ಕಲ್ಪ ಮೀಡಿಯಾ ಹೌಸ್
ಮೈಸೂರು: ನ್ಯಾಯಾಮೃತಂ ಕಲ್ಚರಲ್ ಹೆರಿಟೇಜ್ ಮತ್ತು ಎಜುಕೇಷನಲ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಮಾರ್ಚ್ 31. ಎ.1, 2 ರಂದು ಶ್ರೀವ್ಯಾಸರಾಜ ಗುರುಸಾರ್ವಭೌಮರ 482ನೆಯ ಆರಾಧನಾ ಮಹೋತ್ಸವನ್ನು ಮೈಸೂರಿನ ಶ್ರೀನಗರ ಬಡಾವಣೆಯ ಶ್ರೀನಗರ ಕ್ಷೇಮಾಭಿವೃದ್ಧಿ ಸಂಘದ ಹತ್ತಿರದಲ್ಲಿ ಆಯೋಜಿಸಿದೆ.
ಶ್ರೀ ಶ್ರೀ ವಿದ್ಯಾಮನೋಹರ ತೀರ್ಥರು 40ನೆಯ ಪೀಠಾಧಿಪತಿಗಳು, ಶ್ರೀವ್ಯಾಸರಾಜ ಮಠ (ಸೋಸಲೆ) ಹಾಗೂ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ತಂಬಿಹಳ್ಳಿ ಶ್ರೀ ಮಾಧವತೀರ್ಥರ ಶ್ರೀಮಠ ಶ್ರೀ ವಿದ್ಯಾಸಾಗರ ಮಾಧವತೀರ್ಥರ ಕರಕಮಲ ಸಂಜಾತರಾದ ಶ್ರೀವಿದ್ಯಾಸಿಂಧು ಮಾಧವತೀರ್ಥರು (ಕಿರಿಯಪಟ್ಟ) ಉಭಯ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಪೂಜಾ ಕೈಂಕರ್ಯಗಳು, ಪಂಡಿತರ ಪ್ರವಚನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಮಾರ್ಚ್ 31ರಂದು ಶ್ರೀ ವ್ಯಾಸರಾಜರ ಮೂಲ ಮೃತ್ತಿಕಾ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ ನಂತರ ಕಾರ್ಯಕ್ರಮದ ಉದ್ಘಾಟನೆ 10.00ಕ್ಕೆ ಮಂತ್ರಾಲಯ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ಪ್ರಾಂಶುಪಾಲರು ಶ್ರೀ ವಾದಿರಾಜಾಚಾರ್ ಇವರಿಂದ ಪ್ರವಚನ ಮೈಸೂರಿನ ವಿದ್ವಾಂಸ ಪ್ರಭಂಜನ ಭಾರದ್ವಾಜ್ ಎಸ್. ಅವರಿಗೆ ವಿದ್ಯಾನಿಧಿ ಮತ್ತು ಬೆಂಗಳೂರಿನ ಸಂಸ್ಕೃತಿ ಚಿಂತಕ – ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ‘ಧರ್ಮ ಪ್ರಚಾರಕ ಪಯೋನಿಧಿ’ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗುವುದು. ಸಂಜೆ 5.30 ವಿದ್ವಾನ್ ಬಿ.ಆರ್. ಶ್ರೀನಿಧಿ ಆಚಾರ್ಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮತ್ತು ಸಂಗೀತ ಪ್ರಸನ್ನ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮಧ್ಯಾರಾಧನೆಯ ಕಾರ್ಯಕ್ರಮ ಎ.1ರ ಬೆಳಿಗ್ಗೆ ಶ್ರೀ ವ್ಯಾಸರಾಜ ಮೂಲ ಮೃತ್ತಿಕಾ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ, ಸಂಜೆ 5.30 ಸಭಾ ಕಾರ್ಯಕ್ರಮದಲ್ಲಿ ಪ್ರವಚನ ವಿದ್ವಾನ್ ಶ್ರೀ ಸತ್ಯನಾರಾಣಾಚಾರ್ಯರು, ಬಳ್ಳಾರಿ, ಶ್ರೀವ್ಯಾಸರಾಜರ ಅವತಾರ ಮಹಿಮೆ ‘ ಮಧ್ವ ವೇದಾಂತ ವಾರಿಧಿ ಪ್ರಶಸ್ತಿ ಪ್ರದಾನ – ವಿದ್ವಾನ್ ಶ್ರೀಕಲ್ಲಾಪುರ ಪವಮಾನಾಚಾರ್ಯರಿಂದ ಶ್ರೀವ್ಯಾಸರಾಜರ ವೈಭವ ವ್ಯಾಸ ದಾಸ ಪ್ರವಚನ ರತ್ನಾಕರ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ವಿವರಗಳಿಗೆ: 92420 13392, 91082 59809ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















