ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಯೋತ್ಪಾದನೆಯ ನಿರ್ಮೂಲನೆಯ ಹಂತವನ್ನು ದಾಟಿ ಅದರ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಕಿತ್ತುಹಾಕಬೇಕಾದ ಅಗತ್ಯವಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆಯೋಜಿಸಿದ್ದ ಎರಡು ದಿನಗಳ ಭಯೋತ್ಪಾದನಾ ನಿಗ್ರಹ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎನ್’ಐಎ ಅಧಿಕಾರಿಗಳಿಗೆ ಅವರ ಅಸಾಧಾರಣ ಸೇವೆಗಾಗಿ ಪದಕಗಳನ್ನು ನೀಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ವಿವಿಧ ರೀತಿಯ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳು ಸಾಧಿಸಿದ ಮಹತ್ವದ ಪ್ರಗತಿಯನ್ನು ಅವರು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು.
ವಿವಿಧ ರಾಜ್ಯಗಳಲ್ಲಿರುವ ಎಲ್ಲಾ ಭಯೋತ್ಪಾದನಾ-ವಿರೋಧಿ ಏಜೆನ್ಸಿಗಳಾದ್ಯಂತ ಕ್ರಮಾನುಗತ ಹಂತಗಳು, ರಚನೆ ಮತ್ತು ಪ್ರಮಾಣಿತ ಕಾರ್ಯನಿರ್ವಹಣಾ ಕಾರ್ಯವಿಧಾನಗಳಲ್ಲಿ ಎಸ್’ಒಪಿಎಸ್ ಏಕರೂಪತೆಯನ್ನು ಪ್ರತಿಪಾದಿಸುತ್ತಾ ಎನ್’ಐಎ ಅಧಿಕಾರದ ಅಡಿಯಲ್ಲಿ ಒಂದು ಮಾದರಿ ಭಯೋತ್ಪಾದನಾ-ವಿರೋಧಿ ರಚನೆಯ ಸ್ಥಾಪನೆಯನ್ನು ಶಾ ಪ್ರಸ್ತಾಪಿಸಿದರು. ಈ ಕ್ರಮವು ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳ ನಡುವಿನ ಸಮನ್ವಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಅಂತಿಮವಾಗಿ ಹೊಸ ಭಯೋತ್ಪಾದಕ ಘಟಕಗಳ ಸಂಭಾವ್ಯ ಸ್ಥಾಪನೆಯನ್ನು ತಡೆಯುತ್ತದೆ ಎಂದರು.
ಹೆಚ್ಚುವರಿಯಾಗಿ, ಎನ್ಐಎ, ಎಟಿಎಸ್ ಮತ್ತು ಎಸ್ಟಿಎಫ್ ತಮ್ಮ ಜವಾಬ್ದಾರಿಗಳನ್ನು ತನಿಖೆಯಾಚೆಗೆ ವಿಸ್ತರಿಸುವಂತೆ ಒತ್ತಾಯಿಸುತ್ತಾ, ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ನವೀನವಾಗಿ ಯೋಚಿಸಲು ಮತ್ತು ಅಸಾಂಪ್ರದಾಯಿಕ ಕಾರ್ಯತಂತ್ರಗಳನ್ನು ಬಳಸಿಕೊಳ್ಳಲು ಉತ್ತೇಜಿಸಿದರು. ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ದೇಶದೊಳಗಿನ ವಿವಿಧ ರಾಜ್ಯಗಳು ಮತ್ತು ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಒಳಗೊಂಡ ಸಹಕಾರಿ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದರು.
ಕ್ರಿಪ್ರೋ, ಹವಾಲಾ, ಭಯೋತ್ಪಾದನೆ-ಧನಸಹಾಯ, ಸಂಘಟಿತ ಅಪರಾಧ ಸಿಂಡಿಕೇಟ್’ಗಳು ಮತ್ತು ನಾರ್ಕೊ-ಟೆರರ್ ಲಿಂಕ್’ಗಳಂತಹ ಸವಾಲುಗಳ ಕುರಿತು ಮೋದಿ ಸರ್ಕಾರದ ದೃಢವಾದ ನಿಲುವನ್ನು ಶ್ಲಾಘಿಸಿದ ಶಾ, ಇದು ಗಮನಾರ್ಹ ಫಲಿತಾಂಶಗಳನ್ನು ನೀಡಿದೆ ಎಂದರು. ಆದಾಗ್ಯೂ, ಇನ್ನೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇದೆ ಎಂದು ಅವರು ಒಪ್ಪಿಕೊಂಡರು. ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸಲು, ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳೆರಡೂ ನೇರ ಮತ್ತು ತೀಕ್ಷö್ಣ ಚಿಂತನೆಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಸರ್ಕಾರವು ಸ್ಥಾಪಿಸಿದ ವ್ಯಾಪಕವಾದ ಡೇಟಾಬೇಸ್ ವರ್ಟಿಕಲ್’ಗಳನ್ನು ಹೈಲೈಟ್ ಮಾಡಿದ ಅಮಿತ್ ಶಾ, ಡೇಟಾಬೇಸ್ನ ಬಹು ಆಯಾಮದ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಬಳಕೆಯನ್ನು ಮಾಡಲು ಎಲ್ಲಾ ಏಜೆನ್ಸಿಗಳನ್ನು ಒತ್ತಾಯಿಸಿದರು.
Also read: ಸಾಗರದಾಚೆ ಕನ್ನಡ ಡಿಂಡಿಮ | ಬಹರೇನ್ ಕನ್ನಡ ಭವನದ ಮೊಗಸಾಲೆ ಲೋಕಾರ್ಪಣೆ
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಯಶಸ್ಸಿಗೆ ಇದು ನಿರ್ಣಾಯಕವಾಗಿದೆ ಎಂದು ಒತ್ತಿ ಹೇಳಿದ ಅವರು, ತನಿಖೆ, ಕಾನೂನು ಕ್ರಮ, ತಡೆಗಟ್ಟುವಿಕೆ ಮತ್ತು ಕ್ರಮಕ್ಕಾಗಿ ಡೇಟಾಬೇಸ್ ಅನ್ನು ಬಳಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ಅಂತಿಮವಾಗಿ, ಅಮಿತ್ ಶಾ ಅವರು ಭಯೋತ್ಪಾದನೆಯು ಗಡಿಗಳನ್ನು ಮೀರಿದ್ದು ಎಂದು ಹೇಳುತ್ತಾ, ಯಾವುದೇ ಒಂದು ರಾಜ್ಯವು ಅದನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು. ಈ ಪಿಡುಗನ್ನು ತೊಡೆದುಹಾಕಲು ಸಾಮೂಹಿಕ ಕ್ರಮಕ್ಕಾಗಿ ಕರೆ ನೀಡಿದ ಶಾ, ಎರಡು ದಿನಗಳ ಸಮ್ಮೇಳನದ ಪ್ರತಿ ಅಧಿವೇಶನದಿಂದ ಐದು ಕ್ರಿಯಾಶೀಲ ಅಂಶಗಳನ್ನು ಸಂಗ್ರಹಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಲು ಹೇಳಿದರು.
ಗೃಹ ವ್ಯವಹಾರಗಳ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್, ಗೃಹ ಕಾರ್ಯದರ್ಶಿ, ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕ, ಎನ್’ಐಎ ಮಹಾನಿರ್ದೇಶಕರು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಅಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post