ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆ ಕೌಶಲ್ಯದ ಮಹತ್ವವನ್ನು ಅರಿಯಬೇಕು ಎಂದು ಪಿಇಎಸ್ ಟ್ರಸ್ಟ್ನ ಆಡಳಿತ ಮುಖ್ಯಾಧಿಕಾರಿ ಡಾ. ನಾಗರಾಜ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಿಇಎಸ್ ಪಾಲಿಟೆಕ್ನಿಕ್ನಲ್ಲಿ ಆಯೋಜಿಸಲಾಗಿದ್ದ ಸಂಭ್ರಮ-2023 ವಾರ್ಷಿಕೋತ್ಸವ ಸಮಾರಂಭದಲ್ಲಿ ಗೌರವಾಧ್ಯಕ್ಷರಾಗಿ ಭಾಗವಹಿಸಿ ಮಾತನಾಡಿದರು ಅವರು, ಕಾಲೇಜಿನ ಎಲ್ಲಾ ವಿಭಾಗದಲ್ಲೂ ಸಂಪೂರ್ಣ ಪ್ರವೇಶಾತಿ ಭರ್ತಿಯಾಗಿದ್ದು. ಹೊಸ ವಿಭಾಗಗಳಾದ ಅರ್ಟಿಫಿಶಿಯಲ್ ಇಂಟಲಿಜೆನ್ಸಿ, ಕಂಪ್ಯೂಟರ್ ಇಂಜಿನಿಯರಿಂಗ್, ಪ್ರವಾಸೋದ್ಯಮ ಮತ್ತು ಪ್ರಯಾಣ ಮ್ಯಾನೇಜ್ಮೆಂಟ್ ಕೋರ್ಸ್ ಇತ್ಯಾದಿ ಸೇರ್ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯನ್ನು ಪ್ರೇರಣ ವಿಶ್ವವಿದ್ಯಾಲಯವನ್ನಾಗಿ ಮಾಡಲು ಶ್ರಮಿಸುತ್ತಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಪಿ ಇ ಎಸ್ ಪಾಲಿಟೆಕ್ನಿಕ್ನಲ್ಲಿ ಇನ್ಕ್ಯೂಬೆಶನ್ ಕೇಂದ್ರವನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದರು.
ಮಂಡಗದ್ದೆ ಅರೇಕಾ ಟೀ ಸಂಸ್ಥಾಪಕರಾದ ನಿವೇದನ್ ನೆಂಪೆ ಮಾತನಾಡಿ, ಜ್ಞಾನ ಪಡೆಯುವುದರಿಂದ ಹೆಚ್ಚಿನ ಅಂಕವನ್ನು ಗಳಿಸಬಹುದು. ಜೊತೆಗೆ ಉದ್ಯಮಶೀಲತೆ ಹಾಗೂ ಆತ್ಮವಿಶ್ವಾಸದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಎಲ್ಲಾ ವರ್ಗದ ಜನರೊಂದಿಗೆ ಮಾತನಾಡಿ ವಿಷಯಗಳನ್ನು ಸಂಗ್ರಹಿಸಿ ಮತ್ತು ಅವರಲ್ಲಿರುವ ಅಭಿಪ್ರಾಯವನ್ನು ಕಡೆಗಣಿಸಬಾರದು. ಸಮಸ್ಯೆಯನ್ನು ಆಳವಾಗಿ ಅರಿತು ತಕ್ಕ ಪರಿಹಾರವನ್ನು ಹುಡುಕಬಹುದು. ಅದರ ಜೊತೆಗೆ ತಮ್ಮ ಜೀವನದಲ್ಲಿ ಬರುವಂತಹ ತೊಂದರೆಗಳನ್ನು ಎದುರಿಸಿ ಮುಂದೆ ಹೇಗೆ ಉದ್ಯಮದ ಕಡೆಗೆ ಗಮನಹರಿಸಬೇಕು ಎಂದು ತಿಳಿಸಿದರು.
ಕೆಲಸ ಯಾವುದೇ ಆದರು ಕೂಡ ಅದನ್ನು ಕಾರ್ಯ ರೂಪಕ್ಕೆ ತರಲು ಹೆದರಬಾರದು ಎಂದು ವಿದ್ಯಾರ್ಥಿಗಳಲ್ಲಿ ಮನವರಿಕೆ ಮೂಡಿಸಿದರು ಮತ್ತು ಜೀವನದಲ್ಲಿ ಕಲಿಕೆ ತಂಬಾ ಮುಖ್ಯ, ನೀವು ಯಾವುದೇ ಉದ್ಯಮದಲ್ಲಿ ವೈಫಲ್ಯ ಹೊಂದಿದರೆ ಅದು ನಿಮ್ಮ ವೈಫಲ್ಯದಿಂದ ಆಗಿರುವುದಿಲ್ಲ ಅದು ನಿಮ್ಮ ತಪ್ಪಿನಿಂದ ಆಗಿರುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರು ಪ್ರೊ. ಗೌತಮ್ ಜೆ ಕೆ ಕಾಲೇಜಿನ ಸಂಪೂರ್ಣ ವಾರ್ಷಿಕ ವರದಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ. ಗೌತಮ್, ಮಾಲಾ ಹಾಗೂ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಂತಿಮವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆಯಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು. ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಸುಜಯ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post