No Result
View All Result
New Laboratory Solutions - Help Indian Labs - Testing Demands
English Articles

Agilent Launches New Laboratory Solutions to Help Indian Labs Meet Rising Testing Demands

by kalpa News
September 7, 2026
0

Kalpa Media House  |  Bengaluru | India's pharmaceutical, food, environmental and industrial testing laboratories are under increasing pressure to process...

Read moreDetails
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
  • Advertise With Us
  • Grievances
  • About Us
  • Contact Us
Monday, September 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಮೋದಿ ವ್ಯಕ್ತಿಯಲ್ಲ, ಒಂದು ದೊಡ್ಡ ಶಕ್ತಿ ಎಂಬ ಪ್ರದರ್ಶನಕ್ಕೆ ಕಾಲ ಸನ್ನಿಹಿತವಾಗಿದೆ: ಕಾದು ನೋಡಿ

kalpa News by kalpa News
September 5, 2019
in Army
0
ಮೋದಿ ವ್ಯಕ್ತಿಯಲ್ಲ, ಒಂದು ದೊಡ್ಡ ಶಕ್ತಿ ಎಂಬ ಪ್ರದರ್ಶನಕ್ಕೆ ಕಾಲ ಸನ್ನಿಹಿತವಾಗಿದೆ: ಕಾದು ನೋಡಿ
Share on FacebookShare on TwitterShare on WhatsApp

ಈ ಲೇಖನ ನೋಡಿ ನನ್ನನ್ನು ಮೋದಿ ಭಕ್ತ ಎಂದು ಹೇಳಿದರೂ, ಗಂಜಿಗಾಗಿ ಮೋದಿಯ ಹೊಗಳಿಕೆ ಎಂದು ಜರೆದರೂ ನನಗೇನೂ ಬೇಸರವಿಲ್ಲ. ಇದೊಂದು Awareness ಮೂಡಿಸು ಸಲುವಾಗಿ ಬರೆದ ಲೇಖನ. ಹಿಂದೆ ಮುಂದೆ ಅರಿಯದೆ ಜರೆದರೇನಾದೀತು ಎಂಬುದೇ ಇದರ ಮುಖ್ಯ ಸಾರಾಂಶ.

ಈ ಲೇಖನದಲ್ಲಿ ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿಸಲು ಇಚ್ಛಿಸುತ್ತೇನೆ. ಅದುವೇ, ಮೋದಿ ವ್ಯಕ್ತಿಯಲ್ಲ, ಅದೊಂದು ಶಕ್ತಿ. ನಾನು ಅವರ ಅಲಂಕಾರ ನೋಡಿ ಹೇಳುವುದೂ ಅಲ್ಲ, ಹಿಂದುತ್ವ ಎಂದು ಹೇಳುವುದೂ ಅಲ್ಲ. ಮೂರ್ಖರಿಗೆ ಹಾಗೆ ಅನ್ನಿಸಿದರೆ ನಾನೇನೂ ಮಾಡಲು ಸಾಧ್ಯವಿಲ್ಲ. ನಾನೇನಿದ್ದರೂ ಅವರ ಜನನ ಕಾಲದ ಗ್ರಹಸ್ಥಿತಿಯ ಆಧಾರದಲ್ಲೇ ಹೇಳುವವನು. ಅವರು ಅಧಿಕಾರಕ್ಕೆ ಬಂದ ಮೇಲೆ ಅವರ ಬಗ್ಗೆ ಹೇಳಿದವನೂ ಅಲ್ಲ. 2013 ರಲ್ಲಿ ಹೊಸದಿಗಂತದಲ್ಲಿ ‘ನಮೋ ಎನ್ನದೆ ವಿಧಿ ಇಲ್ಲ’ ಎಂಬ ಲೇಖನ ಬರೆದಿದ್ದೆ. ಅದನ್ನು ಇದರ ಜತೆ ಸೇರಿಸಿದ್ದೇನೆ.


ಯಾರು ಹೃದಯಾಂತರಾಳದಿಂದ ಹಿತವನ್ನು ಬಯಸಿ ಸ್ಪಂದಿಸುತ್ತಾರೋ ಅಂತವರನ್ನು ಹಿಂಸಿಸಿದರೆ, ನಿಂದಿಸಿದರೆ ನಮ್ಮ ಆತ್ಮವೇ ನಮಗೆ ತಿರುಗಿ ಬೀಳುತ್ತದೆ ಎಂಬುದಕ್ಕೆ ಸಾವಿರಾರು ಉದಾಹರಣೆಗಳಿವೆ. ಇದು ನಮ್ಮೊಳಗಿನ ನಿಂದನಾ ಜಾಯಮಾನಕ್ಕೆ ಒಂದು ನ್ಯಾಯವನ್ನು ಕೊಡುವ, ಜಾಗೃತಿಯನ್ನು (Awareness) ನೀಡುವ ಒಂದು ಲೇಖನ ಆಗಲಿ ಎಂಬುದೇ ನನ್ನ ಉದ್ದೇಶ.

ಮಹಾಬಲಿಷ್ಟ ರಾವಣ ರಾಮನನ್ನು ನಿಂದಿಸಿದ, ಕೃಷ್ಣನನ್ನು ಕೌರವ ನಿಂದಿಸಿದ, ಚಾಣಕ್ಯನಿಗೆ ನವನಂದರು ಅವಮಾನಿಸಿದರು. ಆದರೆ ಅವರೆಲ್ಲರೂ ಅವರವರ ಕತ್ತನ್ನು ಅವರವರೇ ಕೊಯ್ದುಕೊಂಡು ಮಣ್ಣು ಪಾಲಾಗಿ ಪಾಪಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡರು. ಇಂತಹ ಸಾವಿರಾರು ಉದಾಹರಣೆಗಳ ಪಟ್ಟಿಗೆ ನರೇಂದ್ರ ದಾಮೋದರ ದಾಸ ಮೋದಿಯವರು ಸೇರುತ್ತಾರೆ. ಇಂತಹ ವ್ಯಕ್ತಿತ್ವ ಬರಬೇಕಾದರೆ ಇದು ಒಂದೆಡೆ ಸಂಸರ್ಗ ಫಲ, ಇನ್ನೊಂದೆಡೆ ಜಾತಕ ಫಲ. ದುರುಪಯೋಗ ಆಗದಂತಹ ಅಖಂಡ ಸಾಮ್ರಾಜ್ಯ ಯೋಗ, ಗಜಕೇಸರಿ ಯೋಗ, ಪರ್ವತ ಯೋಗ, ಅಮಲಾ ಯೋಗಗಳೇ ಈ ಕೀರ್ತಿಗೆ ಕಾರಣ. ಹೇಗೆ ನಿಷ್ಕಳಂಕ ಭಾವನೆಯಿಂದ ಜೀವಿಸುವ ಗೋವನ್ನು ಹತ್ಯೆ ಮಾಡಿ ದೋಷ ಪ್ರಾಪ್ತಿಯಾಗುತ್ತದೋ, ಸರಿಸೃಪದಲ್ಲಿ ನಾಗರ ಹಾವನ್ನು ಅಥವಾ ಇನ್ಯಾವುದೇ ಹಾವುಗಳನ್ನು ಕೊಂದರೆ ನಾಗ ದೋಷ ಬರುವುದೋ ಅದೇ ರೀತಿ ಒಬ್ಬ ಸಜ್ಜನನನ್ನು ಹಿಂಸಿಸಿದರೂ ಬ್ರಹ್ಮ ಹತ್ಯಾದೋಷ ಬಂದೇ ಬರುತ್ತದೆ.

ಮೋದಿ ಅಧಿಕಾರಕ್ಕಾಗಿ ಹಪಹಪಿಸಿದವರಲ್ಲ. ಎಲ್ಲೋ ತಿರುಗುತ್ತಿದ್ದ ಒಬ್ಬ ಫಕೀರನನ್ನು ಅಟಲ್ ಜೀ ಗುಜರಾತ್ ಮುಖ್ಯಮಂತ್ರಿಯನ್ನಾಗಿಸಿದರು. ನಂತರ ರಾಜನಾಥ್ ಸಿಂಗ್ ಕರೆದು ಪ್ರಧಾನಮಂತ್ರಿ ಪದವಿಯಲ್ಲಿ ಕುಳ್ಳಿರಿಸಿದರು. ಆದರೆ ಸಜ್ಜನ ಪ್ರಜೆಗೆ ಕೊಡುವ ಗೌರವಕ್ಕಿಂತ ಮಿಗಿಲಾಗಿ ರಾಜನಾಥ ಸಿಂಘರಿಗೆ ಮೋದಿಯವರು ಕೊಟ್ಟಿಲ್ಲ. ಅಂದು ಮನಸ್ಸು ಮಾಡಿದ್ದರೆ ರಾಜನಾಥ ಸಿಂಘರೇ ಪ್ರಧಾನಿ ಆಗಬಹುದಿತ್ತು. ಆದರೆ ಅವರು ಅಂತಹ ಸ್ವಾರ್ಥಿಯಾಗಿರದೆ ಮೋದಿಗೆ ಕೊಡಿಸಿದರು. ಇವರೆಲ್ಲ ಪ್ರಾತಃಸ್ಮರಣೀಯರು.

ಚುನಾವಣಾ ಕಾಲದಲ್ಲಿ ಎಷ್ಟು ನಾಲಿಗೆ ಉದ್ದ ಬರುತ್ತೋ ಅಷ್ಟರ ಮಟ್ಟಿಗೆ ಮೋದಿಯವರನ್ನು ನಿಂದನೆ ಮಾಡಿದರು. ದೇಶದ ರಕ್ಷಣೆಗಾಗಿ ಕೈಗೊಂಡಂತಹ ಕೆಲಸವನ್ನು ವಿವೇಚನೆ ಇಲ್ಲದೆ ನಿಂದನೆ ಮಾಡಿದರು. ಉತ್ತರ ಭಾರತದ ಲಲ್ಲೂ, ದಕ್ಷಿಣದ ಚಿದಂಬರಂ, ಕೊನೆಗೆ ಮೌನ ಸಿಂಘರೂ ಮೋದಿಯವರನ್ನು ಹಳಿದರು. ಮಧ್ಯಭಾರತದ ದಿಗ್ವಿಜಯ, ಕರ್ನಾಟಕದ ದೊಡ್ಡ ಗೌಡ್ರು, ಸಣ್ಣ ಗೌಡ್ರು, ಸಿದ್ಧರಾಮ, ಶಿವಕುಮಾರ ಇತ್ಯಾದಿ ಜನರು ಹಿಗ್ಗಾ ಮುಗ್ಗ ಬೈದರು, ಹಳಿದರು, ನಿಂದಿಸಿದರು. ಇವರ ಬೆಂಲಿಗ ಪ್ರಜೆಗಳೂ ಕಲ್ಲು ತೂರಿ, ಬೆಂಕಿ ಹಚ್ಚಿ ಪ್ರತಿಭಟಿಸಿ ಮೈ ಸುಟ್ಟುಕೊಂಡದ್ದನ್ನು ನೋಡಿಯಾಯ್ತು. ಮೋದಿಯವರು ಒಂದು ದೇಶದ ಹಾಲಿ ಪ್ರಧಾನಿ ಎಂಬುದನ್ನೂ ಮರೆತು ಸ್ವತಃ ಪಾಕಿಸ್ಥಾನದ ಹಾಲಿ ಪ್ರಧಾನಿಯಾಗಿದ್ದರೂ ಇಮ್ರಾನ್ ಖಾನ್ ಹೀನಾಯವಾಗಿ ನಿಂದಿಸಿದ. ದೇಶದೊಳಗಿನ ನಿಂದಕರು ಈಗ ದಿನಕ್ಕೊಬ್ಬರಂತೆ ತಿಹಾರ್ ಜೈಲು ಪಾಲಾದದ್ದನ್ನೂ ನೋಡಿಯಾಯ್ತು, ಮುಂದೆಯೂ ನೋಡಲಿದ್ದೇವೆ. ನ್ಯಾಯಯುತ ಆಡಳಿತ ನೀಡುವ ನಾಯಕರಿಗೆ ಹಿಂಸೆ ನೀಡಿದರೆ ಅವರು ಎಂದೂ ದ್ವೇಷ ಸಾಧಿಸದೆ, ನ್ಯಾಯ ಪ್ರಕಾರವೇ ತಮ್ಮ ತಮ್ಮ ಕರ್ಮದಲ್ಲಿ ನಿರತರಾಗುತ್ತಾರೆ. ಆದರೆ ಮೇಲೊಬ್ಬ ನಿಯಾಮಕನು ಈ ನಿಂದಕರನ್ನು ನೋಡಿಕೊಳ್ಳುತ್ತಾ ಇರುತ್ತಾನೆ ಎಂಬುದು ಸತ್ಯವಾಗುತ್ತಿದೆ.

ಇಲ್ಲೊಂದು ಶ್ರೀ ಕೃಷ್ಣನು ಗೀತೆಯಲ್ಲಿ ತಿಳಿಸಿದ ಸಂದೇಶವೂ ಇದೆ. ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನಾ ಅಂದರೆ ನೀನು ನಿನ್ನ ಕರ್ಮವನ್ನು ಪ್ರಾಮಾಣಿಕ ಶ್ರದ್ಧೆ ಭಕ್ತಿಯಿಂದ ಮಾಡು. ಫಲ ನಿರೀಕ್ಷಿಸಿದರೆ ಕರ್ಮಕ್ಕೆ ಭಂಗ ಉಂಟಾದೀತು. ಆ ಕರ್ಮಕ್ಕೆ ತಕ್ಕುದಾದ ಫಲ ನಾನೇ ನೀಡುತ್ತೇನೆ ಎಂದು ತಿಳಿಸಿದ್ದ. ಹಿಂದೆ ಕರ್ಮಕ್ಕೆ ತಕ್ಕ ಪ್ರತಿಫಲವು ಪಾಂಡವರಿಗೆ ಸಿಕ್ಕಿ ಕೀರ್ತಿಶಾಲಿಗಳಾದರು. ಈಗಿನ ಸರದಿಯಲ್ಲಿ ಮೋದಿಯವರು ಎಂದೇ ಹೇಳಬೇಕಾಗಿದೆ.
ಅಯ್ಯಾ ನಿಂದಕರೇ ನೀವೆಂದಾದರೂ ಮೋದಿಯವರು ಪ್ರತಿಪಕ್ಷಗಳನ್ನು ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದು ಕೇಳಿದ್ದೀರಾ? ಹಾಗೇನಾದರೂ ಕೇಳಿದ್ದಿದ್ದರೆ ದಯವಿಟ್ಟು ಪುರಾವೆ ಸಹಿತ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ.

ನಾನು ಮೋದಿಯವರೊಳಗಿನ ಶಕ್ತಿಯನ್ನೇ ಗಮನಿಸಿದ್ದೂ, ಆ ಶಕ್ತಿಗೆ ಶರಣಾದದ್ದೂ ಆಗಿದೆ. ದೇಶದ ಮುಂದೆ ಮಾತ್ರವಲ್ಲ ಇಡಿಯ ಜಗತ್ತಿಗೆ ಆ ಶಕ್ತಿಯ ಪ್ರದರ್ಶನವಾಗುವ ಕಾಲ ಸನ್ನಿಹಿತವಾಗಿದೆ… ಕಾದು ನೋಡಿ…

Tags: AstrologycongressGajakesari YogaImran KhanIndiaIndia Pakistan WarJyotirvigyanamKannada ArticlePakistanPM Narendra ModiPrakash Ammannayaಒಂದು ದೊಡ್ಡ ಶಕ್ತಿಗಜಕೇಸರಿ ಯೋಗಜ್ಯೋರ್ತಿವಿಜ್ಞಾನಂನರೇಂದ್ರ ದಾಮೋದರ ದಾಸ ಮೋದಿಪ್ರಕಾಶ್ ಅಮ್ಮಣ್ಣಾಯಮೋದಿ ವ್ಯಕ್ತಿಯಲ್ಲ
Share394Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭಾರತದ ಮೇಲೆ ದಾಳಿಗೆ ಎಷ್ಟು ಉಗ್ರರು, ಎಲ್ಲಲ್ಲಿ ಟೆರರ್ ಲಾಂಚ್ ಪ್ಯಾಡ್’ಗಳು ಸಿದ್ದವಾಗಿವೆ ಗೊತ್ತಾ? ತಿಳಿದರೆ ಗಾಬರಿಯಾಗುತ್ತೀರಿ?

Next Post

ನಿಮ್ಮ ಮೊಗದ ಭಾವವೇ ದುಃಖ ಹೇಳುತ್ತಿತ್ತು, ನಿಮ್ಮೊಂದಿಗೆ ದೇಶವಿದೆ, ಹೆದರಬೇಡಿ: ವಿಜ್ಞಾನಿಗಳಿಗೆ ಮೋದಿ ಆತ್ಮಸ್ಥೈರ್ಯ

kalpa News

kalpa News

Next Post
ನಿಮ್ಮ ಮೊಗದ ಭಾವವೇ ದುಃಖ ಹೇಳುತ್ತಿತ್ತು, ನಿಮ್ಮೊಂದಿಗೆ ದೇಶವಿದೆ, ಹೆದರಬೇಡಿ: ವಿಜ್ಞಾನಿಗಳಿಗೆ ಮೋದಿ ಆತ್ಮಸ್ಥೈರ್ಯ

ನಿಮ್ಮ ಮೊಗದ ಭಾವವೇ ದುಃಖ ಹೇಳುತ್ತಿತ್ತು, ನಿಮ್ಮೊಂದಿಗೆ ದೇಶವಿದೆ, ಹೆದರಬೇಡಿ: ವಿಜ್ಞಾನಿಗಳಿಗೆ ಮೋದಿ ಆತ್ಮಸ್ಥೈರ್ಯ

Leave a Reply Cancel reply

Your email address will not be published. Required fields are marked *

No Result
View All Result
New Laboratory Solutions - Help Indian Labs - Testing Demands
English Articles

Agilent Launches New Laboratory Solutions to Help Indian Labs Meet Rising Testing Demands

by kalpa News
September 7, 2026
0

Kalpa Media House  |  Bengaluru | India's pharmaceutical, food, environmental and industrial testing laboratories are under increasing pressure to process...

Read moreDetails
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL