Thursday, October 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ದಕ್ಷಿಣ ಕನ್ನಡ

ಫಲಿಸದ ಪ್ರಾರ್ಥನೆ | 134 ದಿನಗಳ ಜೀವನ್ಮರಣ ಹೋರಾಟದಲ್ಲಿ ಸೋತು ಕೊನೆಯುಸಿರೆಳೆದ ಅಪೂರ್ವ ಭಟ್

ನಾಲ್ಕು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದ ಭೀಕರ ಅಪಘಾತ

October 8, 2025
in ದಕ್ಷಿಣ ಕನ್ನಡ
0 0
0
Share on facebookShare on TwitterWhatsapp
Read - 4 minutes

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  |

ಸುಮಾರು ನಾಲ್ಕು ತಿಂಗಳ ಹಿಂದೆ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ #RoadAccident ತೀವ್ರವಾಗಿ ಗಾಯಗೊಂಡು ಬರೋಬ್ಬರಿ 134 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅಪೂರ್ವ ಭಟ್ ವಿಧಿಯಾಟಕ್ಕೆ ಬಲಿಯಾಗಿದ್ದು, ಈ ಮೂಲಕ ಸಾವಿರಾರು ಮಂದಿಯ ಪ್ರಾರ್ಥನೆ ವ್ಯರ್ಥವಾಗಿದೆ.

ಸುಮಾರು 134 ದಿನಗಳಿಂದ ಮಂಗಳೂರಿನ #Mangalore ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅಪೂರ್ವ ಭಟ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆದರು.

ಹೇಗಾಗಿತ್ತು ಅಪಘಾತ?
ಸುಮಾರು ನಾಲ್ಕು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ-ಮೈಸೂರು #Mysore ರಾಷ್ಟ್ರೀಯ ಹೆದ್ದಾರಿಯ ಮುರ ಬಳಿ ಖಾಸಗಿ ಬಸ್ ಕಾರಿಗೆ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿತ್ತು.

ಅಂಡೆಪುಣಿ ಈಶ್ವರ ಭಟ್ ಮತ್ತು ಪುತ್ರಿ ಅಪೂರ್ವ ಭಟ್(30) ಅವರು ಗಂಭೀರ ಗಾಯಗೊಂಡಿದ್ದರು. ಈಶ್ವರ ಭಟ್ ಅವರ ಮೊಮ್ಮಗಳು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದರು. ಗಂಭೀರ ಗಾಯಗೊಂಡಿದ್ದ ಈಶ್ವರ ಭಟ್ ಮತ್ತು ಅವರ ಮಗಳು ಅಪೂರ್ವ ಅವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಈ ನಡುವೆ ಈಶ್ವರ ಭಟ್ ಅವರು ಚೇತರಿಸಿಕೊಂಡಿದ್ದರು. ಅಪೂರ್ವ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮಂಗಳೂರು ಮೂಲದ ಆಶಿಶ್ ಹಾಗೂ ಅಪೂರ್ವ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಈಕೆಗೆ ಓರ್ವ ಮಗಳಿದ್ದಾಳೆ. ಆದರೆ, ಒಂದು ಭೀಕರ ಅಪಘಾತ ಅವರ ಜೀವನವನ್ನೇ ಕತ್ತಲು ಮಾಡಿತು.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಪೂರ್ವ ಅವರು, 134 ದಿನಗಳ ಕಾಲದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪತ್ನಿ ಹುಷಾರಾಗಲಿ ಎಂದು ಆಶಿಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಾಯಿ ಪ್ರೀತಿಗೋಸ್ಕರ ಹಂಬಲಿಸುತ್ತಿರುವ ಮಗಳಿಗಾಗಿ ಪ್ರಾರ್ಥಿಸಿ ಎಂದು ನಿತ್ಯ ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಅದನ್ನು ನೋಡಿ ಅನೇಕರು ವಿಧ ವಿಧವಾಗಿ ಪ್ರಾರ್ಥಿಸಿದ್ದರು. ಸ್ವಲ್ಪವೂ ಧೃತಿಗೆಡದೆ ಆಶಿಶ್ ಅವರು ಪತ್ನಿ ಈ ಹೋರಾಟದಲ್ಲಿ ಗೆದ್ದು ಬರುತ್ತಾಳೆ ಎಂದುಕೊಂಡು ಪ್ರಯತ್ನಪಟ್ಟಿದ್ದರು. ಬೆಂಗಳೂರಿನಿಂದ ಮಂಗಳೂರಿಗೆ ಮನೆ ಶಿಫ್ಟ್ ಮಾಡಿದ್ದರು. ಆದರೆ ಯಾವ ಪ್ರಾರ್ಥನೆಯೂ ಫಲಿಸಲೇ ಇಲ್ಲ.

ಆಶಿಶ್ ಸರಡ್ಕ ಅವರೇ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದು, 134 ದಿನಗಳ ಪ್ರಯಾಣ ಇಂದು ಸಾಯಂಕಾಲ 6 ಗಂಟೆಗೆ ಮುಗಿಯಿತು. ಅಪೂರ್ವ ಈಗ ನಮ್ಮೊಂದಿಗೆ ಇಲ್ಲ! ಆಕೆ ಇನ್ನು ನೆನಪು ಮಾತ್ರ. ಪ್ರಾರ್ಥಿಸಿದ ಎಲ್ಲರಿಗೂ ನಾನು ಚಿರಋಣಿ! ಎಂದಿದ್ದಾರೆ.
ಆಶಿಶ್ ಅವರ ಪೋಸ್ಟ್’ನಲ್ಲಿ ಏನಿದೆ?
ಅಪೂರ್ವ ಸಾವು ಅಪಘಾತದಿಂದ ಆದ ಕಾರಣ ಎಲ್ಲದಕ್ಕೂ ಪೊಲೀಸರು ಬಂದೇ ಆಗಬೇಕು… ಅವರಿಗೆ ಕಾಯ್ತಾ ಇದ್ದೇವೆ.. ಫೇಸ್ಬುಕ್ ತುಂಬಾ ಅಪೂರ್ವ ಇದ್ದಾಳೆ.. ನಿನ್ನೆ ತುಂಬಾ ಜನ ಬರೆದಿರುವ ಲೇಖನಗಳಲ್ಲಿ ಅಪೂರ್ವ 4 ತಿಂಗಳಿನಿಂದ ಕೋಮಾದಲ್ಲಿ ಇದ್ದಳು ಅಂತಾ ಬರೆದಿರುವುದನ್ನು ನಾನು ಓದಿದ್ದೇನೆ..
ಆದರೆ ತೀರಾ ಆಪ್ತರಿಗೆ ಮಾತ್ರ ಗೊತ್ತಿದ್ದ, ನಮ್ಮ ಮನಸ್ಸಿಗೆ ತುಂಬಾ ಆಘಾತವನ್ನು, ಈ ನೋವನ್ನು amplify ಮಾಡಿದ ಕಾರಣಗಳನ್ನು ಈಗ ಹೇಳಬೇಕು ಅಂತಾ ಅನ್ನಿಸ್ತಾ ಇದೆ..

ಅಪೂರ್ವ ಅಪಘಾತ ಆದಾಗ ಅನುಭವಿಸಿದ ತಲೆಯ ಪೆಟ್ಟು ತೀವ್ರ ಸ್ವರೂಪದ್ದಾಗಿತ್ತು .. diffused axonal injury ಆದ ಕಾರಣ ಮೊದಲ ಕೆಲವು ದಿನಗಳು ಏನಾಗಿದೆ ಅನ್ನುವ ಅರಿವು ಇರಲಿಲ್ಲ.. ಸ್ವಲ್ಪ ಸೆಟಲ್ ಡೌನ್ ಆದ ಮೇಲೆ 10 ದಿನಗಳ ನಂತರ ಮಾಡಿದ MRI ಆಕೆಯ MIDBRAIN ಪೆಟ್ಟು ತಿಂದಿದೆ ಅನ್ನೋದನ್ನು ಹೇಳಿತ್ತು.. Age is the only positive she has, ಅಂದಿದ್ದ ವೈದ್ಯರು, ಯಾವ ಗ್ಯಾರೆಂಟಿ ಕೊಡೋಕೂ ಸಾಧ್ಯ ಇಲ್ಲ ನಮಗೆ ಅಂತಾ ಹೇಳಿದ್ರು..

ಆದರೆ ನಾವು ಅಲ್ಲಿಂದ ನಾವು ಮಾಡಿದ ಹೋರಾಟ ತುಂಬಾ ಕ್ಲಿಷ್ಟಕರವಾದದ್ದು.. 24 ದಿನಗಳ ನಂತರ ಅವಳನ್ನು ವಾರ್ಡಿಗೆ ಶಿಫ್ಟ್ ಮೂಡಿಸಿದ್ದು ಕೂಡಾ ಆಕೆಗೆ ಮ್ಯೂಸಿಕ್ ಥೆರಪಿ, ನಮ್ಮ ಮಾತು, ಸೌಂಡ್ ಥೆರಪಿ ಫಿಸಿಕಲ್ stimulation, ರೇಕಿ ಹೀಲಿಂಗ್, ಪ್ರಾಣಿಕ್ ಹೀಲಿಂಗ್ ಮಾಡಬಹುದು ಅನ್ನುವ ಕಾರಣಕ್ಕೆ.. ಸಾಧಾರಣ ಜುಲೈ ಮಧ್ಯದ ವರೆಗೆ ಅಪೂರ್ವ ಯಾವ ರೆಸ್ಪಾನ್ಸ್ ಕೂಡಾ ಮಾಡ್ತಾ ಇರಲಿಲ್ಲ.. ಆದರೆ ಮತ್ತೆ ನಿಧಾನಕ್ಕೆ ನಾವು ಹೇಳುವ ವಿಚಾರಗಳು ಅವಳಿಗೆ ಅರ್ಥ ಆಗೋಕೆ ಶುರುವಾಯಿತು.. ಕರೆದಾಗ ಕಣ್ಣು ಬಿಡೋಕೆ ಪ್ರಯತ್ನ ಮಾಡ್ತಾ ಇದ್ಲು… ಒಮ್ಮೆ thumbs up ಮಾಡು ಅಂದಾಗ ಮಾಡಿದ್ಲು… wow! ಈ ರಿಕವರಿ ಬಂದರೆ ತುಂಬಾ ಜನ ಮೇಲೆ ಬೀಳ್ತಾರೆ ಅಂದರು ವೈದ್ಯರು.. ಅದು ಆಗಸ್ಟ್ ಒಂದು..

ಅದಾಗಿ ಬರೋಬ್ಬರಿ 15 ದಿನ ಅಪೂರ್ವಗೆ urinary infection ಮತ್ತು ಅದಕ್ಕೆ ಕೊಟ್ಟ ಆಂಟಿಬಯೋಟಿಕ್ ಕಾರಣದಿಂದ ಸುಸ್ತಾಗಿ ಹೋದಳು.. ಆಗ ಹೋದ ರೆಸ್ಪಾನ್ಸಿವ್ನೆಸ್ ಮತ್ತೆ ವಾಪಸ್ ಆಗಿದ್ದು ಸೆಪ್ಟೆಂಬರ್ ತಿಂಗಳಲ್ಲಿ.. ಫಿಸಿಯೋಥೆರಪಿ ಆಗುವಾಗ ಹೇಳಿದ್ದು ಎಲ್ಲಾ ಅರ್ಥ ಆಗೋಕೆ ಶುರುವಾಯಿತು.. ಬಲಗೈಗೆ ಸ್ವಲ್ಪ ಬಲ ಕಮ್ಮಿಯಿತ್ತು.. ಆದರೆ ಎಡಕೈಗೆ ಬಾಲ್ ಕೊಟ್ಟರೆ ಹಿಡಿಯೋದು ಬಿಡೋದು ಮಾಡಿದ್ಲು.. ಎರಡೆರಡು ಗಂಟೆ ಅವಳ ಮುಂದೆ ಕೂತು ಮಾತಾಡಿಸುತ್ತಾ ಇದ್ದೇ .. ನಾನಿಲ್ಲದೆ ಇದ್ದಾಗ ಅಪ್ಪ ಮತ್ತೆ ಚಿಕ್ಕಮ್ಮನ ಮಗ Gaurav Surya ಈ ಕೆಲಸ ಮಾಡ್ತಾ ಇದ್ದಾ.. ಇನ್ನೂ ಹೇಗೆ ಇಂಪ್ರೂವ್ ಮಾಡೋದು ಅಂತಾ ಇರೋ ಬರೋ ವೀಡಿಯೋಗಳನ್ನು ರೀಸರ್ಚ್ ಪೇಪರ್ ಗಳನ್ನು ತಿರುವಿಹಾಕಿ ಆಗಿತ್ತು.. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಅಪೂರ್ವ ಬೆರಳುಗಳ ಮೂಲಕ ಕೌಂಟ್ ಮಾಡೋಕೆ , ಕಣ್ಣು ಮೂವ್ ಮಾಡಿ ಆಚೆ ಈಚೆ ನೋಡೋಕೆ ಶುರು ಮಾಡಿದ್ಲು… ಸೆಪ್ಟೆಂಬರ್ ಕೊನೆಯ 10 ದಿನದಲ್ಲಿ yes/ no ಅನ್ನೋದನ್ನು ತಲೆ ಅಲ್ಲಾಡಿಸುವ ಮೂಲಕ ಮಾಡಿದ್ಲು.. ಮಗಳ ನೆನಪು, ನನ್ನ ನೆನಪು, ಮನೆಯವರ ನೆನಪು ಎಲ್ಲಾ ಅವಳಿಗೆ ಇತ್ತು.. she should fully recover with this ಅಂತಾ ವೈದ್ಯರು ಹೇಳಿದ್ರು.. ಅವಳ ಬಳಿ, ಅಪೂರ್ವ ನೀನು ನಡೆದುಕೊಂಡು ಇಲ್ಲಿಂದ ಹೋಗಬೇಕು ಅಂದಿದ್ರು.. ಮಗಳನ್ನು ಒಂದೆರಡು ಸರ್ತಿ ಕರೆದುಕೊಂಡು ಬಂದು ಮಾತಾಡಿಸಿದೆ.. ಅವಳ ಪ್ರೆಸೆನ್ಸ್ ಫೀಲ್ ಮಾಡಿ ಕಣ್ಣೀರು ಬಂದಿತ್ತು ಅವಳಿಗೆ ಒಮ್ಮೆ.. ಫಿಸಿಯೋಥೆರಪಿ ಮಾಡುವವರು ಮಾತಾಡಿಸಿ, ಅವಳನ್ನು ಪ್ರಚೋದಿಸಿ, ಕೂರಿಸುವುದು ಮಾಡ್ತಾ ಇದ್ರು..
ಅಪೂರ್ವಗೆ ಪಿಸಿಯೋ ಮಾಡ್ತಾ ಇದ್ದ ಮೇಡಂ ಅವಳ ಹತ್ರ ತುಂಬಾ ಆತ್ಮೀಯವಾಗಿ ಮಾತಾಡಿ, ನೀನು ಇನ್ನು ಬೇಗ ಹುಷಾರಾಗಿ ಇಲ್ಲಿಂದ ಹೋಗಬೇಕು ಅಂದಿದ್ರು.. ಕುತ್ತಿಗೆಯಲ್ಲಿ tracheostomy ಇತ್ತು.. ಫುಡ್ ಪೈಪ್ ಹೊಟ್ಟೆಗೆ ಹಾಕಿದ್ರು, ಕ್ಯಾತಿಟರ್ ಇತ್ತು.. ಹಾಗಾಗಿ ಮನೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಇರಲಿಲ್ಲ ನಮಗೆ.. ಇಷ್ಟು ವೇಗದಲ್ಲಿ ಇಂಪ್ರೂವ್ ಆಗ್ತಾ ಇದ್ದ ಅಪೂರ್ವ ಇದ್ದಕಿದ್ದ ಹಾಗೆ ಮೊನ್ನೆ ಸೋಮವಾರ ಒಮ್ಮೆ ಉಸಿರಾಟದ ಸಮಸ್ಯೆ ಎದುರಿಸಿದಳು.. ಮತ್ತೆ ಅದೂ ಸರಿಯಾಯಿತು.. ಪುನಃ ಮಂಗಳವಾರ ಅದು ರಿಪೀಟ್ ಆಯಿತು.. ಬುಧವಾರಕ್ಕೆ ಬಿಪಿ ಕಮ್ಮಿಯಾಗೋದು ಶುರುವಾಯಿತು… urinary infection ಮತ್ತೆ ಅಟ್ಯಾಕ್ ಮಾಡಿ ಅದೂ ಆಂಟಿಬಯೋಟಿಕ್ ರೆಸಿಸ್ಟೆಂಟ್ ಆಗಿದ್ದ ಕಾರಣ ಆಕೆಯ ಪರಿಸ್ಥಿತಿ ಗಂಭೀರ ಆಗಿದ್ದು.. ಅಲ್ಲಿಂದ icu, 3-4 ಗಂಟೆಯಲ್ಲಿ ವೆಂಟಿಲೇಟರ್ … ವಿಚಿತ್ರ ನೋಡಿ … ಇಂತಹ infection ಆದಾಗ ಏಟು ತಿನ್ನೋದು ಕಿಡ್ನಿ, ಲಿವರ್ ಇಲ್ಲದೆ ಇದ್ರೆ lungs. ಅಪೂರ್ವ ಕೇಸ್ ಅಲ್ಲಿ ಅದೆಲ್ಲಾ ಸರಿ ಇತ್ತು… ಗುರುವಾರ ಬೆಳಗ್ಗೆ ಒಮ್ಮೆ ಬಿಪಿ ಕೆಳಗೆ ಬಿತ್ತು.. ನೋಡಿದ್ರೆ ಅದು miocardidial infraction ತರಾ ಇದೆ ಅಂದ್ರು ವೈದ್ಯರು.. It is unheard of in a young patient like her with no co morbidities ಅಂದ್ರು ನಮ್ಮ ನ್ಯೂರೋ ಸರ್ಜನ್.. ಆದರೆ ಮತ್ತೆ ತಿಳಿದದ್ದು ಅದು sepsis induced miocarditis ಅಂತಾ..

ಅಲ್ಲಿಂದ ಏನೇನೋ ಪ್ರಯತ್ನಗಳನ್ನು ನಾವೂ ಮಾಡಿದ್ವಿ.. ಅವರು ಎಲ್ಲರೂ ಮಾಡಿದ್ರು.. ಸಾರ್ ದುಡ್ಡು ಎಷ್ಟು ಖರ್ಚಾಗುತ್ತೆ ಅಂತಾ ಯೋಚನೆ ಮಾಡಬೇಡಿ, ಏನು ಮಾಡಬೇಕು ಅನ್ನುವ ಆಲೋಚನೆ ಮಾತ್ರ ನೀವು ಮಾಡಿ, ನೀವು ಏನು ಹೇಳಿದ್ರೂ ನಾವು ಅದನ್ನು ಮಾಡ್ತೇವೆ ಅಂತಾ ನಾವೂ ಹೇಳಿದ್ವಿ.. ಇರುವ ಎಲ್ಲ ಮದ್ದು try ಮಾಡಿದ್ರು, ಬೇರೆ ಬೇರೆ ವೈದ್ಯರ opinion ತೆಗೊಂಡು ಆಯಿತು.. ಪ್ರಾಜ್ಞರ, ಜ್ಯೋತಿಷಿಗಳ ಬಳಿ ಕೇಳಿಸಿಯಾಯಿತು. ಗುರುಗಳು, ಹಿರಿಯರು ಅಂತಾ ಎಲ್ಲರ ಬಳಿ ನಾನು ಬೇಡಿಕೊಂಡೆ.. 134 ದಿನದಲ್ಲಿ ನಾನು ಮಾಡದೇ ಇದ್ದ ಪೂಜೆಗಳು, ಪ್ರಾರ್ಥನೆಗಳು ಇಲ್ಲ.. ಆದರೂ ಅಪೂರ್ವ ಕೊನೆಗೆ ಯಾಕೋ ಮನಸ್ಸು ಬದಲಾಯಿಸಿದಳು.. ಪ್ರಾಯಶಃ ಆಕೆಗೆ ಈ ದೇಹದಲ್ಲಿ ಇದ್ದುಕೊಂಡು ತನ್ನ ಕಾರ್ಯಗಳನ್ನು ಮಾಡುವುದು ಕಷ್ಟ, ಡಿಪೆಂಡೆಂಟ್ ಆಗ್ತೇನೆ ಅಂತಾ ಅನ್ನಿಸಿತೋ ಏನೋ… ನಿನ್ನೆ ಸಾಯಂಕಾಲ 5 ಗಂಟೆಯವರೆಗೆ ಆಕೆಯ ಮನಸ್ಸು ಬದಲಾಯಿಸುವ ಪ್ರಯತ್ನ ತುಂಬಾ ಮಾಡಿದೆ…. But ನಿನ್ನೆ she didn’t want to fight.. ಇದಕ್ಕಿಂತ ಕಷ್ಟದ ಕ್ಲಿಷ್ಟಕರವಾದ ಪರಿಸ್ಥಿತಿಯಿಂದ ಹೊರಬಂದಿದ್ದ ಅಪೂರ್ವ ನಿನ್ನೆ ಸಾಕಿನ್ನು ಇದು ಅಂತಾ ನಿರ್ಧಾರ ಮಾಡಿ ಹೋದದ್ದು.. She was not someone who didn’t fight. She fought till the very end.. ನಮಗೆ ಯಾರಿಗೂ ಭಾರ ಆಗೋದು ಬೇಡ ಅಂತ ಹೋಗಿದ್ದು ಅವಳು… ಅದೆಷ್ಟೋ ಪ್ರೀತಿ/ ನೋವು ಮನಸ್ಸಲ್ಲಿ ಇಟ್ಟುಕೊಂಡು ಕೂತಿದ್ಲು ಗೊತ್ತಿಲ್ಲ!

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news  

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

   

Tags: Andepunicoastal newsDakshina KannadaKannada News WebsiteKaravali newsLatest News KannadaMangaloreMuraPutturRoad Accidentಅಂಡೆಪುಣಿಅಪೂರ್ವ ಭಟ್ದಕ್ಷಿಣ ಕನ್ನಡಮಂಗಳೂರು
Previous Post

ಶಿವಮೊಗ್ಗ ಏರ್’ಪೋರ್ಟ್’ನಲ್ಲಿ ಬರಲಿದೆ ಮಾಲ್, ಹೊಟೇಲ್, ಕಮರ್ಷಿಯಲ್ ಕಾಂಪ್ಲೆಕ್ಸ್

Next Post

ಎಲ್’ಪಿಜಿ ಸಿಲಿಂಡರ್ ತುಂಬಿದ್ದ ಟ್ರಕ್ ಸ್ಪೋಟ | ಏಳು ವಾಹನಗಳು ಭಸ್ಮ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಎಲ್'ಪಿಜಿ ಸಿಲಿಂಡರ್ ತುಂಬಿದ್ದ ಟ್ರಕ್ ಸ್ಪೋಟ | ಏಳು ವಾಹನಗಳು ಭಸ್ಮ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ರಾಜ್ಯೋತ್ಸವ | ರಾಷ್ಟ್ರೋತ್ಥಾನ ಸಾಹಿತ್ಯದಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಫರ್ಧೆ | ಭಾಗವಹಿಸುವುದು ಹೇಗೆ?

October 9, 2025

ಇನ್ಮುಂದೆ 10 ಕೆಜಿ ಅಕ್ಕಿ ಕೊಡಲ್ಲ | ಸಿಗಲಿದೆ ಇಂದಿರಾ ಆಹಾರ ಕಿಟ್ | ಏನಿರತ್ತೆ ಅದರಲ್ಲಿ?

October 9, 2025

ವಿಮಾನ ನಿಲ್ದಾಣ ಜಮೀನು ಸಂತ್ರಸ್ಥರಿಗೆ ನಿವೇಶನ ಹಂಚಿಕೆಯಲ್ಲಿ ವಿಳಂಬ: ಪ್ರತಿಭಟನೆ

October 9, 2025

ಶಿವಮೊಗ್ಗ | ಅ.11ರಂದು ಪ್ರಜ್ಞಾ ಬುಕ್ ಗ್ಯಾಲರಿಯ ನೂತನ ಮಳಿಗೆ ಉದ್ಘಾಟನೆ

October 9, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ರಾಜ್ಯೋತ್ಸವ | ರಾಷ್ಟ್ರೋತ್ಥಾನ ಸಾಹಿತ್ಯದಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಫರ್ಧೆ | ಭಾಗವಹಿಸುವುದು ಹೇಗೆ?

October 9, 2025

ಇನ್ಮುಂದೆ 10 ಕೆಜಿ ಅಕ್ಕಿ ಕೊಡಲ್ಲ | ಸಿಗಲಿದೆ ಇಂದಿರಾ ಆಹಾರ ಕಿಟ್ | ಏನಿರತ್ತೆ ಅದರಲ್ಲಿ?

October 9, 2025

ವಿಮಾನ ನಿಲ್ದಾಣ ಜಮೀನು ಸಂತ್ರಸ್ಥರಿಗೆ ನಿವೇಶನ ಹಂಚಿಕೆಯಲ್ಲಿ ವಿಳಂಬ: ಪ್ರತಿಭಟನೆ

October 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!