No Result
View All Result
Children's Ramayana Book by 11 Year Girl
English Articles

11-Year-Old Mysuru Girl Writes Children’s Ramayana in Just 15 Days

by kalpa News
July 25, 2026
0

Kalpa Media House  | Mysuru | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Sunday, July 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಭಾಗವತ ಶ್ರವಣ ಮಾತ್ರದಿಂದಲೇ ಜೀವನ ಪಾವನ: ಪಂಡಿತ ಬಾದರಾಯಣಾಚಾರ್ಯ ಅಭಿಮತ

kalpa News by kalpa News
December 27, 2022
in Army
0
ಭಾಗವತ ಶ್ರವಣ ಮಾತ್ರದಿಂದಲೇ ಜೀವನ ಪಾವನ: ಪಂಡಿತ ಬಾದರಾಯಣಾಚಾರ್ಯ ಅಭಿಮತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |  ಸಾರ ಸಂಗ್ರಹ: ರಘುರಾಮ  |

ಭಾಗವತ ಶ್ರವಣದಿಂದ ಜೀವನವನ್ನು ನೋಡುವ ವಿಧಾನ ಬದಲಾಗುತ್ತದೆ. ಪ್ರಪಂಚವನ್ನು ಪರಿಭಾವಿಸುವ ದೃಷ್ಟಿ ಸುಧಾರಣೆಗೊಳ್ಳುತ್ತದೆ. ಪ್ರಕೃತಿಯ ಮಿತಿಗಳನ್ನು ಅರಿಯುವ ಪ್ರೌಢಿಮೆ ಬರುತ್ತದೆ ಎಂದು ಪಂಡಿತ ಬಾದರಾಯಣಾಚಾರ್ಯ ಹೇಳಿದರು.

ಅವರು ಚಾಮರಾಜ ಜೋಡಿರಸ್ತೆ ವೆಂಕಟಾಚಲಧಾಮ ಆವರಣದ `ಪೂರ್ಣಪ್ರಜ್ಞ’ದಲ್ಲಿ ಭಾಗವತ ಪ್ರವಚನ ಸಪ್ತಾಹದಲ್ಲಿ ಅವರು ಸೋಮವಾರ ಮಾತನಾಡಿದರು.
ಭಾಗವತ ಕೇವಲ ಧರ್ಮ ಗ್ರಂಥವಲ್ಲ, ಬದುಕಿನಲ್ಲಿ ಯಾವುದನ್ನು ಮಾಡಬೇಕು, ಏನನ್ನು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಇಂದಿನ ದಿನಮಾನಗಳಲ್ಲಿ ನಾವು ಮಾಡಬಾರದ್ದನ್ನೇ ಮಾಡಿ ನಿತ್ಯವೂ ದುಃಖಪಡುವ ಸ್ಥಿತಿ ಬಂದೊದಗಿದೆ ಎಂದರು.

ಅನಂತ ಕಾಲದ ಯಶಸ್ಸಿನ ಸೂತ್ರ ಭಾಗವತ ಗ್ರಂಥದಲ್ಲಿದೆ. ಹಾಗಾಗಿಯೇ ಇದು ಮಹತ್ವಪೂರ್ಣ ಕೃತಿಯಾಗಿದೆ. ನಾವು ನಮಗೆ ಮತ್ತು ಸಮಾಜಕ್ಕೆ ಹಿತಕರವಾದದ್ದನ್ನೇ ಮಾಡಿ ಆಯುಷ್ಯವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಪ್ರವಚನದ ಸಾರ ಸಂಗ್ರಹ
ನಮ್ಮ ಪಂಚೇಂದ್ರಿಯಗಳು ದೇವರು ಕೊಟ್ಟ ವರ. ಇವುಗಳಲ್ಲಿ ಕಣ್ಣು ಪ್ರಧಾನ ಇಂದ್ರಿಯ. ನಾವು ಏನನ್ನು ನೋಡುತ್ತೇವೆಯೋ ಹಾಗೆ ಮಾಡುತ್ತೇವೆ. ನಮ್ಮ ಬುದ್ಧಿ ಮತ್ತು ಮನಸ್ಸುಗಳನ್ನು ನಿಯಂತ್ರಿಸುವುದೇ ಕಣ್ಣು. ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ಒಂದು ಸಾಧನೆ. ಒಟ್ಟಾರೆ ತಾತ್ಪರ್ಯವೇನೆಂದರೆ ನಮ್ಮ ಪಂಚೇಂದ್ರಿಯಗಳು ದೇವರ ಸೇವೆಗೆ (ಇಚ್ಛತಾ ಅಭಯಂ) ಮತ್ತು ಮೋಕ್ಷ ಸಾಧನೆಗೆ ಪೂರಕವಾಗುವಂತೆ ಇದ್ದರೆ ಅದೇ ಸಾರ್ಥಕತೆ.
ಈ ಜಗತ್ತು ಸಾಧನಾ ಭೂಮಿ. ನಮ್ಮ ಲೌಕಿಕ ಸಂಬಂಧಗಳೆಲ್ಲವೂ ಕೆಲ ಕಾಲ ಮಾತ್ರ. ಅವು ನಿಮಿತ್ತ ಮಾತ್ರವಾಗಿರುತ್ತವೆ. ಆದರೆ ನಮ್ಮ ಶಾಶ್ವತ ಸಂಬಂಧಗಳೇನಿದ್ದರೂ ಅವು ದೇವರೊಂದಿಗೆ ಇರಬೇಕು ಎಂದು ಭಾಗವತ ಹೇಳಿದೆ. ಪರೀಕ್ಷಿತ ಮಹಾರಾಜನಿಗೆ ಕೇವಲ 7 ದಿನ ಮಾತ್ರ ಆಯುಷ್ಯವಿದೆ ಎಂದು ಶುಕಾಚಾರ್ಯರು ಹೇಳುತ್ತಾರೆ. ಕೂಡಲೇ ಆತ ಎಚ್ಚೆತ್ತು ಮೋಕ್ಷ ಸಾಧನೆಗೆ ತೊಡಗಿದ. ಆದರೆ ಮುಂದಿನ 7 ನಿಮಿಷ ಬದುಕುತ್ತೇವೆ ಎಂಬ ಭರವಸೆಗಳೇ ಇಲ್ಲದ ಕಾಲಘಟ್ಟದಲ್ಲಿ ನಾವೆಲ್ಲಾ ಇದ್ದೇವೆ. ಇಂತಹಾ ಸಂದಿಗ್ಧ ಕಲಿಗಾಲದಲ್ಲಿ ದೇವರು ಕೊಟ್ಟ ಸಾಧನಾ ಶರೀರವನ್ನು, ಎನನಪು, ಬುದ್ಧಿ ಮತ್ತು ಇಂದ್ರಿಯಾದಿಗಳನ್ನು ಸತ್ಕಾರ್ಯಕ್ಕಾಗಿ ಮಾತ್ರ ಬಳಸಬೇಕು. ಆಗ ಮಾತ್ರ ಬದುಕಿ ಇರುವಷ್ಟು ಕ್ಷಣಗಳೂ ಆನಂದಮಯವಾಗುತ್ತವೆ ಎಂದು ಬಾದರಾಯಣಾಚಾರ್ಯರು ಹೇಳಿದರು.

ಪ್ರಾಣಾಯಾಮದ ಮಹತ್ವ
ನಿತ್ಯವೂ ಪ್ರಾಣಾಯಾಮ ಮಾಡುವುದರಿಂದ ಮನದ ದೋಶ ನಿವಾರಣೆ ಆಗುತ್ತದೆ ಎಂದು ಭಾಗವತ ಹೇಳಿದೆ. ಹಾಗಾಗಿ ಇದು ಆರೋಗ್ಯ ಸೂತ್ರ ಬೋಧಿಸುವ ಗ್ರಂಥವೂ ಆಗಿದೆ. ಒಂದೊಂದು ಅವಯವಗಳೂ ದೇವರ ಕೊಡುಗೆ. ಅವುಗಳಲ್ಲಿ ಭಗವಂತನನ್ನು ಧ್ಯಾನಿಸಬೇಕು. ಮನಸ್ಸೇ ಅತಿ ದೊಡ್ಡ ಸಾಧಕ. ಅದಕ್ಕೆ ಸೂಕ್ತ ತರಬೇತಿ ಕೊಡಬೇಕು. ಈ ದಿಸೆಯಲ್ಲಿ ಯೋಗ ಮತ್ತು ಪ್ರಾಣಾಯಾಮಗಳನ್ನು ಮರೆಯಬಾರದು ಎಂದು ಭಾಗವತ ಸಂದೇಶ ಕೊಡುತ್ತದೆ.

ದೇವರನ್ನು ಕಳೆದುಕೊಂಡಿದ್ದೇವೆ
ನದಿ, ಮರ, ಗುಡ್ಡ, ಬೆಟ್ಟ-ಇತ್ಯಾದಿಗಳನ್ನು ನೋಡಿದಾಗ ಇವೆಲ್ಲವೂ ಭಗವಂತನ ಸೃಷ್ಟಿ ಎಂಬ ಚಿಂತನೆ ಬರಬೇಕು. ಆದರೆ ಅವಸರದ ಬದುಕಿನಲ್ಲಿ ನಾವು ಇಂದು ದೇವರನ್ನು ಕಳೆದುಕೊಂಡಿದ್ದೇವೆ. ಭಾಗವತದ ಪ್ರತಿಯೊಂದು ಪದವನ್ನೂ ಅನುಭವಿಸಿ ನೋಡಿದಾಗ ಬದುಕಿನ ವಿರಾಟ್ ದರ್ಶನವಾಗುತ್ತದೆ. ನಾವೆಲ್ಲರೂ ಬದುಕಿನ ಪ್ರಯಾಣಿಕರು. ನಮ್ಮ ಗುರಿ (ಡೆಸ್ಟಿನೇಷನ್) ತಿಳಿದಿದ್ದರೆ ಮಾತ್ರ `ಮಾರ್ಗ ‘ ಖಚಿತವಾಗುತ್ತದೆ. ಲೋಕನಾಯಕನ ಜತೆಗೇ ಸದಾ ಇರುವ ಸಾಯುಜ್ಯವು ಮೋಕ್ಷವೆಂಬ ಗುರಿಎಡೆಗೆ ನಮ್ಮನ್ನು ಸುಗಮವಾಗಿ ಕರೆದೊಯ್ಯುತ್ತದೆ ಎಂದು ಬಾದರಾಯಣಾಚಾರ್ಯರು ನುಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteLatest News KannadamysorePranayamaಪಂಚೇಂದ್ರಿಯಪೂರ್ಣಪ್ರಜ್ಞ'ಪ್ರವಚನಪ್ರಾಣಾಯಾಮಬಾದರಾಯಣಾಚಾರ್ಯಭಾಗವತಮೈಸೂರುಮೋಕ್ಷವಿರಾಟ್ ದರ್ಶನ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಜಕಾಲುವೆ ಒತ್ತುವರಿ ತೆರವಿಗೆ ಆಗ್ರಹಿಸಿ ಗ್ರಾಪಂ ಕಚೇರಿ ಮುಂಭಾಗ ಪ್ರತಿಭಟನೆ

Next Post

ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಒದಗಿಸಲು ಕರ್ನಾಟಕ ಸೂಕ್ತ ವ್ಯವಸ್ಥೆ ಹೊಂದಿದೆ: ಸಚಿವ ಅಶ್ವತ್ಥನಾರಾಯಣ

kalpa News

kalpa News

Next Post
ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಒದಗಿಸಲು ಕರ್ನಾಟಕ ಸೂಕ್ತ ವ್ಯವಸ್ಥೆ ಹೊಂದಿದೆ: ಸಚಿವ ಅಶ್ವತ್ಥನಾರಾಯಣ

ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಒದಗಿಸಲು ಕರ್ನಾಟಕ ಸೂಕ್ತ ವ್ಯವಸ್ಥೆ ಹೊಂದಿದೆ: ಸಚಿವ ಅಶ್ವತ್ಥನಾರಾಯಣ

Leave a Reply Cancel reply

Your email address will not be published. Required fields are marked *

No Result
View All Result
Children's Ramayana Book by 11 Year Girl
English Articles

11-Year-Old Mysuru Girl Writes Children’s Ramayana in Just 15 Days

by kalpa News
July 25, 2026
0

Kalpa Media House  | Mysuru | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL