ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು-ಕೆಎಸ್’ಆರ್ ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಒಡೆಯರ್ ಎಕ್ಸ್’ಪ್ರೆಸ್ ರೈಲುಗಳಿಗೆ Mysore-Bengaluru Wadeyar Express train ರಾಮನಗರಂ ನಿಲ್ದಾಣದಲ್ಲಿ ಒಂದು ನಿಮಿಷದ ಪ್ರಾಯೋಗಿಕ ನಿಲುಗಡೆ ನೀಡಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ South Western Railway ಮಾಹಿತಿ ನೀಡಿದ್ದು, 12613/12614 ಸಂಖ್ಯೆಯ ಮೈಸೂರು-ಕೆಎಸ್’ಆರ್ ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಒಡೆರ್ಯ ಎಕ್ಸ್’ಪ್ರೆಸ್ ರೈಲುಗಳಿಗೆ ರಾಮನಗರಂ ನಿಲ್ದಾಣದಲ್ಲಿ ಒಂದು ನಿಮಿಷದ ಪ್ರಾಯೋಗಿಕ ನಿಲುಗಡೆಗೆ ಅವಕಾಶ ಕಲ್ಪಿಸಿದೆ.
ಈ ನಿಲುಗಡೆಯು ಮೇ 5, 2026 ರಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.
ಇದರ ಅನ್ವಯ, ರೈಲು ಸಂಖ್ಯೆ 12613 ಮೈಸೂರು-ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲು ರಾಮನಗರಂ ನಿಲ್ದಾಣಕ್ಕೆ 12:41 ಗಂಟೆಗೆ ಆಗಮಿಸಿ, 12:42 ಗಂಟೆಗೆ ನಿರ್ಗಮಿಸಲಿದೆ.
Also read: ನಿಮ್ಮನ್ನ ನೋಡ್ಕೋತೀವಿ | ಹೆಲ್ಮೆಟ್ ಧರಿಸದೇ ಪೊಲೀಸರಿಗೇ ಬೆದರಿಕೆ | ಜಬೀವುಲ್ಲಾ, ಸೈಯ್ಯದ್ ಬಂಧನ
ಅದೇ ರೀತಿ, ರೈಲು ಸಂಖ್ಯೆ 12614 ಕೆಎಸ್’ಆರ್ ಬೆಂಗಳೂರು-ಮೈಸೂರು ಎಕ್ಸ್’ಪ್ರೆಸ್ ರೈಲು ರಾಮನಗರಂ ನಿಲ್ದಾಣಕ್ಕೆ 16:01 ಗಂಟೆಗೆ ಆಗಮಿಸಿ, 16:02 ಗಂಟೆಗೆ ನಿರ್ಗಮಿಸಲಿದೆ.
ರಾಮನಗರಂ ಮತ್ತು ಸುತ್ತಮುತ್ತಲಿನ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಸುಗಮ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಪ್ರಾಯೋಗಿಕ ನಿಲುಗಡೆಯನ್ನು ಪರಿಚಯಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















