Saturday, June 21, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಮೈಸೂರು

ದುರಭಿಮಾನ ಬಿಟ್ಟು ದೇವರ ಮಹಾಕರುಣೆ ಎಂದು ವಿಶ್ವವನ್ನು ಭಾವಿಸಿ: ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ

ಅಗ್ರಹಾರದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿ `ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವ'

May 28, 2023
in ಮೈಸೂರು
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಸತ್ಯವಾಗಿರುವ ಜಗತ್ತಿನ ಪ್ರತಿಯೊಂದು ವಸ್ತು- ವೈವಿಧ್ಯಗಳನ್ನೂ ಪರಮಾತ್ಮನ ಮಹತ್ತರ ಕೊಡುಗೆಯೆಂದೇ ತಿಳಿದರೆ ಜೀವನ ಸುಂದರ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಅಗ್ರಹಾರದಲ್ಲಿರುವ ಉತ್ತರಾದಿಮಠದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿ `ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವ’ 4 ದಿನಗಳ ವಿಶೇಷ ಕಾರ್ಯಕ್ರಮ ಸರಣಿಗೆ ಭಾಗವತ ತಾತ್ಪರ್ಯ ನಿರ್ಣಯ ಮಹಾನ್ ಗ್ರಂಥದ ಪಾಠ-ಪ್ರವಚನದ ಮೂಲಕ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ದೇವರ ವಶವಾಗಿರುವ ಈ ಜಗತ್ತನ್ನು ನನ್ನದು ಎಂದು ಭಾವಿಸಿದಾತ ಸಮಸ್ಯೆಗಳಿಗೆ ಸಿಲುಕುತ್ತಾನೆ. ನಮ್ಮದು ಎಂಬ ದುರಭಿಮಾನ ಬಿಟ್ಟು ದೇವರ ಮಹಾಕರುಣೆ ಎಂದು ವಿಶ್ವವನ್ನು ಭಾವಿಸಿ ಬದುಕೋಣ. ಆಗಮಾತ್ರ ಪ್ರೀತಿ, ಭಕ್ತಿ, ಸೌಹಾರ್ದ, ಸಾರ್ಥಕ್ಯಭಾವಗಳು ಮೇಳೈಸುತ್ತವೆ ಎಂದರು.

ನೂರಾರು ಭಕ್ತರಿಂದ ಪಾದಪೂಜೆ ಸ್ವೀಕಾರ ಮಾಡಿದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ನಂತರ ಭಕ್ತರಿಗೆ ತಪ್ತ ಮುದ್ರಾಧಾರಣೆ ನೀಡಿದರು.

ಆಚಾರ್ಯ ಮಧ್ವರು ರಚಿಸಿದ `ಭಾಗವತ ತಾತ್ಪರ್ಯ ನಿರ್ಣಯ’ ಎಂಬ ಪವಿತ್ರ ಗ್ರಂಥವು ಧರ್ಮ-ಶಾಸ್ತ್ರ ಜಿಜ್ಞಾಸುಗಳಿಗೆ ಸೂಕ್ತವಾದ ತಿಳಿವಳಿಕೆ ಮೂಡಿಸುತ್ತದೆ. ಇದರ ಅಧ್ಯಯನದಿಂದ ದೊರಕುವ ಮಹತ್ತರ ಲಾಭ ಏನೆಂದರೆ ನಾವು ಇತರ ಗ್ರಂಥಗಳನ್ನು ಹೇಗೆ ತಿಳಿಯಬೇಕು ಎಂಬ ಜ್ಞಾನ ಮೂಡುತ್ತದೆ. ಪುರಾಣ, ಶಾಸ್ತ್ರಗಳ ಮಾರ್ಗ ತೆರೆದುಕೊಳ್ಳುತ್ತದೆ. ಅನಂತ ವೇದಗಳು, ಇತಿಹಾಸ ಮತ್ತು ಸತ್‌ ಶಾಸ್ತ್ರಗಳನ್ನು ಪರಿಪೂರ್ಣವಾಗಿ ಅರಿತಿದ್ದ ಆಚಾರ್ಯ ಮಧ್ವರು ಅವುಗಳಿಗೆ ಸಮರ್ಥವಾದ, ಸರ್ವ ದೇಶ ಕಾಲವೂ ಮೆಚ್ಚುವಂಥ ನಿರ್ಣಯಗಳನ್ನು ರಚಿಸಿ ಕೊಟ್ಟಿದ್ದಾರೆ. ಭಕ್ತಿ ಮತ್ತು ಶ್ರದ್ಧೆಯಿಂದ ಇವುಗಳ ಅಧ್ಯಯನ ಮಾಡಿ ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಪರಮಾತ್ಮನಲ್ಲಿ ಮನಸ್ಸು ಸ್ಥಿರವಾಗಲಿ
ಯಾರು ಪರಮಾತ್ಮನಲ್ಲಿ ಮನವನ್ನು ಸ್ಥಿರವಾಗಿ ಇಡುವರೋ ಅವರು ಇಹ ಮತ್ತು ಪರದಲ್ಲಿ ಅನಂತ ಸುಖವನ್ನು ಅನುಭವಿಸುತ್ತಾರೆ. ಕೇವಲ ಲೌಕಿಕ ಜೀವನದ ಆಮಿಷಗಳಿಗೆ ಬೀಳದೇ ದಿನದ ಕೆಲವು ಸಮಯವಾದರೂ ಪರಮಾತ್ಮನ ಕತೆಗಳನ್ನು ಕೇಳುವ ಮನೋಸ್ಥಿತಿ ರೂಢಿಸಿಕೊಳ್ಳಬೇಕು. ದೇವರ ಸಖ್ಯದ ಪ್ರೀತಿ, ಆನಂದ ಮತ್ತು ಭಾವಗಳನ್ನು ಅನುಭವಿಸಬೇಕು. ಗಾಯನ, ನರ್ತನ ಮೊದಲಾದ ನವವಿಧ ಭಕುತಿಗಳು ನಮ್ಮಲ್ಲಿ ಮನೆ ಮಾಡಬೇಕು. ಯಾವುದೂ ಬೇಡವೆಂದರೂ ಅಂತರಂಗದಲ್ಲಿ ಅನನ್ಯವಾಗಿ ಪರಮಾತ್ಮನ ಚಿಂತನೆಯನ್ನಾದರೂ ಮಾಡಬೇಕು. ಮುಖ ಪ್ರಸಾದ ಮತ್ತು ದಾರ್ಢ್ಯಗಳೇ ಭಕ್ತಿಯ ಲಕ್ಷಣಗಳು ಎಂಬುದನ್ನು ನಾವು ತಿಳಿಯಬೇಕು ಎಂದು ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.

ಮೋಕ್ಷ ಸಾಧನೆ ಕಡೆಗೆ ಸಾಗಿ
ಭಾಗವತ ತಾತ್ಪರ್ಯ ನಿರ್ಣಯ ಗ್ರಂಥವು `ಕಂಡಕಂಡದ್ದೆಲ್ಲಾ ಕಮಲನಾಭನ ಮೂರ್ತಿ’ ಎಂದು ಸಾರಿ ಹೇಳಿದೆ. ಅಭಯ ನೀಡುವ ದೇವರನ್ನು ನಂಬಿದವರಿಗೆ ಎಂದೂ ಮೋಸವಾಗಿಲ್ಲ. ಗಂಭೀರವಾಗಿ ಇರುವವರನ್ನು ಕಂಡು ಇವರೆಲ್ಲಾ ಏನು ಮಾಡಿಯಾರು ಎಂದು ಹೀಯಾಳಿಸಬೇಡಿ. ದೇವರ ಬಗ್ಗೆ ಅಚಲ ವಿಶ್ವಾಸ ಇರುವ ಅಂತರಂಗದ ಭಕ್ತರಿಗೂ ದೇವರ ಕಾರುಣ್ಯ ಇದ್ದೇ ಇರುತ್ತದೆ. ಮಾನವ ಜನ್ಮ ದೊರಕಿರುವಾಗ ಮೋಕ್ಷ ಸಾಧನೆ ಕಡೆಗೆ ನಮ್ಮ ಮನಸ್ಸು ಸಾಗಬೇಕು ಎಂದು ಸ್ವಾಮೀಜಿ ಹೇಳಿದರು.
ಮಠದ ವಿದ್ವಾಂಸರು, ನೂರಾರು ಶಿಷ್ಯವರ್ಗದವರು ಹಾಜರಿದ್ದರು. ಪ್ರಾದುರ್ಭಾವ ಉತ್ಸವದ ಅಂಗವಾಗಿ ಮಠದ ಶ್ರೀ ಧನ್ವಂತರಿ ಮೂರ್ತಿ, ಶ್ರೀ ಸತ್ಯ ಸಂಕಲ್ಪರು ಮತ್ತು ಶ್ರೀ ಸತ್ಯ ಸಂತುಷ್ಟರ ಮೂಲ ವೃಂದಾವನಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಮೇ 28ರಂದು ಸಂಜೆ 5:30ರಿಂದ ಸುಪ್ರಸಿದ್ಧ ಗಾಯಕ ಪಂ. ಪ್ರಸನ್ನ ಗುಡಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. 6:30ರಿಂದ ಗಣ್ಯರು ಹಾಗೂ ವಿಶೇಷ ಸೇವಾಕರ್ತರಿಗೆ ಶ್ರೀಪಾದಂಗಳವರಿಂದ ಅನುಗ್ರಹ ಫಲಮಂತ್ರಾಕ್ಷತೆ, ನಂತರ ಶ್ರೀಗಳು ಅನುಗ್ರಹ ಸಂದೇಶ ನೀಡಲಿದ್ದಾರೆ.

ಮೇ 29ರಂದು ಬೆಳಿಗ್ಗೆ 7ಗಂಟೆಗೆ ಶ್ರೀಮದ್ಭಾಗವತ ತಾತ್ಪರ್ಯ ಪಾಠ, ಸಂಜೆ 5:30ಕ್ಕೆ ಜಯತೀರ್ಥ ವಿದ್ಯಾಪೀಠ ಪ್ರಾಂಶುಪಾಲರಾದ ಪಂ ಸತ್ಯಧ್ಯಾನಚಾರ್ಯ ಕಟ್ಟಿ ಅವರಿಂದ ಪ್ರವಚನ, 7ಗಂಟೆಗೆ ಶ್ರೀಗಳಿಂದ ಅನುಗ್ರಹ ಸಂದೇಶ ಜರುಗಲಿದೆ.

ಮೇ 30ರಂದು ಬೆಳಿಗ್ಗೆ 7ಗಂಟೆಗೆ ಶ್ರೀಮದ್ಭಾಗವತ ತಾತ್ಪರ್ಯ ಪಾಠದ ಮಂಗಳ ಹಾಗೂ ಗುರುವಂದನೆ, 8:30ಕ್ಕೆ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ, 10:30ಕ್ಕೆ ಶ್ರೀಧನ್ವಂತರಿ ದೇವರಿಗೆ ಕಲಶಾಭಿಷೇಕ, ಮಧು ಅಭಿಷೇಕ ಮತ್ತು ವಿಶೇಷ ಪಂಚಾಮೃತ ಅಭಿಷೇಕ ನಡೆಯಲಿದೆ. 11:30ಕ್ಕೆ ನೂತನ ಅಲಂಕೃತ ಗೋಡೆಯ ಲೋಕಾರ್ಪಣೆ ಶ್ರೀಪಾದಂಗಳವರ ಅನುಗ್ರಹ ವಚನ, ನಂತರ ಮೂಲರಾಮದೇವರ ಹಾಗೂ ಧನ್ವಂತರಿಯ ತೀರ್ಥ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: Kannada News WebsiteLatest News KannadaMokshamysoresri satyadharma teertharuಆಚಾರ್ಯ ಮಧ್ವರುಉತ್ತರಾದಿ ಮಠಭಾಗವತ ತಾತ್ಪರ್ಯಮೈಸೂರುಮೋಕ್ಷಶ್ರೀ ಧನ್ವಂತ್ರಿ ಸನ್ನಿಧಾನಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಶ್ರೀಮನ್ ಮಧ್ವಾಚಾರ್ಯ
Previous Post

ಅಂಕ ಗಳಿಕೆ ಜೊತೆಗೆ ಕೌಶಲ್ಯದ ಮಹತ್ವ ಅರಿಯಿರಿ: ವಿದ್ಯಾರ್ಥಿಗಳಿಗೆ ಡಾ. ನಾಗರಾಜ ಕಿವಿಮಾತು

Next Post

ಪರಿಸರ, ಜಲ, ಮಣ್ಣಿನ ಮಹತ್ವ ಅರಿಯುವುದು ಅನಿವಾರ್ಯ: ಡಾ.ನಾಗರಾಜ್ ಪರಿಸರ ಕರೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಪರಿಸರ, ಜಲ, ಮಣ್ಣಿನ ಮಹತ್ವ ಅರಿಯುವುದು ಅನಿವಾರ್ಯ: ಡಾ.ನಾಗರಾಜ್ ಪರಿಸರ ಕರೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಜೂ.22ರಂದು ರುದ್ರಾರಾಧ್ಯರಿಗೆ ಯೋಗರತ್ನಾಕರ ಪ್ರಶಸ್ತಿ ಪ್ರದಾನ: ವಿಜಯ್ ಕುಮಾರ್ ಹರ್ಷ

June 20, 2025
File Image

ಅಪ್ಸರಕೊಂಡ – ಮುಗಲಿ ಕಡಲ ವನ್ಯ ಜೀವಿಧಾಮ ಘೋಷಣೆ | ಸಚಿವ ಸಂಪುಟ ಸಭೆ ಅನುಮೋದನೆ

June 20, 2025

ವಿಕಸಿತ ಭಾರತದ ದಾರಿಯಲ್ಲಿ ಪ್ರಧಾನಿ ಮೋದಿ ಸರ್ಕಾರ: ಸಂಸದ ರಾಘವೇಂದ್ರ

June 20, 2025
File Image

ಅಧಿಕಾರಿಗಳ ವರ್ಗಾವಣೆ | ರಾಜ್ಯ ಸರ್ಕಾರದ ವಿರುದ್ಧ ಸಂಸದ ರಾಘವೇಂದ್ರ ಕಿಡಿ

June 20, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಜೂ.22ರಂದು ರುದ್ರಾರಾಧ್ಯರಿಗೆ ಯೋಗರತ್ನಾಕರ ಪ್ರಶಸ್ತಿ ಪ್ರದಾನ: ವಿಜಯ್ ಕುಮಾರ್ ಹರ್ಷ

June 20, 2025
File Image

ಅಪ್ಸರಕೊಂಡ – ಮುಗಲಿ ಕಡಲ ವನ್ಯ ಜೀವಿಧಾಮ ಘೋಷಣೆ | ಸಚಿವ ಸಂಪುಟ ಸಭೆ ಅನುಮೋದನೆ

June 20, 2025

ವಿಕಸಿತ ಭಾರತದ ದಾರಿಯಲ್ಲಿ ಪ್ರಧಾನಿ ಮೋದಿ ಸರ್ಕಾರ: ಸಂಸದ ರಾಘವೇಂದ್ರ

June 20, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!