ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೋವಿಡ್19 ನಿಯಮಾವಳಿಗಳನ್ನು ಪ್ರಮುಖ ಧಾರ್ಮಿಕ ಕೇಂದ್ರ ಪೂರ್ಣಪ್ರಜ್ಞ ವಿದ್ಯಾಪೀಠ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಯು. ಕೇಶವಾಚಾರ್ಯ ಅವರು, ವಿದ್ಯಾಪೀಠದ ಶ್ರೀಕೃಷ್ಣನ ಸನ್ನಿಧಾನದಲ್ಲಿ ಪ್ರತಿ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್19 ಕಾನೂನುಗಳನ್ನು ಕಟ್ಟು ನಿಟ್ಟಿನ ಕ್ರಮವನ್ನು ಪಾಲಿಸಲಾಗುತ್ತಿದೆ ಎಂದಿದ್ದಾರೆ.
ಇನ್ನು, ನಗರದ ಪ್ರಮುಖ ಆಧ್ಯಾತ್ಮಿಕ ಸಂಸ್ಥೆಯಾಗಿರುವ ಶ್ರೀ ವಿದ್ಯಾಪೀಠಕ್ಕೆ ಮಾಸ್ಕ್ ಧರಿಸಿ ಬರುವುದು ಕಡ್ಡಾಯವಾಗಿದೆ. ಶ್ರೀ ಮಠದ ಪ್ರವೇಶದ್ವಾರದ ಬಳಿ ಮಠದ ಕಾವಲುಗಾರ ಬರುತ್ತಿದ್ದ ಭಕ್ತರ ಕೈಗಳಿಗೆ ಸ್ಯಾನಿಟೈಸರ್ ಮಾಡಿ, ಅವರ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರಿಶೀಲಿಸಿದ ನಂತರ ಸಮಾಜಿಕ ಅಂತರ ಕಾಪಾಡಿಕೊಂಡು ದೇವಾಲಯದಲ್ಲಿ ಭಗವಂತನ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದ ದೃಶ್ಯ ಕಂಡು ಬಂದಿತು.
ವಿಶೇಷವೆಂದರೆ ದೇವಾಲಯದ ಪ್ರವೇಶ ದ್ವಾರದ ಬಳಿ ಭಗವಂತನ ದರ್ಶನಕ್ಕೆ ಜಯನಗರದ 3 ನೆಯ ಬ್ಲಾಕ್ ನಿವಾಸಿ ಅಜ್ಜ ಶ್ರೀನಿವಾಸ್ ಕುಲಕರ್ಣಿ ಅವರ ಜೊತೆ ಅವರ ಮೊಮ್ಮಗಳು ಬೃಹತಿ ವೇಣುಗೋಪಾಲ್ ವಿದ್ಯಾ ಪೀಠಕ್ಕೆ ಬಂದು ಶ್ರೀಕೃಷ್ಣನ ದರ್ಶನ ಪಡೆದಳು. ದರ್ಶನಕ್ಕೆ ಬಂದಿದ್ದ ಪುಟ್ಟ ಬಾಲೆಗೆ ಅವರ ಅಜ್ಜ ಮಾಸ್ಕ್ ಧರಿಸಿ ಕರೆದು ಕೊಂಡು ಬಂದಿದ್ದ ಅವರು ನಾವು ಕಟ್ಟು ನಿಟ್ಟಿನಲ್ಲಿ ಸರಕಾರ ತಿಳಿಸಿರುವ ಕ್ರಮಗಳನ್ನು ಪಾಲಿಸುವ ಕುರಿತು ಹೇಳಿದರು.
ಸರ್ಕಾರದ ಆದೇಶ ಪಾಲಿಸುವ ಕೆಲಸವನ್ನು ಶ್ರೀಮಠ ಜವಾಬ್ದಾರಿಯಿಂದ ನಿಭಾಯಿಸುವ ಮೂಲಕ ವಿದ್ಯಾಪೀಠಕ್ಕೆ ಬರುವ ಭಕ್ತರು ನಿರಾತಂಕವಾಗಿ ಭಗವಂತನ ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡುಬಂದಿತು.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
Get In Touch With Us info@kalpa.news Whatsapp: 9481252093
Discussion about this post