ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ನಾನು ಇರುವವರೆಗೂ ನನ್ನ ಮಗ ಅಭಿಷೇಕ್ ಅಂಬರೀಶ್ Abhishek Ambarish ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ MP Sumalatha ಸ್ಪಷ್ಪಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಷೇಕ್ ಭವಿಷ್ಯ ಏನು ಎಂದು ನಾನು ಸೇರುವ ಪಕ್ಷದ ಮುಖಂಡರ ಮುಂದೆ ಪ್ರಶ್ನೆ ಇಟ್ಟಿಲ್ಲ. ಕಾರಣ ಅಂಬರೀಶ್ ಅವರು ಬದುಕಿನಲ್ಲಿ ನಂಬಿದ್ದ ಸಿದ್ದಾಂತಕ್ಕೆ ತಕ್ಕಂತೆ ನಾವು ಜೀವನ ಮಾಡುತ್ತೇವೆ. ತಾಯಿ ಚಾಮುಂಡೇಶ್ವರಿಯ ಮೇಲಾಣೆ, ಅಭಿಷೇಕ್’ಗೆ ಟಿಕೇಟ್ ಕೊಡಿ ಎಂದು ನಾನು ಯಾರನ್ನೂ ಕೇಳುವುದಿಲ್ಲ. ಮಾತ್ರವಲ್ಲ ನಾನು ಇರುವವರೆಗೂ ಅವನು ರಾಜಕಾರಣಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.












Discussion about this post