No Result
View All Result
PESITM hosts Mock CET 2026 to Strengthen KCET Preparation
English Articles

PESITM hosts Mock CET 2026 to Strengthen KCET Preparation

by ಕಲ್ಪ ನ್ಯೂಸ್
March 31, 2026
0

Kalpa Media House  |  Shivamogga  | PES Institute of Technology and Management #PESITM conducted Mock CET 2026 on March 30...

Read moreDetails
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
SWR to run special trains for Good Friday, Easter rush

SWR to run special trains for Good Friday, Easter rush

March 30, 2026
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಪಿಆರ್‌ಓ ಪ್ರವೀಣ್ ಅಧಿಕಾರ ಸ್ವೀಕಾರ

South Western Railway | Praveen Takes Charge as Hubballi Divisional Public Relations Officer

March 28, 2026
26 ವರ್ಷದ ಯುವಕನಿಗೆ ಮರುಜೀವ ಕೊಟ್ಟ ಮೆಡಿಕವರ್ ಆಸ್ಪತ್ರೆ | ಏನಾಗಿತ್ತು ಯುವಕನಿಗೆ?

Critical Condition Turned Around with Timely Medical Intervention

March 27, 2026
  • Advertise With Us
  • Grievances
  • About Us
  • Contact Us
Tuesday, March 31, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಆರ್ ಜೆ ನಯನಾ ಜೊತೆ ಬೆಳಗಿನ ಪಯಣ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 8, 2018
in Special Articles
0
Share on FacebookShare on TwitterShare on WhatsApp

ಹೌದು ನಯನಾ, ಮಂಗಳೂರು ಎಫ್‍ಎಂ ರೇಡಿಯೋ ಲೋಕದಲ್ಲಿ ಈ ಹೆಸರು ಕೇಳದವರು ಯಾರಿದ್ದಾರೆ… ಅಷ್ಟು ಫೇಮಸ್ ಈ ಆರ್‌ಜೆ.
ಇವರ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ ಬನ್ನಿ…

ಇವರ ಹೆಸರು ನಯನಾ ಯರುಕೋಣೆ ಚೀತನಮಕ್ಕಿ ವಿನಯಾ ಎನ್ ಶೆಟ್ಟಿ ಹಾಗೂ ನೆಲ್ಯಾಡಿ ವೀರಪ್ಪ ಶೆಟ್ರ ಮನೆ ನಾರಾಯಣ ಶೆಟ್ಟಿಯವರ ಪುತ್ರಿ.
ಸದಾನಂದ ಶೆಟ್ಟಿಯವರು ನಾವುಂದದಲ್ಲಿ ಪ್ರಾಥಮಿಕ, ಪಿಯು (ಸೈನ್ಸ್) ಶಿಕ್ಷಣವನ್ನು ನಾವುಂದದಲ್ಲಿ ಮುಗಿಸಿ ನಂತರ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಿಸ್ಟಿಂಕ್ಷನ್ ನಲ್ಲಿ ಬಿಸಿಎ ಪದವಿ ಪಡೆದು ಬೆಂಗಳೂರಿನಲ್ಲಿ ಎಂಬಿಎ HR (ಕಾಲೇಜಿಗೆ ಪ್ರಥಮ) ಪದವಿಯನ್ನು ಪಡೆದು HR Recruiter ಆಗಿ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಿದರು.

ಕಲಿಕೆಯಲ್ಲಿ ಹತ್ತನೆಯ ತರಗತಿಯವರೆಗೆ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡದ ಇವರು ಇಷ್ಟಲ್ಲದೆ, ಸಾಂಸ್ಕೃತಿಕ ಚಟುವಟಿಕೆಗಳು, ಬರವಣಿಗೆ, ಭಾಷಣ ಜೊತೆಗೆ ಆಟೋಟ ಸ್ಪರ್ಧೆಗಳಲ್ಲಿ ಸದಾ ಭಾಗವಹಿಸಿ ಅದೆಷ್ಟೋ ಬಹುಮಾನಗಳನ್ನು ಕಾಲೇಜು ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಬಾಚಿಕೊಂಡಿದ್ದಾರೆ.

ಮಂಗಳೂರಿಗೆ ತೆರಳಿದ ನಂತರ ಆಕಸ್ಮಿಕವಾಗಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ನ ಅಂಗಸಂಸ್ಥೆ ರೇಡಿಯೋ ಮಿರ್ಚಿಯಲ್ಲಿ, ಅದೆಷ್ಟೋ ಆಯ್ಕೆ ಪ್ರಕ್ರಿಯೆಗಳ ಮೂಲಕ ಅಪರೂಪದ ಹಾಗೆ ಅಷ್ಟೇ ಕಷ್ಟಕರವಾದ, ಕೆಲವರಿಗೆ ಮಾತ್ರವೇ ಸಿಗಬಹುದಾದ ಕೆಲಸವಾದ ಆರ್‌ಜೆ ಅಂದ್ರೆ ರೇಡಿಯೋ jockey ಆಗಿ ಆಯ್ಕೆ ಆಗುತ್ತಾರೆ.

ಒಂದೂವರೆ ವರ್ಷಗಳ ಅನುಭವ ಪಡೆದ ನಂತರ, ಅವರನ್ನು ಹುಡುಕಿಕೊಂಡು ಬಂದ ಆಫರ್ 93.5 ರೆಡ್ ಎಫ್‌ಎಮ್  ಡ್ರೈವ್ ಟೈಮ್ ಶೋ ಅಂದರೆ ಬೆಳಿಗ್ಗೆ ಏಳು ಘಂಟೆಯಿಂದ ಹನ್ನೆರಡು ಘಂಟೆಯವರೆಗಿನ ಪ್ರಸಿದ್ಧ ಕಾರ್ಯಕ್ರಮ ನಮಸ್ಕಾರ ಮಂಗಳೂರು.

ನಮಸ್ಕಾರ ಮಂಗಳೂರು 5 ಗಂಟೆಗಳ ಕಾರ್ಯಕ್ರಮವಾಗಿದ್ದು ಇದು ಮಾಹಿತಿ, ತಿಳಿವಳಿಕೆ, ಜನಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಎಫ್‍ಎಂ ರೇಡಿಯೋ ಇತಿಹಾಸದಲ್ಲಿ ಭಾರತದಲ್ಲಿಯೇ ಅತಿಹೆಚ್ಚಿನ ಅವಧಿಯ ರೇಡಿಯೋ ಕಾರ್ಯಕ್ರಮವಾಗಿದೆ.

ನವೀನ ಪರಿಕಲ್ಪನೆಗಳು, ಉತ್ತಮ ವಿಚಾರಗಳಿಂದ ನಮಸ್ಕಾರ ಮಂಗಳೂರು ಕರಾವಳಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಆರ್ ಜೆ ನಯನಾ ಅಂದ್ರೆ ಮಂಗಳೂರಿನ ಬೆಳಗು, ಬೆಳಗಿನ ಪಯಣ, ನಿಮ್ಮ ನಯನ, ನಾನ್ ನಯನ, ಕಣ್ಣಿನ ರಾಣಿ ಹೀಗೇ ಜನ ಬೇರೆ ಬೇರೆ ಹೆಸರಿನಿಂದ ಪ್ರೀತಿಯಿಂದ ಗುರುತಿಸುತಿದ್ದು, ಕುಂದಾಪುರದ ನಯನ ಈಗ ಕರಾವಳಿಯ ಪ್ರೀತಿಯ ಮನೆ ಮಗಳಾಗಿದ್ದಾಳೆ.

ತನ್ನ ಅದ್ಭುತ ಕಂಠ ಸಿರಿ, ಮೃದು ಮಾತು, ಧ್ವನಿಗಳ ಏರಿಳಿತದ ಮೇಲಿನ ಹಿಡಿತ ಹಾಗೆ ಕನ್ನಡ ಭಾಷಾ ಸಂಪತ್ತು, ನಿರರ್ಗಳ ಮಾತಿನ ಮೂಲಕ ಕೇವಲ ರೇಡಿಯೋದಲ್ಲಿ ಮಾತ್ರವಲ್ಲದೆ ನಿರೂಪಣೆಯ ಮೂಲಕವೂ ಜನ ಮನವನ್ನು ಗೆದ್ದಿದ್ದಾರೆ.

ದುಬೈನಲ್ಲೂ ಸೈ ಎನಿಸಿಕೊಂಡ ನಯನಾ

ದುಬೈನಲ್ಲಿ ನಡೆದ ನಮ್ಮ ಕುಂದಾಪುರ ಸ್ನೇಹ ಮಿಲನದಲ್ಲಿ ಎಸ್. ಜಾನಕಿ, ವಾಣಿ ಜಯರಾಮ್, ರಾಜೇಶ್ ಕೃಷ್ಣನ್ ಅವರ ಕಾರ್ಯಕ್ರಮಗಳ ನಿರೂಪಣೆಯ ಮೂಲಕ ಕರಾವಳಿಯಲ್ಲಿ ಮನೆಮಾತಾಗಿದ್ದಾರೆ. ಟಿವಿ ವಾಹಿನಿಯಲ್ಲೂ ಕೆಲವು ಕಾಲ ಕೆಲಸ ಮಾಡಿದ ಅನುಭವ ಇದ್ದು ಇದರ ಜೊತೆಗೆ ಕನ್ನಡದ ಒಂದು ಮೊಟ್ಟೆಯ ಕಥೆ ಚಿತ್ರ ಪಾತ್ರವೊಂದಕ್ಕೆ ಧ್ವನಿ ನೀಡಿದ್ದು, ರೇಡಿಯೋ ಜಾಹಿರಾತುಗಳು, ಡಾಕ್ಯುಮೆಂಟರಿ, ಕಿರು ಚಿತ್ರಗಳಿಗೆ ಕೂಡ ಧ್ವನಿಯಾಗಿದ್ದಾರೆ.

ಬರಹಗಾರ್ತಿಯೂ ಆಗಿರುವ ನಯನಾ ಅವರ ಪರಿಸರ ಹಾಗೂ ಜನಜಾಗೃತಿಗೆ ಸಂಬಂಧಿಸಿದ ಹಲವಾರು ಲೇಖನಗಳು ಈಗಾಗಲೇ ವಿಜಯವಾಣಿ, ವಿಶ್ವ ವಾಣಿ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಕಥೆ ಕವನ ಬರೆಯುವ ಅಭ್ಯಾಸವು ಇದ್ದು ಭಾವನಾತ್ಮಕ ಅಂಶಗಳ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಇವರು.

ಪ್ರತಿ ದಿನ ತನ್ನ ಕಾರ್ಯಕ್ರಮದ ಮೂಲಕ ಜನರಿಗೆ ಸ್ಪೂರ್ತಿ ಹಾಗೆ ಹಲವು ಜನಜಾಗೃತಿಗೆ ಸಂಬಂಧಿಸಿದ ವಿಚಾರಗಳ ಮೂಲಕ ಅದೆಷ್ಟೋ ಜನರಿಗೆ ಮಾದರಿಯಾಗಿದ್ದು ಇತ್ತೀಚೆಗೆ ತನ್ನ ತಂದೆಯ ನೆನಪಿಗಾಗಿ ಸೀಡ್ ಬಾಲ್ ಅಭಿಯಾನ ಕಾರ್ಯಕ್ರಮ ಕೂಡ ಮಾಡಿ ಕಾಡುಗಳಲ್ಲಿ ಅದರ ಬಿತ್ತನೆ ಕಾರ್ಯಕ್ರಮ ಕೂಡ ತನ್ನ ಸಹೋದರ ನವೀನ್ ಶೆಟ್ಟಿ ಹಾಗೂ ಸ್ನೇಹಿತರೊಂದಿಗೆ ಮಾಡಿದ್ದು ಈಗಾಗಲೇ ಪರಿಸರ ಪರ ಕೆಲಸಗಳನ್ನು ಮಾಡುವ ಪಣತೊಟ್ಟಿದ್ದಾರೆ.

ಉದ್ಯಮಿ ಕಾಕ್ತೋಟ ಉಪ್ಪುಂದರ ಮನೆ ಸದಾನಂದ್ ಶೆಟ್ಟೆಯವರ ಕೈ ಹಿಡಿದು ಎರಡು ವರ್ಷದ ಮಗ ಇಶಾನ್ ಶೆಟ್ಟಿ ಯ ಜೊತೆ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ.

Name: Nayana shetty
Husband: sadanand shetty
Mother: vinaya N Shetty
yarukone cheathnamakky
Father: nelyadi veerappa
shetra mane narayana shetty
Education: MBA HR(Bangalore)
Job-HR recruiter, Radio jockey 98.3,
Currently working for 93.5 Red FM

Other areas
1. voice over aritst- ondu motteya kathe, short films, documentaries, advertisements, script writer
2. Writing articles in vijayavani and vishwa vani
3. You tube channel anchor
4. Giving talks to students

ಮಾಹಿತಿ ಸಂಗ್ರಹ ಮತ್ತು ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

 

Tags: DubaiMangaloreRadio JockeyRadio MirchiRJ Nayanaನಯನಾ ಜೊತೆ ಬೆಳಗಿನ ಪಯಣ
Share200Tweet123Send
Previous Post

ಗೋಕರ್ಣ ದೇಗುಲ: ರಾಮಚಂದ್ರಾಪುರ ಮಠದ ಆಡಳಿತ ಮುಂದುವರಿಕೆಗೆ ಸುಪ್ರೀಂ ಅಸ್ತು

Next Post

ಬಾಡಿಗೆ ಕರಾರು: ಲೀಗಲ್‍ಡೆಸ್ಕ್-ಬೆಂಗಳೂರು ಒನ್ ಕೇಂದ್ರದ ನೂತನ ಸೇವೆ ಹೇಗಿದೆ ನೋಡಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬಾಡಿಗೆ ಕರಾರು: ಲೀಗಲ್‍ಡೆಸ್ಕ್-ಬೆಂಗಳೂರು ಒನ್ ಕೇಂದ್ರದ ನೂತನ ಸೇವೆ ಹೇಗಿದೆ ನೋಡಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಏ.3 ರಿಂದ 5 ‘ಶಿವಮೊಗ್ಗ ಹಂಟರ್ಸ್ ಕಪ್’: ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್

ಏ.3 ರಿಂದ 5 ‘ಶಿವಮೊಗ್ಗ ಹಂಟರ್ಸ್ ಕಪ್’: ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್

March 31, 2026
ಕೆ ಆರ್ ಪೇಟೆ | ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ‌ವಿಜಯಲಕ್ಷ್ಮಿ, ಉಪಾಧ್ಯಕ್ಷರಾಗಿ ಮಧು ಅವಿರೋಧ ಆಯ್ಕೆ

ಕೆ ಆರ್ ಪೇಟೆ | ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ‌ವಿಜಯಲಕ್ಷ್ಮಿ, ಉಪಾಧ್ಯಕ್ಷರಾಗಿ ಮಧು ಅವಿರೋಧ ಆಯ್ಕೆ

March 31, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
SWR to run special trains for Good Friday, Easter rush

ಯಶವಂತಪುರ ತಾಳಗುಪ್ಪ ನಡುವೆ ಸ್ಪೆಷಲ್ ಎಕ್ಸ್ಪ್ರೆಸ್ ರೈಲು | ಯಾವತ್ತು? ಇಲ್ಲಿದೆ ಡೀಟೇಲ್ಸ್

March 31, 2026
ದಾಸವಾಳ ನುಂಗಿ ಆರು ತಿಂಗಳ ಮಗು ಸಾವು

ದಾಸವಾಳ ನುಂಗಿ ಆರು ತಿಂಗಳ ಮಗು ಸಾವು

March 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL