ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗದಿಂದ ಜ.14 ರಂದು ಮಂಗಳೂರು- ಉಡುಪಿ-ಮಂತ್ರಾಲಯ ನಾನ್ ಎಸಿ ಸ್ಲೀಪರ್ ಬಸ್ ಸೌಲಭ್ಯವನ್ನು ಆರಂಭಿಸುತ್ತಿದೆ.
ಈ ಬಸ್ ಮಂಗಳೂರಿನಿಂದ ಸಂಜೆ 3.30ಗೆ ಹೊರಟು ಉಡುಪಿ-ಕುಂದಾಪುರ-ಹಾಲಾಡಿ-ಸಿದ್ಧಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಶಿವಮೊಗ್ಗಕ್ಕೆ ರಾತ್ರಿ 9.15ಕ್ಕೆ ತಲುಪಿ 9.45ಕ್ಕೆ ಹೊರಟು ಚನ್ನಗಿರಿ -ಹೊಳಲ್ಕರೆ-ಚಿತ್ರದುರ್ಗ-ಚಳ್ಳೆಕೆರೆ-ರಾಂಪುರ-ಬಳ್ಳಾರಿ-ಅಲೂರು-ಅದೋನಿ-ಮಾಧವರಂ ಮಾರ್ಗವಾಗಿ ಮಂತ್ರಾಲಯಕ್ಕೆ ಬೆಳಗ್ಗೆ 6.20ಕ್ಕೆ ತಲುಪುವುದು. ಹಾಗೆಯೇ ಮಂತ್ರಾಲಯದಿಂದ ಮರು ಪ್ರಯಾಣ ಸಂಜೆ 5.30ಕ್ಕೆ ಹೊರಟು ಮಂಗಳೂರಿಗೆ ಬೆಳಗ್ಗೆ 8.40ಕ್ಕೆ ತಲುಪುವುದು.
ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಈ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರಾರಸಾಸಂ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post