No Result
View All Result
First VALORANT Campus Cup Champions Crowned
English Articles

First VALORANT Campus Cup Champions Crowned

by ಕಲ್ಪ ನ್ಯೂಸ್
April 15, 2026
0

Kalpa Media House  |  INDIA | The VALORANT Campus Cup (VCC) wrapped its inaugural edition with a Grand Finale that...

Read moreDetails
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
An Immaculate Demonstration on Confluence of Architecture Design & Music

An Immaculate Demonstration on Confluence of Architecture Design & Music

April 13, 2026
Rani KoHEnur Calls Transgender Bill “Absurd”, Questions Lawmakers in Explosive Podcast Interview

Rani KoHEnur Calls Transgender Bill “Absurd”, Questions Lawmakers in Explosive Podcast Interview

April 9, 2026
  • Advertise With Us
  • Grievances
  • About Us
  • Contact Us
Wednesday, April 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

‘ನನ್ನ ಗೋಪಾಲ’, `ರಾವಣ ದರ್ಶನಂ’ ನಾಟಕಗಳು | ಗೆದ್ದ ಹೊಂಗಿರಣ | ಮನಸೋತ ಪ್ರೇಕ್ಷಕ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 12, 2025
in Special Articles
0
‘ನನ್ನ ಗೋಪಾಲ’, `ರಾವಣ ದರ್ಶನಂ’ ನಾಟಕಗಳು | ಗೆದ್ದ ಹೊಂಗಿರಣ | ಮನಸೋತ ಪ್ರೇಕ್ಷಕ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಮೊನ್ನೆ ಮೊನ್ನೆಯಷ್ಟೇ ಕುವೆಂಪು ನಾಟಕಗಳನ್ನು ಹೊಂಗಿರಣೋತ್ಸವ-10ರಲ್ಲಿ ನೋಡಿ ಬಂದ ಮೇಲೆ ನಾ ನೋಡಿದ ಎರಡು ನಾಟಕಗಳ ಕುರಿತಾಗಿ ಬರೆಯಬೇಕೆಂದು ಈ ಲೇಖನ ಆರಂಭಿಸಿದೆ.

ಎಲ್ಲೋ ಹೊರಟಿದ್ದ ನನಗೆ ಅಂದು ನೆನಪಾದದ್ದು ಸುವರ್ಣ ಸಾಂಸ್ಕೃತಿಕ ಭವನದ ‘ನನ್ನ ಗೋಪಾಲ’ ನಾಟಕ. ಈ ನಾಟಕ ಕುವೆಂಪುರವರು ಬರೆದಿರುವ ಎರಡನೇ ಮಕ್ಕಳ ನಾಟಕ. ಒಂಟಿಯಾದ ಹೆಣ್ಣು ಮಗಳು ಶ್ರೀ ಕೃಷ್ಣನನ್ನು ಪೂಜಿಸುತ್ತಾ ಪ್ರತಿಕ್ಷಣ ಅವನನ್ನೇ ನೆನೆಯುತ್ತಾ ದಿನ ಕಳೆಯುತ್ತಾ ಇರುವಾಗ ಆಕೆಯ ಒಬ್ಬನೇ ಮಗ ಗೋಪಾಲ ಶಾಲೆಗೆ ಹೋಗಬೇಕಾಗಿ ಬರುತ್ತದೆ.

ಕಾಡಿನ ದಾರಿಯಲ್ಲಿ ಒಬ್ಬನೇ ಹೇಗೆ ಹೋಗುವುದು ಭಯವಾಗುತ್ತದೆ ಎಂದು ತಾಯಿಗೆ ಕೇಳಿದಾಗ ಅವಳು ಕಾಡಿನಲ್ಲಿ ಗೋಪಾಲನೂ ಸಹ ಇರುತ್ತಾನೆ ಅವನು ನಿಮ್ಮ ಅಣ್ಣ ಎಂದು ತಾಯಿ ಹೇಳಿ ಕಳುಹಿಸುತ್ತಾಳೆ. ಗೋಪಾಲನನ್ನು ಬರುವವರೆಗೂ ಬಿಡದೆ ಕರೆದು ಮಾತಾಡಿಸಿ ಪ್ರತಿನಿತ್ಯ ಅವನೊಂದಿಗೆ ಸ್ವಲ್ಪ ಆಟವಾಡಿಯೇ ಶಾಲೆಗೆ ಹೋಗುವುದು ಆ ಮಗುವಿಗೆ ರೂಢಿಯಾಗುತ್ತದೆ. ಹೀಗಿರಲು ಒಮ್ಮೆ ಗುರುಗಳಿಗೆ ತಮ್ಮ ಮನೆಯಲ್ಲಿನ ಪೂಜೆಗೆ ಏನಾದರೂ ಗುರುದಕ್ಷಿಣೆಯಾಗಿ ತನ್ನಿ ಎಂದಾಗ ಗೋಪಾಲನನ್ನು ಹೊರತುಪಡಿಸಿ ಉಳಿದೆಲ್ಲ ಮಕ್ಕಳು ಸಿರಿವಂತರೆ ಆಗಿರುತ್ತಾರೆ ಹಾಗಾಗಿ ಆಯ್ತೆಂದು ಒಪ್ಪಿ ಬೆಲೆಬಾಳುವ ವಸ್ತುಗಳನ್ನೇ ಗುರುಗಳಿಗೆ ದಕ್ಷಿಣೆಯಾಗಿ ತರುತ್ತಾರೆ.

Also Read>> ಶಿವಮೊಗ್ಗ | ಜಿಲ್ಲಾ ಲಿಪಿಕ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಟಿ. ಪ್ರಕಾಶ್ ಅವಿರೋಧ ಆಯ್ಕೆ

ಗೋಪಾಲ ತಾಯಿಯ ಬಳಿ ಗುರುದಕ್ಷಿಣೆ ಸಲುವಾಗಿ ಕೇಳಿದಾಗ ಅವನು ಕಾಡಿನಲ್ಲಿರುವ ಅಣ್ಣ ಗೋಪಾಲನ ಬಳಿ ಕೇಳಬೇಕೆಂದು ಹೇಳಿ ಕಳುಹಿಸುತ್ತಾಳೆ. ಹೀಗೆ ಸಾಗುವ ಕಥೆ ಮಕ್ಕಳ ನಿರ್ಮಲ ಮನಸ್ಸು ಮುಗ್ಧತೆ ಅದಕ್ಕೆ ದೇವರು ಒಲಿಯುವ ರೀತಿಯನ್ನು ಬಹು ಸುಂದರವಾಗಿ ಕಟ್ಟಿಕೊಟ್ಟಿದೆ.
ಈ ಕಥಾ ಹಂದರವನ್ನೇ ಬಹಳ ಚೆನ್ನಾಗಿ ನಿರ್ದೇಶಕರಾದ ಡಾ. ಸಾಸ್ವೆಹಳ್ಳಿ, ಸತೀಶ್ ರವರು ಶಿವಮೊಗ್ಗದ ವಿವಿಧ ಶಾಲೆಯ ಮಕ್ಕಳನ್ನು ಸೇರಿಸಿ ನಾಟಕವಾಗಿಸಿದ್ದಾರೆ. ಅದಕ್ಕೆ ಪೂರಕವಾದ ರಂಗ ಸಜ್ಜಿಕೆ ಹಾಗೂ ಗಣೇಶ್ ಎಲ್ಲೋರ್ ಅವರ ಸಂಗೀತ. ಅದರಂತೆಯೇ ತನ್ಮಯಿ ಹಾಗೂ ಅನನ್ಯ ಕೂಡ ಹಾಡಿದರು. ನನಗೆ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಪಾತ್ರವೆಂದರೆ ಗೋಪಾಲನಾಗಿ ಅಭಿನಯಿಸಿದ ಕುಮಾರಸ್ವಾಮಿಯದು. ಅವನು ಮಾತನಾಡುತ್ತಿದ್ದ ರೀತಿ, ಅವನಲ್ಲಿದ್ದ ಮುಗ್ಧತೆ ಅವನ ಅಭಿನಯಕ್ಕೆ ಕಳೆಗಟ್ಟುವಂತಿತ್ತು.

ಇನ್ನು ಲಿಪಿತ ಕೂಡ ಕೃಷ್ಣನಾಗಿ ಮುದ್ದಾಗಿ ಅಭಿನಯಿಸಿದಳು. ಉಳಿದಂತೆ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶಾಲೆಯ ಸನ್ನಿವೇಶವಂತೂ 20 ವರ್ಷ ಹಿಂದೆ ಹೋದಂತಾಯ್ತು. ಒಟ್ಟಾರೆಯಾಗಿ ಒಂದು ಸುಂದರ ಮನೋಲ್ಲಾಸ ಆಯ್ತೆಂದರೆ ತಪ್ಪಾಗಲಾರದು.

Also Read>> ಮನುಷ್ಯರಲ್ಲ ರಾಕ್ಷಸರು | 3 ಹಸುಗಳ ಕೆಚ್ಚಲು ಕೊಯ್ದ ಪಾಪಿಗಳು | ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಮರುದಿನದ ನಾಟಕ ಕುವೆಂಪುರವರ ರಾಮಾಯಣ ದರ್ಶನಂ ಕೃತಿ ಆಧಾರಿತ `ರಾವಣ ದರ್ಶನಂ’. ಇದನ್ನು ರಂಗ ಪಠ್ಯವಾಗಿ ಡಾ.ರಾಜಪ್ಪ ದಳವಾಯಿ ಹಾಗೂ ಡಾ. ಸಾಸ್ವೆಹಳ್ಳಿ ಸತೀಶ್ ರವರು ಚೆನ್ನಾಗಿಯೇ ರೂಪಿಸಿದ್ದಾರೆ. ಹೆಣ್ತನದ ಭೋಗ ಜೀವನದಲ್ಲಿ ಬಿದ್ದಿದ್ದ ರಾವಣನನ್ನು ಮೇಲೆತ್ತಿ ರಾಮ ಜೀವನಕ್ಕೆ ತಿರುಗಿಸುವ ಉದ್ದಾರಕ ಶಕ್ತಿಯಾಗಿ ಸೀತೆ ಅವನ ಜೀವನ ಪ್ರವೇಶಿಸಿರುವುದನ್ನು ಭವ್ಯವಾಗಿ ಚಿತ್ರಿಸಲಾಗಿದೆ.

ಮೇಘನಾದನ ಸಾವಿನ ಸುದ್ದಿ ಕೇಳಿದ ಮಂಡೋದರಿಯ ಮರುಕ, ಅವಳನ್ನು ಸಂತೈಸುವ ರಾವಣ, ಅನಲೆಗಾಗಿ ಮಿಡಿಯುವ, ಧ್ಯಾನ ಮಾಲಿನಿಯ ಕನವರಿಕೆ, ತಾರಾಕ್ಷಿ ದೇವಿಯ ಕೂಸಾದ ವಜ್ರಾರಿಯ ಮೇಲಣ ವಾತ್ಸಲ್ಯ, ಚಂದ್ರನಖಿಯ ಮೇಲಿದ್ದ ರಾವಣನ ಪ್ರೀತಿ ಅಸದಳ. ಇನ್ನು ಲಂಕಾಲಕ್ಷ್ಮೀಯ ಬಳಿ ತನ್ನ ನೋವು ತಿಳಿಸಿ ತನ್ನಿಷ್ಟವ ಬಯಸಿ ಆಶೀರ್ವಾದ ಪಡೆಯುವ ವಿಶಿಷ್ಟ ಸನ್ನಿವೇಶ. ಅಲ್ಲಿ ತನಗೆ ಬೇಕಾದದ್ದು ಎಲ್ಲವಕ್ಕೂ ಲಂಕಾಲಕ್ಷ್ಮೀ `ತಥಾಸ್ತು’ ಎಂದಾಗ ಅಚ್ಚರಿಯಾದ ರಾವಣನಿಗೆ ಅದು ಪುನರ್ಜನ್ಮದಲ್ಲಿ ಎಂದು ಹೇಳುವುದು ವಿಶೇಷವಾಗಿದೆ. ಅಲ್ಲಿ ರಾವಣನನ್ನು ಚಂದ್ರನಖಿ ಮಹಾ ಶಿಲ್ಪಿ ಎನ್ನುತ್ತಲೇ ಅದನ್ನು ಕುವೆಂಪುರವರಿಗೂ ಸಹ ವಿಶಿಷ್ಟ ಕೃತಿ ಕೊರೆಯುವ ಮಹಾಶಿಲ್ಪಿ ಎಂಬಂತೆ ಹೋಲಿಸಿರುವುದು ಈ ನಾಟಕದ ವಿಶೇಷ. ಕೊನೆಯಲ್ಲಿ `ಪಾಪಿ ಗುದ್ದಾರಮಿಹುದೀ ಸೃಷ್ಟಿಯ ಬೃಹತ್ ವ್ಯೂಹ ರಚನೆಯೊಳ್’ ಎಂಬ ಮಾತು ಸಾರ್ಥಕವಾದ ಭಾವ ತರುವಂತೆ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಆಡು ಭಾಷೆಯನ್ನೇ ಮಕ್ಕಳು ನೆಟ್ಟಗೆ ಆಡದೆ ಇರುವಾಗ ಹಳೆಗನ್ನಡವನ್ನು ತುಂಬಾ ಸ್ಪಷ್ಟವಾಗಿ ಉಚ್ಚಾರ ಮಾಡಿ ಮಾತನಾಡಿದ್ದಾರೆ. ಇದೊಂದು ಸವಾಲೇ ಸರಿ. ಕುವೆಂಪುರವರು ಹೇಗೆ ಬರೆದಿದ್ದಾರೋ ಅದಕ್ಕೆ ತೂಕವಾಗಿ ಮಾತಾಡಿ ಅಭಿನಯಿಸಿದ್ದಾರೆ. ಅದನ್ನು ನಾವಿಲ್ಲಿ ಶ್ಲಾಘಿಸಲೇಬೇಕು.

ಇತ್ತೀಚಿನ ದಿನಗಳಲ್ಲಿ ಎರಡು ನಿಮಿಷ ನಾಟಕ ನೋಡೋ ಸಂಯಮನೇ ಯಾರಿಗೂ ಇಲ್ಲ. ಒಂದು ಸಣ್ಣ ಗ್ಯಾಪ್’ನಲ್ಲೂ ಮೊಬೈಲ್ ನೋಡ್ಕೊಂಡಿರೋಣ ಅನ್ನೋ ಈ ಕಾಲಘಟ್ಟದಲ್ಲಿ ಹಳೆಗನ್ನಡವನ್ನು ತುಂಬಾ ಸ್ಪಷ್ಟವಾಗಿ ಮಾತಾಡಿ ಅಭಿನಯಿಸಿದ್ದಾರೆ ಅನ್ನುವುದೇ ಒಂದು ವಿಶೇಷ.
ಆಡು ಭಾಷೆಯ ಸಂಭಾಷಣೆಯಾದರೆ ಒಂದು ಡೈಲಾಗ್ ಮರೆತರು ಹೇಳಬಹುದು ಆದರೆ ಇಲ್ಲಿ ಹಾಗಲ್ಲ ಇದನ್ನ ಒಂದು ರಾಗದ ಹಾಗೆ ಅಭ್ಯಾಸ ಮಾಡಿರುತ್ತಾರೆ ಅದನ್ನ ಹಾಗೆ ಹೇಳಬೇಕು ಅದರಲ್ಲಿ ಯಾರೂ ತಪ್ಪಲಿಲ್ಲ ಎಲ್ಲರೂ ಅದನ್ನ ಸರಿಯಾಗಿಯೇ ನೆನಪಿಟ್ಟುಕೊಂಡು ಹೇಳಿದ್ದಾರೆ.

ನಾಟಕದ ವಿಷಯಕ್ಕೆ ಬಂದರೆ ಕಥಾವಸ್ತು ನೋಡಿದಾಗ ‘ರಾವಣ ದರ್ಶನಂ’ ಎಂದಾಗ ರಾವಣ ಎನ್ನುವ ಹೆಸರು ಬಂದಾಗಲೇ ಒಂದು ಅಬ್ಬರ ಇರುತ್ತೆ ಅಂತ ಜನ ಅಂದುಕೊಂಡಿರುತ್ತಾರೆ ಆದರೆ ಇಲ್ಲಿ ಅದು ಭಿನ್ನವಾಗಿತ್ತು. ನಾಟಕ ಆರಂಭವಾಗುವ ಮುನ್ನವೇ ನಿರ್ದೇಶಕರು ಬಂದು ಕಥಾ ಸಂಗತಿಯನ್ನು ಮುನ್ನುಡಿಯ ರೂಪದಲ್ಲಿ ಸ್ವಲ್ಪ ಹೇಳಿ ಹೋಗಿದ್ದು ಅದನ್ನ ಅನುಸರಿಸಿ ಅನೇಕರಿಗೆ ಕಥೆ ಅರ್ಥವಾಗುವಂತಾಯಿತು. ರಾವಣ ಎಂದಾಗ ಜನರಿಗೆ ಎಕ್ಸ್ಪೆಕ್ಟೇಶನ್ ಹೆಚ್ಚು ಇರುತ್ತೆ. ಆದರೆ ನಿರ್ದೇಶಕರು ಆಯ್ದುಕೊಂಡ ವಿಷಯಕ್ಕೆ ತಕ್ಕನಾಗಿ ಎಲ್ಲರೂ ಅಭಿನಯಿಸಿದ್ದಾರೆ. ಇಲ್ಲಿ ರಾವಣ ಎಂದಾಗ ಬರುವ ಕಲ್ಪನೆಗಳಿಗೆ ಕೆಲವೊಂದು ನೀರಸವಾಯಿತು ಎಂದರು.

ಮಕ್ಕಳ ವಿಷಯದಲ್ಲಿ ನೋಡುವುದಾದರೆ ಹಳೆಗನ್ನಡ ಶೈಲಿಯಲ್ಲಿ ಈ ನಾಟಕ ಇರುವುದು ಅವರಿಗೆ ವಾವ್ ಫ್ಯಾಕ್ಟರ್. ಕುವೆಂಪುರವರ ಉತ್ಸವಕ್ಕೆ ಬೇಕಾಗಿದ್ದ ವಾವ್ ಫ್ಯಾಕ್ಟರ್ ಎಂದರೆ ಅದರ ಭಾಷೆಯ ಸದ್ಬಳಕೆ. ಅದನ್ನು ನಿರ್ದೇಶಕರು ತಪ್ಪಿಲ್ಲದ ಹಾಗೆ ನಿರ್ವಹಿಸಿದ್ದಾರೆ. ಅಭಿನಯಿಸುವವರು ಸಹ ಜೊತೆಗೂಡಿದ್ದಾರೆ. ಮೊದಲಿನ ದೃಶ್ಯದಲ್ಲಿ ಪಾತ್ರಧಾರಿಗಳೆಲ್ಲರೂ ಬಂದು `ರಾಮಾಯಣ ದರ್ಶನಂ’ ಪುಸ್ತಕವನ್ನು ಕೈಯಲ್ಲಿಟ್ಟುಕೊಂಡು ಹೋಗಿದ್ದುದು ಸೂಚ್ಯವಾಗಿ ಕುವೆಂಪುರವರ ಪಾತ್ರಗಳನ್ನು ನಾವು ವೇದಿಕೆಗೆ ತರ್ತಾ ಇದ್ದೀವಿ ಅನ್ನೋದನ್ನ ಚೆನ್ನಾಗಿ ತೋರಿಸಿದ್ದಾರೆ.

ಅಭಿನಯದಲ್ಲಿ ಚಂದ್ರನಖಿ ತನ್ನ ಅಭಿನಯ ಹಾಗೂ ಮಾತಿನಿಂದ ಗೆದ್ದರೆ, ರಾವಣ ಲಂಕಾಲಕ್ಷ್ಮೀಯರು ಸಹ ಹಾಗೆಯೇ. ಬಹುಮುಖ್ಯವಾಗಿ ರಂಗ ಸಜ್ಜಿಕೆ, ಬೆಳಕು ಜೊತೆಗೆ ಗಣೇಶ್ ಅವರ ಸಂಗೀತ ಗೆದ್ದಿದೆ. ಎಲ್ಲದಕ್ಕೂ ಕಾರಣರಾದ ಆಯೋಜಕರಾದ ಹೊಂಗಿರಣದ ಸರ್ವರಿಗೂ ಧನ್ಯವಾದಗಳು ಸಲ್ಲಲೇಬೇಕು

(ಚಿತ್ರ ಕೃಪೆ: ಸಿದ್ಧಾರ್ಥ ಎ. ಕಶ್ಯಪ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/04/VID-20240426-WA0008.mp4
Tags: DramaKannada News WebsiteKuvempuLatest News KannadaMalnadRamayana DarshanamShimogaShivamoggaShivamogga Newsಕುವೆಂಪುರಂಗ ಸಜ್ಜಿಕೆರಾಮಾಯಣ ದರ್ಶನಂರಾವಣ ದರ್ಶನಂಶಿವಮೊಗ್ಗಹೊಂಗಿರಣೋತ್ಸವ
Share196Tweet123Send
Previous Post

ಶಿವಮೊಗ್ಗ | ಜಿಲ್ಲಾ ಲಿಪಿಕ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಟಿ. ಪ್ರಕಾಶ್ ಅವಿರೋಧ ಆಯ್ಕೆ

Next Post

ಸೊರಬ | ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಕೆಲವು ತ್ಯಾಗ ಮಾಡಿ | ಕೃಷ್ಣಮೂರ್ತಿ ಕರೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸೊರಬ | ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಕೆಲವು ತ್ಯಾಗ ಮಾಡಿ | ಕೃಷ್ಣಮೂರ್ತಿ ಕರೆ

ಸೊರಬ | ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಕೆಲವು ತ್ಯಾಗ ಮಾಡಿ | ಕೃಷ್ಣಮೂರ್ತಿ ಕರೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಬಿಎಫ್‌ಸಿ vs ಈಸ್ಟ್ ಬೆಂಗಾಲ್: ಹೈ-ವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್

ಬಿಎಫ್‌ಸಿ vs ಈಸ್ಟ್ ಬೆಂಗಾಲ್: ಹೈ-ವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್

April 15, 2026
ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

ನಾರೀಶಕ್ತಿವಂದನಾ ಅಧಿನಿಯಮ ಕಾಯ್ದೆ ಐತಿಹಾಸಿಕ ಹೆಜ್ಜೆ: ಸಂಸದ ರಾಘವೇಂದ್ರ

April 15, 2026
ಮಂಡ್ಯ | ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಭೇಟಿ, ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ

ಮಂಡ್ಯ | ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಭೇಟಿ, ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ

April 15, 2026
ಅಂಬೇಡ್ಕರ್, ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರು: ಪ್ರಾಚಾರ್ಯ ವಿಶ್ವನಾಥ

ಅಂಬೇಡ್ಕರ್, ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರು: ಪ್ರಾಚಾರ್ಯ ವಿಶ್ವನಾಥ

April 15, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL