No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Tuesday, July 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ವಾಣಿಜ್ಯ

ವ್ಯಾಪಾರಸ್ಥರಿಗಾಗಿ Whatsapp Meta Business ಏಜೆಂಟ್ ಎಐ ತಂತ್ರಜ್ಞಾನ

kalpa News by kalpa News
July 8, 2026
in ವಾಣಿಜ್ಯ
0
WhatsApp Business Summit in India: Meta Business Agent AI technology launched to help businesses
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

● ದಿನದ 24 ಗಂಟೆಯೂ ಗ್ರಾಹಕರೊಂದಿಗೆ ವ್ಯವಹರಿಸಲು ಉದ್ಯಮಿಗಳಿಗೆ ಸಿಗಲಿದೆ ಎಐ (Meta Business) ನೆರವು

● ಬೃಹತ್ ಕಂಪನಿಗಳಿಗಾಗಿ ಮೆಟಾ ಬಿಸಿನೆಸ್ ಏಜೆಂಟ್ ಪ್ಲಾಟ್‌ ಫಾರ್ಮ್ ಮುಕ್ತ

ಜಾಗತಿಕ ತಂತ್ರಜ್ಞಾನ ದೈತ್ಯ ಮೆಟಾ ಮಾಲೀಕತ್ವದ ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಾಪ್, ಮುಂಬೈನಲ್ಲಿ ನಡೆದ ತನ್ನ ಮೂರನೇ ವಾರ್ಷಿಕ ಬಿಸಿನೆಸ್ ಶೃಂಗಸಭೆಯಲ್ಲಿ ಉದ್ಯಮಿಗಳಿಗಾಗಿ ಅತ್ಯಾಧುನಿಕ ಎಐ ತಂತ್ರಜ್ಞಾನ ಆಧಾರಿತ ಮೆಟಾ ಬಿಸಿನೆಸ್ (Meta Business) ಏಜೆಂಟ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಈ ತಂತ್ರಜ್ಞಾನವು ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವ್ಯವಹಾರ ಸಂಸ್ಥೆಗಳು ದಿನದ 24 ಗಂಟೆಯೂ, ವಾರದ ಏಳೂ ದಿನಗಳ ಕಾಲ ಗ್ರಾಹಕರಿಗೆ ನಿರಂತರ ಸೇವೆ ನೀಡಲು ಸಹಾಯ ಮಾಡಲಿದೆ.

ಇದರೊಂದಿಗೆ, ಬೃಹತ್ ಉದ್ಯಮಗಳು ತಮ್ಮದೇ ಆದ ಕಸ್ಟಮೈಸ್ಡ್ ಬಿಸಿನೆಸ್ ಏಜೆಂಟ್‌ ಗಳನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲು ಮತ್ತು ಕಾರ್ಯಗತಗೊಳಿಸಲು ಅಗತ್ಯವಿರುವ ಮೂಲಸೌಕರ್ಯವನ್ನು ಒದಗಿಸುವ ಮೆಟಾ ಬಿಸಿನೆಸ್ ಏಜೆಂಟ್ ಪ್ಲಾಟ್‌ ಫಾರ್ಮ್ ಅನ್ನು ಸಹ ಕಂಪನಿ ಬಿಡುಗಡೆ ಮಾಡಿದೆ.JNNCE Shivamoggaಮೆಟಾ ಸಂಸ್ಥೆಯ ಪ್ರಕಾರ, ಈ ಹೊಸ ಮೆಟಾ ಬಿಸಿನೆಸ್ ಏಜೆಂಟ್ ತಂತ್ರಜ್ಞಾನವು ಪ್ರತಿಯೊಬ್ಬ ಗ್ರಾಹಕನಿಗೆ ಪ್ರತಿ ಕ್ಷಣದಲ್ಲೂ ತಕ್ಷಣವೇ ಸ್ಪಂದಿಸುವಂತೆ ವ್ಯವಹಾರಗಳನ್ನು ಸಜ್ಜುಗೊಳಿಸುತ್ತದೆ. ಇದು ಕಂಪನಿಯೊಂದರ ಹಿಂದೆ ಒಂದು ಬೃಹತ್ ಅಥವಾ ಅನಂತ ಉದ್ಯೋಗಿಗಳ ತಂಡವೇ ಕೆಲಸ ಮಾಡುತ್ತಿರುವಂತಹ ಅನುಭವವನ್ನು ನೀಡುತ್ತದೆ. ವ್ಯಾಪಾರಸ್ಥರು ತಮ್ಮ ಗ್ರಾಹಕರಿಗೆ ಅತ್ಯಂತ ವೇಗವಾದ ಹಾಗೂ ಹೆಚ್ಚು ವೈಯಕ್ತಿಕಗೊಳಿಸಿದ ಗ್ರಾಹಕ ಸೇವಾ ಅನುಭವವನ್ನು ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.

Also Read>> WorldCup | ಮೆಸ್ಸಿ ಮತ್ತೆ ಇತಿಹಾಸ: ಅರ್ಜೆಂಟೀನಾ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಉದ್ಯಮಗಳು ಗ್ರಾಹಕರೊಂದಿಗಿನ ಬಾಂಧವ್ಯವನ್ನು ಸುಧಾರಿಸಲು ಮತ್ತು ದೈನಂದಿನ ವ್ಯವಹಾರ ಪ್ರಕ್ರಿಯೆಗಳನ್ನು ಸುಲಭಗೊಳಿಸಲು ಹೊಸ ಮಾರ್ಗಗಳನ್ನು ಹುಡುಕುತ್ತಿವೆ. ಈ ನಿಟ್ಟಿನಲ್ಲಿ, ಮೆಟಾ ಬಿಸಿನೆಸ್ ಏಜೆಂಟ್ ಗ್ರಾಹಕರ ಮೊದಲ ಸಂಪರ್ಕದಿಂದಲೇ ಅತ್ಯಂತ ಪ್ರಸ್ತುತ ಮತ್ತು ನಿಖರವಾದ ಸೇವಾ ಅನುಭವವನ್ನು ನೀಡಬಲ್ಲದು. ಗ್ರಾಹಕರ ಪ್ರಮುಖ ಪ್ರಶ್ನೆಗಳು ಮತ್ತು ಸಂವಹನಗಳನ್ನು ಆರಂಭದಿಂದ ಕೊನೆಯವರೆಗೆ ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದ್ದು, ಪ್ರಮುಖವಾಗಿ ಈ ಕೆಳಗಿನ ಸೇವೆಗಳನ್ನು ದಿನದ 24 ಗಂಟೆಯೂ ಒದಗಿಸಲಿದೆ:

● ಗ್ರಾಹಕರು ಕೇಳುವ ಕಂಪನಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ನಿಖರವಾದ ಉತ್ತರಗಳನ್ನು ನೀಡುತ್ತದೆ.

● ವ್ಯಾಪಾರ ಸಂಸ್ಥೆಯ ಉತ್ಪನ್ನಗಳ ಕ್ಯಾಟಲಾಗ್‌ ನಿಂದ ಗ್ರಾಹಕರ ಇಷ್ಟಕ್ಕೆ ತಕ್ಕಂತೆ ಸೂಕ್ತವಾದ ಉತ್ಪನ್ನಗಳನ್ನು ಶಿಫಾರಸು ಮಾಡುತ್ತದೆ.

● ಗ್ರಾಹಕರ ಭೇಟಿಯ ಸಮಯವನ್ನು ಕಾಯ್ದಿರಿಸುತ್ತದೆ ಹಾಗೂ ಸಂಭಾವ್ಯ ಗ್ರಾಹಕರನ್ನು ಗುರುತಿಸಿ ವರ್ಗೀಕರಿಸುತ್ತದೆ.

● ಕೃತಕ ಬುದ್ಧಿಮತ್ತೆಯ ಬದಲು ಕಂಪನಿಯ ಸಿಬ್ಬಂದಿ ಯಾವ ಸಂದರ್ಭದಲ್ಲಿ ಗ್ರಾಹಕರೊಂದಿಗೆ ನೇರವಾಗಿ ಮಾತನಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಉದ್ಯಮಿಗಳಿಗೆ ನೀಡುತ್ತದೆ.

● ಗ್ರಾಹಕರು ಉತ್ಪನ್ನಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನೆರವಾಗುತ್ತದೆ.
ಕೇವಲ ಗ್ರಾಹಕರೊಂದಿಗಿನ ಸಂವಹನ ಮಾತ್ರವಲ್ಲದೆ, ಈ ಮೆಟಾ ಬಿಸಿನೆಸ್ ಏಜೆಂಟ್ ಉದ್ಯಮಿಗಳಿಗೆ ಅತ್ಯುತ್ತಮ ಪಾಲುದಾರನಾಗಿಯೂ ಕೆಲಸ ಮಾಡುತ್ತದೆ. ಗ್ರಾಹಕರೊಂದಿಗಿನ ಸಂಭಾಷಣೆಗಳಿಂದ ಪ್ರಮುಖ ಒಳನೋಟಗಳನ್ನು ಕಲೆಹಾಕುವುದು ಮತ್ತು ಮಿಸ್ ಆದ ಸಂವಹನಗಳ ಸಾರಾಂಶವನ್ನು ನೀಡುವುದರ ಮೂಲಕ, ಉದ್ಯಮಿಗಳು ತಮ್ಮ ವ್ಯವಹಾರದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ, ಬೆಳವಣಿಗೆಯತ್ತ ಗಮನ ಹರಿಸಲು ಇದು ಸಹಾಯ ಮಾಡುತ್ತದೆ.

ಈ ಕುರಿತು ಮಾತನಾಡಿದ ಮೆಟಾ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಕಂಟ್ರಿ ಹೆಡ್ ಅರುಣ್ ಶ್ರೀನಿವಾಸ್, “ಜಾಗತಿಕ ಮಟ್ಟದಲ್ಲಿ ಮೆಸೇಜಿಂಗ್ ಮೂಲಕ ವ್ಯವಹಾರ ನಡೆಸುವ ಅತ್ಯಂತ ವೇಗದ ಮತ್ತು ಕ್ರಿಯಾಶೀಲ ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಿದೆ. ಇಲ್ಲಿ ಜನರು ಮತ್ತು ಉದ್ಯಮಗಳು ಪರಸ್ಪರ ಸಂಪರ್ಕ ಸಾಧಿಸಲು ಮೆಸೇಜಿಂಗ್ ಅನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಉದ್ಯಮಗಳ ಕಾರ್ಯವೈಖರಿಯನ್ನು ಬದಲಾಯಿಸುವಲ್ಲಿ ಎಐ ಪ್ರಮುಖ ಪಾತ್ರ ವಹಿಸುತ್ತಿದ್ದು, ಮೆಟಾ ಬಿಸಿನೆಸ್ ಏಜೆಂಟ್ ಈ ಪ್ರಯಾಣದ ಮುಂದಿನ ಹೆಜ್ಜೆಯಾಗಿದೆ. ಇದು ಉದ್ಯಮಗಳು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಹಕರೊಂದಿಗಿನ ಬಾಂಧವ್ಯವನ್ನು ಗಟ್ಟಿಗೊಳಿಸಲು, ದಕ್ಷತೆಯನ್ನು ಹೆಚ್ಚಿಸಲು ಮತ್ತು ಹೊಸ ಬೆಳವಣಿಗೆಯ ಹಾದಿಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ” ಎಂದು ತಿಳಿಸಿದ್ದಾರೆ.

ಬೃಹತ್ ಕಂಪನಿಗಳಿಗಾಗಿ Meta Business ಏಜೆಂಟ್ ಪ್ಲಾಟ್‌ ಫಾರ್ಮ್ ಲಭ್ಯ

ದೊಡ್ಡ ಮಟ್ಟದಲ್ಲಿ ತಮ್ಮದೇ ಆದ ಮೆಟಾ ಬಿಸಿನೆಸ್ ಏಜೆಂಟ್ ಅನ್ನು ನಿರ್ಮಿಸಲು, ಕಸ್ಟಮೈಸ್ ಮಾಡಲು ಮತ್ತು ಅಳವಡಿಸಿಕೊಳ್ಳಲು ಅಗತ್ಯವಿರುವ ಮೂಲಸೌಕರ್ಯದ ಅಗತ್ಯವಿರುವ ಬೃಹತ್ ಉದ್ಯಮಗಳಿಗಾಗಿ ಈಗ ಮೆಟಾ ಬಿಸಿನೆಸ್ ಏಜೆಂಟ್ ಪ್ಲಾಟ್‌ ಫಾರ್ಮ್ ಲಭ್ಯವಿದೆ. ಇದು ಪ್ರಮುಖ ಕಂಪನಿಗಳಿಗೆ ಎಐ ಆಧಾರಿತ ಏಜೆಂಟ್‌ ಗಳನ್ನು ನಿರ್ಮಿಸಲು ನೆರವಾಗುವುದಲ್ಲದೆ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಶಾಪಿಫೈ, ಝೆಂಡೆಸ್ಕ್ ಮತ್ತು ಶಾಪೀನಂತಹ ಪ್ರಮುಖ ಉದ್ಯಮ ಸಾಫ್ಟ್‌ ವೇರ್‌ ಗಳೊಂದಿಗೆ ಸುಲಭವಾಗಿ ಸಂಯೋಜನೆಗೊಳ್ಳುತ್ತದೆ. ವಾಟ್ಸಾಪ್ ಬಿಸಿನೆಸ್ ಪ್ಲಾಟ್‌ ಫಾರ್ಮ್ ಜೊತೆಗೂಡಿ ಕಾರ್ಯನಿರ್ವಹಿಸುವ ಈ ವ್ಯವಸ್ಥೆಯು, ಬೃಹತ್ ಕಂಪನಿಗಳಿಗೆ ಅಗತ್ಯವಿರುವ ಅತ್ಯುನ್ನತ ಮಟ್ಟದ ಬೆಳವಣಿಗೆ ಸಾಮರ್ಥ್ಯ, ನಿಯಂತ್ರಣಗಳು ಮತ್ತು ನಿಖರ ಕಾರ್ಯಕ್ಷಮತೆಯ ಮಾಪನವನ್ನು ಒದಗಿಸುತ್ತದೆ.Christ King College Karkalaಇದೇ ಸಂದರ್ಭದಲ್ಲಿ, ಈ ತಂತ್ರಜ್ಞಾನವನ್ನು ಆರಂಭಿಕ ಹಂತದಲ್ಲೇ ಅಳವಡಿಸಿಕೊಂಡಿರುವ ಸ್ವಿಗ್ಗಿ, ಮಧುಲಿಕಾ ಎಂಟರ್‌ ಪ್ರೈಸಸ್ ಮತ್ತು ಕೈಜೆನ್ ಅಡ್ವೆಂಚರ್ಸ್‌ ನಂತಹ ಪ್ರಮುಖ ಕಂಪನಿಗಳು, ಈ ಎಐ ಏಜೆಂಟ್ ಬಳಸಿ ಗ್ರಾಹಕರೊಂದಿಗೆ ಹೇಗೆ ಅತ್ಯುತ್ತಮ ಬಾಂಧವ್ಯ ಮತ್ತು ವಿಶಿಷ್ಟ ಅನುಭವವನ್ನು ಸೃಷ್ಟಿಸುತ್ತಿವೆ ಎಂಬುದನ್ನು ವಾಟ್ಸಾಪ್ ಪ್ರದರ್ಶಿಸಿತು.

ಈ ಮೈತ್ರಿ ಕುರಿತು ಸ್ವಿಗ್ಗಿ ಫುಡ್ ಮಾರ್ಕೆಟ್‌ ಪ್ಲೇಸ್‌ನ ರೈಡರ್ ಮತ್ತು ಪೋಸ್ಟ್ ಆರ್ಡರ್ ಕನ್ಸ್ಯೂಮರ್ ಎಕ್ಸ್‌ಪೀರಿಯನ್ಸ್ ವಿಭಾಗದ ವೈಸ್ ಪ್ರೆಸಿಡೆಂಟ್ ರೋಹನ್ ಛಾಜೇಡ್ ಮಾತನಾಡಿ, “ತಂತ್ರಜ್ಞಾನವು ಬಳಕೆದಾರರ ದೈನಂದಿನ ಅನುಭವಗಳನ್ನು ಸರಳಗೊಳಿಸಿದಾಗ ಮಾತ್ರ ಅದಕ್ಕೆ ನಿಜವಾದ ಮೌಲ್ಯ ಸಿಗುತ್ತದೆ. ಮೆಟಾ ಬಿಸಿನೆಸ್ ಏಜೆಂಟ್ ನೆರವಿನೊಂದಿಗೆ ನಮ್ಮ ಡೆಲಿವರಿ ಪಾರ್ಟ್‌ ನರ್‌ ಗಳನ್ನು ವಾಟ್ಸಾಪ್ ಮೂಲಕವೇ ಉದ್ಯೋಗಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಲಕ್ಷಾಂತರ ಜನರಿಗೆ ಈಗಾಗಲೇ ಪರಿಚಿತವಾಗಿರುವ ವಾಟ್ಸಾಪ್ ವೇದಿಕೆಯಲ್ಲೇ ಅತ್ಯಂತ ವೇಗದ ಮತ್ತು ಸುಲಭವಾದ ವ್ಯವಸ್ಥೆಯನ್ನು ನಾವು ರೂಪಿಸಿದ್ದೇವೆ. ಸಂಭಾಷಣಾ ಆಧಾರಿತ ಕೃತಕ ಬುದ್ಧಿಮತ್ತೆಯನ್ನು (ಕನ್ವರ್ಸೇಷನಲ್ ಎಐ) ಬಳಸಿಕೊಂಡು ಜಟಿಲತೆಯನ್ನು ಕಡಿಮೆ ಮಾಡುವುದು ಮತ್ತು ಉದ್ಯಮದ ಸಂವಹನವನ್ನು ಹೆಚ್ಚು ಸುಲಭಗೊಳಿಸುವುದು ನಮ್ಮ ವಿಶಾಲ ದೃಷ್ಟಿಕೋನವಾಗಿದೆ. ಉದ್ಯಮಗಳು ತಮ್ಮ ಪರಿಸರ ವ್ಯವಸ್ಥೆಯೊಂದಿಗೆ ಸಂವಹನ ನಡೆಸಲು ಕನ್ವರ್ಸೇಷನಲ್ ಕಾಮರ್ಸ್ (ಸಂಭಾಷಣಾ ಆಧಾರಿತ ವಾಣಿಜ್ಯ) ಮುಂದಿನ ಭವಿಷ್ಯವಾಗಿದೆ. ಮೆಟಾ ಜೊತೆಗೂಡಿ ಈ ಮಹತ್ವದ ಬದಲಾವಣೆಯ ಮುಂಚೂಣಿಯಲ್ಲಿರಲು ನಾವು ಉತ್ಸುಕರಾಗಿದ್ದೇವೆ” ಎಂದು ತಿಳಿಸಿದ್ದಾರೆ.

ಮಧುಲಿಕಾ ಎಂಟರ್‌ ಪ್ರೈಸಸ್‌ ನ ಸಂಸ್ಥಾಪಕಿ ಮಧುಲಿಕಾ ವಿಕ್ರಮ್ ಮಾತನಾಡಿ, “ಸೌಂದರ್ಯ ವರ್ಧಕ ಉದ್ಯಮದಲ್ಲಿ ಗ್ರಾಹಕರು ತಕ್ಷಣದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾರೆ. ನಾವು ಕೆಲವೇ ನಿಮಿಷಗಳಲ್ಲಿ ಉತ್ತರಿಸದಿದ್ದರೆ, ಅವರು ಈಗಾಗಲೇ ಮತ್ತೊಂದು ಕಡೆ ಮುಖ ಮಾಡಿರುತ್ತಾರೆ. ಬ್ರೈಡಲ್ ಬುಕ್ಕಿಂಗ್, ಮೇಕಪ್ ಕೋರ್ಸ್‌ ಗಳು ಮತ್ತು ಬ್ಯೂಟಿ ಪ್ರಾಡಕ್ಟ್‌ಗಳಿಗೆ ಬೇಡಿಕೆ ಹೆಚ್ಚಾದಂತೆ, ನಾವು ಪ್ರತಿದಿನ ನೂರಾರು ಗ್ರಾಹಕರ ವಿಚಾರಣೆಗಳನ್ನು ನಿರ್ವಹಿಸಬೇಕಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಮೆಟಾ ಬಿಸಿನೆಸ್ ಏಜೆಂಟ್ ನಮಗೆ ಅತ್ಯಂತ ಸಹಕಾರಿಯಾಯಿತು. ಏಕೆಂದರೆ ಇದು ನಮ್ಮ ಉದ್ಯಮದ ಬಗ್ಗೆ ಸ್ವತಃ ಕಲಿತುಕೊಂಡು, ಗ್ರಾಹಕರೊಂದಿಗಿನ ಸಂಭಾಷಣೆಯನ್ನು ಅತ್ಯಂತ ಸುಲಭವಾಗಿ ನಿಭಾಯಿಸುತ್ತದೆ. ನಾವು ಮೆಟಾ ಬಿಸಿನೆಸ್ ಏಜೆಂಟ್ ಬಳಸಲು ಆರಂಭಿಸಿದಾಗಿನಿಂದ ವ್ಯಾಪಾರ ವೃದ್ಧಿಯಲ್ಲಿ ಶೇ. 25 ರಿಂದ 30 ರಷ್ಟು ಹೆಚ್ಚಳ ಕಂಡಿದ್ದೇವೆ. ಅಲ್ಲದೆ, ಇದು ನನ್ನ ದೈನಂದಿನ ಶೇ. 50 ರಿಂದ 60 ರಷ್ಟು ಪುನರಾವರ್ತಿತ ಕೆಲಸದ ಒತ್ತಡವನ್ನು ಕಡಿಮೆ ಮಾಡಿದೆ” ಎಂದು ತಿಳಿಸಿದ್ದಾರೆ.

ವೃತ್ತಿಪರವಾಗಿ ನಿರ್ವಹಿಸಲ್ಪಡುವ ಲಡಾಕ್ ಬೈಕ್ ಸಾಹಸಯಾತ್ರೆಗಳು ಮತ್ತು ಹಿಮಾಲಯನ್ ರೋಡ್ ಟ್ರಿಪ್‌ಗಳಲ್ಲಿ ಪರಿಣತಿ ಹೊಂದಿರುವ ಪ್ರಮುಖ ಅಡ್ವೆಂಚರ್ ಟ್ರಾವೆಲ್ ಕಂಪನಿ ಕೈಜೆನ್ ಅಡ್ವೆಂಚರ್ಸ್ ನ ಸಂಸ್ಥಾಪಕ ಅಮಿತ್ ಹೂಡಾ ಅವರು ಮೆಟಾ ಬಿಸಿನೆಸ್ ಏಜೆಂಟ್ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದು, “ಲಡಾಕ್ ಪ್ರವಾಸಗಳು, ಬೆಲೆಗಳು, ಇಟಿನರರಿ (ಪ್ರವಾಸದ ದಿನಚರಿ) ಮತ್ತು ಬೈಕ್ ಬಾಡಿಗೆಗೆ ಸಂಬಂಧಿಸಿದ ವಿಚಾರಣೆಗಳಿಗೆ ತಕ್ಷಣವೇ ಪ್ರತಿಕ್ರಿಯಿಸಲು ಕೈಜೆನ್ ಅಡ್ವೆಂಚರ್ಸ್‌ ಗೆ ಮೆಟಾ ಬಿಸಿನೆಸ್ ಏಜೆಂಟ್ ಸಹಾಯ ಮಾಡಿದೆ. ಇದು ಗ್ರಾಹಕರಿಗೆ ಉತ್ತರಿಸುವ ಸಮಯವನ್ನು ಕಡಿಮೆ ಮಾಡುತ್ತದೆ, ಪ್ರವಾಸಿಗರ ದಟ್ಟಣೆ ಇರುವ ಪೀಕ್-ಸೀಸನ್‌ ನಲ್ಲಿ ಭಾರಿ ಪ್ರಮಾಣದ ವಿಚಾರಣೆಗಳನ್ನು ಸುಲಭವಾಗಿ ನಿಭಾಯಿಸುತ್ತದೆ ಮತ್ತು ದಿನದ 24 ಗಂಟೆಯೂ ನಿಖರವಾದ ಮಾಹಿತಿಯನ್ನು ಖಾತ್ರಿಪಡಿಸುತ್ತದೆ. ಇದರಿಂದಾಗಿ ನಮ್ಮ ತಂಡವು ಪ್ರವಾಸದ ಇತರ ಪ್ರಮುಖ ಕಾರ್ಯಾಚರಣೆಗಳ ಮೇಲೆ ಗಮನ ಹರಿಸಲು ಸಾಧ್ಯವಾಗಿದ್ದು, ವ್ಯಾಪಾರ ವೃದ್ಧಿ ಮತ್ತು ಗ್ರಾಹಕರ ಅನುಭವ ಎರಡನ್ನೂ ಉತ್ತಮಗೊಳಿಸಿದೆ” ಎಂದು ಅವರು ಹೇಳಿದ್ದಾರೆ.

Meta Business | ಗ್ರಾಹಕರು ಉದ್ಯಮಗಳನ್ನು ಸುಲಭವಾಗಿ ಹುಡುಕಲು ನೆರವು

ಮೆಟಾ ಬಿಸಿನೆಸ್ ಏಜೆಂಟ್ ಮೂಲಕ ಕಾರ್ಯನಿರ್ವಹಿಸುವ ವ್ಯವಹಾರಗಳನ್ನು ಜನರು ಸುಲಭವಾಗಿ ಪತ್ತೆಹಚ್ಚಲು ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ತರುತ್ತಿದೆ. ಶೀಘ್ರದಲ್ಲೇ, ಬಳಕೆದಾರರು ವಾಟ್ಸಾಪ್ ಸರ್ಚ್ ನಲ್ಲೇ ನೇರವಾಗಿ ಯಾವುದೇ ಉದ್ಯಮದ ಹೆಸರನ್ನು ಟೈಪ್ ಮಾಡಿ ಹುಡುಕಬಹುದು ಅಥವಾ ತಮಗೆ ನಂಬಿಕಸ್ಥ ಅನಿಸಿದ ಉದ್ಯಮಗಳ ಕಾಂಟ್ಯಾಕ್ಟ್‌ ಗಳನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸುಲಭವಾಗಿ ಹಂಚಿಕೊಳ್ಳಬಹುದು. ಇದರಿಂದ ಗ್ರಾಹಕರು ಮತ್ತು ಉದ್ಯಮಿಗಳ ನಡುವೆ ನಂಬಿಕಸ್ಥ ಸಂಪರ್ಕ ಸಾಧಿಸುವುದು ಮತ್ತಷ್ಟು ಸುಲಭವಾಗಲಿದೆ.

ತಮ್ಮ ಉದ್ಯಮಕ್ಕಾಗಿ ಮೆಟಾ ಬಿಸಿನೆಸ್ ಏಜೆಂಟ್ ಅನ್ನು ಪಡೆದುಕೊಳ್ಳಲು ಆಸಕ್ತಿ ಇರುವ ವ್ಯಾಪಾರಸ್ಥರು ಇಲ್ಲಿ ಕ್ಲಿಕ್: https://business.facebook.com/ai/welcome/ ಮಾಡುವ ಮೂಲಕ ಕಾಯುವಿಕೆ ಪಟ್ಟಿಗೆ ಸೇರಬಹುದಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Kalahamsa Infotech private limitedKalpa News Advertising Disclaimer

Tags: AI agentBENGALURUBusiness PeopleKannada News WebsiteLatest News KannadaMetaWhatsAppWhatsApp Business
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಮರಕ್ಕೆ ಬಸ್ ಢಿಕ್ಕಿ | ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ

Next Post

ಶಿಕ್ಷಣಕ್ಕೆ ತಕ್ಕ ಉದ್ಯೋಗ ಪಡೆಯಲು ಕೌಶಲ್ಯ ಅಭಿವೃದ್ಧಿ ಅತ್ಯಗತ್ಯ: ಪ್ರಾಚಾರ್ಯ ಡಾ. ರವೀಂದ್ರ

kalpa News

kalpa News

Next Post
ಶಿಕ್ಷಣಕ್ಕೆ ತಕ್ಕ ಉದ್ಯೋಗ ಪಡೆಯಲು ಕೌಶಲ್ಯ ಅಭಿವೃದ್ಧಿ ಅತ್ಯಗತ್ಯ: ಪ್ರಾಚಾರ್ಯ ಡಾ. ರವೀಂದ್ರ

ಶಿಕ್ಷಣಕ್ಕೆ ತಕ್ಕ ಉದ್ಯೋಗ ಪಡೆಯಲು ಕೌಶಲ್ಯ ಅಭಿವೃದ್ಧಿ ಅತ್ಯಗತ್ಯ: ಪ್ರಾಚಾರ್ಯ ಡಾ. ರವೀಂದ್ರ

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL