ಕಲ್ಪ ಮೀಡಿಯಾ ಹೌಸ್ | ಮೈಸೂರು |
ಹೀಗೆ ದೇವರ ಸರ್ವೋತ್ತಮತ್ವವನ್ನು ಶಾಸನದ ಪ್ರಮಾಣಗಳಿಂದ ಸಮರ್ಥಿಸಿ ಸಾರಿದ ಮಧ್ವಾಚಾರ್ಯರು, ಮಧ್ವ ಸಿದ್ಧಾಂತದ ಮೂಲಕ ಆಸ್ತಿಕ ಪ್ರಪಂಚಕ್ಕೆ, ವೈದಿಕ ವ್ಮಾಯಕ್ಕೆ ಮಹತ್ವಪೂರ್ಣ ಕೊಡುಗೆ ಸಲ್ಲಿಸಿz್ದÁರೆ ಎಂದು ಪಂಡಿತ ವ್ಯಾಸತೀರ್ಥಾಚಾರ್ಯ ಹೇಳಿದರು.
ಅವರು ಅಗ್ರಹಾರದ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದಲ್ಲಿ ಸೋಮವಾರ ಆಯೋಜಿಸಿದ್ದ `ಮಧ್ವ ನವಮಿ’ ಉತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಮಧ್ವರನ್ನು ಕೇವಲ ಒಂದು ದಿನ ಆರಾಧಿಸಿದರೆ ಸಾಲದು. ಪ್ರತಿನಿತ್ಯ ಅವರು ಪ್ರತಿಪಾದಿಸಿದ ತತ್ವ, ಸಿದ್ಧಾಂತಗಳ ಆಚರಣೆ ಮಾಡಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜ್ಞಾನಕಾರ್ಯಗಳನ್ನು ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ವಿಶ್ವಕ್ಕೆ ಪೂರ್ಣಪ್ರಜ್ಞ ದೃಷ್ಟಿಯನ್ನು ನೀಡಿದ ಮಧ್ವರ ಸ್ಮರಣೆ ಪ್ರತಿ ಕ್ಷಣವೂ ಆಗಬೇಕು ಎಂದು ಅವರು ಹೇಳಿದರು.
Also read: ಭೂ ಕಂದಾಯ ಕಾನೂನು ಸರಳೀಕರಣ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ
ಜಗತ್ತಿನ ಇತರ ಸಿದ್ಧಾಂತಗಳAತೆ ಮಧ್ವ ಸಿದ್ಧಾಂತದಲ್ಲೂ ದೇವರು, ಜೀವ, ಪ್ರಪಂಚದ ಬಗ್ಗೆ ಪ್ರತಿಪಾದನೆ ನಡೆದಿದೆ. ವಿಶೇಷವೆಂದರೆ ಮಧ್ವಗುರುಗಳು ತಮ್ಮ ಗ್ರಂಥಗಳಲ್ಲಿ ದೇವರ ಪ್ರತಿಪಾದನೆಗೆ ಪ್ರಾಶಸ್ತ್ಯ ನೀಡಿ, ಅದಕ್ಕೆ ಪೂರಕವಾಗಿ ಪ್ರಪಂಚ ಮುಂತಾದ ತತ್ವಗಳನ್ನು ನಿರೂಪಿಸಿದ್ದಾರೆ. ಇದು ಬಹು ವಿಶೇಷ ಎಂದವರು ಹೇಳಿದರು.
ಮಧ್ವರ ರಚಿಸಿದ 40 ಗ್ರಂಥಗಳನ್ನು `ಸರ್ವಮೂಲ’ ಎಂದು ಗುರುತಿಸಲಾಗಿದೆ. ವೈದಿಕ ಪ್ರಪಂಚಕ್ಕೆ ಸೇರಿದ ಎಲ್ಲ ಗ್ರಂಥಗಳ ಸಂದೇಶಗಳ ಮೂಲ ಈ ಗ್ರಂಥಗಳಲ್ಲಿ ಅಡಗಿದೆ. ದೇವರಿಗೆ ಸಂಬAಧಿಸಿದ ಸರ್ವ ಪ್ರಮೇಯಗಳಿಗೂ ಈ ಗ್ರಂಥಗಳು ಮೂಲವಾಗಿರುವುದು ಮಹತ್ವದ ಸಂಗತಿ ಎಂದರು.
ಸಾಮೂಹಿಕ ಪಾರಾಯಣ:
ಮಧ್ವನವಮಿ ಅಂಗವಾಗಿ ಮಠದಲ್ಲಿ `ಸುಮಧ್ವ ವಿಜಯ’ ಸಾಮೂಹಿಕ ಪಾರಾಯಣ ನಡೆಯಿತು. ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ನೇತೃತ್ವದಲ್ಲಿ ಶ್ರೀ ಸತ್ಯಸಂಕಲ್ಪ ತೀರ್ಥರು ಮತ್ತು ಶ್ರೀ ಸತ್ಯ ಸಂತುಷ್ಠ ತೀರ್ಥರ ಮೂಲ ವೃಂದಾವನಗಳಿಗೆ ವಿಶೇಷ ಅಭಿಷೇಕ, ಅಲಂಕಾರ, ಪ್ರಾಣದೇವರ ಪ್ರತಿಮೆಗೆ ಮಧು ಅಭಿಷೇಕ, ಆಚಾರ್ಯ ಮಧ್ವರ ಪ್ರತಿಮೆಗೆ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ ನೆರವೇರಿತು. ಉತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.
ಛಾಯಾಚಿತ್ರ ಪ್ರದರ್ಶನ:
ಕೃಷ್ಣಮೂರ್ತಿ ಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಹಮ್ಮಿಕೊಂಡಿದ್ದ ಮಧ್ವ ನವಮಿ ಉತ್ಸವದಲ್ಲಿ ಮಠಾಧೀಶರಾದ ಶ್ರೀ ವಿದ್ಯಾಶ್ರೀಷ ತೀರ್ಥ ಸ್ವಾಮೀಜಿ ಸಂಸ್ಥಾನ ಪೂಜೆ ನೆರವೇರಿಸಿದರು. ಇದೇ ಸಂದರ್ಭ ವಿದ್ಯಾಪೀಠದ ವಿದ್ಯಾರ್ಥಿಗಳು ಆಚಾರ್ಯ ಮಧ್ವರ ಜೀವನ ಮತ್ತು ಸಾಧನೆ ಕುರಿತಾದ ಛಾಯಾಚಿತ್ರಗಳ ಪ್ರದರ್ಶನ ನಡೆಸಿ ಭಕ್ತರ ಮನ ಗೆದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post