WebsiteLatest News KannadaLocal NewsMalnad NewsShimogaShivamoggaShivamogga Newsಪ್ರವಾಸೋದ್ಯಮಬಿ.ವೈ. ರಾಘವೇಂದ್ರವಿಮಾನ ನಿಲ್ದಾಣಶಿವಮೊಗ್ಗಸೋಗಾನೆಸೋಷಿಯಲ್ ಮೀಡಿಯಾ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸಚಿವ ಈಶ್ವರಪ್ಪ ಸುಳ್ಳು ಮಾಹಿತಿ ನೀಡುತ್ತ ಜನರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ: ಕೆ.ಬಿ. ಪ್ರಸನ್ನ ಕುಮಾರ್

Next Post

ಸಂಕಷ್ಟದಲ್ಲಿರುವ ರಾಜ್ಯದ ಪತ್ರಕರ್ತರಿಗೆ ತಮಿಳುನಾಡು ಮಾದರಿಯಲ್ಲಿ ಪರಿಹಾರಕ್ಕೆ ಮನವಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸಂಕಷ್ಟದಲ್ಲಿರುವ ರಾಜ್ಯದ ಪತ್ರಕರ್ತರಿಗೆ ತಮಿಳುನಾಡು ಮಾದರಿಯಲ್ಲಿ ಪರಿಹಾರಕ್ಕೆ ಮನವಿ

ಸಂಕಷ್ಟದಲ್ಲಿರುವ ರಾಜ್ಯದ ಪತ್ರಕರ್ತರಿಗೆ ತಮಿಳುನಾಡು ಮಾದರಿಯಲ್ಲಿ ಪರಿಹಾರಕ್ಕೆ ಮನವಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಸಾಮಾಜಿಕ ಹೊಣೆಗಾರಿಕೆಯೊಂದಿಗೆ ವೃತ್ತಿಜೀವನ ರೂಪಿಸಿಕೊಳ್ಳಿ: ಪ್ರೊ. ರಾಮರಾವ್ ಕರೆ

ಸಾಮಾಜಿಕ ಹೊಣೆಗಾರಿಕೆಯೊಂದಿಗೆ ವೃತ್ತಿಜೀವನ ರೂಪಿಸಿಕೊಳ್ಳಿ: ಪ್ರೊ. ರಾಮರಾವ್ ಕರೆ

June 13, 2026
India Face Afghanistan in 1st ODI

1ನೇ ಏಕದಿನ ಪಂದ್ಯ | ಅಫ್ಗಾನಿಸ್ತಾನ ವಿರುದ್ಧ ಭಾರತಕ್ಕೆ ಮಹತ್ವದ ಪರೀಕ್ಷೆ

June 13, 2026
ಗ್ರಾಮೀಣ ಪ್ರತಿಭೆ ದೊಡ್ಡ ವೇದಿಕೆಯಲ್ಲಿ ಮಿಂಚುತ್ತಿರುವುದು ಹೆಮ್ಮೆಯ ವಿಷಯ: ಮಧು ಬಂಗಾರಪ್ಪ

ಗ್ರಾಮೀಣ ಪ್ರತಿಭೆ ದೊಡ್ಡ ವೇದಿಕೆಯಲ್ಲಿ ಮಿಂಚುತ್ತಿರುವುದು ಹೆಮ್ಮೆಯ ವಿಷಯ: ಮಧು ಬಂಗಾರಪ್ಪ

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
AN-32 of IAF has met with an accident in Assam

ಅಸ್ಸಾಂ | ವಾಯುನೆಲೆಯಲ್ಲಿ ಲ್ಯಾಂಡಿಂಗ್ ವೇಳೆ ಪತನಗೊಂಡ ವಾಯುಸೇನೆ ವಿಮಾನ

June 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL