Read - < 1 minute
ಶಿವಮೊಗ್ಗ: ನಗರದ ಪುರಾಣ ಪ್ರಸಿದ್ಧ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಮೇ 17 ರಿಂದ 19ರವರೆಗೆ 102ನೆಯ ವರ್ಷದಲ್ಲಿ ಶ್ರೀ ಹನುಮ ಜಯಂತಿ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಈ ಉತ್ಸವಕ್ಕೆ ಪೂರ್ವಭಾವಿಯಾಗಿ ಮೇ 12ರಿಂದ 17ರವರೆಗೆ ಆರು ದಿನಗಳ ಪ್ರತಿದಿನ ಸಂಜೆ 7.00ರಿಂದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಚಿಂತನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಾಂಸ್ಕೃತಿಕ ವೈವಿಧ್ಯ:
- ಮೇ 14: ಪುದುವಾಳ್ ಸಹೋದರಿಯರಾದ ಸುಪ್ರಿಯಾ ಪುದುವಾಳ್ ಸೋನಿಯಾ ಪುದುವಾಳ್ರಿಂದ ಕೂಚುಪ್ಪುಡಿ ಮತ್ತು ಭರತನಾಟ್ಯ
- ಮೇ 15: ಕೋಡೂರಿನ ಪ್ರತಿಮಾ ಜಾಗಡೇಕರ್ರಿಂದ ಯಜ್ಞ ಸಂರಕ್ಷಣೆ ಕುರಿತ ಹರಿಕಥೆ
- ಮೇ 16: ತುಮಕೂರಿನ ಶ್ರೀನಿಧಿ ಕಲಾವೃಂದದ ಸುಧಾರತ್ನ ಮತ್ತು ಸಂಗಡಿಗರಿಂದ ಭಕ್ತಿ ಸಂಗೀತ ಹಾಗೂ ಹಂದಲಸು ವಾಸುದೇವ ಭಟ್ರಿಂದ ಶ್ರೀ ನರಸಿಂಹ ದೇವರ ಕುರಿತ ಉಪನ್ಯಾಸ
ಧಾರ್ಮಿಕ ಕಾರ್ಯಕ್ರಮಗಳು
- ಮೇ 17: ಸ್ವಾತಿ ನಕ್ಷತ್ರ, ಬೆಳಿಗ್ಗೆ 8 ರಿಂದ ಶ್ರೀ ಆಂಜನೇಯ ಹಾಗೂ ಶ್ರೀ ನಾರಸಿಂಹರಿಗೆ ಅಭಿಷೇಕ, 10ರಿಂದ ಶ್ರೀ ನಾರಸಿಂಹ ಸುದರ್ಶನ ಹೋಮ, ರಾತ್ರಿ 8 ರಿಂದ ಲಕ್ಷ್ಮಿನರಸಿಂಹರ ಪಲ್ಲಕ್ಕಿ ಉತ್ಸವ
- ಮೇ 18: ವಿಶಾಖಾ ನಕ್ಷತ್ರ, ಬೆಳಿಗ್ಗೆ 8 ರಿಂದ ಶ್ರೀ ಆಂಜನೇಯರಿಗೆ ಅಭಿಷೇಕ, 10ರಿಂದ ಶ್ರೀ ರಾಮತಾರಕ ಹೋಮ, ರಾತ್ರಿ 8 ರಿಂದ ಶ್ರೀ ಪಟ್ಟಾಭಿರಾಮರ ಉತ್ಸವ
- ಮೇ 19: ಅನುರಾಧ ನಕ್ಷತ್ರ, ಬೆಳಿಗ್ಗೆ 8 ರಿಂದ ಶ್ರೀ ಆಂಜನೇಯ ಮಹಾಭಿಷೇಕ, 10ರಿಂದ ಶ್ರೀ ಮಾರುತಿ ಮೂಲಮಂತ್ರ ಹೋಮ ನಂತರ ಸಂಕ್ಷಿಪ್ತ ರಾಮಾಯಣ ಪಾರಾಯಣ, ರಾತ್ರಿ 7 ರಿಂದ ಶ್ರೀ ರಾಮ ಹನುಮರ ಎದುರು ಉತ್ಸವ, ಅಷ್ಟಾವಧಾನ ಸೇವೆ ಪ್ರಸಾದ ವಿನಿಯೋಗ
Discussion about this post