ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಹುಬ್ಬಳ್ಳಿ |
ದೇವರಗುಡ್ಡ ಮತ್ತು ಬ್ಯಾಡಗಿ ನಡುವಿನ ಎಲ್’ಸಿ ಸಂಖ್ಯೆ 222 ರಲ್ಲಿ ತಾತ್ಕಾಲಿಕ ಗರ್ಡರ್’ಗಳನ್ನು ಸೇರಿಸಲು ಮತ್ತು ತೆಗೆದುಹಾಕಲು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವುದರಿಂದ ಹಲವು ರೈಲು ಸೇವೆಗಳಲ್ಲಿ ಬದಲಾವಣೆಯಾಗಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆ #IndianRailway ಮಾಹಿತಿ ಪ್ರಕಟಿಸಿದ್ದು, ಕಾಮಗಾರಿಯ ಹಿನ್ನೆಲೆಯಲ್ಲಿ ಹಲವು ರೈಲುಗಳು ರದ್ದಾಗಲಿದ್ದು, ಕೆಲವು ರೈಲುಗಳು ಭಾಗಷಃ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ ಹಾಗೂ ಮರುನಿಗದಿಗೊಳ್ಳಲಿದೆ ಎಂದು ತಿಳಿಸಿದೆ. ವಿವರಗಳು ಇಂತಿವೆ.
ರೈಲುಗಳ ರದ್ದುಪಡಿಕೆ
16214 ಸಂಖ್ಯೆಯ ಎಸ್’ಎಸ್’ಎಸ್ #Hubli ಹುಬ್ಬಳ್ಳಿ – ಅರಸೀಕೆರೆ #Arsikere ಎಕ್ಸ್’ಪ್ರೆಸ್ ರೈಲು 2026ರ ಫೆಬ್ರವರಿ 16ರಂದು ರದ್ದುಪಡಿಸಲಾಗುತ್ತದೆ.
2026ರ ಫೆಬ್ರವರಿ 17ರಂದು ಈ ಕೆಳಗಿನ ರೈಲುಗಳ ಸಂಚಾರ ರದ್ದು
- ರೈಲು ಸಂಖ್ಯೆ 16213 ಅರಸೀಕೆರೆ – ಎಸ್’ಎಸ್’ಎಸ್ ಹುಬ್ಬಳ್ಳಿ ಎಕ್ಸ್’ಪ್ರೆಸ್
- ರೈಲು ಸಂಖ್ಯೆ 12079 ಕೆಎಸ್’ಆರ್ ಬೆಂಗಳೂರು – ಎಸ್’ಎಸ್’ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್’ಪ್ರೆಸ್
- ರೈಲು ಸಂಖ್ಯೆ.12080 ಎಸ್’ಎಸ್’ಎಸ್ ಹುಬ್ಬಳ್ಳಿ – ಕೆಎಸ್’ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್’ಪ್ರೆಸ್
- ರೈಲು ಸಂಖ್ಯೆ 26751 ಬೆಳಗಾವಿ – ಕೆಎಸ್’ಆರ್ ಬೆಂಗಳೂರು ವಂದೇ ಭಾರತ ಎಕ್ಸ್’ಪ್ರೆಸ್
- ರೈಲು ಸಂಖ್ಯೆ 26752 ಕೆಎಸ್’ಆರ್ ಬೆಂಗಳೂರು – ಬೆಳಗಾವಿ ವಂದೇ ಭಾರತ ಎಕ್ಸ್’ಪ್ರೆಸ್
- ರೈಲು ಸಂಖ್ಯೆ 17347 ಎಸ್’ಎಸ್’ಎಸ್ ಹುಬ್ಬಳ್ಳಿ – ಚಿತ್ರದುರ್ಗ ಎಕ್ಸ್’ಪ್ರೆಸ್
- ರೈಲು ಸಂಖ್ಯೆ 17348 ಚಿತ್ರದುರ್ಗ – ಎಸ್’ಎಸ್’ಎಸ್ ಹುಬ್ಬಳ್ಳಿ ಎಕ್ಸ್’ಪ್ರೆಸ್ ರದ್ದುಗೊಳ್ಳಲಿದೆ.
ಈ ರೈಲುಗಳ ಭಾಗಶಃ ರದ್ದು
17310 ಸಂಖ್ಯೆಯ ವಾಸ್ಕೊ ಡ ಗಾಮಾ – ಯಶವಂತಪುರ ಎಕ್ಸ್’ಪ್ರೆಸ್ ದಿನಾಂಕ 16.02.2026 ರಂದು ಎಸ್’ಎಸ್’ಎಸ್ ಹುಬ್ಬಳ್ಳಿ – ಯಶವಂತಪುರ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗುತ್ತದೆ. ಈ ರೈಲು ಎಸ್’ಎಸ್’ಎಸ್ ಹುಬ್ಬಳ್ಳಿಯಲ್ಲಿ ಪ್ರಯಾಣ ಕೊನೆಗೊಳಿಸಲಿದೆ.
17309 ಸಂಖ್ಯೆಯ ಯಶವಂತಪುರ – ವಾಸ್ಕೊ ಡ ಗಾಮಾ ಎಕ್ಸ್’ಪ್ರೆಸ್ ದಿನಾಂಕ 17.02.2026 ರಂದು ಯಶವಂತಪುರ – ಎಸ್’ಎಸ್’ಎಸ್ ಹುಬ್ಬಳ್ಳಿ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗುತ್ತದೆ. ಈ ರೈಲು ಯಶವಂತಪುರದ ಬದಲಾಗಿ ಎಸ್’ಎಸ್’ಎಸ್ ಹುಬ್ಬಳ್ಳಿಯಿಂದ, ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
12726 ಸಂಖ್ಯೆಯ ಧಾರವಾಡ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ದಿನಾಂಕ 17.02.2026 ರಂದು ಧಾರವಾಡ – ಹರಿಹರ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗುತ್ತದೆ. ಈ ರೈಲು ಧಾರವಾಡದ ಬದಲಾಗಿ ಹರಿಹರದಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
ಈ ರೈಲುಗಳ ಮಾರ್ಗ ಬದಲಾವಣೆ
16588 ಸಂಖ್ಯೆಯ ಬಿಕಾನೆರ್ – ಯಶವಂತಪುರ ಎಕ್ಸ್’ಪ್ರೆಸ್, ದಿನಾಂಕ 15.02.2026 ರಂದು ತನ್ನ ಪ್ರಯಾಣದಲ್ಲಿ, ಗದಗ – ಹೊಸಪೇಟೆ – ಕೊಟ್ಟೂರು – ಅಮರಾವತಿ – ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತನ್ನ ನಿಯಮಿತ ನಿಲುಗಡೆಗಳಾದ ಎಸ್’ಎಸ್’ಎಸ್ ಹುಬ್ಬಳ್ಳಿ ಮತ್ತು ರಾಣೆಬೆನ್ನೂರು ನಿಲ್ದಾಣಗಳಿಂದ ಹೊರಡುವುದಿಲ್ಲ.
17391 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಸಿಂಧನೂರು ಎಕ್ಸ್’ಪ್ರೆಸ್, ದಿನಾಂಕ 17.02.2026 ರಂದು ತನ್ನ ಪ್ರಯಾಣದಲ್ಲಿ, ದಾವಣಗೆರೆ – ಅಮರಾವತಿ – ಕೊಟ್ಟೂರು – ಹೊಸಪೇಟೆ – ಗಿಣಿಗೇರಾ – ಸಿಂಧನೂರು ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಹರಿಹರ, ಚಳಗೇರಿ, ರಾಣೆಬೆನ್ನೂರು, ದೇವರಗುಡ್ಡ, ಬ್ಯಾಡಗಿ, ಹಾವೇರಿ, ಕರಜ್ ಗಿ, ಕಳಸೂರು, ಸವಣೂರು, ಯಲವಿಗಿ, ಕಲಸ, ಗುಡಗೇರಿ, ಸಂಶಿ, ಕುಂದಗೋಳ, ಎಸ್’ಎಸ್’ಎಸ್ ಹುಬ್ಬಳ್ಳಿ, ಶಿಶ್ವಿನಹಳ್ಳಿ, ಅಣ್ಣಿಗೇರಿ, ಗದಗ ಜಂಕ್ಷನ್, ತಳಕಲ್ಲ, ಬಾಣಾಪುರ ಮತ್ತು ಕೊಪ್ಪಳ ನಿಲ್ದಾಣಗಳಿಂದ ಹೊರಡುವುದಿಲ್ಲ.
ಈ ರೈಲುಗಳ ಮರುನಿಗದಿ
17325 ಸಂಖ್ಯೆಯ ಬೆಳಗಾವಿ – ಮೈಸೂರು ಎಕ್ಸ್’ಪ್ರೆಸ್, ದಿನಾಂಕ 17.02.2026 ರಂದು ಬೆಳಗಾವಿಯಿಂದ ಹೊರಡುವಾಗ 120 ನಿಮಿಷಗಳ ಕಾಲ ಮರುನಿಗದಿಗೊಳ್ಳಲಿದೆ ಹಾಗೂ ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ಮರುನಿಗದಿಗೊಳ್ಳಲಿದೆ.
ಈ ರೈಲುಗಳ ನಿಯಂತ್ರಣ
- 17310 ಸಂಖ್ಯೆಯ ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್’ಪ್ರೆಸ್, ದಿನಾಂಕ 08.02.2026 ರಂದು ಪ್ರಾರಂಭವಾಗುವ ಪ್ರಯಾಣದಲ್ಲಿ 30 ನಿಮಿಷಗಳ ಕಾಲ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ.
- 16589 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಸಾಂಗ್ಲಿ ಎಕ್ಸ್’ಪ್ರೆಸ್, ದಿನಾಂಕ 08.02.2026 ರಂದು ಮಾರ್ಗ ಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- 12650 ಸಂಖ್ಯೆಯ ಹಜರತ್ ನಿಜಾಮುದ್ದೀನ್ – ಯಶವಂತಪುರ ಎಕ್ಸ್’ಪ್ರೆಸ್, ದಿನಾಂಕ 09.02.2026 ರಂದು ಮಾರ್ಗ ಮಧ್ಯೆ 55 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- 16535 ಸಂಖ್ಯೆಯ ಮೈಸೂರು – ಪಂಡರಾಪುರ ಎಕ್ಸ್’ಪ್ರೆಸ್, ದಿನಾಂಕ 10.02.2026 ರಂದು ಮಾರ್ಗ ಮಧ್ಯೆ 50 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- 11022 ಸಂಖ್ಯೆಯ ತಿರುನೇಲ್ವೇಲಿ ಜಂಕ್ಷನ್ – ದಾದರ್ ಎಕ್ಸ್’ಪ್ರೆಸ್, ದಿನಾಂಕ 16.02.2026 ರಂದು ಮಾರ್ಗ ಮಧ್ಯೆ 110 ನಿಮಿಷಗಳ ಕಾಲ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















