No Result
View All Result
ABB deepens Karnataka footprint with new investments to serve high growth emerging sectors
English Articles

ABB deepens Karnataka footprint with new investments to serve high growth emerging sectors

by ಕಲ್ಪ ನ್ಯೂಸ್
March 12, 2026
0

Kalpa Media House  |  BENGALURU | ABB, a global technology leader in electrification and automation, is expanding its manufacturing footprint...

Read moreDetails
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

March 9, 2026
Yamaha Introduces XSR155 in ‘Metallic Black’ shade

Yamaha Introduces XSR155 in ‘Metallic Black’ shade

March 9, 2026
  • Advertise With Us
  • Grievances
  • About Us
  • Contact Us
Thursday, March 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ದುಡ್ಡೇ ದೊಡ್ಡಪ್ಪ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 15, 2024
in ಆನಂದ ಕಂದ
0
ದುಡ್ಡೇ ದೊಡ್ಡಪ್ಪ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-13  |
ಈ ಪ್ರಪಂಚವೊಂದು ದೊಡ್ಡ ನಾಟಕರಂಗ. ಈ ರಂಗಮಂಟಪದಲ್ಲಿರುವ ಎಲ್ಲ ವ್ಯಕ್ತಿ, ವಸ್ತುಗಳ ನಿಜಸ್ವರೂಪ ಕಾಲ ಕಾಲಕ್ಕೆ ಅನಾವರಣಗೊಳ್ಳುತ್ತದೆ. ಇಲ್ಲಿ ಸ್ವಾರಸ್ಯವೇನೆಂದರೆ ವ್ಯಕ್ತಿಗಳಿಂದಾಗಿ ವಸ್ತುಗಳಿಗೆ ಬೆಲೆ ಅಥವಾ ಮಹತ್ವ ಬರುವುದು ಕಡಿಮೆ. ಆದರೆ, ಜಡವಾದ ವಸ್ತುಗಳ ಸಂಗದಿಂದಲೇ ವ್ಯಕ್ತಿಯು ತನ್ನನ್ನು ತಾನೆ ಮಹಾನ್ ಎ೦ದು ಭಾವಿಸುತ್ತಾನೆ. ದುಡ್ಡು ಅವುಗಳ ಮೆಲ್ಪಂಕ್ತಿಯನ್ನು ಆವರಿಸಿದೆ.

ಈ ದುಡ್ಡೆಂಬ ಜೇಡವು ತನ್ನ ಜಾಲದಲ್ಲಿ ಎಲ್ಲರನ್ನು ಸಿಲುಕಿಸಿ ಪೀಡಿಸುತ್ತದೆ. ಮನುಷ್ಯ ತನ್ನನ್ನು ತಾನು “ದುಡ್ಡಿಲ್ಲದ ಜೀವನವೇ !… ಛೇ.. ಅದು ತೃಣಕ್ಕೆ ಸಮಾನ” ಎ೦ದು ಹಳಿದುಕೊಳ್ಳುವನು.

ಅದೊಂದು ಕಾಲವಿತ್ತು! ಯಾವುದೇ ದುಡ್ಡಿನ ಹಂಗೆ ಇಲ್ಲದೆ ಮನುಷ್ಯನು ಆನಂದವಾಗಿ ತನ್ನ ಜೀವನವನ್ನು ಸಾಗಿಸುವವನಾಗಿದ್ದ. ಆಗಿನ ಕಾಲದ ಸಂಪತ್ತು ಕೇವಲ ಪೇಪರ್ ಆಗಿರಲಿಲ್ಲ. ಹೊರತು ಅವರವರ ಜೀವನದ ಅವಿಭಾಜ್ಯ ಸಾಮಗ್ರಿಗಳೇ ಆಗಿದ್ದವು. ಅಂದರೆ ಕೃಷಿಕನಿಗೆ ತನ್ನ ಹಸುಗಳು ಮತ್ತು ನೇಗಿಲು ಮುಂತಾದ ಸಂಪತ್ತು. ಮತ್ತು ವಿಪ್ರನಿಗೆ ತನ್ನ ಷಟ್ಕರ್ಮ ಸಂಪತ್ತಾದರೆ, ವೈದ್ಯನಿಗೆ ತನ್ನ ಔಷಧಗಳ ಬಗೆಗಿರುವ ಜ್ಞಾನ ಮತ್ತು ಔಷಧೀಯ ಸಸ್ಯಗಳೇ ಸಂಪತ್ತು. ಹೀಗೆಯೇ ಎಲ್ಲರ ಬಳಿಯೂ.
ಅಂದಿನ ಸಂಪತ್ತಾದರೋ ದುರ್ಬಳಕೆಗೆ ಕಾರಣವಾಗುತ್ತಿರಲಿಲ್ಲ. ಆದರೆ ಈ ದುಡ್ಡು ನಿಷ್ಪ್ರಯೋಜಕವೂ ದುರುಪಯುಕ್ತವೂ ಆಗುತ್ತಿದೆ. ಈ ದುಡ್ಡೆಂಬ ಮಾಯೆ ಜನರಿಗೆ ಅಹಂಕಾರ, ಸ್ವಾರ್ಥ, ಕೋಪ, ಆಸಹನೆ, ಮೋಸ, ವಂಚನೆ ಎಂಬ ಅನೇಕ ಮುಖಗಳ ಬಗ್ಗೆ ಪರಿಚಯ ಮಾಡಿಸಿ ಅದರಲ್ಲಿ ಅಭಿರುಚಿ ಹುಟ್ಟಿಸಿ ಅವರ ಜೀವನವನ್ನೇ ಹಾಳುಮಾಡುತ್ತಿದೆ ಎಂಬುದು ನನ್ನ ಅಭಿಮತ.

ಸದುಪಯೋಗಿಸುವವರ ಬಳಿಯೇ ಹೋದರೂ ಅವರನ್ನು, ಸತಾಯಿಸಿ, ಪೀಡಿಸಿ ಅವರನ್ನೂ ಅವನತಿಯ ದಾರಿಯಲ್ಲೇ ಕರೆದೊಯ್ಯುತ್ತದೆ. ದುಡ್ಡು ದುಡ್ಡು ದುಡ್ಡು ಎ೦ದು ಹಪಹಪಿಸುವಂತೆ ಮಾಡಿ ಜನರು ತಮ್ಮ ಜೀವನದ ಅತ್ಯಮೂಲ್ಯವಾದ ವ್ಯಕ್ತಿತ್ವಗಳಾದ ತಂದೆ-ತಾಯಿ, ಅಣ್ಣ-ತಮ್ಮ, ಹೆಂಡತಿ, ಮಕ್ಕಳೊಡಗಿನ ಬಾಂಧವ್ಯ, ಸುಖ ಸಂತೋಷಗಳ ಮೌಲ್ಯಗಳನ್ನು ಕಳೆಯುತ್ತಿದೆ. ಅಂತಹ ಆ ಮಾಯಾವಿಗೆ ಇಷ್ಟೆಲ್ಲಾ ಶಕ್ತಿ ಇದ್ದರೂ ಒಬ್ಬರನ್ನು ಮಾತ್ರ ತಾನು ಗೆಲ್ಲಲಾಗುತ್ತಿಲ್ಲ. ಅವರೇ “ಸಾಧು-ವಿರಾಗಿಗಳು”. ಇವರನ್ನು ನೋಡಿದರೆ ಆ ದುಡ್ಡಿಗೆ ಅತ್ಯಂತ ಕೋಪ. “ಛೇ ಎಷ್ಟು ಓಲೈಸಿದರೂ ನನ್ನ ಮಾಯಾಜಾಲಕ್ಕೆ ಸಿಲುಕುವುದೇ ಇಲ್ಲವಲ್ಲ” ಎಂಬ ಸಿಡುಕು ಅದಕ್ಕೆ.

ಒಟ್ಟಿನಲ್ಲಿ ಜನರ ಜೀವನ, ಸಮಾಜದ ಸ್ವಾಸ್ಥ್ಯ, ಆದರ್ಶ ಮೌಲ್ಯಗಳನ್ನು ಹಣ ಹಾಳು ಮಾಡುತ್ತಿದೆ. ತನ್ನನ್ನು ತಾನೇ ಬಿಸಿ ತುಪ್ಪವನ್ನಾಗಿ ಮಾಡಿಕೊಂಡು ಜನರ ಬಾಯಿಯನ್ನು ಸೇರುತ್ತದೆ. ಅದು ಜನರಿಗೆ ರುಚಿ ಹೆಚ್ಚಿದರೆ ತುಪ್ಪಕ್ಕಿಂತಲೂ ದಪ್ಪಟ್ಟು ಬಿಸಿಯಾಗಿ ಬುದ್ಧಿಯನ್ನು ಸುಡುವುದು. ಆಕಸ್ಮಾತ್ ಬಿಸಿಯೆಂದು ಉಗುಳಿದರೆ ಹೊಟ್ಟೆಗಿಲ್ಲದೆ ಬೀದಿಪಾಲಾಗುವ ಪರಿಸ್ಥಿತಿಯನ್ನುಂಟುಮಾಡುತ್ತದೆ.
ಇಷ್ಟೆಲ್ಲಾ ಅನರ್ಥವನ್ನುಂಟು ಮಾಡುವುದರ ಬಗೆಗೆ ತಿಳಿದೂ “ದುಡ್ಡು ದುಡ್ಡು “ಎಂಬ ದುರಾಸೆಯನ್ನು ಬಿಡದೆ ಮಾಂಸದಾಸೆಗೆ ಗಾಳಕ್ಕೆ ಸಿಲುಕಿದ ಮತ್ಸ್ಯದಂತೆ ನಮ್ಮನ್ನು ನಾವೇ ಸಿಕ್ಕಿಸಿಕೊಳ್ಳುತ್ತೇವೆ. ಅದನ್ನೇ ಶ್ರೀಕೃಷ್ಣಪರಮಾತ್ಮ ಗೀತೆಯಲ್ಲಿ ಹೇಳುತ್ತಾನೆ. ಯಾವುದು ತನ್ನ ಪರಿಚಯವನ್ನು ಹೊರಗಿನಿಂದಾಗಿ ಅಮೃತದಂತೆ ತೋರಿಕೊಳ್ಳುತ್ತದೋ ಅದು ಒಳಗಿನಿಂದಾಗಿ ವಿಷಪೂರಿತವಾಗಿದ್ದರೆ ಅದು ರಾಜಸ ಪದಾರ್ಥವೆಂದು. ದುಡ್ಡು ಆ ಸ್ಥಿತಿಯನ್ನೂ ಮೀರಿ ಒಳಗೂ ಹೊರಗೂ ಸುಖದ ಆಕರ್ಷಕವಾಗಿ ಮೋಹಿಸುವ ತಾಮಾಸ ಸುಖವಾಗಿ ಪರಿವರ್ತಿತವಾಗುತ್ತಿದೆ. ಆದ್ದರಿಂದ ವಸ್ತುಗಳ ಆಯ್ಕೆಯಲ್ಲಿ ನಮ್ಮ ಎಚ್ಚರ ಸದಾ ಇರಬೇಕು. ಅದರಲ್ಲೂ ಈ ದುಡ್ಡಿನಂತಹ ವಸ್ತುಗಳನ್ನಂತು ಅತಿ ಸೂಕ್ಷ್ಮವಾದ ನೀರಿನ ಗುಳ್ಳೆಯಂತೆ ಕಾಣಬೇಕು. ಜೋರಾಗಿ ಒತ್ತಿದರೂ,ಬೇಡವೆಂದು ನೂಕಿದರೂ ಒಡೆದು ಹೋಗುತ್ತದೆ.

ಅಕಸ್ಮಾತ್ ದುಡ್ಡೇ ದೊಡ್ಡಪ್ಪ ಎಂದು “ಬೀಗಿ“ದರೆ ನಮ್ಮನ್ನು ಯಾರಿಗೂ ಬೇಡವಾದ ಲೋಕಕ್ಕೆ ತಳ್ಳಿ “ಬೀಗ“ ಹಾಕುತ್ತದೆ.

ಆದ್ದರಿಂದ ನಾವೆಲ್ಲರೂ ದುಡ್ಡಿನ ದಾಸರಾಗದೇ ಸಾಧನೆಯ ಅರಸರಾಗೋಣ. ಜೀವನ ನಿರ್ವಹಣೆಗಾಗಿ ಹಣವೇ ಹೊರತು ಹಣವೇ ಜೀವನವಲ್ಲ. ಜಡಧನವನ್ನು ಬಿಟ್ಟು ಸಾತ್ವಿಕವಾದ ಜೈವಿಕ ಧನ [ಜ್ಞಾನ, ಧಾನ್ಯ, ಅಭಯ, ಸಹಾಯ, ಕರುಣೆ….. ]ವನ್ನು ಸಮಾಜದಲ್ಲಿ ಹಂಚೋಣ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    

http://kalpa.news/wp-content/uploads/2024/04/VID-20240426-WA0008.mp4
Tags: AnandakandaAnandavana GurukulaKannada News WebsiteLatest News KannadaWorldಆದರ್ಶ ಮೌಲ್ಯಜೀವನದುಡ್ಡುಪ್ರಪಂಚಮತ್ಸ್ಯಷಟ್ಕರ್ಮ
Share196Tweet123Send
Previous Post

ಭದ್ರಾವತಿ | ಕಾರುಣ್ಯ ದಾರಿದೀಪ ವಿಶೇಷ ಯೋಜನೆಗೆ ಚಾಲನೆ

Next Post

ನಿಮಗೆ ನಾಚಿಕೆ ಆಗಲ್ವ? ಮೈಸೂರಿನ ಎಲ್ಲಾ ತಹಶೀಲ್ದಾರರಿಗೂ ಸಚಿವ ಕೃಷ್ಣ ಬೈರೇಗೌಡ ಛೀಮಾರಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನಿಮಗೆ ನಾಚಿಕೆ ಆಗಲ್ವ? ಮೈಸೂರಿನ ಎಲ್ಲಾ ತಹಶೀಲ್ದಾರರಿಗೂ ಸಚಿವ ಕೃಷ್ಣ ಬೈರೇಗೌಡ ಛೀಮಾರಿ

ನಿಮಗೆ ನಾಚಿಕೆ ಆಗಲ್ವ? ಮೈಸೂರಿನ ಎಲ್ಲಾ ತಹಶೀಲ್ದಾರರಿಗೂ ಸಚಿವ ಕೃಷ್ಣ ಬೈರೇಗೌಡ ಛೀಮಾರಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಶಿವಮೊಗ್ಗ | ಮಾರ್ಚ್ 13-14 | ಅತಿ ಅಪರೂಪದ ಛಾಯಾಚಿತ್ರ ಪ್ರದರ್ಶನ | ತಪ್ಪದೆ ಭೇಟಿ ನೀಡಿ

ಶಿವಮೊಗ್ಗ | ಮಾರ್ಚ್ 13-14 | ಅತಿ ಅಪರೂಪದ ಛಾಯಾಚಿತ್ರ ಪ್ರದರ್ಶನ | ತಪ್ಪದೆ ಭೇಟಿ ನೀಡಿ

March 12, 2026
ಹರ್ಮುಜ್ ಮಾರ್ಗದ ತೈಲಕ್ಕಿಂತಲೂ ಹೆಚ್ಚಿನದ್ದು ಭಾರತ ತಲುಪಿದೆ, ಭಯ ಬೇಡ | ಕೇಂದ್ರ ಮಹತ್ವದ ಹೇಳಿಕೆ

ಹರ್ಮುಜ್ ಮಾರ್ಗದ ತೈಲಕ್ಕಿಂತಲೂ ಹೆಚ್ಚಿನದ್ದು ಭಾರತ ತಲುಪಿದೆ, ಭಯ ಬೇಡ | ಕೇಂದ್ರ ಮಹತ್ವದ ಹೇಳಿಕೆ

March 12, 2026
ಕಳ್ಳತನ ನಡೆದಿದ್ದು ಭದ್ರಾವತಿಯ ಜನ್ನಾಪುರದಲ್ಲಿ | ಆರೋಪಿ ಪತ್ತೆಯಾಗಿದ್ದು ಬೆಂಗಳೂರಿನಲ್ಲಿ | ನಡೆದಿದ್ದೇನು?

ಕಳ್ಳತನ ನಡೆದಿದ್ದು ಭದ್ರಾವತಿಯ ಜನ್ನಾಪುರದಲ್ಲಿ | ಆರೋಪಿ ಪತ್ತೆಯಾಗಿದ್ದು ಬೆಂಗಳೂರಿನಲ್ಲಿ | ನಡೆದಿದ್ದೇನು?

March 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ದಿನಗಳು ಶಿವಮೊಗ್ಗದ ಮೂರು ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ | ಇಲ್ಲಿದೆ ಡೀಟೇಲ್ಸ್

March 12, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL