ಉಡುಪಿ: ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ನಿಧನಕ್ಕೆ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಪೇಜಾವರ ಶ್ರೀಗಳು, ಶಿವಕುಮಾರ ಸ್ವಾಮಿಗಳ ನಿಧನ ನಮಗೆ ಅಪಾರ ನೋವನ್ನು ಉಂಟು ಮಾಡಿದೆ. ಶ್ರೀಗಳ ಸಾಮಾಜಿಕ ಕಳಕಳಿ, ಅನ್ನದಾನ, ವಿದ್ಯಾದಾನಗಳು ಸರ್ವಥಾ ಮಾದರಿಯಾಗಿದೆ ಎಂದಿದ್ದಾರೆ.
ಶಿವಕುಮಾರ ಸ್ವಾಮಿಗಳ ಸೇವಾಕಾರ್ಯ ಆದರ್ಶಪ್ರಾಯವಾಗಿದ್ದು, ಅವರ ಜೀವನವೇ ಒಂದು ಪವಾಡವಾಗಿವೆ. ಅವರದ್ದು ಮೇರು ಹಾಗೂ ಅದ್ಬುತ ವ್ಯಕ್ತಿತ್ವವಾಗಿದೆ. ಇವರ ಅಗಲಿಕೆ ನಾಡನ್ನು ಬಡವಾಗಿಸಿದೆ ಎಂದಿದ್ದಾರೆ.
Discussion about this post