ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ಸೋಂಕು ಇಲ್ಲದೇ ಗ್ರೀನ್ ಝೋನ್’ನಲ್ಲಿರುವ 11 ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಷರತ್ತುಗಳ ಆಧಾರದಲ್ಲಿ ಸಹಜ ಜನ ಜೀವನಕ್ಕೆ ಅವಕಾಶ ಕಲ್ಪಿಸಿದೆ.
ಗ್ರೀನ್ ಝೋನ್’ನಲ್ಲಿರುವ ಚಾಮರಾಜನಗರ, ಕೊಪ್ಪಳ, ಕೋಲಾರ, ಉಡುಪಿ, ರಾಯಚೂರು, ಹಾವೇರಿ, ಯಾದಗಿರಿ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಅನ್ವಯವಾಗುವಂತೆ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದು, ಇದು ಮೇ 3ರವರೆಗೂ ಮಾತ್ರ ಅನ್ವಯವಾಗಲಿದೆ.
ಈ ಮೇಲೆ ಉಲ್ಲೇಖಿಸಿರುವ ಜಿಲ್ಲೆಗಳನ್ನು ಹೊರತುಪಡಿಸಿ ಬೇರಾವುದೇ ಜಿಲ್ಲೆಗೆ ಈ ಮಾರ್ಗಸೂಚಿ ಅನ್ವಯವಾಗುವುದಿಲ್ಲ.
ಮಾರ್ಗಸೂಚಿ ಹೀಗಿದೆ:
- ಸಣ್ಣ ಅಂಗಡಿಗಳು, ಪಾಲಿಕೆ ವ್ಯಾಪ್ತಿಯ ಅಂಗಡಿ ವ್ಯಾಪಾರಕ್ಕೆ ಅವಕಾಶ
- ಗ್ರೀನ್ ಝೋನ್’ನಲ್ಲಿರುವ ಮಾಲ್’ಗಳನ್ನು ತೆರೆಯುವಂತಿಲ್ಲ
- ವಿಶೇಷ ಆರ್ಥಿಕ ವಲಯ, ರಫ್ತು, ಕೈಗಾರಿಕಾ ವಲಯ ಹಾಗೂ ಟೌನ್ ಶಿಪ್’ಗಳನ್ನು ತೆರೆಯಬಹುದು. ಈ ವಲಯಗಳಲ್ಲಿ ಕೆಲಸ ಮಾಡುವವರಿಗೆ ಅಲ್ಲಯೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಬೇಕು
- ಶೇ.50ರಷ್ಟು ಕಾರ್ಮಿಕರು ಕೆಲಸ ಮಾಡಲು ಅವಕಾಶ
- ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ
- ಈ ವಲಯದಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ
Get in Touch With Us info@kalpa.news Whatsapp: 9481252093
Discussion about this post